ETV Bharat / city

ಜೈಲು ಸೇರ್ತಾರಾ ತುಪ್ಪದ ಬೆಡಗಿ?... ಪೊಲೀಸ್​ ಆಯುಕ್ತರ ನಿರ್ಧಾರದ ಮೇಲೆ ನಿಂತಿದೆ ರಾಗಿಣಿ ಭವಿಷ್ಯ!

author img

By

Published : Sep 4, 2020, 4:01 PM IST

ಡ್ರಗ್ಸ್​​​ ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಚಿತ್ರ ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ನಗರ ಪೊಲೀಸ್​​ ಆಯುಕ್ತ ಕಮಲ್​ ಪಂತ್​​ ಅವರು ಸಿಸಿಬಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ಕುರಿತಂತೆ ಮಾಧ್ಯಮಗೋಷ್ಟಿ ನಡೆಸಲಿರುವ ಆಯುಕ್ತರು ನಟಿ ರಾಗಿಣಿ ಕುರಿತು ಯಾವ ವಿಚಾರವನ್ನು ಹೊರಹಾಕಲಿದ್ದಾರೆ ಎಂಬುದರ ಕುರಿತಂತೆ ಕುತೂಹಲ ಮೂಡಿದೆ.

police-arrest-actress-ragini-dwivedi-in-sandalwood-drugs-case
ರಾಗಿಣಿ ದ್ವಿವೇದಿ

ಬೆಂಗಳೂರು: ಸ್ಯಾಂಡಲ್​ವುಡ್​​​ನಲ್ಲಿ ಡ್ರಗ್ಸ್​​ ಆರೋಪ ಪ್ರಕರಣದಲ್ಲಿ ಚಿತ್ರನಟಿ ರಾಗಿಣಿ ದ್ವಿವೇದಿ ಹೆಸರು ತಳುಕು ಹಾಕಿಕೊಂಡಿದೆ. ಹೀಗಾಗಿ ತುಪ್ಪದ ಬೆಡಗಿಯ ಬಂಧನವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಅಲ್ಲದೆ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ಅವರು ಮಾಧ್ಯಮಗೋಷ್ಟಿ ನಡೆಸಲಿರುವ ಅವರು ಏನು ಹೇಳುತ್ತಾರೆ ಅನ್ನೋದರ ಮೇಲೆ ರಾಗಿಣಿ ಭವಿಷ್ಯ ನಿಂತಿದೆ.

ನಿನ್ನೆಯಷ್ಟೇ ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದ ಪೊಲೀಸ್ ಆಯುಕ್ತ ಕಮಲ್ ಪಂತ್​ ಸೋಮವಾರ ಬರುತ್ತೇನೆಂದು ಹೇಳಿದ್ದ ರಾಗಿಣಿ ಮೇಲೆ ಕಣ್ಣಿಟ್ಟು ಇಂದು ಸಿಸಿಬಿ ನೇತೃತ್ವದಲ್ಲಿ ಮನೆ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ರಾಗಿಣಿ ಕಿರುಚಾಡಿ ಕೂಡ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ರಾಗಿಣಿ ತಮ್ಮ ಮೊಬೈಲ್​ನಲ್ಲಿ ಇದ್ದ ಮಾಹಿತಿ ಡಿಲಿಟ್​ ಮಾಡಿದ್ದಾರೆ. ಸಿಸಿಬಿ ಕರೆದಾಗ ವಿಚಾರಣೆಗೆ ಹಾಜರಾಗಿಲ್ಲ. ಅವರ ಆಪ್ತ ರವಿಶಂಕರ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಹೀಗಾಗಿ ರಾಗಿಣಿ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಕಾಲ್ ಸಿಡಿಆರ್, ಟೆಕ್ನಿಕಲ್ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗ್ತಿದೆ.

ಈಗಾಗಲೇ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ಹಾಗೂ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಗೃಹ ಸಚಿವರನ್ನ ಭೇಟಿಯಾಗಿದ್ದಾರೆ. ಸದ್ಯದಲ್ಲೇ ರಾಗಿಣಿ ಭವಿಷ್ಯದ ಕುರಿತು ಮಾಹಿತಿ ಹೊರಬೀಳಲಿದೆ.

ಬೆಂಗಳೂರು: ಸ್ಯಾಂಡಲ್​ವುಡ್​​​ನಲ್ಲಿ ಡ್ರಗ್ಸ್​​ ಆರೋಪ ಪ್ರಕರಣದಲ್ಲಿ ಚಿತ್ರನಟಿ ರಾಗಿಣಿ ದ್ವಿವೇದಿ ಹೆಸರು ತಳುಕು ಹಾಕಿಕೊಂಡಿದೆ. ಹೀಗಾಗಿ ತುಪ್ಪದ ಬೆಡಗಿಯ ಬಂಧನವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಅಲ್ಲದೆ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ಅವರು ಮಾಧ್ಯಮಗೋಷ್ಟಿ ನಡೆಸಲಿರುವ ಅವರು ಏನು ಹೇಳುತ್ತಾರೆ ಅನ್ನೋದರ ಮೇಲೆ ರಾಗಿಣಿ ಭವಿಷ್ಯ ನಿಂತಿದೆ.

ನಿನ್ನೆಯಷ್ಟೇ ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದ ಪೊಲೀಸ್ ಆಯುಕ್ತ ಕಮಲ್ ಪಂತ್​ ಸೋಮವಾರ ಬರುತ್ತೇನೆಂದು ಹೇಳಿದ್ದ ರಾಗಿಣಿ ಮೇಲೆ ಕಣ್ಣಿಟ್ಟು ಇಂದು ಸಿಸಿಬಿ ನೇತೃತ್ವದಲ್ಲಿ ಮನೆ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ರಾಗಿಣಿ ಕಿರುಚಾಡಿ ಕೂಡ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ರಾಗಿಣಿ ತಮ್ಮ ಮೊಬೈಲ್​ನಲ್ಲಿ ಇದ್ದ ಮಾಹಿತಿ ಡಿಲಿಟ್​ ಮಾಡಿದ್ದಾರೆ. ಸಿಸಿಬಿ ಕರೆದಾಗ ವಿಚಾರಣೆಗೆ ಹಾಜರಾಗಿಲ್ಲ. ಅವರ ಆಪ್ತ ರವಿಶಂಕರ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಹೀಗಾಗಿ ರಾಗಿಣಿ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಕಾಲ್ ಸಿಡಿಆರ್, ಟೆಕ್ನಿಕಲ್ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗ್ತಿದೆ.

ಈಗಾಗಲೇ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ಹಾಗೂ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಗೃಹ ಸಚಿವರನ್ನ ಭೇಟಿಯಾಗಿದ್ದಾರೆ. ಸದ್ಯದಲ್ಲೇ ರಾಗಿಣಿ ಭವಿಷ್ಯದ ಕುರಿತು ಮಾಹಿತಿ ಹೊರಬೀಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.