ETV Bharat / city

ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡದಂತೆ ಮೇಯರ್​ ಖಡಕ್​ ವಾರ್ನಿಂಗ್​​

author img

By

Published : Sep 6, 2019, 10:53 PM IST

ನಗರದಲ್ಲಿ 80 ಸಾವಿರ ಬೀದಿಬದಿ ವ್ಯಾಪಾರಿಗಳಿದ್ದರೂ ಸಮೀಕ್ಷೆಯಲ್ಲಿ 4 ಸಾವಿರ ಮಂದಿಯನ್ನು ಮಾತ್ರ ಗುರುತಿಸಲಾಗಿದೆ. ಹೀಗಾಗಿ ಟೌನ್ ವೆಂಡಿಂಗ್ ಕಮಿಟಿ ಮತ್ತಷ್ಟು ಸದೃಢಪಡಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

Police, BBMP employees instructed not to harass street side traders

ಬೆಂಗಳೂರು: ನಗರದಲ್ಲಿ 80 ಸಾವಿರ ಬೀದಿಬದಿ ವ್ಯಾಪಾರಿಗಳಿದ್ದರೂ ಸಮೀಕ್ಷೆಯಲ್ಲಿ 4 ಸಾವಿರ ಮಂದಿಯನ್ನು ಮಾತ್ರ ಗುರುತಿಸಲಾಗಿದೆ. ಹೀಗಾಗಿ, ಗುರುತಿನ ಚೀಟಿ ನೀಡುವ ಕಾರ್ಯ ಸಂಪೂರ್ಣವಾಗಿಲ್ಲ. ಟೌನ್ ವೆಂಡಿಂಗ್ ಕಮಿಟಿ ಮತ್ತಷ್ಟು ಸದೃಢಪಡಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಟೌನ್​​ಹಾಲ್​ನಲ್ಲಿ ನಡೆದ ಬೀದಿಬದಿ ವ್ಯಾಪಾರಿಗಳ ರಾಷ್ಟ್ರೀಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ನಗರದ ಎಂಟೂ ವಲಯದಲ್ಲಿ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಲಾಗುವುದು. ಅಲ್ಲದೇ ಪೊಲೀಸ್​ ಅಧಿಕಾರಿಗಳಿಂದಾಗಲಿ, ಬಿಬಿಎಂಪಿ ನೌಕರರಿಂದಾಗಲೀ ಕಿರುಕುಳ ಆಗದಂತೆ ತಡೆಯಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ರಾಮಲಿಂಗಾರೆಡ್ಡಿ

ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಬೇಕು. ಸಾಲ ಸೌಲಭ್ಯಗಳನ್ನು ನೀಡಬೇಕು. ಅಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ವ್ಯವಸ್ಥೆ ಮಾಡಿಕೊಡಬೇಕು. ಹಿಂದಿನ ಸರ್ಕಾರ ಈ ಬಗ್ಗೆ ಕಾನೂನು ರೂಪಿಸಿತ್ತು. ಆದರೂ ಜಾರಿಯಾಗಿಲ್ಲ ಎಂದರು.

ದೇಶದ 500 ನಗರಗಳ 800 ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಎಸ್.ವಿ.ಕಾಯ್ದೆ 2014 ಅನ್ವಯ ಬೀದಿಬದಿ ವ್ಯಾಪಾರಿಗಳ ಅನುಕೂಲತೆ, ಅನುದಾನ ನೀಡಬೇಕು. ಪೊಲೀಸರ ಕಿರುಕುಳ ತಪ್ಪಿಸಬೇಕು ಎಂದು ಪ್ರಮುಖ ಮುಖಂಡರು ಆಗ್ರಹಿಸಿದರು.

ಬೆಂಗಳೂರು: ನಗರದಲ್ಲಿ 80 ಸಾವಿರ ಬೀದಿಬದಿ ವ್ಯಾಪಾರಿಗಳಿದ್ದರೂ ಸಮೀಕ್ಷೆಯಲ್ಲಿ 4 ಸಾವಿರ ಮಂದಿಯನ್ನು ಮಾತ್ರ ಗುರುತಿಸಲಾಗಿದೆ. ಹೀಗಾಗಿ, ಗುರುತಿನ ಚೀಟಿ ನೀಡುವ ಕಾರ್ಯ ಸಂಪೂರ್ಣವಾಗಿಲ್ಲ. ಟೌನ್ ವೆಂಡಿಂಗ್ ಕಮಿಟಿ ಮತ್ತಷ್ಟು ಸದೃಢಪಡಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಟೌನ್​​ಹಾಲ್​ನಲ್ಲಿ ನಡೆದ ಬೀದಿಬದಿ ವ್ಯಾಪಾರಿಗಳ ರಾಷ್ಟ್ರೀಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ನಗರದ ಎಂಟೂ ವಲಯದಲ್ಲಿ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಲಾಗುವುದು. ಅಲ್ಲದೇ ಪೊಲೀಸ್​ ಅಧಿಕಾರಿಗಳಿಂದಾಗಲಿ, ಬಿಬಿಎಂಪಿ ನೌಕರರಿಂದಾಗಲೀ ಕಿರುಕುಳ ಆಗದಂತೆ ತಡೆಯಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ರಾಮಲಿಂಗಾರೆಡ್ಡಿ

ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಬೇಕು. ಸಾಲ ಸೌಲಭ್ಯಗಳನ್ನು ನೀಡಬೇಕು. ಅಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ವ್ಯವಸ್ಥೆ ಮಾಡಿಕೊಡಬೇಕು. ಹಿಂದಿನ ಸರ್ಕಾರ ಈ ಬಗ್ಗೆ ಕಾನೂನು ರೂಪಿಸಿತ್ತು. ಆದರೂ ಜಾರಿಯಾಗಿಲ್ಲ ಎಂದರು.

ದೇಶದ 500 ನಗರಗಳ 800 ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಎಸ್.ವಿ.ಕಾಯ್ದೆ 2014 ಅನ್ವಯ ಬೀದಿಬದಿ ವ್ಯಾಪಾರಿಗಳ ಅನುಕೂಲತೆ, ಅನುದಾನ ನೀಡಬೇಕು. ಪೊಲೀಸರ ಕಿರುಕುಳ ತಪ್ಪಿಸಬೇಕು ಎಂದು ಪ್ರಮುಖ ಮುಖಂಡರು ಆಗ್ರಹಿಸಿದರು.

Intro:ಟೌನ್ ವೆಂಡಿಂಗ್ ಕಮಿಟಿ ಸಧೃಢಪಡಿಸಿ ಬೀದಿ ವ್ಯಾಪಾರಿಗಳಿಗೆ ಸೌಲಭ್ಯ ನೀಡುವ ಭರವಸೆ-ಮೇಯರ್


ಬೆಂಗಳೂರು- ನಗರದಲ್ಲಿ ಎಂಭತ್ತು ಸಾವಿರ ಬೀದಿಬದಿ ವ್ಯಾಪಾರಿಗಳು ಇದ್ದರೂ, ಸಮೀಕ್ಷೆಯಲ್ಲಿ ನಾಲ್ಕು ಸಾವಿರ ಬೀದಿಬದಿ ವ್ಯಾಪಾರಿಗಳನ್ನು ಮಾತ್ರ ಗುರುತಿಸಲಾಗಿದೆ. ಹೀಗಾಗಿ ಗುರುತಿನ ಚೀಟಿ ನೀಡುವ ಕಾರ್ಯ ಸಂಪೂರ್ಣವಾಗಿಲ್ಲ. ಟೌನ್ ವೆಂಡಿಂಗ್ ಕಮಿಟಿಯನ್ನು ಸಧೃಢಪಡಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ನಗರದ ಟೌನ್ ಹಾಲ್ ನಲ್ಲಿ ನಡೆದ, ಬೀದಿಬದಿ ವ್ಯಾಪಾರಿಗಳ ರಾಷ್ಟ್ರೀಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿಸಿದರು. ದೇಶದ 500 ನಗರಗಳ 800 ಬೀದಿಬದಿ ವ್ಯಾಪಾರಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಎಸ್ .ವಿ ಕಾಯ್ದೆ 2014 ರನ್ವಯ ಬೀದಿಬದಿ ವ್ಯಾಪಾರಿಗಳ ಅನುಕೂಲತೆ, ಅನುದಾನ ನೀಡಬೇಕೆಂದು, ಪೊಲೀಸರ ಕಿರುಕುಳ ತಪ್ಪಿಸಬೇಕೆಂದು ಪ್ರಮುಖ ಮುಖಂಡರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮೇಯರ್ ನಗರದ ಎಂಟೂ ಝೋನ್ ಗಳಲ್ಲಿ ಹಾಕರ್ಸ್ ಝೋನ್ ನಿರ್ಮಿಸಿ, ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಲು, ಐಡಿ ಕಾರ್ಡ್ ಕೊಟ್ಟು ಸೌಲಭ್ಯ ನೀಡಲಾಗುವುದು. ಅಲ್ಲದೆ ಪೊಲೀಸರಿಂದಾಗಲೀ, ಬಿಬಿಎಂಪಿ ನೌಕರರಿಂದಾಗಲೀ ಕಿರುಕುಳ ಆಗದಂತೆ ತಡೆಯಲಾಗುವುದು ಎಂದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ರಾಮಲಿಂಗಾ ರೆಡ್ಡಿ ಮಾತನಾಡಿ, ಸಾರ್ವಜನಿಕರಿಗೆ ತೊಂದರೆ ಆಗದ ರೀತಿ, ಬೀದಿಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ನೀಡಿ, ಸಾಲ ಸೌಲಭ್ಯಗಳನ್ನು ನೀಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಹಿಂದಿನ ಸರ್ಕಾರವೇ ಈ ಬಗ್ಗೆ ಕಾನೂನು ರೂಪಿಸಿದ್ದರೂ, ಜಾರಿಯಾಗಿಲ್ಲ ಎಂದರು.




ಸೌಮ್ಯಶ್ರೀ
Kn_bng_03_street_vendors_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.