ETV Bharat / city

ದೇಶದಾದ್ಯಂತ ಮುಷ್ಕರ ಯಶಸ್ವಿಯಾಗಿದೆ, ನಾಳೆಯೂ ಮುಂದುವರಿಯಲಿದೆ: ಶ್ರೀನಿವಾಸ್

author img

By

Published : Dec 16, 2021, 9:26 PM IST

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧಿಸಿ ಉದ್ಯೋಗಿಗಳು ಎರಡು ದಿನಗಳ ಮುಷ್ಕರ ಆರಂಭಿಸಿದ್ದಾರೆ. ದೇಶಾದ್ಯಂತ ಇಂದು ಬ್ಯಾಂಕ್‌ಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ನಾಳೆಯೂ ಮುಷ್ಕರ ಮುಂದುವರಿಯಲಿದೆ.

government bank employees strike continuous for tomorrow
ಬ್ಯಾಂಕ್ ಉದ್ಯೋಗಿಗಳ ಮುಷ್ಕರ

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್​ಗಳ ಖಾಸಗೀಕರಣದ ವಿರುದ್ಧ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆಯಿಂದ ಮುಷ್ಕರ ನಡೆಯುತ್ತಿದೆ. ನಗರದ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿರುವ ಎಸ್​ಬಿಐ ಬ್ಯಾಂಕ್ ಆವರಣದಲ್ಲಿ ನಡೆದ ಮುಷ್ಕರದಲ್ಲಿ ನೂರಾರು ಬ್ಯಾಂಕ್ ಉದ್ಯೋಗಿಗಳು ಪಾಲ್ಗೊಂಡಿದ್ದರು. ಬ್ಯಾಂಕ್ ಸೇವೆಗಳು ಬಹುತೇಕ ಸ್ಥಗಿತಗೊಂಡಿದ್ದವು.

ಬ್ಯಾಂಕ್ ಉದ್ಯೋಗಿಗಳ ಮುಷ್ಕರ

ಬಜೆಟ್ ಪತ್ರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವಂತೆ ಎರಡು ಸಾರ್ವಜನಿಕ ವಲಯದ ಬ್ಯಾಂಕ್​​ಗಳ ಖಾಸಗೀಕರಣದಿಂದ, ಜೀವ ವಿಮಾ ನಿಗಮದ ಬಂಡವಾಳ ಹಿಂತೆಗೆತದಿಂದ ದೇಶದ ಜನರಿಗೆ ಮಾರಕವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು..

ಈ ವೇಳೆ, ಮಾತನಾಡಿದ ಐಕ್ಯ ವೇದಿಕೆಯ ರಾಜ್ಯ ಸಂಚಾಲಕ ಶ್ರೀನಿವಾಸ್, ದೇಶದಾದ್ಯಂತ ಬಹುತೇಕ ಬ್ಯಾಂಕ್​​ಗಳು ಬಂದ್ ಆಗಿದ್ದು, ಕಾರ್ಯ ನಿರ್ವಹಿಸುತ್ತಿಲ್ಲ. ಒಂದಿಬ್ಬರು ಮಾತ್ರ ಕೆಲಸ ಮಾಡುತ್ತಿರಬಹುದು. ಎಲ್ಲೆಡೆ ಮುಷ್ಕರ ಯಶಸ್ವಿಯಾಗಿದೆ. ನಾಳೆಯೂ ಇದೇ ರೀತಿ ಮುಷ್ಕರ ಮುಂದುವರಿಯಲಿದೆ ಎಂದರು.

ಬ್ಯಾಂಕ್​ಗಳ ಖಾಸಗೀಕರಣ ದೇಶ ವಿರೋಧಿ ನೀತಿಯಾಗಿದೆ. ಈಗಾಗಲೇ ಖಾಸಗಿ ವಲಯಗಳಲ್ಲಿ ಕಂಪನಿಗಳು ನಷ್ಟಕ್ಕೊಳಗಾಗಿವೆ. ಈಗ ಲಾಭದಲ್ಲಿರುವ ಪಬ್ಲಿಕ್ ಸೆಕ್ಟರ್ ಬ್ಯಾಂಕ್​ಗಳನ್ನು ಖಾಸಗಿ ವಲಯದವರಿಗೆ ಕೊಡಬಾರದು ಎಂದು ಆಗ್ರಹಿಸಿದರು. ಖಾಸಗೀಕರಣದಿಂದ ರೈತರಿಗೆ, ಕೃಷಿ ಕಾರ್ಮಿಕರಿಗೆ, ಸಣ್ಣ ಉದ್ದಿಮೆದಾರಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡುವಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸುಲಭವಾಗಿ ಯಾರೂ ಖಾತೆಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ ಎಂದರು.

1969ಕ್ಕೂ ಮೊದಲು ಎಲ್ಲರೂ ಖಾತೆ ತೆರೆಯುವ ಅವಕಾಶವೇ ಇರಲಿಲ್ಲ. ಆದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಬಂದ ನಂತರ ಎಲ್ಲ ರೀತಿಯ ದೇಶದ ಮೂಲ ಸೌಕರ್ಯಗಳಿಗೆ, ನೀರಾವರಿ, ಕೃಷಿ, ವಿಮಾನ ನಿಲ್ದಾಣ, ಕೈಗಾರಿಕೆಗಳಿಗೆ ಸರ್ಕಾರಿ ಬ್ಯಾಂಕ್, ಎಲ್​ಐಸಿಯಿಂದ ಹಣ ಹೋಗಿದೆ. ಹೀಗಾಗಿ ದಯವಿಟ್ಟು ಖಾಸಗೀಕರಣ ಬಿಲ್ ಅನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಎಸ್ ಬ್ಯಾಂಕ್, ಜೆಟ್ ಏರ್ವೇಸ್ ಎಲ್ಲವೂ ಯಶಸ್ವಿ ಆಗದೇ ಇರಲು ಖಾಸಗೀಕರಣವೇ ಕಾರಣ ಎಂದರು.

ಬ್ಯಾಂಕ್‌ಗಳ ಖಾಸಗೀಕರಣದಿಂದ ದೇಶದ ಜನರ ಉಳಿತಾಯ ಲೂಟಿ ಆಗಲಿದೆ. ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ಆಗಲಿದೆ. ಇದರ ಜೊತೆಗೆ ಉದ್ಯೋಗವಕಾಶ ಮತ್ತು ಮೀಸಲಾತಿಯ ಅವಕಾಶ ಕಡಿಮೆ ಆಗಲಿದೆ. ಬ್ಯಾಂಕ್‌ಗಳ ಶಾಖೆಗಳು ಕಡಿಮೆ ಆಗಲಿದ್ದು, ಇದರಿಂದ ಜನಸಾಮಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಲಿದ್ದಾರೆ ಎಂದರು.

ಇದನ್ನೂ ಓದಿ: ಖಾಸಗೀಕರಣ ವಿರೋಧಿಸಿ ಎರಡು ದಿನಗಳ ಮುಷ್ಕರ: ದೇಶಾದ್ಯಂತ ಬ್ಯಾಂಕ್ ಸೇವೆಗಳು ಬಂದ್​​

ದೇಶದಲ್ಲಿ ಈ ಹಿಂದೆಯೂ ಖಾಸಗಿ ಬ್ಯಾಂಕ್‌ಗಳು ವಿಫಲವಾದ ಸಾಕಷ್ಟು ಉದಾಹರಣೆಗಳಿವೆ. 1913 ರಿಂದ 1968ರ ಅವಧಿಯಲ್ಲಿ 2,132 ಬ್ಯಾಂಕ್‌ಗಳು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಲೂ ಖಾಸಗಿ ಬ್ಯಾಂಕ್‌ಗಳು ವಿಫಲವಾಗುತ್ತಿದ್ದರೂ ಸರ್ಕಾರ ಮತ್ತೆ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್​ಗಳ ಖಾಸಗೀಕರಣದ ವಿರುದ್ಧ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆಯಿಂದ ಮುಷ್ಕರ ನಡೆಯುತ್ತಿದೆ. ನಗರದ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿರುವ ಎಸ್​ಬಿಐ ಬ್ಯಾಂಕ್ ಆವರಣದಲ್ಲಿ ನಡೆದ ಮುಷ್ಕರದಲ್ಲಿ ನೂರಾರು ಬ್ಯಾಂಕ್ ಉದ್ಯೋಗಿಗಳು ಪಾಲ್ಗೊಂಡಿದ್ದರು. ಬ್ಯಾಂಕ್ ಸೇವೆಗಳು ಬಹುತೇಕ ಸ್ಥಗಿತಗೊಂಡಿದ್ದವು.

ಬ್ಯಾಂಕ್ ಉದ್ಯೋಗಿಗಳ ಮುಷ್ಕರ

ಬಜೆಟ್ ಪತ್ರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವಂತೆ ಎರಡು ಸಾರ್ವಜನಿಕ ವಲಯದ ಬ್ಯಾಂಕ್​​ಗಳ ಖಾಸಗೀಕರಣದಿಂದ, ಜೀವ ವಿಮಾ ನಿಗಮದ ಬಂಡವಾಳ ಹಿಂತೆಗೆತದಿಂದ ದೇಶದ ಜನರಿಗೆ ಮಾರಕವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು..

ಈ ವೇಳೆ, ಮಾತನಾಡಿದ ಐಕ್ಯ ವೇದಿಕೆಯ ರಾಜ್ಯ ಸಂಚಾಲಕ ಶ್ರೀನಿವಾಸ್, ದೇಶದಾದ್ಯಂತ ಬಹುತೇಕ ಬ್ಯಾಂಕ್​​ಗಳು ಬಂದ್ ಆಗಿದ್ದು, ಕಾರ್ಯ ನಿರ್ವಹಿಸುತ್ತಿಲ್ಲ. ಒಂದಿಬ್ಬರು ಮಾತ್ರ ಕೆಲಸ ಮಾಡುತ್ತಿರಬಹುದು. ಎಲ್ಲೆಡೆ ಮುಷ್ಕರ ಯಶಸ್ವಿಯಾಗಿದೆ. ನಾಳೆಯೂ ಇದೇ ರೀತಿ ಮುಷ್ಕರ ಮುಂದುವರಿಯಲಿದೆ ಎಂದರು.

ಬ್ಯಾಂಕ್​ಗಳ ಖಾಸಗೀಕರಣ ದೇಶ ವಿರೋಧಿ ನೀತಿಯಾಗಿದೆ. ಈಗಾಗಲೇ ಖಾಸಗಿ ವಲಯಗಳಲ್ಲಿ ಕಂಪನಿಗಳು ನಷ್ಟಕ್ಕೊಳಗಾಗಿವೆ. ಈಗ ಲಾಭದಲ್ಲಿರುವ ಪಬ್ಲಿಕ್ ಸೆಕ್ಟರ್ ಬ್ಯಾಂಕ್​ಗಳನ್ನು ಖಾಸಗಿ ವಲಯದವರಿಗೆ ಕೊಡಬಾರದು ಎಂದು ಆಗ್ರಹಿಸಿದರು. ಖಾಸಗೀಕರಣದಿಂದ ರೈತರಿಗೆ, ಕೃಷಿ ಕಾರ್ಮಿಕರಿಗೆ, ಸಣ್ಣ ಉದ್ದಿಮೆದಾರಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡುವಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸುಲಭವಾಗಿ ಯಾರೂ ಖಾತೆಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ ಎಂದರು.

1969ಕ್ಕೂ ಮೊದಲು ಎಲ್ಲರೂ ಖಾತೆ ತೆರೆಯುವ ಅವಕಾಶವೇ ಇರಲಿಲ್ಲ. ಆದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಬಂದ ನಂತರ ಎಲ್ಲ ರೀತಿಯ ದೇಶದ ಮೂಲ ಸೌಕರ್ಯಗಳಿಗೆ, ನೀರಾವರಿ, ಕೃಷಿ, ವಿಮಾನ ನಿಲ್ದಾಣ, ಕೈಗಾರಿಕೆಗಳಿಗೆ ಸರ್ಕಾರಿ ಬ್ಯಾಂಕ್, ಎಲ್​ಐಸಿಯಿಂದ ಹಣ ಹೋಗಿದೆ. ಹೀಗಾಗಿ ದಯವಿಟ್ಟು ಖಾಸಗೀಕರಣ ಬಿಲ್ ಅನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಎಸ್ ಬ್ಯಾಂಕ್, ಜೆಟ್ ಏರ್ವೇಸ್ ಎಲ್ಲವೂ ಯಶಸ್ವಿ ಆಗದೇ ಇರಲು ಖಾಸಗೀಕರಣವೇ ಕಾರಣ ಎಂದರು.

ಬ್ಯಾಂಕ್‌ಗಳ ಖಾಸಗೀಕರಣದಿಂದ ದೇಶದ ಜನರ ಉಳಿತಾಯ ಲೂಟಿ ಆಗಲಿದೆ. ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ಆಗಲಿದೆ. ಇದರ ಜೊತೆಗೆ ಉದ್ಯೋಗವಕಾಶ ಮತ್ತು ಮೀಸಲಾತಿಯ ಅವಕಾಶ ಕಡಿಮೆ ಆಗಲಿದೆ. ಬ್ಯಾಂಕ್‌ಗಳ ಶಾಖೆಗಳು ಕಡಿಮೆ ಆಗಲಿದ್ದು, ಇದರಿಂದ ಜನಸಾಮಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಲಿದ್ದಾರೆ ಎಂದರು.

ಇದನ್ನೂ ಓದಿ: ಖಾಸಗೀಕರಣ ವಿರೋಧಿಸಿ ಎರಡು ದಿನಗಳ ಮುಷ್ಕರ: ದೇಶಾದ್ಯಂತ ಬ್ಯಾಂಕ್ ಸೇವೆಗಳು ಬಂದ್​​

ದೇಶದಲ್ಲಿ ಈ ಹಿಂದೆಯೂ ಖಾಸಗಿ ಬ್ಯಾಂಕ್‌ಗಳು ವಿಫಲವಾದ ಸಾಕಷ್ಟು ಉದಾಹರಣೆಗಳಿವೆ. 1913 ರಿಂದ 1968ರ ಅವಧಿಯಲ್ಲಿ 2,132 ಬ್ಯಾಂಕ್‌ಗಳು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಲೂ ಖಾಸಗಿ ಬ್ಯಾಂಕ್‌ಗಳು ವಿಫಲವಾಗುತ್ತಿದ್ದರೂ ಸರ್ಕಾರ ಮತ್ತೆ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.