ETV Bharat / city

'ಕನ್ನಡದ ಕೋಟ್ಯಧಿಪತಿ' ಯಲ್ಲಿ ಹಣ ಗೆದ್ದ ಬಾಲಕನ ನಿರ್ಧಾರಕ್ಕೆ ತಲೆದೂಗಿದ ಶಿಕ್ಷಣ ಸಚಿವರು - ಶಾಲಾ ಬಾಲಕನ ನಿರ್ಧಾರ ಮೆಚ್ಚಿದ ಶಿಕ್ಷಣ ಸಚಿವ

'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನು ತನ್ನ ಶಾಲೆಗೆ ಕಾಂಪೌಂಡ್ ಕಟ್ಟಿಸಲು ಬಳಸುತ್ತೇನೆ ಎಂದು ಬಾಲಕ ತೇಜಸ್ ಹೇಳಿದ್ದಾನೆ. ಈ ವಿದ್ಯಾರ್ಥಿಯ ನಿರ್ಧಾರಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕನ್ನಡದ ಕೋಟ್ಯಧಿಪತಿ'
author img

By

Published : Nov 5, 2019, 8:59 PM IST

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' ಸಾಕಷ್ಟು ಜನಮನ್ನಣೆ ಗಳಿಸಿದೆ. ಈ ಕಾರ್ಯಕ್ರಮದಿಂದ ವೀಕ್ಷಕರಿಗೆ ಮನರಂಜನೆ ಜೊತೆಗೆ ಜ್ಞಾನ ಕೂಡಾ ದೊರೆಯುತ್ತಿದೆ.

Kannadada Kotyadhipati latest updates, ಕನ್ನಡದ ಕೋಟ್ಯಧಿಪತಿಯಲ್ಲಿ 6 ಲಕ್ಷ ಗೆದ್ದ ಶಾಲಾ ಬಾಲಕ
ಪುನೀತ್ ರಾಜ್​ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' (ಫೋಟೋ ಕೃಪೆ: ಕಲರ್ಸ್ ಕನ್ನಡ)

ಈ ತಿಂಗಳಲ್ಲಿ ಪ್ರಸಾರವಾಗುತ್ತಿರುವ ಸಂಚಿಕೆ ಬಹಳ ವಿಭಿನ್ನವಾಗಿದೆ. ಕನ್ನಡ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷ. ಹಾಸನ ಜಿಲ್ಲೆಯ 10 ನೇ ತರಗತಿ ವಿದ್ಯಾರ್ಥಿ ಕೆ.ಎನ್. ತೇಜಸ್ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 6.4 ಲಕ್ಷ ರೂಪಾಯಿ ಗೆದ್ದಿದ್ದಾನೆ. ಈ ಹಣದಿಂದ ಏನು ಮಾಡುತ್ತೀಯ...? ಎಂದು ಪುನೀತ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಲಕ, ಪ್ರತಿ ವರ್ಷ ನಮ್ಮ ಶಾಲಾ ಆವರಣದಲ್ಲಿ 150 ಗಿಡಗಳನ್ನು ನೆಡುತ್ತೇವೆ. ಆದರೆ ಹಸುಗಳು ದಾಳಿ ನಡೆಸಿ ಎಲ್ಲವೂ ಹಾಳಾಗುತ್ತಿದೆ. ಹಾಗಾಗಿ ಈ ಹಣದಿಂದ ನಮ್ಮ ಶಾಲೆಗೆ ಕಾಂಪೌಂಡ್ ಕಟ್ಟಿಸಬೇಕು ಎಂದುಕೊಂಡಿದ್ದೇನೆ ಎಂದು ವಿದ್ಯಾರ್ಥಿ ಹೇಳಿದ್ದ. ಈ ಎಪಿಸೋಡ್​ ಬಹಳ ಸುದ್ದಿಯಾಗಿತ್ತು.

suresh kumar
ಬಾಲಕನ ನಿರ್ಧಾರಕ್ಕೆ ತಲೆದೂಗಿದ ಶಿಕ್ಷಣ ಸಚಿವರು

ತೇಜಸ್​​​​ಗೆ ತನ್ನ ಶಾಲೆ ಮೇಲೆ ಇರುವ ಅಭಿಮಾನವನ್ನು ತಿಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್​, ತೇಜಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಾವೇ ಖುದ್ದು ಹಾಸನ ಜಿಲ್ಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (CEO) ಮತ್ತು ಡಿಡಿಪಿಐ ಜೊತೆ ಮಾತನಾಡಿ ಬಾಲಕ ತೇಜಸ್ ಮನೆಗೆ ಹೋಗಿ ಆತನನ್ನು ಭೇಟಿಯಾಗಿ ಬಂದಿದ್ದಾರೆ. ಚಿಕ್ಕವಯಸ್ಸಿನಲ್ಲೇ ಆತನ ದೊಡ್ಡ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಆ ಹಣವನ್ನು ಆತನ ಮುಂದಿನ ಶಿಕ್ಷಣಕ್ಕೇ ಉಪಯೋಗಿಸುವಂತೆ ಹೇಳಿ ಬಂದಿದ್ದಾರೆ. ಜೊತೆಗೆ ನರೇಗಾ ಯೋಜನೆಯಡಿ ಆ ಬಾಲಕನ ಶಾಲೆಯ ಕಾಂಪೌಂಡ್ ಕೆಲಸವನ್ನು ಕೂಡಲೇ ಪ್ರಾರಂಭಿಸಬೇಕೆಂದು ಸೂಚಿಸಿದ್ದಾರೆ. ಸುರೇಶ್ ಕುಮಾರ್ ಅವರ ಈ ಕೆಲಸಕ್ಕೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Minister Suresh kumar praised school boy decision, ಶಾಲಾ ಬಾಲಕನ ನಿರ್ಧಾರ ಮೆಚ್ಚಿದ ಶಿಕ್ಷಣ ಸಚಿವ
ಹಾಸನ ಜಿಲ್ಲೆಯ ಸರ್ಕಾರಿ ಶಾಲಾ ವಿದ್ಯಾರ್ಥಿ ತೇಜಸ್ (ಫೋಟೋ ಕೃಪೆ: ಕಲರ್ಸ್ ಕನ್ನಡ)

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' ಸಾಕಷ್ಟು ಜನಮನ್ನಣೆ ಗಳಿಸಿದೆ. ಈ ಕಾರ್ಯಕ್ರಮದಿಂದ ವೀಕ್ಷಕರಿಗೆ ಮನರಂಜನೆ ಜೊತೆಗೆ ಜ್ಞಾನ ಕೂಡಾ ದೊರೆಯುತ್ತಿದೆ.

Kannadada Kotyadhipati latest updates, ಕನ್ನಡದ ಕೋಟ್ಯಧಿಪತಿಯಲ್ಲಿ 6 ಲಕ್ಷ ಗೆದ್ದ ಶಾಲಾ ಬಾಲಕ
ಪುನೀತ್ ರಾಜ್​ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' (ಫೋಟೋ ಕೃಪೆ: ಕಲರ್ಸ್ ಕನ್ನಡ)

ಈ ತಿಂಗಳಲ್ಲಿ ಪ್ರಸಾರವಾಗುತ್ತಿರುವ ಸಂಚಿಕೆ ಬಹಳ ವಿಭಿನ್ನವಾಗಿದೆ. ಕನ್ನಡ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷ. ಹಾಸನ ಜಿಲ್ಲೆಯ 10 ನೇ ತರಗತಿ ವಿದ್ಯಾರ್ಥಿ ಕೆ.ಎನ್. ತೇಜಸ್ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 6.4 ಲಕ್ಷ ರೂಪಾಯಿ ಗೆದ್ದಿದ್ದಾನೆ. ಈ ಹಣದಿಂದ ಏನು ಮಾಡುತ್ತೀಯ...? ಎಂದು ಪುನೀತ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಲಕ, ಪ್ರತಿ ವರ್ಷ ನಮ್ಮ ಶಾಲಾ ಆವರಣದಲ್ಲಿ 150 ಗಿಡಗಳನ್ನು ನೆಡುತ್ತೇವೆ. ಆದರೆ ಹಸುಗಳು ದಾಳಿ ನಡೆಸಿ ಎಲ್ಲವೂ ಹಾಳಾಗುತ್ತಿದೆ. ಹಾಗಾಗಿ ಈ ಹಣದಿಂದ ನಮ್ಮ ಶಾಲೆಗೆ ಕಾಂಪೌಂಡ್ ಕಟ್ಟಿಸಬೇಕು ಎಂದುಕೊಂಡಿದ್ದೇನೆ ಎಂದು ವಿದ್ಯಾರ್ಥಿ ಹೇಳಿದ್ದ. ಈ ಎಪಿಸೋಡ್​ ಬಹಳ ಸುದ್ದಿಯಾಗಿತ್ತು.

suresh kumar
ಬಾಲಕನ ನಿರ್ಧಾರಕ್ಕೆ ತಲೆದೂಗಿದ ಶಿಕ್ಷಣ ಸಚಿವರು

ತೇಜಸ್​​​​ಗೆ ತನ್ನ ಶಾಲೆ ಮೇಲೆ ಇರುವ ಅಭಿಮಾನವನ್ನು ತಿಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್​, ತೇಜಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಾವೇ ಖುದ್ದು ಹಾಸನ ಜಿಲ್ಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (CEO) ಮತ್ತು ಡಿಡಿಪಿಐ ಜೊತೆ ಮಾತನಾಡಿ ಬಾಲಕ ತೇಜಸ್ ಮನೆಗೆ ಹೋಗಿ ಆತನನ್ನು ಭೇಟಿಯಾಗಿ ಬಂದಿದ್ದಾರೆ. ಚಿಕ್ಕವಯಸ್ಸಿನಲ್ಲೇ ಆತನ ದೊಡ್ಡ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಆ ಹಣವನ್ನು ಆತನ ಮುಂದಿನ ಶಿಕ್ಷಣಕ್ಕೇ ಉಪಯೋಗಿಸುವಂತೆ ಹೇಳಿ ಬಂದಿದ್ದಾರೆ. ಜೊತೆಗೆ ನರೇಗಾ ಯೋಜನೆಯಡಿ ಆ ಬಾಲಕನ ಶಾಲೆಯ ಕಾಂಪೌಂಡ್ ಕೆಲಸವನ್ನು ಕೂಡಲೇ ಪ್ರಾರಂಭಿಸಬೇಕೆಂದು ಸೂಚಿಸಿದ್ದಾರೆ. ಸುರೇಶ್ ಕುಮಾರ್ ಅವರ ಈ ಕೆಲಸಕ್ಕೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Minister Suresh kumar praised school boy decision, ಶಾಲಾ ಬಾಲಕನ ನಿರ್ಧಾರ ಮೆಚ್ಚಿದ ಶಿಕ್ಷಣ ಸಚಿವ
ಹಾಸನ ಜಿಲ್ಲೆಯ ಸರ್ಕಾರಿ ಶಾಲಾ ವಿದ್ಯಾರ್ಥಿ ತೇಜಸ್ (ಫೋಟೋ ಕೃಪೆ: ಕಲರ್ಸ್ ಕನ್ನಡ)
Intro:Body:ಕನ್ನಡದ ಕೋಟ್ಯಾಧಿಪತಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿದೆ.ಆದರೆ, ಈ ವಾರ ಈ ಕಾರ್ಯಕ್ರಮ ಮತ್ತಷ್ಟು ಜನಪ್ರಿಯವಾಗಿದೆ. ಯಾಕೆ ಅಂತೀರಾ ಈ ಸುದ್ದಿ ಓದಿ...

ಕಳೆದ ಕೆಲವು ವರ್ಷಗಳಿಂದ ಕನ್ನಡದ ಕೋಟ್ಯಾಧಿಪತಿ ಅತ್ಯಂತ ಜನಪ್ರಿಯವಾಗಿದೆ. ಹಿಂದಿ ಭಾಷೆಯಲ್ಲಿ ಅಮಿತಾ ಬಚ್ಚನ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ರೀತಿಯಲ್ಲೇ ಕನ್ನಡದಲ್ಲಿ ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿದ್ದಾರೆ.
ಈ ಕಾರ್ಯಕ್ರಮ ವೀಕ್ಷಕರಿಗೆ ಮನರಂಜನೆ ಹಾಗೂ ಜ್ಞಾನವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿಯ ನವೆಂಬರ್ ಮಾಸದಲ್ಲಿ ಕನ್ನಡದ ಕೋಟ್ಯಾಧಿಪತಿ ವಿಭಿನ್ನವಾಗಿದೆ. ಕನ್ನಡ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಬಂದಿರುವುದು ಮತ್ತೊಂದು ವಿಶೇಷ.
ಮೈಸೂರು ಪ್ರಾಂತ್ಯದ ಕೆಆರ್ ನಗರದ ಹತ್ತನೇ ತರಗತಿಯ ವಿದ್ಯಾರ್ಥಿ ಕೆ .ಎನ್. ತೇಜಸ್ ಭಾಗವಹಿಸಿ, 6.4 ಲಕ್ಷ ರೂಪಾಯಿಯನ್ನು ಗೆದ್ದಿದ್ದಾನೆ. ಹಣದಿಂದ ಏನು ಮಾಡುತ್ತೀಯಾ ಎಂದು ಪುನೀತ್ ಪ್ರಶ್ನಿಸಿದ್ದಕ್ಕೆ, ಪ್ರತಿ ವರ್ಷ ನಮ್ಮ ಶಾಲಾ ಆವರಣದಲ್ಲಿ 150 ಗಿಡ ನೆಡುತ್ತೇವೆ. ಆದರೆ ದನಗಳು ದಾಳಿ ನಡೆಸಿ ಎಲ್ಲವೂ ಹಾಳಾಗುತ್ತದೆ. ಹಾಗಾಗಿ ಈ ಹಣದಿಂದ ನಮ್ಮ ಶಾಲೆಗೆ ಕಾಂಪೌಂಡ್ ಕಟ್ಟಿಸಬೇಕು ಎಂದುಕೊಂಡಿದ್ದೇನೆ ಎಂದು ವಿದ್ಯಾರ್ಥಿ ಹೇಳಿದ್ದ. ಅದು ಎಲ್ಲೆಡೆ ಸುದ್ದಿಯಾಗಿತ್ತು.

ತೇಜಸ್ ಗೆ ತನ್ನ ಶಾಲೆಯ ಮೇಲೆ ಇರುವ ಅಭಿಮಾನವನ್ನು ತಿಳಿದುಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತೇಜಸ್ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಜೊತೆಗೆ ತಾನೇ ಹಾಸನ ಜಿಲ್ಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (CEO) ಮತ್ತು ಡಿಡಿಪಿಐ ಜೊತೆ ಮಾತನಾಡಿ ಆ ಬಾಲಕ ತೇಜಸ್ ಮನೆಗೆ ಹೋಗಿ ಮಾತನಾಡಿದ್ದಾರೆ.
ಚಿಕ್ಕವಯಸ್ಸಿನಲ್ಲಿ ದೊಡ್ಡ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಆ ಹಣವನ್ನು ಆತನ ಮುಂದಿನ ಶಿಕ್ಷಣಕ್ಕೇ ಉಪಯೋಗಿಸಲು ಹೇಳುವಂತೆ ಆದೇಶ ನೀಡಿದ್ದಾರೆ. ಜೊತೆಗೆ ನರೇಗಾ ಯೋಜನೆಯಡಿ ಆ ಬಾಲಕನ ಶಾಲೆಯ ಕಾಂಪೌಂಡ್ ನಿರ್ಮಾಣ ಮಾಡಲು ಕೂಡಲೇ ಪ್ರಾರಂಭಿಸಬೇಕೆಂದು ಸೂಚನೆ ನೀಡಿದ್ದಾರೆ. ಸುರೇಶ್ ಕುಮಾರ್ ರವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.