ETV Bharat / city

ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡೇ ವಾಪಸಾಗುತ್ತಾರಂತೆ ದಿನೇಶ್ ಗುಂಡೂರಾವ್!

author img

By

Published : Oct 5, 2019, 11:55 PM IST

ವಿದೇಶಕ್ಕೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಕ್ಟೋಬರ್​ 9ರಂದು ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ವಾಪಸಾಗಲಿದ್ದಾರೆ.

ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡೇ ವಾಪಸಾಗುತ್ತಾರೆ ದಿನೇಶ್ ಗುಂಡೂರಾವ್...

ಬೆಂಗಳೂರು: ಗಾಂಧಿ ಜಯಂತಿ ಪೂರೈಸಿ ವಿದೇಶಕ್ಕೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಕ್ಟೋಬರ್​ 9ರಂದು ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ವಾಪಸಾಗಲಿದ್ದಾರೆ. ಲಂಡನ್​​ನಲ್ಲಿ ಓದುತ್ತಿರುವ ಪುತ್ರಿಯ ಭೇಟಿಗೆ ಅ.3ರಂದು ಕುಟುಂಬ ಸಮೇತ ತೆರಳಿದ್ದಾರೆ. ಅಲ್ಲಿಯೇ ಜನ್ಮದಿನ ಆಚರಿಸಿಕೊಂಡು ಭಾರತಕ್ಕೆ ಬರಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

ರಾಜ್ಯದ ನೆರೆ ಮತ್ತು ಬರ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಪರವಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿರುವ ಅವರು ವಿರಾಮ ಪಡೆದು ಲಂಡನ್​ ಪ್ರವಾಸ ಕೈಗೊಂಡಿದ್ದಾರೆ. ಅಕ್ಟೋಬರ್ 9ರಂದು ಅಲ್ಲಿಂದ ತೆರಳಲಿದ್ದಾರೆ. ಅಕ್ಟೋಬರ್ 10 ರಿಂದ 13ರವರೆಗೆ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ನಾಳೆ ಪ್ರತಿಪಕ್ಷ ಆಯ್ಕೆ ಸಭೆಗೂ ಗೈರಾಗಲಿದ್ದಾರೆ. ಇದನ್ನು ಹೈಕಮಾಂಡ್​​ಗೆ ಈಗಾಗಲೇ ತಿಳಿಸಿದ್ದಾರೆ. ಇದರಿಂದ ನೇರವಾಗಿ ಅಧಿವೇಶನಕ್ಕೆ ಅವರು ವಾಪಸಾಗಲಿದ್ದಾರೆ.

ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲಿಯೂ ಪ್ರವಾಸ:

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಹಂತ ತಲುಪಿದ ಸಂದರ್ಭದಲ್ಲೂ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸಕ್ಕೆ ತೆರಳಿದರು. ಸುಧೀರ್ಘ ರಜೆ ಪಡೆದು ಪುತ್ರಿಯೊಂದಿಗೆ ಕುಟುಂಬ ಸಮೇತ ದಿನಕಳೆದು ವಾಪಸಾಗಿದ್ದರು. ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

ಬೆಂಗಳೂರು: ಗಾಂಧಿ ಜಯಂತಿ ಪೂರೈಸಿ ವಿದೇಶಕ್ಕೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಕ್ಟೋಬರ್​ 9ರಂದು ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ವಾಪಸಾಗಲಿದ್ದಾರೆ. ಲಂಡನ್​​ನಲ್ಲಿ ಓದುತ್ತಿರುವ ಪುತ್ರಿಯ ಭೇಟಿಗೆ ಅ.3ರಂದು ಕುಟುಂಬ ಸಮೇತ ತೆರಳಿದ್ದಾರೆ. ಅಲ್ಲಿಯೇ ಜನ್ಮದಿನ ಆಚರಿಸಿಕೊಂಡು ಭಾರತಕ್ಕೆ ಬರಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

ರಾಜ್ಯದ ನೆರೆ ಮತ್ತು ಬರ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಪರವಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿರುವ ಅವರು ವಿರಾಮ ಪಡೆದು ಲಂಡನ್​ ಪ್ರವಾಸ ಕೈಗೊಂಡಿದ್ದಾರೆ. ಅಕ್ಟೋಬರ್ 9ರಂದು ಅಲ್ಲಿಂದ ತೆರಳಲಿದ್ದಾರೆ. ಅಕ್ಟೋಬರ್ 10 ರಿಂದ 13ರವರೆಗೆ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ನಾಳೆ ಪ್ರತಿಪಕ್ಷ ಆಯ್ಕೆ ಸಭೆಗೂ ಗೈರಾಗಲಿದ್ದಾರೆ. ಇದನ್ನು ಹೈಕಮಾಂಡ್​​ಗೆ ಈಗಾಗಲೇ ತಿಳಿಸಿದ್ದಾರೆ. ಇದರಿಂದ ನೇರವಾಗಿ ಅಧಿವೇಶನಕ್ಕೆ ಅವರು ವಾಪಸಾಗಲಿದ್ದಾರೆ.

ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲಿಯೂ ಪ್ರವಾಸ:

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಹಂತ ತಲುಪಿದ ಸಂದರ್ಭದಲ್ಲೂ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸಕ್ಕೆ ತೆರಳಿದರು. ಸುಧೀರ್ಘ ರಜೆ ಪಡೆದು ಪುತ್ರಿಯೊಂದಿಗೆ ಕುಟುಂಬ ಸಮೇತ ದಿನಕಳೆದು ವಾಪಸಾಗಿದ್ದರು. ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

Intro:newsBody:ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡೇ ವಾಪಸಾಗುತ್ತಾರೆ ದಿನೇಶ್ ಗುಂಡೂರಾವ್

ಬೆಂಗಳೂರು: ಗಾಂಧಿ ಜಯಂತಿ ಪೂರೈಸಿ ವಿದೇಶಕ್ಕೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ವಾಪಸಾಗಲಿದ್ದಾರೆ.
ಇದೇ ಬರುವ ಬುಧವಾರ (ಅ. 9) ತಮ್ಮ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ದಿನೇಶ್ ಗುಂಡೂರಾವ್ ಲಂಡನ್ನಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರಿಯ ಭೇಟಿಗೆ ತೆರಳಿದ್ದು ಕುಟುಂಬ ಸಮೇತ ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡು ವಾಪಸ್ಸಾಗುವ ನಿರ್ಧಾರ ಮಾಡಿದ್ದಾರೆ.
ರಾಜ್ಯದ ನೆರೆ ಮತ್ತು ಬರ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಪರವಾಗಿ ಸಾಕಷ್ಟು ಹೋರಾಟಗಳು ನಡೆಯುತ್ತಿದ್ದು ಇದರಲ್ಲಿ ಪಾಲ್ಗೊಂಡಿದ್ದ ದಿನೇಶ್ ಗುಂಡೂರಾವ್ ಒಂದು ವಿರಾಮ ಪಡೆದು ವಿದೇಶಕ್ಕೆ ವಿಮಾನವೇರಿದ್ದಾರೆ. ನಗರದಲ್ಲಿ ಗಾಂಧಿ ಜಯಂತಿ ದಿನ ಸದ್ಭಾವನಾ ಯಾತ್ರೆ ಹಾಗೂ ವಿಶೇಷ ಸಭೆಯಲ್ಲಿ ಪಾಲ್ಗೊಂಡ ನಂತರ ಅ.3ರಂದು ಬೆಂಗಳೂರಿನಿಂದ ಲಂಡನ್ನಿಗೆ ಪ್ರಯಾಣ ಬೆಳೆಸಿರುವ ಅವರು ಸದ್ಯ ಕುಟುಂಬ ಸಮೇತ ರಜಾದಿನವನ್ನು ಸಂಭ್ರಮಿಸುತ್ತಿದ್ದಾರೆ.
ಅಕ್ಟೋಬರ್ 9ರಂದು ಲಂಡನ್ನಿಂದ ಹೊರಟು ಅಕ್ಟೋಬರ್ 10 ರಿಂದ 13 ರವರೆಗೆ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ದಿನೇಶ್ ಗುಂಡೂರಾವ್ ಪಾಲ್ಗೊಳ್ಳಲಿದ್ದಾರೆ. ಸದ್ಯ ನಾಳೆ ನಗರದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಮಧುಸೂದನ್ ಮಿಸ್ತ್ರಿ ವಿಶೇಷ ಸಭೆ ನಡೆಸಲಿದ್ದು ಸರ್ಕಾರದ ಪ್ರತಿಪಕ್ಷದ ನಾಯಕರ ಆಯ್ಕೆಗೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ಆದರೆ ಈ ಸಭೆಗೆ ದಿನೇಶ ಅಲಭ್ಯವಾಗಲಿದ್ದು, ತಮ್ಮ ವಿವರವನ್ನು ಹೈಕಮಾಂಡ್ಗೆ ಈಗಾಗಲೇ ಅವರು ತಿಳಿಸಿದ್ದಾರೆ. ಇದರಿಂದ ನೇರವಾಗಿ ಅಧಿವೇಶನಕ್ಕೆ ಅವರು ಪಾಪ ಸಾಗಲಿದ್ದು ಹತ್ತು ದಿನಗಳ ಪ್ರವಾಸ ಅಕ್ಟೋಬರ್ 9 ರಂದು ಕೊನೆಗೊಳ್ಳಲಿದೆ.
ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲಿಯೂ ಪ್ರವಾಸ
ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನ ಹಂತ ತಲುಪಿದ ಸಂದರ್ಭದಲ್ಲಿ ಕೂಡ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸಕ್ಕೆ ತೆರಳಿದರು. ಸುದೀರ್ಘ ರಜೆ ಪಡೆದು ಪುತ್ರಿಯೊಂದಿಗೆ ಕುಟುಂಬ ಸಮೇತ ದಿನಕಳೆದು ವಾಪಸಾಗಿದ್ದರು. ಆಗ ಇವರ ಪ್ರವಾಸ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಇದೀಗ ಕಾಂಗ್ರೆಸ್ ಹಲವು ವಿಧದ ಹೋರಾಟ ನಡೆಸುತ್ತಿದೆ ಜೊತೆಗೆ ಪ್ರತಿಪಕ್ಷದ ನಾಯಕರ ಆಯ್ಕೆ ಆಗಬೇಕಿರುವ ಸಂದರ್ಭದಲ್ಲಿ ಮತ್ತೆ ದಿನೇಶ್ ಗುಂಡೂರಾವ್ ವಿದೇಶಕ್ಕೆ ತೆರಳಿರುವುದು ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಅಸಮಾಧಾನ ಕೂಡ ತರಿಸಿದೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.