ಬೆಂಗಳೂರು: ಖಾತೆ ಮರು ಹಂಚಿಕೆ ನಂತರ ಕೆಲವರಲ್ಲಿ ಕಾಣಿಸಿಕೊಂಡಿದ್ದ ಅಸಮಾಧಾನ ಶಮನವಾಗಿದೆ. ಈಗ ಯಾವುದೇ ರೀತಿಯ ಗೊಂದಲ ಇಲ್ಲ. ಸಮಸ್ಯೆ ಮುಕ್ತಾಯವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.
ಸಿಎಂ ನಿವಾಸ ಕಾವೇರಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಖಾತೆಯಲ್ಲಿ ಕ್ಯಾತೆ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು ಈಗ ಎಲ್ಲಾ ಸುಖಾಂತ್ಯವಾಗಿದೆ. ಎಲ್ಲಾ ಅಸಮಾಧಾನಿತ ಸಚಿವರು ಮುಖ್ಯಮಂತ್ರಿಗಳ ಮನೆಗೆ ಬಂದಿದ್ದರು.
ಶಂಕರ್ ಕೂಡ ಅವರ ಕುಟುಂಬದ ಜೊತೆ ಬಂದು ತೋಟಗಾರಿಕೆ, ರೇಷ್ಮೆ ಖಾತೆಗೆ ಒಪ್ಪಿಗೆ ಸೂಚಿಸಿದ್ದಾರೆ. ನಿನ್ನೆ ರಾತ್ರಿಯೇ ಎಂಟಿಬಿ ನಾಗರಾಜ್ ಅವರನ್ನು ಕರೆಸಿಕೊಂಡು ಮಧ್ಯರಾತ್ರಿವರೆಗೂ ಚರ್ಚೆ ಮಾಡಲಾಗಿತ್ತು. ಅಬಕಾರಿ ಖಾತೆ ಬೇಡ ಎಂದಿದ್ದಕ್ಕೆ, ಪೌರಾಡಳಿತ ಮತ್ತು ಸಕ್ಕರೆ ಇಲಾಖೆಯನ್ನು ಕೊಡಲಾಗಿದೆ.
ಇನ್ಯಾರದ್ದೂ ಸಮಸ್ಯೆ ಇಲ್ಲ. ಎಲ್ಲಾ ಸಮಸ್ಯೆಗಳು ಸುಖಾಂತ್ಯವಾಗಿದೆ. ಇಡೀ ಸರ್ಕಾರ ಯಡಿಯೂರಪ್ಪನವರ ನೇತೃತ್ವದಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತದೆ. ಯಡಿಯೂರಪ್ಪನವರು ರಚನೆ ಮಾಡಿರುವ ಮಂತ್ರಿಮಂಡಲದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ, ಸಮಸ್ಯೆಗಳೆಲ್ಲ ಮುಕ್ತಾಯವಾಗಿವೆ ಎಂದು ತಿಳಿಸಿದರು.