ETV Bharat / city

ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದ ಸಚಿವ ಆರ್.ಅಶೋಕ್

ಮಳೆ ಹಾನಿ ಪರಿಶೀಲನೆಗೆ ತೆರಳಿದ್ದ ವೇಳೆ ಸಚಿವ ಆರ್.ಅಶೋಕ್ ಪದ್ಮನಾಭನಗರದಲ್ಲಿ ಮಕ್ಕಳ ಜೊತೆ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದಾರೆ.

author img

By

Published : Nov 5, 2021, 7:52 PM IST

Updated : Nov 5, 2021, 8:10 PM IST

ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದ ಸಚಿವ ಆರ್.ಅಶೋಕ್
ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದ ಸಚಿವ ಆರ್.ಅಶೋಕ್

ಬೆಂಗಳೂರು: ಗುರುವಾರ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್​.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿನ ಮಕ್ಕಳ ಜೊತೆ ಸಚಿವರು ಕ್ರಿಕೆಟ್ ಆಡಿದರು.

ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದ ಸಚಿವ ಆರ್.ಅಶೋಕ್

ಮಳೆ ಅವಾಂತರ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನೇತೃತ್ವದ ಸಭೆಗೆ ಸಚಿವ ಆರ್.ಅಶೋಕ್ ಗೈರಾಗಿದ್ದರು. ಸಭೆಗೆ ಗೈರಾದ ಸಚಿವ ಆರ್‌.ಅಶೋಕ್ ಪದ್ಮನಾಭನಗರದಲ್ಲಿ ಮಕ್ಕಳ ಜೊತೆ ಕ್ರಿಕೆಟ್ ಆಟದಲ್ಲಿ ತೊಡಗಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದ ಸಚಿವ ಆರ್.ಅಶೋಕ್

ಸಿಎಂ ಹೇಳಿದ್ದೇನು?:

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, 'ನಾನು ಹುಬ್ಬಳ್ಳಿ ಬಂದ ತಕ್ಷಣ ಮಳೆ ಅನಾಹುತದ ಬಗ್ಗೆ ತುರ್ತು ಸಭೆ ಕರೆದಿದ್ದೇನೆ. ಯಾರಿಗೂ ಸಭೆ ನಡೆಸುವ ಬಗ್ಗೆ ಸೂಚನೆ ನೀಡಿರಲಿಲ್ಲ. ಹೀಗಾಗಿ ಸಚಿವರು ಸಭೆಗೆ ಬಂದಿರಲಿಲ್ಲ. ಎಲ್ಲಾ ಸಚಿವರು ಮಳೆ ಅನಾಹುತದ ಬಗ್ಗೆ ಗಂಭೀರವಾಗಿ ಇದ್ದಾರೆ' ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು: ಗುರುವಾರ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್​.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿನ ಮಕ್ಕಳ ಜೊತೆ ಸಚಿವರು ಕ್ರಿಕೆಟ್ ಆಡಿದರು.

ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದ ಸಚಿವ ಆರ್.ಅಶೋಕ್

ಮಳೆ ಅವಾಂತರ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನೇತೃತ್ವದ ಸಭೆಗೆ ಸಚಿವ ಆರ್.ಅಶೋಕ್ ಗೈರಾಗಿದ್ದರು. ಸಭೆಗೆ ಗೈರಾದ ಸಚಿವ ಆರ್‌.ಅಶೋಕ್ ಪದ್ಮನಾಭನಗರದಲ್ಲಿ ಮಕ್ಕಳ ಜೊತೆ ಕ್ರಿಕೆಟ್ ಆಟದಲ್ಲಿ ತೊಡಗಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದ ಸಚಿವ ಆರ್.ಅಶೋಕ್

ಸಿಎಂ ಹೇಳಿದ್ದೇನು?:

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, 'ನಾನು ಹುಬ್ಬಳ್ಳಿ ಬಂದ ತಕ್ಷಣ ಮಳೆ ಅನಾಹುತದ ಬಗ್ಗೆ ತುರ್ತು ಸಭೆ ಕರೆದಿದ್ದೇನೆ. ಯಾರಿಗೂ ಸಭೆ ನಡೆಸುವ ಬಗ್ಗೆ ಸೂಚನೆ ನೀಡಿರಲಿಲ್ಲ. ಹೀಗಾಗಿ ಸಚಿವರು ಸಭೆಗೆ ಬಂದಿರಲಿಲ್ಲ. ಎಲ್ಲಾ ಸಚಿವರು ಮಳೆ ಅನಾಹುತದ ಬಗ್ಗೆ ಗಂಭೀರವಾಗಿ ಇದ್ದಾರೆ' ಎಂದು ಸ್ಪಷ್ಟಪಡಿಸಿದರು.

Last Updated : Nov 5, 2021, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.