ETV Bharat / city

ಬೆಂಗಳೂರು ಲಘು ಸ್ಫೋಟ ಪ್ರಕರಣ: ಕೇಸ್‌ ದಾಖಲು - ಬೆಂಗಳೂರು ಲಘು ಸ್ಫೋಟ ಪ್ರಕರಣ ಎಫ್ಐಆರ್ ದಾಖಲು

ಎಂಜಿಆರ್ ಬರ್ತ್​​ಡೇ ಅಂಗವಾಗಿ ಶಾಸಕ ಎನ್.ಎ.ಹ್ಯಾರಿಸ್‌ ಹಾಗೂ ಅನೇಕರು ಕಾರ್ಯಕ್ರಮಕ್ಕೆ ತೆರಳಿದ್ದಾಗ ಲಘು ಸ್ಫೋಟವಾಗಿ ಶಾಸಕ ಹ್ಯಾರಿಸ್ ಕಾಲಿಗೆ ಪೆಟ್ಟಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕೇಂದ್ರ ವಿಭಾಗ ಪೊಲೀಸರು ಐಪಿಸಿ 426 ಅಡಿ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

FIR registered in Bangalore Light blast case
ಲಘು ಸ್ಫೋಟ ಪ್ರಕರಣದ ಕುರಿತು ಎಫ್ಐಆರ್ ದಾಖಲು
author img

By

Published : Jan 23, 2020, 10:35 AM IST

ಬೆಂಗಳೂರು : ಎಂಜಿಆರ್ ಬರ್ತ್​​ಡೇ ಅಂಗವಾಗಿ ಶಾಸಕ ಎನ್.ಎ.ಹ್ಯಾರಿಸ್‌ ಹಾಗೂ ಅನೇಕರು ಕಾರ್ಯಕ್ರಮಕ್ಕೆ ತೆರಳಿದ್ದಾಗ ಲಘು ಸ್ಫೋಟವಾಗಿ ಶಾಸಕ ಹ್ಯಾರಿಸ್ ಕಾಲಿಗೆ ಪೆಟ್ಟಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕೇಂದ್ರ ವಿಭಾಗ ಪೊಲೀಸರು ಐಪಿಸಿ 426 ಅಡಿ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ.

ಲಘು ಸ್ಫೋಟ ಪ್ರಕರಣದ ಕುರಿತು ಎಫ್ಐಆರ್ ದಾಖಲು

ನಿನ್ನೆ ರಾತ್ರಿ‌ ವಿವೇಕನಗರದ ವನ್ನಾರ ಪೇಟೆಯಲ್ಲಿ ಹ್ಯಾರಿಸ್‌, ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಳಿತಿರುವಾಗ ಮೇಲಿಂದ ಬಂದ ವಸ್ತು ಸ್ಫೋಟವಾಗಿ ಶಾಸಕ ಹ್ಯಾರೀಸ್ ಕಾಲಿಗೆ ಹಾಗೂ ಕೆಲವರಿಗೆ ಗಾಯಗಳಾಗಿತ್ತು‌. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಕೆ ಕಂಡ ಹಿನ್ನೆಲೆ ಇಂದು ಆಸ್ಪತ್ರೆಯಿಂದ ಶಾಸಕ ಹ್ಯಾರಿಸ್ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

ಸಿಲಿಕಾನ್​ ಸಿಟಿಯಲ್ಲಿ ಲಘು ಸ್ಫೋಟ... ಶಾಸಕ ಎನ್.ಎ.ಹ್ಯಾರಿಸ್‌ಗೆ ಗಾಯ

ಆಸ್ಪತ್ರೆ ಮೂಲಗಳ ಪ್ರಕಾರ, ಹ್ಯಾರಿಸ್ ಬಲಗಾಲಿನ ಕೆಳ ಭಾಗದಲ್ಲಿ ಸ್ವಲ್ಪ ಸುಟ್ಟಿದ್ದು, ರಾತ್ರಿಯೇ ಚಿಕಿತ್ಸೆ ಪಡೆದು ಮನೆಗೆ ಹೋಗಲು ಸಿದ್ದರಾಗಿದ್ದರು. ಮನೆಗೆ ಹೋದ್ರೆ ಕಾರ್ಯಕರ್ತರು ಜಮಾಯಿಸುವ ಹಿನ್ನಲೆ ಆಸ್ಪತ್ರೆಯಲ್ಲೇ ಉಳಿದಿದ್ದು, ಇಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂದಿದ್ದಾರೆ.

ಹ್ಯಾರಿಸ್ ಜೊತೆ ಇದ್ದ ಸಂಪತ್ ಕುಮಾರ್​ಗೆ ಎರಡು ಕಾಲು ಮತ್ತು ಮುಖದ ಭಾಗದಲ್ಲಿ ಗಾಯಗಳಾಗಿವೆ. ಶಿವಕುಮಾರ್ ಎಂಬುವರಿಗೆ ಎರಡು ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಲಘು ಸ್ಫೋಟ ವಿಚಾರದಲ್ಲಿ ಶಾಸಕ ಹ್ಯಾರಿಸ್ ಟಾರ್ಗೆಟ್ ಮಾಡಿದ್ದು ಯಾರು?, ಸ್ಫೋಟಗೊಂಡಿರುವುದು ಪಟಾಕಿನ ಅಥವಾ ಬೇರೆ ಏನಾದ್ರು ವಸ್ತುನಾ? ಅನ್ನೋದ್ರ ಸಂಪೂರ್ಣ ತನಿಖೆಯನ್ನು ಕೇಂದ್ರ ವಿಭಾಗ ಡಿಸಿಪಿ ರಾಥೋರ್ ತಂಡ ನಡೆಸುತ್ತಿದ್ದಾರೆ.

ಬೆಂಗಳೂರು : ಎಂಜಿಆರ್ ಬರ್ತ್​​ಡೇ ಅಂಗವಾಗಿ ಶಾಸಕ ಎನ್.ಎ.ಹ್ಯಾರಿಸ್‌ ಹಾಗೂ ಅನೇಕರು ಕಾರ್ಯಕ್ರಮಕ್ಕೆ ತೆರಳಿದ್ದಾಗ ಲಘು ಸ್ಫೋಟವಾಗಿ ಶಾಸಕ ಹ್ಯಾರಿಸ್ ಕಾಲಿಗೆ ಪೆಟ್ಟಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕೇಂದ್ರ ವಿಭಾಗ ಪೊಲೀಸರು ಐಪಿಸಿ 426 ಅಡಿ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ.

ಲಘು ಸ್ಫೋಟ ಪ್ರಕರಣದ ಕುರಿತು ಎಫ್ಐಆರ್ ದಾಖಲು

ನಿನ್ನೆ ರಾತ್ರಿ‌ ವಿವೇಕನಗರದ ವನ್ನಾರ ಪೇಟೆಯಲ್ಲಿ ಹ್ಯಾರಿಸ್‌, ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಳಿತಿರುವಾಗ ಮೇಲಿಂದ ಬಂದ ವಸ್ತು ಸ್ಫೋಟವಾಗಿ ಶಾಸಕ ಹ್ಯಾರೀಸ್ ಕಾಲಿಗೆ ಹಾಗೂ ಕೆಲವರಿಗೆ ಗಾಯಗಳಾಗಿತ್ತು‌. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಕೆ ಕಂಡ ಹಿನ್ನೆಲೆ ಇಂದು ಆಸ್ಪತ್ರೆಯಿಂದ ಶಾಸಕ ಹ್ಯಾರಿಸ್ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

ಸಿಲಿಕಾನ್​ ಸಿಟಿಯಲ್ಲಿ ಲಘು ಸ್ಫೋಟ... ಶಾಸಕ ಎನ್.ಎ.ಹ್ಯಾರಿಸ್‌ಗೆ ಗಾಯ

ಆಸ್ಪತ್ರೆ ಮೂಲಗಳ ಪ್ರಕಾರ, ಹ್ಯಾರಿಸ್ ಬಲಗಾಲಿನ ಕೆಳ ಭಾಗದಲ್ಲಿ ಸ್ವಲ್ಪ ಸುಟ್ಟಿದ್ದು, ರಾತ್ರಿಯೇ ಚಿಕಿತ್ಸೆ ಪಡೆದು ಮನೆಗೆ ಹೋಗಲು ಸಿದ್ದರಾಗಿದ್ದರು. ಮನೆಗೆ ಹೋದ್ರೆ ಕಾರ್ಯಕರ್ತರು ಜಮಾಯಿಸುವ ಹಿನ್ನಲೆ ಆಸ್ಪತ್ರೆಯಲ್ಲೇ ಉಳಿದಿದ್ದು, ಇಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂದಿದ್ದಾರೆ.

ಹ್ಯಾರಿಸ್ ಜೊತೆ ಇದ್ದ ಸಂಪತ್ ಕುಮಾರ್​ಗೆ ಎರಡು ಕಾಲು ಮತ್ತು ಮುಖದ ಭಾಗದಲ್ಲಿ ಗಾಯಗಳಾಗಿವೆ. ಶಿವಕುಮಾರ್ ಎಂಬುವರಿಗೆ ಎರಡು ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಲಘು ಸ್ಫೋಟ ವಿಚಾರದಲ್ಲಿ ಶಾಸಕ ಹ್ಯಾರಿಸ್ ಟಾರ್ಗೆಟ್ ಮಾಡಿದ್ದು ಯಾರು?, ಸ್ಫೋಟಗೊಂಡಿರುವುದು ಪಟಾಕಿನ ಅಥವಾ ಬೇರೆ ಏನಾದ್ರು ವಸ್ತುನಾ? ಅನ್ನೋದ್ರ ಸಂಪೂರ್ಣ ತನಿಖೆಯನ್ನು ಕೇಂದ್ರ ವಿಭಾಗ ಡಿಸಿಪಿ ರಾಥೋರ್ ತಂಡ ನಡೆಸುತ್ತಿದ್ದಾರೆ.

Intro:ಶಾಸಕ ಎನ್.ಎ ಹ್ಯಾರೀಸ್ ಇದ್ದ ಕಾರ್ಯಕ್ರಮ ಲಘ ಸ್ಪೋಟ ಪ್ರಕರಣ
ಘಟನೆ ಕುರಿತು ಎಫ್ಐ ಆರ್ ದಾಖಲು

ಎಂಜಿ ಆರ್ ಜನ್ಮದಿನಚರಣೆ ಆಚರಣೆ ಅಂಗವಾಗಿ ಕಾರ್ಯಕ್ರಮ ಕ್ಕೆ ತೆರಳಿದ ವೇಳೆ ಲಘು ಸ್ಪೋಟ ಗೊಂಡು ಶಾಸಕ ಹ್ಯಾರಿಸ್ ಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಕೇಂದ್ರ ವಿಭಾಗ ಪೊಲೀಸರು Explosive Substances Act ಐಪಿಸಿ 426 ಅಡಿ ವಿವೇಕ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ

ನಿನ್ನೆ ರಾತ್ರಿ‌ ವಿವೇಕನಗರದ ವನ್ನಾರಪೇಟೆಯಲ್ಲಿ ಹ್ಯಾರೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲೆ ಕುಳಿತಿರುವಾಗ ಮೇಲಿಂದ ಬಂದ ವಸ್ತು ಸ್ಪೋಟವಾಗಿ ಶಾಸಕ ಹ್ಯಾರೀಸ್ ಕಾಲಿಗೆ ಹಾಗೂ ಕೆಲ ವರಿಗೆ ತಾಗಿ ಗಾಯವಾಗಿತ್ತು‌. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಚೇತರಿಕೆ ಕಂಡ ಹಿನ್ನೆಲೆ
ಇಂದು ಆಸ್ಪತ್ರೆಯಿಂದ ಶಾಸಕ ಹ್ಯಾರೀಸ್ ಡಿಸ್ಚಾರ್ಜ್ ಸಾಧ್ಯತೆ ಇದೆ.

ಇನ್ನು ಆಸ್ಪತ್ರೆ ಮೂಲಗಳು ಹೇಳುವ ಪ್ರಕಾರ ಹ್ಯಾರೀಸ್ ಬಲಗಾಲಿನ ಕೆಳ ಭಾಗದಲ್ಲಿ ಸ್ವಲ್ಪ ಸುಟ್ಟ ಗಾಯ ಹಿನ್ನಲೆ ರಾತ್ರಿಯೇ ಚಿಕಿತ್ಸೆ ಪಡೆದು, ಮನೆಗೆ ಹೋಗಲು ಸಿದ್ದರಾಗಿದ್ದರು. ಮನೆಗೆ ಹೋದ್ರೆ, ಕಾರ್ಯಕರ್ತರು ಜಮಾಯಿಸುವ ಹಿನ್ನಲೆ ಆಸ್ಪತ್ರೆಯಲ್ಲೇ ಉಳಿದಿದ್ದು ಇಂದು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಲಿದ್ದಾರೆ ಎಂದಿದ್ದಾರೆ.

ಇನ್ನು ಹ್ಯಾರಿಸ್ ಜೊತೆ ಇದ್ದ ಸಂಪತ್ ಕುಮಾರ್ ಗೆ ಎರಡು ಕಾಲು ಮತ್ತು ಮುಖದ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ..ಹಾಗೇ ಶಿವಕುಮಾರ್ ಎಂಬುವರಿಗೆ ಎರಡು ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯಲಿದೆ .. ಇನ್ನು ಶಾಸಕ ಹ್ಯಾರೀಸ್ ಹಾಜರಿದ್ದ ಕಾರ್ಯಕ್ರಮದಲ್ಲಿ ಲಘು ಸ್ಫೋಟ ವಿಚಾರದಲ್ಲಿ ಶಾಸಕ ಹ್ಯಾರೀಸ್ ಟಾರ್ಗೆಟ್ ಮಾಡಿದ್ದು ಯಾರು..?
ಇದು ಪ್ರೀ ಪ್ಲ್ಯಾನ ..? ಪಟಾಕಿನ ಅಥವಾ ಬೇರೆ ಏನಾದ್ರು ವಸ್ತುನ ಅನ್ನೋದ್ರ ಸಂಪೂರ್ಣ ತನಿಖೆಯನ್ನ ಕೇಂದ್ರ ವಿಭಾಗ ಡಿಸಿಪಿ ರಾಥೊರ್ ತಂಡ ನಡೆಸುತ್ತಿದ್ದಾರೆ



Body:KN_BNG_02_HARISh_7204498Conclusion:KN_BNG_02_HARISh_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.