ETV Bharat / city

ಐಎಂಎ ವಂಚನೆ ಪ್ರಕರಣ: ಶೀಘ್ರದಲ್ಲೇ ಮನ್ಸೂರ್ ಆಸ್ತಿ ಹರಾಜಿಗಿಡಲು ಸರ್ಕಾರದ ನಿರ್ಧಾರ

author img

By

Published : Nov 10, 2019, 3:45 PM IST

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆಯನ್ನ ನಡೆಸುತ್ತಿದ್ದು, ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​ ಆಸ್ತಿಯನ್ನ ಶೀಘ್ರದಲ್ಲೇ ಹರಾಜಿಗಿಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗ್ತಿದೆ.

ಐಎಂಎ ವಂಚನೆ ಪ್ರಕರಣ: ಅತೀ ಶೀಘ್ರದಲ್ಲಿ ಮನ್ಸೂರ್ ಆಸ್ತಿ ಹರಾಜಿಗಿಡಲು ನಿರ್ಧಾರ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​ ಆಸ್ತಿಯನ್ನ ಹರಾಜಿಗಿಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗ್ತಿದೆ.

ಈಗಾಗ್ಲೇ ಮನ್ಸೂರ್ ರಾಜ್ಯದ ವಿವಿಧೆಡೆ ಸೇರಿದಂತೆ ವಿದೇಶದಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾನೆ. ಅಲ್ಲದೇ, ಮನ್ಸೂರ್​ ತನ್ನ ಪತ್ನಿ ಹಾಗೂ ಕೆಲ ಸಂಬಂಧಿಕರ ಹೆಸರಿನಲ್ಲಿ 25 ಪ್ರಾಪರ್ಟಿಗಳನ್ನ ಹೊಂದಿದ್ದಾನೆ. ಹೀಗಾಗಿ ಜಿಲ್ಲಾಡಳಿತ ಸಕ್ಷಮ ಪ್ರಾಧಿಕಾರದ ಅಡಿ ಜೋಡಿಸಿ ಒಟ್ಟು ಆಸ್ತಿಪಾಸ್ತಿಯ ಮೌಲ್ಯವನ್ನ ಲೆಕ್ಕ ಹಾಕಿದ್ದಾರೆ. ಮನ್ಸೂರ್​ ಖಾನ್​ ಒಟ್ಟು 350 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು,ಅತೀ ಶೀಘ್ರದಲ್ಲಿ ಹರಾಜಿಗಿಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗ್ತಿದೆ.

ಐಎಂಎ ವಂಚನೆ ಪ್ರಕರಣದಲ್ಲಿ ಹಲವಾರು ಮಂದಿಗೆ‌‌ ಮನ್ಸೂರ್ ಖಾನ್ ದೋಖಾ ಮಾಡಿದ್ದ. ಹೀಗಾಗಿ ಎಸ್ಐಟಿ ಪ್ರಕರಣದ ತನಿಖೆಯನ್ನ ನಡೆಸಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನ ಸಿಬಿಐಗೆ ವರ್ಗಾವಣೆ ಮಾಡಿತ್ತು. ಸಿಬಿಐ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡು ಮನ್ಸೂರ್ ಖಾನ್​ ಆಸ್ತಿಯನ್ನ ಹರಾಜಿಗಿಟ್ಟು, ಐಎಂಎಯಿಂದ ಹಣ ಕಳೆದುಕೊಂಡವರಿಗೆ ವಾಪಸ್​ ನೀಡಲು ಮುಂದಾಗಿದೆ.

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​ ಆಸ್ತಿಯನ್ನ ಹರಾಜಿಗಿಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗ್ತಿದೆ.

ಈಗಾಗ್ಲೇ ಮನ್ಸೂರ್ ರಾಜ್ಯದ ವಿವಿಧೆಡೆ ಸೇರಿದಂತೆ ವಿದೇಶದಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾನೆ. ಅಲ್ಲದೇ, ಮನ್ಸೂರ್​ ತನ್ನ ಪತ್ನಿ ಹಾಗೂ ಕೆಲ ಸಂಬಂಧಿಕರ ಹೆಸರಿನಲ್ಲಿ 25 ಪ್ರಾಪರ್ಟಿಗಳನ್ನ ಹೊಂದಿದ್ದಾನೆ. ಹೀಗಾಗಿ ಜಿಲ್ಲಾಡಳಿತ ಸಕ್ಷಮ ಪ್ರಾಧಿಕಾರದ ಅಡಿ ಜೋಡಿಸಿ ಒಟ್ಟು ಆಸ್ತಿಪಾಸ್ತಿಯ ಮೌಲ್ಯವನ್ನ ಲೆಕ್ಕ ಹಾಕಿದ್ದಾರೆ. ಮನ್ಸೂರ್​ ಖಾನ್​ ಒಟ್ಟು 350 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು,ಅತೀ ಶೀಘ್ರದಲ್ಲಿ ಹರಾಜಿಗಿಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗ್ತಿದೆ.

ಐಎಂಎ ವಂಚನೆ ಪ್ರಕರಣದಲ್ಲಿ ಹಲವಾರು ಮಂದಿಗೆ‌‌ ಮನ್ಸೂರ್ ಖಾನ್ ದೋಖಾ ಮಾಡಿದ್ದ. ಹೀಗಾಗಿ ಎಸ್ಐಟಿ ಪ್ರಕರಣದ ತನಿಖೆಯನ್ನ ನಡೆಸಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನ ಸಿಬಿಐಗೆ ವರ್ಗಾವಣೆ ಮಾಡಿತ್ತು. ಸಿಬಿಐ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡು ಮನ್ಸೂರ್ ಖಾನ್​ ಆಸ್ತಿಯನ್ನ ಹರಾಜಿಗಿಟ್ಟು, ಐಎಂಎಯಿಂದ ಹಣ ಕಳೆದುಕೊಂಡವರಿಗೆ ವಾಪಸ್​ ನೀಡಲು ಮುಂದಾಗಿದೆ.

Intro:IMA ಬಹುಕೋಟಿ ವಂಚನೆ ಪ್ರಕರಣ
ಅತೀ ಶೀಘ್ರದಲ್ಲಿ ಹರಾಜು ಪ್ರಕ್ರಿಯೆಗೆ ಸಿದ್ದತೆ ,ನಡೆಸಿರುವ ಸರ್ಕಾರ

IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ‌ ಸಿಬಿಐ ಅಧಿಕಾರಿಗಳು ತನಿಖೆಯನ್ನ ನಡೆಸುತ್ತಿದ್ದು ಮನ್ಸೂರ್ ಖಾನ್ ನಿಂದ ಹಣ ಪಡೆದ ಕೆಲ ಹಿರಿಯ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಹಲವಾರು ಮಾಹಿತಿ ಕಲೆ ಹಾಕ್ತಿದ್ದಾರೆ. ಆದರೆ ಸದ್ಯ ಪ್ರಕರಣದ ಪ್ರಮುಖ ಆರೋಪಿ ಆಸ್ತಿಯನ್ನ ಅತೀ ಶೀಘ್ರದಲ್ಲಿ ಹರಾಜು ಪ್ರಕ್ರಿಯೆಗೆ ಮಾಡಲು ಸರ್ಕಾರ ನಿರ್ಧಾರಿಸಿದೆ.

ಈಗಾಗ್ಲೇ ಮನ್ಸೂರ್ ಬೆಂಗಳೂರು ಹಾಗೆ ಹೊರವಲಯ , ವಿದೇಶದಲ್ಲಿ , ಹಾಗೆ ಮನ್ಸೂರ್ ಪತ್ನಿ, ಕೆಲ ಸಂಬಂಧಿಕರ ಹೆಸರಿನಲ್ಲಿ ಮನ್ಸೂರ್ ಖಾನ್ ಸುಮಾರು 25 ಪ್ರಾಪರ್ಟಿ ಗಳನ್ನ ಹೊಂದಿದ್ದಾನೆ. ಹೀಗಾಗಿ ಜಿಲ್ಲಾಡಳಿತ ಸಕ್ಷಮ ಪ್ರಾಧಿಕಾರ ದ ಅಡಿ ಅಟ್ಯಾಚ್ ಮಾಡಿ ಒಟ್ಟು ಆಸ್ತಿ ಪಾಸ್ತಿಯ ಮೌಲ್ಯವನ್ನ ಲೆಕ್ಕ ಹಾಕಿದ್ದಾರೆ. ಆಸ್ತಿ ಒಟ್ಟು ಸುಮಾರು 350 ಕೋಟಿ ರೂಪಾಯಿಗಳ ಮೌಲ್ಯ ಹೊಂದಿದ್ದು ಈ ಆಸ್ತಿ ಹರಾಜಿಗೆ ಸಿದ್ದತೆ ‌ಮಾಡಲಾಗಿದ್ದು ಅತೀ ಶೀಘ್ರದಲ್ಲಿ ಹರಾಜು ಪ್ರಕ್ರಿಯೆ ಸರ್ಕಾರ ಮುಗಿಸಲಿದೆ ಎಂಬ ವಿಚಾರ ಬಯಲಿಗೆ ಬಂದಿದೆ

ಐಎಂಎ ವಂಚನೆ ಪ್ರಕರಣದಲ್ಲಿ ಹಲವಾರು ಮಂದಿಗೆ‌‌ ಮನ್ಸೂರ್ ಖಾನ್ ದೋಖಾ ಮಾಡಿದ್ದ ಹೀಗಾಗಿ ಪ್ರಕರಣದ ತನಿಖೆಯನ್ನ ಎಸ್ಐಟಿ ನಡೆಸಿ ನಂತ್ರ ಸಿಬಿಐಗೆ ರಾಜ್ಯ ಸರಕಾರ ಪ್ರಕರಣ ವರ್ಗಾವಣೆ ಮಾಡಿತ್ತು. ಸಿಬಿಐ ತನಿಖೆ ಕೈಗೆತ್ತಿಕೊಂಡು ಐಎಂಎ ಯಿಂದ ಹಣ ಕಳೆದುಕೊಂಡವರಿ ವಾಪಸ್ಸು ನೀಡೊದಕ್ಕೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ.Body:KN_BNG_07_IMA_7204498Conclusion:KN_BNG_07_IMA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.