ETV Bharat / city

ಮನ್ಸೂರ್​ಖಾನ್​ನಿಂದ ಹಣ ಪಡೆದ ಆರೋಪ: ಮಾಜಿ ಡಿಸಿ ಸೇರಿ ಮೂವರ ವಿರುದ್ಧ ಪ್ರಕರಣ

author img

By

Published : Nov 9, 2019, 7:46 PM IST

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕಂಪನಿ ಪರ ವರದಿ ನೀಡಲು ಲಂಚ ಪಡೆದಿದ್ದ ಆರೋಪದಡಿ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ವಿಜಯ್​ ಶಂಕರ್ ಸೇರಿದಂತೆ ಮೂವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

Case registered on three accused

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕಂಪನಿ ಪರ ವರದಿ ನೀಡಲು ಲಂಚ ಪಡೆದಿದ್ದ ಆರೋಪದಡಿ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ವಿಜಯ್​ ಶಂಕರ್ ಸೇರಿದಂತೆ ಮೂವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.

ವಿಜಯ್ ಶಂಕರ್ ಹಾಗೂ ನಗರ ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ವಿರುದ್ದ ಪ್ರಕರಣ ದಾಖಲಾಗಿದೆ. ವಿಜಯ್ ಶಂಕರ್ ₹ 1.5 ಕೋಟಿ, ನಾಗರಾಜ್ ₹ 4 ಕೋಟಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ₹ 8 ಲಕ್ಷ ಮನ್ಸೂರ್​​ ಖಾನ್​​​ನಿಂದ ಐಎಂಎ ಪರವಾಗಿ ವರದಿ ನೀಡಲು ಇಷ್ಟು ಹಣ ಪಡೆದಿದ್ದಾರೆ ಎಂಬ ಆರೋಪವಿದೆ.

ಶಿವಾಜಿನಗರದಲ್ಲಿ ಐಎಂಎ ಜ್ಯುವೆಲ್ಸ್ ಮಳಿಗೆ ಕಚೇರಿ ಪ್ರಾರಂಭಿಸಿದ್ದ ಮನ್ಸೂರ್, ಹಣದ ಆಸೆ ತೋರಿಸಿ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ. ಪ್ರಕರಣದಲ್ಲಿ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು,‌ ಐಎಎಸ್ ಅಧಿಕಾರಿಗಳು ಲಂಚ ಪಡೆದಿರುವ ಸಂಗತಿಗಳು ಬಯಲಿಗೆ ಬಂದಿತ್ತು.

ತನ್ನ ವಂಚನೆ ಮುಂದುವರಿಸಲು ಹಾಗೂ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಲಂಚ‌ ನೀಡಿದ್ದ ಐಎಂಎ ಮಾಲೀಕ ಕಿಕ್ ಬ್ಯಾಕ್ ನೀಡಿದ್ದ. ಈ ಪ್ರಕರಣದ ಬಗ್ಗೆ ಈಗಾಗಲೇ ಎರಡು ಬಾರಿ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದೆ.

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕಂಪನಿ ಪರ ವರದಿ ನೀಡಲು ಲಂಚ ಪಡೆದಿದ್ದ ಆರೋಪದಡಿ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ವಿಜಯ್​ ಶಂಕರ್ ಸೇರಿದಂತೆ ಮೂವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.

ವಿಜಯ್ ಶಂಕರ್ ಹಾಗೂ ನಗರ ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ವಿರುದ್ದ ಪ್ರಕರಣ ದಾಖಲಾಗಿದೆ. ವಿಜಯ್ ಶಂಕರ್ ₹ 1.5 ಕೋಟಿ, ನಾಗರಾಜ್ ₹ 4 ಕೋಟಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ₹ 8 ಲಕ್ಷ ಮನ್ಸೂರ್​​ ಖಾನ್​​​ನಿಂದ ಐಎಂಎ ಪರವಾಗಿ ವರದಿ ನೀಡಲು ಇಷ್ಟು ಹಣ ಪಡೆದಿದ್ದಾರೆ ಎಂಬ ಆರೋಪವಿದೆ.

ಶಿವಾಜಿನಗರದಲ್ಲಿ ಐಎಂಎ ಜ್ಯುವೆಲ್ಸ್ ಮಳಿಗೆ ಕಚೇರಿ ಪ್ರಾರಂಭಿಸಿದ್ದ ಮನ್ಸೂರ್, ಹಣದ ಆಸೆ ತೋರಿಸಿ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ. ಪ್ರಕರಣದಲ್ಲಿ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು,‌ ಐಎಎಸ್ ಅಧಿಕಾರಿಗಳು ಲಂಚ ಪಡೆದಿರುವ ಸಂಗತಿಗಳು ಬಯಲಿಗೆ ಬಂದಿತ್ತು.

ತನ್ನ ವಂಚನೆ ಮುಂದುವರಿಸಲು ಹಾಗೂ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಲಂಚ‌ ನೀಡಿದ್ದ ಐಎಂಎ ಮಾಲೀಕ ಕಿಕ್ ಬ್ಯಾಕ್ ನೀಡಿದ್ದ. ಈ ಪ್ರಕರಣದ ಬಗ್ಗೆ ಈಗಾಗಲೇ ಎರಡು ಬಾರಿ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದೆ.

Intro:Body:ಐಎಂಎ ಮಾಲೀಕನಿಂದ ಕಿಕ್ ಬ್ಯಾಕ್ ಪಡೆದಿದ್ದ ಮಾಜಿ ಡಿಸಿ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ ಸಿಬಿಐ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಐಎಂಎ ಕಂಪೆನಿ ಪರ ವರದಿ ನೀಡಲು ಲಂಚ ಪಡೆದುಕೊಂಡ ಆರೋಪದಡಿ ಮಾಜಿ ಡಿಸಿ ವಿಜಯ್ ಶಂಕರ್ ಸೇರಿದಂತೆ ಒಟ್ಟು ಮೂವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಐಎಂಎ ಕಂಪೆನಿ ಪರ ವರದಿ ನೀಡಿದ ಮಾಜಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಹಾಗೂ ನಗರ ಉತ್ತರ ವಿಭಾಗದ ಎಸಿಯಾಗಿದ್ದ ನಾಗರಾಜ್ ಹಾಗೂ ಗ್ರಾಮಲೆಕ್ಕಾಧಿಕಾರಿ ಮಂಜುನಾಥ್ ವಿರುದ್ದ ಸಿಬಿಐ ಪ್ರಕರಣ ದಾಖಲಿಸಿಕೊಂಡು ಸಿಬಿಐ ವಿಚಾರಣೆ ಆರಂಭಿಸಿದೆ.
ಐಎಂಎ ಕಂಪೆನಿ ಪರವಾಗಿ ವರದಿ ನೀಡಲು ವಿಜಯ್ ಶಂಕರ್ 1.5 ಕೋಟಿ ರೂ. ಎಸಿ ನಾಗರಾಜ್ 4 ಕೋಟಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ 8 ಲಕ್ಷ ರೂ. ಮನ್ಸೂರ್ ಖಾನ್ ನಿಂದ ಕಿಕ್ ಬ್ಯಾಕ್ ಪಡೆದ ಆರೋಪದಡಿ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.
ಶಿವಾಜಿನಗರದಲ್ಲಿ ಐಎಂಎ ಜುವೆಲ್ಲರಿ ಶಾಪ್ ಪ್ರಧಾನ ಕಚೇರಿ ಪ್ರಾರಂಭ ಮಾಡಿದ್ದ ಮನ್ಸೂರ್, ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಸಾವಿರಾರು ಜನರಿಂದ ಕೋಟ್ಯಂತರ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು‌ ಐಎಎಸ್ ಅಧಿಕಾರಿಗಳಿಗೆ ಲಂಚ ಪಡೆದಿರುವುದು ಬೆಳಕಿಗೆ ಬಂದಿತ್ತು.. ತನ್ನ ವಂಚನೆ ಮುಂದುವರಿಸಲು ಹಾಗೂ ಕಂಪೆನಿಯ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿರಲು ಲಂಚ‌ ನೀಡಿದ್ದ‌ ಐಎಂಎ ಮಾಲೀಕ ಕಿಕ್ ಬ್ಯಾಕ್ ನೀಡಿದ್ದ. ಹಗರಣ ಬಗ್ಗೆ ಈಗಾಗಲ್ಲೇ ಎರಡು ಬಾರಿ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿತ್ತು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.