ETV Bharat / city

ಬಾಡಿಗೆ ಮನೆಯಲ್ಲಿ ಇರುವಿರಾ? ನಿಮಗಿದೆ ಶುಭ ಸುದ್ದಿ!

ಬಾಡಿಗೆಯನ್ನು ನಿಗದಿಪಡಿಸುವಲ್ಲಿ ಸರ್ಕಾರದ ಪಾತ್ರವಿತ್ತು. ಈಗ ಬಾಡಿಗೆಯನ್ನು ಇಬ್ಬರೂ ಸೇರಿ (ಮಾಲೀಕರು ಮತ್ತು ಬಾಡಿಗೆದಾರರು) ನಿಗದಿಪಡಿಸಬೇಕು ಎಂದು ನಾವು ಈಗ ಪ್ರಸ್ತಾಪಿಸುತ್ತೇವೆ. ಒಪ್ಪಂದಕ್ಕೆ ಬಂದರೆ, ಅವರು ಅದನ್ನು ಕಾನೂನುಬದ್ಧವಾಗಿ ಅಂತಿಮಗೊಳಿಸಬೇಕು ಮತ್ತು ಅದನ್ನು ಪೋರ್ಟಲ್​​ನಲ್ಲಿ ಅಪ್​ಲೋಡ್ ಮಾಡಬೇಕಾಗುತ್ತದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

author img

By

Published : Jul 8, 2021, 10:00 PM IST

Updated : Jul 8, 2021, 10:41 PM IST

minister-rashok-on-rented-houses
ಮಾದರಿ ಬಾಡಿಗೆದಾರಿಕೆ ಕಾಯಿದೆ ರಾಜ್ಯದಲ್ಲೂ ಜಾರಿಗೆ ಚಿಂತನೆ : ಸಚಿವ ಆರ್. ಅಶೋಕ್

ಬೆಂಗಳೂರು: ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಮಾದರಿ ಬಾಡಿಗೆದಾರಿಕೆ ಕಾಯಿದೆ ರಾಜ್ಯದಲ್ಲೂ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆದಿದೆ. ವಿಧಾನಸೌಧದಲ್ಲಿ ಗುರುವಾರ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್.ಅಶೋಕ್, ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರ ಸರಿದೂಗಿಸುವುದು, ನ್ಯಾಯಸಮ್ಮತ ಪರಿಹಾರದ ಮೂಲಕ ಬಾಡಿಗೆದಾರ ಹಾಗೂ ಮಾಲೀಕನ ಸಂಬಂಧ ಸುಧಾರಿಸುವುದು ಈ ಕಾಯ್ದೆ ಮುಖ್ಯ ಉದ್ದೇಶ. ನಾವು ಪ್ರಸ್ತುತ ಬಾಡಿಗೆ ಕಾಯ್ದೆಯನ್ನು ಸರಳೀಕರಿಸುತ್ತಿದ್ದೇವೆ ಎಂದರು.

ಆರ್​. ಅಶೋಕ್ ಹೇಳುವಂತೆ ಈ ಮೊದಲು, ಬಾಡಿಗೆಯನ್ನು ನಿಗದಿಪಡಿಸುವಲ್ಲಿ ಸರ್ಕಾರದ ಪಾತ್ರವಿತ್ತು. ಈಗ ಬಾಡಿಗೆಯನ್ನು ಇಬ್ಬರೂ ಸೇರಿ (ಮಾಲೀಕರು ಮತ್ತು ಬಾಡಿಗೆದಾರರು) ನಿಗದಿಪಡಿಸಬೇಕು ಎಂದು ನಾವು ಈಗ ಪ್ರಸ್ತಾಪಿಸುತ್ತೇವೆ. ಒಪ್ಪಂದಕ್ಕೆ ಬಂದರೆ, ಅವರು ಅದನ್ನು ಕಾನೂನುಬದ್ಧವಾಗಿ ಅಂತಿಮಗೊಳಿಸಬೇಕು ಮತ್ತು ಅದನ್ನು ಪೋರ್ಟಲ್​​ನಲ್ಲಿ ಅಪ್​ಲೋಡ್ ಮಾಡಬೇಕಾಗುತ್ತದೆ. ಯಾವುದೇ ವಿವಾದವಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು 60 ದಿನಗಳೊಳಗೆ ಪರಿಹರಿಸುತ್ತಾರೆ. ವಿವಾದಗಳನ್ನು 60 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಮತ್ತು ವಿಚಾರಣೆಯನ್ನು ಮುಂದೂಡಲು ಯಾರಾದರೂ ಯೋಜಿಸಿದರೆ, ಮೂರು ಅವಕಾಶಗಳಿಗಿಂತ ಹೆಚ್ಚು ಸಮಯ ಇರುವುದಿಲ್ಲ.

ಆರ್.ಅಶೋಕ್

ಪ್ರಸ್ತುತ, ಬೆಂಗಳೂರಿನಲ್ಲಿ ಸುಮಾರು ಎರಡರಿಂದ ಮೂರು ಲಕ್ಷ ಮನೆಗಳು ಖಾಲಿ ಇವೆ. ಒಮ್ಮೆ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದರೆ, ಮಾಲೀಕರು ತಮ್ಮ ಬಾಡಿಗೆದಾರರನ್ನು ಪಡೆಯುತ್ತಾರೆ ಎಂಬ ಅಂದಾಜಿದೆ. ಹಾಗೆಯೇ ಬಾಡಿಗೆ ದರಗಳು ಸಹ ಕಡಿಮೆಯಾಗಬಹುದು. ಇದರಿಂದ ಜನಸಾಮಾನ್ಯರಿಗೆ ಖಂಡಿತ ಅನುಕೂಲವಾಗುತ್ತದೆ. ಇದು ಕೇವಲ ಪ್ರಸ್ತಾಪವಾಗಿದೆ ಮತ್ತು ನಾವು ಇದನ್ನು ಕರ್ನಾಟಕದಲ್ಲಿ ಅಧಿಕೃತವಾಗಿ ಪರಿಚಯಿಸುವ ಮೊದಲು ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ. ಜೂನ್ ಮೊದಲ ವಾರದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ, ಮಾದರಿ ಬಾಡಿಗೆ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು ಮತ್ತು ಹೊಸ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅಥವಾ ಅಸ್ತಿತ್ವದಲ್ಲಿರುವ ಬಾಡಿಗೆ ಕಾನೂನುಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಮೂಲಕ ಎಲ್ಲಾ ರಾಜ್ಯಗಳಿಗೆ ರೂಪಾಂತರಕ್ಕಾಗಿ ಕಳುಹಿಸಿಕೊಟ್ಟಿದೆ ಎಂದು ಆರ್​.ಅಶೋಕ್ ಹೇಳಿದರು.

ತಂಟೆ-ತಕರಾರು, ಜಟಿಲ ಸಮಸ್ಯೆಗಳಿಂದಾಗಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಎರಡು ಲಕ್ಷ ಮನೆಗಳು ಖಾಲಿ ಇವೆ. ಇದರಿಂದಾಗಿ ವಸತಿ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ವಸತಿಯೇತರ ಬಳಕೆ ನಿರೀಕ್ಷಿತ ಪ್ರಗತಿಯಲ್ಲಿಲ್ಲ. ಕೇಂದ್ರ ಸರ್ಕಾರವು ಅಂದಾಜಿಸಿದಂತೆ 2011ರ ಜನಗಣತಿ ಪ್ರಕಾರ ಪ್ರತಿಷ್ಠಿತ ಐದು ರಾಜ್ಯಗಳ ಪೈಕಿ ಒಂದಾಗಿರುವ ರಾಜ್ಯದಲ್ಲಿ 9.57 ಲಕ್ಷ ಮನೆಗಳು ಖಾಲಿಯಿವೆ. ದೇಶದಲ್ಲಿ ಒಟ್ಟಾರೆ 10 ಕೋಟಿ ಮನೆಗಳು ಖಾಲಿಯಿದ್ದರೆ, 1.57 ಕೋಟಿ ಜನರಿಗೆ ವಸತಿ ಕೊರತೆಯಿದೆ.

ಮೂಲಭೂತ ಸಮಸ್ಯೆಗಳ ನಿವಾರಣೆ, ಮಾಲೀಕನ ಹೂಡಿಕೆಯು ಸಾರ್ಥಕಗೊಳಿಸುವುದು ಮತ್ತು ಬಾಡಿಗೆದಾರರಿಗೆ ಅನಗತ್ಯ ಕಿರಿಕಿರಿ ತಪ್ಪಿಸಲೆಂದು ಕೇಂದ್ರದ ಮಾದರಿ ಬಾಡಿಗೆದಾರಿಕೆ ಅಧಿಸೂಚನೆ ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ವಸತಿಗೆ ಗರಿಷ್ಠ ಎರಡು ತಿಂಗಳ ಬಾಡಿಗೆ ಸಮನಾದ ಭದ್ರತಾ ಠೇವಣಿ, ವಸತಿಯೇತರ ಗರಿಷ್ಠ ಆರು ತಿಂಗಳ ಸಮನಾದ ಭದ್ರತಾ ಠೇವಣಿ ನಿಗದಿ. ಬಾಡಿಗೆದಾರ ಮತ್ತು ಮಾಲೀಕನ ಮಧ್ಯೆ ಪರಸ್ಪರ ಲಿಖಿತ ಒಪ್ಪಂದ ಕಡ್ಡಾಯವಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

ಪ್ರಾದೇಶಿಕ ಆಯುಕ್ತರ ಕಚೇರಿ ರದ್ದುಗೊಳಿಸಲು ಚಿಂತನೆ

ನಾಲ್ಕು ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದುಗೊಳಿಸಿ, ಬದಲಿಗೆ ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಚಿಂತನೆ‌ ನಡೆಸಿದೆ ಎಂದು ಸಚಿವ ಅಶೋಕ್ ಹೇಳಿದರು. ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಪಡಿಸಬಹುದು ಮತ್ತು ಬದಲಿಗೆ ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತರನ್ನು ಸ್ಥಾಪಿಸಬಹುದು ಎಂದು ಶಿಫಾರಸು ಮಾಡಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ಸೋತ ಅಣ್ಣಾಮಲೈಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ ಹೈಕಮಾಂಡ್​

ಪ್ರಾದೇಶಿಕ ಆಯುಕ್ತರ ಕಚೇರಿಗಳು ಬಿಳಿ ಆನೆಗಳಾಗಿ ಹೊರಹೊಮ್ಮಿದ್ದರಿಂದ ನಾನು ಕಳೆದ ಆರು ತಿಂಗಳಿಂದ ಈ ಮಾರ್ಗಗಳಲ್ಲಿ ಯೋಚಿಸುತ್ತಿದ್ದೇನೆ. ಉದಾಹರಣೆಗೆ, ನಾವು ಈ ಕಚೇರಿಗಳಿಗೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ಈ ಪ್ರತಿಯೊಂದು ಕಚೇರಿಗಳಲ್ಲಿ 125 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಆದಾಗ್ಯೂ, ಬಳಕೆಯ ಭಾಗದಲ್ಲಿ, ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳಿಗೆ ಇದುವರೆಗೆ ಕೇವಲ 250 ಮೇಲ್ಮನವಿಗಳು ಬಂದಿವೆ. ಇದು ಸಂಪನ್ಮೂಲಗಳ ವ್ಯರ್ಥವಲ್ಲದೆ ಮತ್ತೇನಲ್ಲ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚಿಸಲಾಗಿದೆ. ನಾವು ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದುಗೊಳಿಸಿದರೆ, ಸಾಕಷ್ಟು ಸಂಪನ್ಮೂಲ ಉಳಿಸಬಹುದು. ಅಲ್ಲಿರುವ ನೌಕರರನ್ನು ವಿವಿಧ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮರು ನಿಯೋಜಿಸಬಹುದು ಎಂದು ಸಚಿವರು ಹೇಳಿದರು.

ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ

ಕೋವಿಡ್‍ನಿಂದ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದರೆ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದಂತೆ, ಆ ಆದೇಶಕ್ಕೆ ಸಹಿ ಹಾಕಲಾಗಿದೆ. ಸದ್ಯದಲ್ಲೇ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ತಾಂತ್ರಿಕ ಸಲಹಾ ಸಮಿತಿ ದೃಢಪಡಿಸಿದ ಕರೊನಾ ಮರಣಗಳು ಹಾಗೂ ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಈ ಪರಿಹಾರ ದೊರೆಯಲಿದ್ದು, ವಿಸ್ತೃತ ಆದೇಶವನ್ನು ಗುರುವಾರ ಪ್ರಕಟಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು.

ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನ ನೂತನ ಸಾಮಾಜಿಕ ಭದ್ರತಾ (ಸಂಧ್ಯಾ ಸುರಕ್ಷ) ಅನುದಾನ ಬಳಸಲು ಅನುಮತಿ ನೀಡಲಾಗಿದೆ. ಅಲ್ಲದೆ, ಪರಿಹಾರ ಮೊತ್ತವು ಕುಟುಂಬ ಸದಸ್ಯನ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ತಿಳಿಸಿದರು.

ಬೆಂಗಳೂರು: ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಮಾದರಿ ಬಾಡಿಗೆದಾರಿಕೆ ಕಾಯಿದೆ ರಾಜ್ಯದಲ್ಲೂ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆದಿದೆ. ವಿಧಾನಸೌಧದಲ್ಲಿ ಗುರುವಾರ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್.ಅಶೋಕ್, ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರ ಸರಿದೂಗಿಸುವುದು, ನ್ಯಾಯಸಮ್ಮತ ಪರಿಹಾರದ ಮೂಲಕ ಬಾಡಿಗೆದಾರ ಹಾಗೂ ಮಾಲೀಕನ ಸಂಬಂಧ ಸುಧಾರಿಸುವುದು ಈ ಕಾಯ್ದೆ ಮುಖ್ಯ ಉದ್ದೇಶ. ನಾವು ಪ್ರಸ್ತುತ ಬಾಡಿಗೆ ಕಾಯ್ದೆಯನ್ನು ಸರಳೀಕರಿಸುತ್ತಿದ್ದೇವೆ ಎಂದರು.

ಆರ್​. ಅಶೋಕ್ ಹೇಳುವಂತೆ ಈ ಮೊದಲು, ಬಾಡಿಗೆಯನ್ನು ನಿಗದಿಪಡಿಸುವಲ್ಲಿ ಸರ್ಕಾರದ ಪಾತ್ರವಿತ್ತು. ಈಗ ಬಾಡಿಗೆಯನ್ನು ಇಬ್ಬರೂ ಸೇರಿ (ಮಾಲೀಕರು ಮತ್ತು ಬಾಡಿಗೆದಾರರು) ನಿಗದಿಪಡಿಸಬೇಕು ಎಂದು ನಾವು ಈಗ ಪ್ರಸ್ತಾಪಿಸುತ್ತೇವೆ. ಒಪ್ಪಂದಕ್ಕೆ ಬಂದರೆ, ಅವರು ಅದನ್ನು ಕಾನೂನುಬದ್ಧವಾಗಿ ಅಂತಿಮಗೊಳಿಸಬೇಕು ಮತ್ತು ಅದನ್ನು ಪೋರ್ಟಲ್​​ನಲ್ಲಿ ಅಪ್​ಲೋಡ್ ಮಾಡಬೇಕಾಗುತ್ತದೆ. ಯಾವುದೇ ವಿವಾದವಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು 60 ದಿನಗಳೊಳಗೆ ಪರಿಹರಿಸುತ್ತಾರೆ. ವಿವಾದಗಳನ್ನು 60 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಮತ್ತು ವಿಚಾರಣೆಯನ್ನು ಮುಂದೂಡಲು ಯಾರಾದರೂ ಯೋಜಿಸಿದರೆ, ಮೂರು ಅವಕಾಶಗಳಿಗಿಂತ ಹೆಚ್ಚು ಸಮಯ ಇರುವುದಿಲ್ಲ.

ಆರ್.ಅಶೋಕ್

ಪ್ರಸ್ತುತ, ಬೆಂಗಳೂರಿನಲ್ಲಿ ಸುಮಾರು ಎರಡರಿಂದ ಮೂರು ಲಕ್ಷ ಮನೆಗಳು ಖಾಲಿ ಇವೆ. ಒಮ್ಮೆ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದರೆ, ಮಾಲೀಕರು ತಮ್ಮ ಬಾಡಿಗೆದಾರರನ್ನು ಪಡೆಯುತ್ತಾರೆ ಎಂಬ ಅಂದಾಜಿದೆ. ಹಾಗೆಯೇ ಬಾಡಿಗೆ ದರಗಳು ಸಹ ಕಡಿಮೆಯಾಗಬಹುದು. ಇದರಿಂದ ಜನಸಾಮಾನ್ಯರಿಗೆ ಖಂಡಿತ ಅನುಕೂಲವಾಗುತ್ತದೆ. ಇದು ಕೇವಲ ಪ್ರಸ್ತಾಪವಾಗಿದೆ ಮತ್ತು ನಾವು ಇದನ್ನು ಕರ್ನಾಟಕದಲ್ಲಿ ಅಧಿಕೃತವಾಗಿ ಪರಿಚಯಿಸುವ ಮೊದಲು ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ. ಜೂನ್ ಮೊದಲ ವಾರದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ, ಮಾದರಿ ಬಾಡಿಗೆ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು ಮತ್ತು ಹೊಸ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅಥವಾ ಅಸ್ತಿತ್ವದಲ್ಲಿರುವ ಬಾಡಿಗೆ ಕಾನೂನುಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಮೂಲಕ ಎಲ್ಲಾ ರಾಜ್ಯಗಳಿಗೆ ರೂಪಾಂತರಕ್ಕಾಗಿ ಕಳುಹಿಸಿಕೊಟ್ಟಿದೆ ಎಂದು ಆರ್​.ಅಶೋಕ್ ಹೇಳಿದರು.

ತಂಟೆ-ತಕರಾರು, ಜಟಿಲ ಸಮಸ್ಯೆಗಳಿಂದಾಗಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಎರಡು ಲಕ್ಷ ಮನೆಗಳು ಖಾಲಿ ಇವೆ. ಇದರಿಂದಾಗಿ ವಸತಿ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ವಸತಿಯೇತರ ಬಳಕೆ ನಿರೀಕ್ಷಿತ ಪ್ರಗತಿಯಲ್ಲಿಲ್ಲ. ಕೇಂದ್ರ ಸರ್ಕಾರವು ಅಂದಾಜಿಸಿದಂತೆ 2011ರ ಜನಗಣತಿ ಪ್ರಕಾರ ಪ್ರತಿಷ್ಠಿತ ಐದು ರಾಜ್ಯಗಳ ಪೈಕಿ ಒಂದಾಗಿರುವ ರಾಜ್ಯದಲ್ಲಿ 9.57 ಲಕ್ಷ ಮನೆಗಳು ಖಾಲಿಯಿವೆ. ದೇಶದಲ್ಲಿ ಒಟ್ಟಾರೆ 10 ಕೋಟಿ ಮನೆಗಳು ಖಾಲಿಯಿದ್ದರೆ, 1.57 ಕೋಟಿ ಜನರಿಗೆ ವಸತಿ ಕೊರತೆಯಿದೆ.

ಮೂಲಭೂತ ಸಮಸ್ಯೆಗಳ ನಿವಾರಣೆ, ಮಾಲೀಕನ ಹೂಡಿಕೆಯು ಸಾರ್ಥಕಗೊಳಿಸುವುದು ಮತ್ತು ಬಾಡಿಗೆದಾರರಿಗೆ ಅನಗತ್ಯ ಕಿರಿಕಿರಿ ತಪ್ಪಿಸಲೆಂದು ಕೇಂದ್ರದ ಮಾದರಿ ಬಾಡಿಗೆದಾರಿಕೆ ಅಧಿಸೂಚನೆ ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ವಸತಿಗೆ ಗರಿಷ್ಠ ಎರಡು ತಿಂಗಳ ಬಾಡಿಗೆ ಸಮನಾದ ಭದ್ರತಾ ಠೇವಣಿ, ವಸತಿಯೇತರ ಗರಿಷ್ಠ ಆರು ತಿಂಗಳ ಸಮನಾದ ಭದ್ರತಾ ಠೇವಣಿ ನಿಗದಿ. ಬಾಡಿಗೆದಾರ ಮತ್ತು ಮಾಲೀಕನ ಮಧ್ಯೆ ಪರಸ್ಪರ ಲಿಖಿತ ಒಪ್ಪಂದ ಕಡ್ಡಾಯವಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

ಪ್ರಾದೇಶಿಕ ಆಯುಕ್ತರ ಕಚೇರಿ ರದ್ದುಗೊಳಿಸಲು ಚಿಂತನೆ

ನಾಲ್ಕು ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದುಗೊಳಿಸಿ, ಬದಲಿಗೆ ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಚಿಂತನೆ‌ ನಡೆಸಿದೆ ಎಂದು ಸಚಿವ ಅಶೋಕ್ ಹೇಳಿದರು. ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಪಡಿಸಬಹುದು ಮತ್ತು ಬದಲಿಗೆ ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತರನ್ನು ಸ್ಥಾಪಿಸಬಹುದು ಎಂದು ಶಿಫಾರಸು ಮಾಡಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ಸೋತ ಅಣ್ಣಾಮಲೈಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ ಹೈಕಮಾಂಡ್​

ಪ್ರಾದೇಶಿಕ ಆಯುಕ್ತರ ಕಚೇರಿಗಳು ಬಿಳಿ ಆನೆಗಳಾಗಿ ಹೊರಹೊಮ್ಮಿದ್ದರಿಂದ ನಾನು ಕಳೆದ ಆರು ತಿಂಗಳಿಂದ ಈ ಮಾರ್ಗಗಳಲ್ಲಿ ಯೋಚಿಸುತ್ತಿದ್ದೇನೆ. ಉದಾಹರಣೆಗೆ, ನಾವು ಈ ಕಚೇರಿಗಳಿಗೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ಈ ಪ್ರತಿಯೊಂದು ಕಚೇರಿಗಳಲ್ಲಿ 125 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಆದಾಗ್ಯೂ, ಬಳಕೆಯ ಭಾಗದಲ್ಲಿ, ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳಿಗೆ ಇದುವರೆಗೆ ಕೇವಲ 250 ಮೇಲ್ಮನವಿಗಳು ಬಂದಿವೆ. ಇದು ಸಂಪನ್ಮೂಲಗಳ ವ್ಯರ್ಥವಲ್ಲದೆ ಮತ್ತೇನಲ್ಲ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚಿಸಲಾಗಿದೆ. ನಾವು ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದುಗೊಳಿಸಿದರೆ, ಸಾಕಷ್ಟು ಸಂಪನ್ಮೂಲ ಉಳಿಸಬಹುದು. ಅಲ್ಲಿರುವ ನೌಕರರನ್ನು ವಿವಿಧ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮರು ನಿಯೋಜಿಸಬಹುದು ಎಂದು ಸಚಿವರು ಹೇಳಿದರು.

ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ

ಕೋವಿಡ್‍ನಿಂದ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದರೆ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದಂತೆ, ಆ ಆದೇಶಕ್ಕೆ ಸಹಿ ಹಾಕಲಾಗಿದೆ. ಸದ್ಯದಲ್ಲೇ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ತಾಂತ್ರಿಕ ಸಲಹಾ ಸಮಿತಿ ದೃಢಪಡಿಸಿದ ಕರೊನಾ ಮರಣಗಳು ಹಾಗೂ ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಈ ಪರಿಹಾರ ದೊರೆಯಲಿದ್ದು, ವಿಸ್ತೃತ ಆದೇಶವನ್ನು ಗುರುವಾರ ಪ್ರಕಟಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು.

ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನ ನೂತನ ಸಾಮಾಜಿಕ ಭದ್ರತಾ (ಸಂಧ್ಯಾ ಸುರಕ್ಷ) ಅನುದಾನ ಬಳಸಲು ಅನುಮತಿ ನೀಡಲಾಗಿದೆ. ಅಲ್ಲದೆ, ಪರಿಹಾರ ಮೊತ್ತವು ಕುಟುಂಬ ಸದಸ್ಯನ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ತಿಳಿಸಿದರು.

Last Updated : Jul 8, 2021, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.