ETV Bharat / city

ಕುಂದಾಣ ಗ್ರಾ. ಪಂ.​ ಸದಸ್ಯೆಯ ಪತಿ ಅಂಧ ದರ್ಬಾರ್​ಗೆ ಮರಗಳು ನಾಶ - ಕುಂದಾಣ ಗ್ರಾಮ ಪಂಚಾಯತಿ ಸದಸ್ಯೆ

ಶಾಲೆಯಲ್ಲಿ ಸೊಂಪಾಗಿ ಬೆಳೆಸಿದ್ದ ಮರಗಳನ್ನು ಗ್ರಾಮ ಪಂಚಾಯತ್​ ಸದಸ್ಯೆಯ ಪತಿ ತನ್ನ ಜಮೀನಿನ ಮೇಲೆ ಮರದ ನೆರಳು ಬೀಳುತ್ತೆ ಎಂಬ ಕ್ಷುಲ್ಲಕ ಕಾರಣಕ್ಕೆ ಕಡಿದು ನೆಲಸಮ ಮಾಡಿದ್ದಾನೆ.

kundana-school-tree-demolished
ಕುಂದಾಣ ಪಂಚಾಯತ್
author img

By

Published : Apr 26, 2020, 5:19 PM IST

ದೇವನಹಳ್ಳಿ: ತನ್ನ ಜಮೀನಿಗೆ ಗಿಡಗಳ ನೆರಳು ಬೀಳುತ್ತೆ ಎಂದು ಶಾಲಾ ಕಾಂಪೌಂಡ್​​ನಲ್ಲಿ ಸೊಂಪಾಗಿ ಬೆಳೆದಿದ್ದ ಮರಗಳನ್ನು ಗ್ರಾಮ ಪಂಚಾಯತ್ ಸದಸ್ಯೆಯ ಪತಿ ಕಡಿದು ಹಾಕಿದ ಘಟನೆ ತಾಲೂಕಿನ ಕುಂದಾಣ ಗ್ರಾಮದಲ್ಲಿ ನಡೆದಿದೆ.

ಕುಂದಾಣ ಪಂಚಾಯತ್​ ಸದಸ್ಯೆ ಗಂಡನ ಅಂಧ ದರ್ಬಾರ್​ಗೆ ಮರಗಳು ನಾಶ

ಕುಂದಾಣ ಗ್ರಾಮ ಪಂಚಾಯತ್​ ಸದಸ್ಯೆ ಶಶಿಕಲಾ ಎಂಬುವರ ಜಮೀನು ಸರ್ಕಾರಿ ಶಾಲೆಯ ಪಕ್ಕದಲ್ಲಿದ್ದು, ಶಾಲೆಯ ಆವರಣದಲ್ಲಿ ಬೆಳೆದಿದ್ದ ಮರಗಳ ನೆರಳು ಜಮೀನಿನ ಮೇಲೆ ಬೀಳುತ್ತಿದೆ ಎಂಬ ಸಣ್ಣ ಕಾರಣಕ್ಕೆ ಶಶಿಕಲಾ ಗಂಡ ರಮೇಶ್​​ ಕಡಿದು ಹಾಕಿದ್ದಾನೆ.

ಶಾಲೆಯಲ್ಲಿ ನೆಟ್ಟಿದ್ದ ಮರಗಳನ್ನು ಕಡಿದದ್ದು ಅಲ್ಲದೆ ಬೃಹತ್​ ಮರಕ್ಕೂ ಕೊಡಲಿ ಪೆಟ್ಟು ಹಾಕಲು ಮುಂದಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮಸ್ಥರು ತಡೆಹಿಡಿದಿದ್ದಾರೆ. ಪಂಚಾಯತ್​ ಸದಸ್ಯೆಯ ಗಂಡನ ಅಂಧ ದರ್ಬಾರ್​ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿ: ತನ್ನ ಜಮೀನಿಗೆ ಗಿಡಗಳ ನೆರಳು ಬೀಳುತ್ತೆ ಎಂದು ಶಾಲಾ ಕಾಂಪೌಂಡ್​​ನಲ್ಲಿ ಸೊಂಪಾಗಿ ಬೆಳೆದಿದ್ದ ಮರಗಳನ್ನು ಗ್ರಾಮ ಪಂಚಾಯತ್ ಸದಸ್ಯೆಯ ಪತಿ ಕಡಿದು ಹಾಕಿದ ಘಟನೆ ತಾಲೂಕಿನ ಕುಂದಾಣ ಗ್ರಾಮದಲ್ಲಿ ನಡೆದಿದೆ.

ಕುಂದಾಣ ಪಂಚಾಯತ್​ ಸದಸ್ಯೆ ಗಂಡನ ಅಂಧ ದರ್ಬಾರ್​ಗೆ ಮರಗಳು ನಾಶ

ಕುಂದಾಣ ಗ್ರಾಮ ಪಂಚಾಯತ್​ ಸದಸ್ಯೆ ಶಶಿಕಲಾ ಎಂಬುವರ ಜಮೀನು ಸರ್ಕಾರಿ ಶಾಲೆಯ ಪಕ್ಕದಲ್ಲಿದ್ದು, ಶಾಲೆಯ ಆವರಣದಲ್ಲಿ ಬೆಳೆದಿದ್ದ ಮರಗಳ ನೆರಳು ಜಮೀನಿನ ಮೇಲೆ ಬೀಳುತ್ತಿದೆ ಎಂಬ ಸಣ್ಣ ಕಾರಣಕ್ಕೆ ಶಶಿಕಲಾ ಗಂಡ ರಮೇಶ್​​ ಕಡಿದು ಹಾಕಿದ್ದಾನೆ.

ಶಾಲೆಯಲ್ಲಿ ನೆಟ್ಟಿದ್ದ ಮರಗಳನ್ನು ಕಡಿದದ್ದು ಅಲ್ಲದೆ ಬೃಹತ್​ ಮರಕ್ಕೂ ಕೊಡಲಿ ಪೆಟ್ಟು ಹಾಕಲು ಮುಂದಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮಸ್ಥರು ತಡೆಹಿಡಿದಿದ್ದಾರೆ. ಪಂಚಾಯತ್​ ಸದಸ್ಯೆಯ ಗಂಡನ ಅಂಧ ದರ್ಬಾರ್​ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.