ETV Bharat / city

ಅವರು ರಾಮನಗರಕ್ಕೆ ಕಳಂಕ, ಕುತಂತ್ರದ ಮೂಲಕ ಬೆಳೆದವರು: ಡಿಕೆ ಬ್ರದರ್ಸ್​ ವಿರುದ್ಧ ಅಶ್ವತ್ಥ್ ನಾರಾಯಣ್ ವಾಗ್ದಾಳಿ

ವಿಕಾಸಸೌಧದಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ , ಡಿಕೆಶಿ ಸಹೋದರರಿಗೆೆ ಟಾಂಗ್ ನೀಡುತ್ತಾ, ಅವರು ತಂತ್ರ, ಕುತಂತ್ರ ಮಾಡಿ ಬಾಳಿ ಬದುಕಿದವರು. ಅವರ ಹಿನ್ನೆಲೆ ರಾಜ್ಯದ ಜನರಿಗೆ ಗೊತ್ತು. ರಾಮನಗರದ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಅವರು ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

author img

By

Published : Jan 5, 2022, 2:29 AM IST

Ashwath Narayan vs DK Brothers
Ashwath Narayan vs DK Brothers

ಬೆಂಗಳೂರು: ಕುತ್ತಿಗೆ ಕೊಯ್ದು, ಕುತುಂತ್ರ ರಾಜಕೀಯ ಮಾಡಿ ಬೆಳೆದುಕೊಂಡು ಬಂದವರು ಇವರು. ಸಾಧನೆ, ಪ್ರಗತಿ, ಬದಲಾವಣೆ ಮಾಡಿದ್ದೇನೆ ಎಂದು ಹೇಳಿ ರಾಜಕೀಯ ಮಾಡಿದವ ಇತಿಹಾಸವಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ್ ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ಸಹೋದರರಿಗೆೆ ಟಾಂಗ್ ನೀಡುತ್ತಾ, ಅವರು ತಂತ್ರ, ಕುತಂತ್ರ ಮಾಡಿ ಬಾಳಿ ಬದುಕಿದವರು. ಅವರ ಹಿನ್ನೆಲೆ ರಾಜ್ಯದ ಜನರಿಗೆ ಗೊತ್ತು. ರಾಮನಗರದ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಅವರು ಅವಮಾನ ಮಾಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಜಿಲ್ಲೆ ಜನರ ಒತ್ತಾಯ ಇತ್ತು. ಅಲ್ಲಿನ ಪ್ರತಿನಿಧಿಗಳು ಬಂದು ಅನಾವರಣಕ್ಕೆ ಒತ್ತಾಯಿಸಿದ್ದರು. ಎರಡು ವರ್ಷ ಆದ್ರೂ ಆಗಿರಲಿಲ್ಲ, ಸಿಎಂ ಬೊಮ್ಮಾಯಿ ಅವರಿಗೆ ಸೂಚಿಸಿದಾಗ ಬರಲು ಒಪ್ಪಿದ್ದರು.

ಡಿಕೆ ಸಹೋದರರ ವಿರುದ್ಧ ಸಚಿವ ಅಶ್ವತ್ಥ್ ನಾರಾಯಾಣ ವಾಗ್ದಾಳಿ

ಕಾರ್ಯಕ್ರಮ ಪ್ರೊಟೋಕಾಲ್ ಪ್ರಕಾರ ನಡೆಯುತ್ತಿದ್ದರಿಂದ ಪುಷ್ಪಾರ್ಚನೆ ಮಾಡಲು ಮೂರು ಜನರಿಗೆ ಮಾತ್ರ ಅವಕಾಶ ಇತ್ತು. ಹೀಗಾಗಿ ನಾನು, ಸಿಎಂ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹೋದೆವು. ಕಾರ್ಯಕ್ರಮ ವೇಳೆ ಅವರು ಇನ್ನೂ ಬಂದಿರಲಿಲ್ಲ. ನನ್ನ ಬಿಟ್ಟು ಮಾಡಿದ್ದೀರಾ ಅಂತ ಹೇಳಿದ್ದಕ್ಕೆ ಮುಂದಿನ ಕಾರ್ಯಕ್ರಮದಲ್ಲಿ ಅವರಿಗೆ ಅವಕಾಶ ನೀಡಿದೆವು. ಸಭಾ ಕಾರ್ಯಕ್ರಮಕ್ಕೆ ಹೋದಾಗ ಒಂದಷ್ಟು ಬಂಟರು, ಹಿಂಬಾಲಕರು DK, DK ಅಂತ ಘೋಷಣೆ ಕೂಗಿದ್ರು. ಘೋಷಣೆ ಕೂಗಲೆಂದೇ 50-100 ಮಂದಿಯ ತಂಡ ಅದು. ಸಿಎಂ ಬಂದಾಗ ಅಡಚಣೆ ಮಾಡಿದ್ರೆ, ಕಾನೂನು ರೀತಿ ಏನು ಮಾಡಬಹುದಿತ್ತು ಎಂಬುದು ಗೊತ್ತಿದೆ. ಇದೇ ಕಾಂಗ್ರೆಸ್ ಕಾರ್ಯಕ್ರಮ ಆಗಿದ್ರೆ ಏನೂ ಮಾಡ್ತಿದ್ರೂ ಎಂಬುದೂ ಗೊತ್ತಿದೆ. ಆದ್ರೂ ನಾವು ಏನೂ ಮಾಡಲಿಲ್ಲ. ಪದೇ ಪದೇ ಕೆಣಕಿ, ಪೂರ್ವ ಯೋಜಿತವಾಗಿ ಮಾಡಿರೋ ಕೆಲಸ ಅದು ಎಂದು ಆರೋಪಿಸಿದರು.

ನಮ್ಮ ಯೋಜನೆ ನೋಡಿ ಭಯ ಬಂದಿದೆ:

ಕಾರ್ಯಕ್ರಮ ಬಗ್ಗೆ ಜಾಹೀರಾತು ನೀಡಲಾಗಿತ್ತು. ನಾವು ಮಾಡಿರೋ ಯೋಜನೆ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದನ್ನ ನೋಡಿ ಅವರಿಗೆ ಅಭದ್ರತೆ ಮತ್ತು ಭಯ ಹುಟ್ಟಿಕೊಂಡಿತ್ತು. ಇದನ್ನ ಸ್ಥಳೀಯರು ಪ್ರಶ್ನಿಸ್ತಾರೆ ಅಂತ ಈ ರೀತಿಯ ಹುನ್ನಾರ ಮಾಡಿದ್ರು. ರಾಮನಗರ ಜಿಲ್ಲೆ ಇವರೊಬ್ಬರಿಗೆ ಸೇರಿದ್ದಲ್ಲ. ನಾನೂ ಕೂಡ ರಾಮನಗರ ಜಿಲ್ಲೆಗೆ ಸಂಬಂಧಿಸಿದವನೇ. ರಾಮನಗರದಲ್ಲಿ ಇವರಿಗಿಂತ ನನಗೆ ಹೆಚ್ಚಿನ ಓನರ್ ಶಿಪ್ ಇದೆ ಎಂದು ವಾಗ್ದಾಳಿ ನಡೆಸಿದರು.

ಡಿಕೆ ಬ್ರದರ್ಸ್​​ ರಾಮನಗರ ಜಿಲ್ಲೆಗೆ ಕಳಂಕ

ಡಿಕೆ ಫಾಲೋವರ್ಸ್​ಗಳಿಗೆ ನಿಮ್ಮ ಯೋಗ್ಯತೆಗೆ, ನಿಮಗೆ ಗಂಡಸುತನ ಇದ್ದರೆ ಕೆಲಸ ಮಾಡಿ ತೋರಿಸಬೇಕು. ನಿಮ್ಮ ಯೋಗ್ಯತೆ, ಅರ್ಹತೆಯನ್ನ ಕೆಲಸದಲ್ಲಿ ತೋರಿಸಬೇಕು. ನಿಮ್ಮ ಪುಂಡಾಟಿಕೆ ಸರಿಯಲ್ಲ ಎಂದು ಹೇಳಿದೆ. ನಾವು ಮಾಡಿರೋ ಕೆಲಸದ ಬಗ್ಗೆ ನಮ್ಗ ಸರ್ಕಾರ ನಾವು ಮಾಡಿರೋ ಕೆಲಸ ಬಗ್ಗೆ ಭಾಷಣ ಮಾಡ್ತಿದ್ದೆ. ನಾನು ಮಾತನಾಡಿದ ಬಳಿಕ, ಅವರು ಮಾತನಾಡಲು ಅವಕಾಶ ಕೇಳಿದ್ರು. ನಾನು ಮಾತನಾಡಿದ ಬಳಿಕ ಅವರೂ ಮಾತನಾಡಬಹುದಿತ್ತು. ಆದ್ರೆ, ಬೆಂಚು ಕುಟ್ತೀಯೇನೋ ಅಂತ ಗಲಾಟೆ ಮಾಡಿದ್ರು. ಜಿಲ್ಲೆ ಅಭಿವೃದ್ಧಿ ಅವರಿಗೆ ಬೇಕಿಲ್ಲ. ತಮ್ಮನಿಗೆ ಬೈದು ಬುದ್ದಿ ಹೇಳಬೇಕಾದವರು, ಅಶ್ವಥ್ ನಾರಾಯಣ ಅವರಿಗೆ ಏನು ಸಂಬಂಧ ಅಂತ ಪ್ರಶ್ನಿಸ್ತಾರೆ. ನಾನು ಒಬ್ಬ ಸಚಿವ, ನಾನು ಯಾವ ಜಿಲ್ಲೆಗೆ ಬೇಕಾದ್ರೂ ಹೋಗ್ತೀನಿ. ಅಣತಮ್ಮಂದಿರು ಬರೀ ಕುತಂತ್ರ ಮಾಡಿಕೊಂಡು ಬಂದವರು. ಇವರ ರಾಜಕೀಯ ಇತಿಹಾಸ ಬಗ್ಗೆ ಎಲ್ಲರಿಗೂ ಗೊತ್ತಿದೆ. ರಾಮನಗರ ಜಿಲ್ಲೆಗೆ ಅವಮಾನ, ಕಳಂಕ ಇವರು. ಇಬ್ಬರೂ ತಿಳುವಳಿಕೆ ತೆಗೆದುಕೊಳ್ಳಬೇಕು. ಎಂದು ಕಿಡಿ ಕಾರಿದರು.

ಇದನ್ನೂ ಓದಿ:ವಿದೇಶಿ ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್ ರದ್ದು, ಅಂತಾರಾಜ್ಯ ಪ್ರಯಾಣಿಕರಿಗೆ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ; ಸುಧಾಕರ್

ಬೆಂಗಳೂರು: ಕುತ್ತಿಗೆ ಕೊಯ್ದು, ಕುತುಂತ್ರ ರಾಜಕೀಯ ಮಾಡಿ ಬೆಳೆದುಕೊಂಡು ಬಂದವರು ಇವರು. ಸಾಧನೆ, ಪ್ರಗತಿ, ಬದಲಾವಣೆ ಮಾಡಿದ್ದೇನೆ ಎಂದು ಹೇಳಿ ರಾಜಕೀಯ ಮಾಡಿದವ ಇತಿಹಾಸವಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ್ ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ಸಹೋದರರಿಗೆೆ ಟಾಂಗ್ ನೀಡುತ್ತಾ, ಅವರು ತಂತ್ರ, ಕುತಂತ್ರ ಮಾಡಿ ಬಾಳಿ ಬದುಕಿದವರು. ಅವರ ಹಿನ್ನೆಲೆ ರಾಜ್ಯದ ಜನರಿಗೆ ಗೊತ್ತು. ರಾಮನಗರದ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಅವರು ಅವಮಾನ ಮಾಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಜಿಲ್ಲೆ ಜನರ ಒತ್ತಾಯ ಇತ್ತು. ಅಲ್ಲಿನ ಪ್ರತಿನಿಧಿಗಳು ಬಂದು ಅನಾವರಣಕ್ಕೆ ಒತ್ತಾಯಿಸಿದ್ದರು. ಎರಡು ವರ್ಷ ಆದ್ರೂ ಆಗಿರಲಿಲ್ಲ, ಸಿಎಂ ಬೊಮ್ಮಾಯಿ ಅವರಿಗೆ ಸೂಚಿಸಿದಾಗ ಬರಲು ಒಪ್ಪಿದ್ದರು.

ಡಿಕೆ ಸಹೋದರರ ವಿರುದ್ಧ ಸಚಿವ ಅಶ್ವತ್ಥ್ ನಾರಾಯಾಣ ವಾಗ್ದಾಳಿ

ಕಾರ್ಯಕ್ರಮ ಪ್ರೊಟೋಕಾಲ್ ಪ್ರಕಾರ ನಡೆಯುತ್ತಿದ್ದರಿಂದ ಪುಷ್ಪಾರ್ಚನೆ ಮಾಡಲು ಮೂರು ಜನರಿಗೆ ಮಾತ್ರ ಅವಕಾಶ ಇತ್ತು. ಹೀಗಾಗಿ ನಾನು, ಸಿಎಂ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹೋದೆವು. ಕಾರ್ಯಕ್ರಮ ವೇಳೆ ಅವರು ಇನ್ನೂ ಬಂದಿರಲಿಲ್ಲ. ನನ್ನ ಬಿಟ್ಟು ಮಾಡಿದ್ದೀರಾ ಅಂತ ಹೇಳಿದ್ದಕ್ಕೆ ಮುಂದಿನ ಕಾರ್ಯಕ್ರಮದಲ್ಲಿ ಅವರಿಗೆ ಅವಕಾಶ ನೀಡಿದೆವು. ಸಭಾ ಕಾರ್ಯಕ್ರಮಕ್ಕೆ ಹೋದಾಗ ಒಂದಷ್ಟು ಬಂಟರು, ಹಿಂಬಾಲಕರು DK, DK ಅಂತ ಘೋಷಣೆ ಕೂಗಿದ್ರು. ಘೋಷಣೆ ಕೂಗಲೆಂದೇ 50-100 ಮಂದಿಯ ತಂಡ ಅದು. ಸಿಎಂ ಬಂದಾಗ ಅಡಚಣೆ ಮಾಡಿದ್ರೆ, ಕಾನೂನು ರೀತಿ ಏನು ಮಾಡಬಹುದಿತ್ತು ಎಂಬುದು ಗೊತ್ತಿದೆ. ಇದೇ ಕಾಂಗ್ರೆಸ್ ಕಾರ್ಯಕ್ರಮ ಆಗಿದ್ರೆ ಏನೂ ಮಾಡ್ತಿದ್ರೂ ಎಂಬುದೂ ಗೊತ್ತಿದೆ. ಆದ್ರೂ ನಾವು ಏನೂ ಮಾಡಲಿಲ್ಲ. ಪದೇ ಪದೇ ಕೆಣಕಿ, ಪೂರ್ವ ಯೋಜಿತವಾಗಿ ಮಾಡಿರೋ ಕೆಲಸ ಅದು ಎಂದು ಆರೋಪಿಸಿದರು.

ನಮ್ಮ ಯೋಜನೆ ನೋಡಿ ಭಯ ಬಂದಿದೆ:

ಕಾರ್ಯಕ್ರಮ ಬಗ್ಗೆ ಜಾಹೀರಾತು ನೀಡಲಾಗಿತ್ತು. ನಾವು ಮಾಡಿರೋ ಯೋಜನೆ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದನ್ನ ನೋಡಿ ಅವರಿಗೆ ಅಭದ್ರತೆ ಮತ್ತು ಭಯ ಹುಟ್ಟಿಕೊಂಡಿತ್ತು. ಇದನ್ನ ಸ್ಥಳೀಯರು ಪ್ರಶ್ನಿಸ್ತಾರೆ ಅಂತ ಈ ರೀತಿಯ ಹುನ್ನಾರ ಮಾಡಿದ್ರು. ರಾಮನಗರ ಜಿಲ್ಲೆ ಇವರೊಬ್ಬರಿಗೆ ಸೇರಿದ್ದಲ್ಲ. ನಾನೂ ಕೂಡ ರಾಮನಗರ ಜಿಲ್ಲೆಗೆ ಸಂಬಂಧಿಸಿದವನೇ. ರಾಮನಗರದಲ್ಲಿ ಇವರಿಗಿಂತ ನನಗೆ ಹೆಚ್ಚಿನ ಓನರ್ ಶಿಪ್ ಇದೆ ಎಂದು ವಾಗ್ದಾಳಿ ನಡೆಸಿದರು.

ಡಿಕೆ ಬ್ರದರ್ಸ್​​ ರಾಮನಗರ ಜಿಲ್ಲೆಗೆ ಕಳಂಕ

ಡಿಕೆ ಫಾಲೋವರ್ಸ್​ಗಳಿಗೆ ನಿಮ್ಮ ಯೋಗ್ಯತೆಗೆ, ನಿಮಗೆ ಗಂಡಸುತನ ಇದ್ದರೆ ಕೆಲಸ ಮಾಡಿ ತೋರಿಸಬೇಕು. ನಿಮ್ಮ ಯೋಗ್ಯತೆ, ಅರ್ಹತೆಯನ್ನ ಕೆಲಸದಲ್ಲಿ ತೋರಿಸಬೇಕು. ನಿಮ್ಮ ಪುಂಡಾಟಿಕೆ ಸರಿಯಲ್ಲ ಎಂದು ಹೇಳಿದೆ. ನಾವು ಮಾಡಿರೋ ಕೆಲಸದ ಬಗ್ಗೆ ನಮ್ಗ ಸರ್ಕಾರ ನಾವು ಮಾಡಿರೋ ಕೆಲಸ ಬಗ್ಗೆ ಭಾಷಣ ಮಾಡ್ತಿದ್ದೆ. ನಾನು ಮಾತನಾಡಿದ ಬಳಿಕ, ಅವರು ಮಾತನಾಡಲು ಅವಕಾಶ ಕೇಳಿದ್ರು. ನಾನು ಮಾತನಾಡಿದ ಬಳಿಕ ಅವರೂ ಮಾತನಾಡಬಹುದಿತ್ತು. ಆದ್ರೆ, ಬೆಂಚು ಕುಟ್ತೀಯೇನೋ ಅಂತ ಗಲಾಟೆ ಮಾಡಿದ್ರು. ಜಿಲ್ಲೆ ಅಭಿವೃದ್ಧಿ ಅವರಿಗೆ ಬೇಕಿಲ್ಲ. ತಮ್ಮನಿಗೆ ಬೈದು ಬುದ್ದಿ ಹೇಳಬೇಕಾದವರು, ಅಶ್ವಥ್ ನಾರಾಯಣ ಅವರಿಗೆ ಏನು ಸಂಬಂಧ ಅಂತ ಪ್ರಶ್ನಿಸ್ತಾರೆ. ನಾನು ಒಬ್ಬ ಸಚಿವ, ನಾನು ಯಾವ ಜಿಲ್ಲೆಗೆ ಬೇಕಾದ್ರೂ ಹೋಗ್ತೀನಿ. ಅಣತಮ್ಮಂದಿರು ಬರೀ ಕುತಂತ್ರ ಮಾಡಿಕೊಂಡು ಬಂದವರು. ಇವರ ರಾಜಕೀಯ ಇತಿಹಾಸ ಬಗ್ಗೆ ಎಲ್ಲರಿಗೂ ಗೊತ್ತಿದೆ. ರಾಮನಗರ ಜಿಲ್ಲೆಗೆ ಅವಮಾನ, ಕಳಂಕ ಇವರು. ಇಬ್ಬರೂ ತಿಳುವಳಿಕೆ ತೆಗೆದುಕೊಳ್ಳಬೇಕು. ಎಂದು ಕಿಡಿ ಕಾರಿದರು.

ಇದನ್ನೂ ಓದಿ:ವಿದೇಶಿ ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್ ರದ್ದು, ಅಂತಾರಾಜ್ಯ ಪ್ರಯಾಣಿಕರಿಗೆ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ; ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.