ETV Bharat / city

ರಾಜ್ಯ ಬಂದ್​ಗೆ ರೈತ ಸಂಘ ಸಂಪೂರ್ಣ ಬೆಂಬಲ: ಕೋಡಿಹಳ್ಳಿ ಚಂದ್ರಶೇಖರ್​

author img

By

Published : Dec 29, 2021, 6:00 PM IST

ಮೇಕೆದಾಟು ಯೋಜನೆಗೆ ಸಿಎಂ ಕೂಡಲೇ ಅಡಿಗಲ್ಲು ಹಾಕಬೇಕು. ಕೇಂದ್ರದ ಸಹಾಯ ಪಡೆದು ಯೋಜನೆ ಶುರು ಮಾಡಬೇಕು. ನೀವು ಮಾಡದೇ ಇದ್ದರೆ ರೈತರೇ ಅಡಿಗಲ್ಲು ಹಾಕಬೇಕಾಗುತ್ತದೆ. ನಾವೇ ಅಡಿಗಲ್ಲು ಹಾಕಿ ಕೆಲಸ ಶುರು ಮಾಡಿ ನಿಮಗೆ ಯೋಗ್ಯತೆ ಇಲ್ಲ ಎಂದು ತೋರಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ಕಿಡಿಕಾರಿದರು.

chandrashekar
ಕೋಡಿಹಳ್ಳಿ ಚಂದ್ರಶೇಖರ್​

ಬೆಂಗಳೂರು: ರಾಜ್ಯ ಬಂದ್​ಗೆ ಸಂಪೂರ್ಣ ಬೆಂಬಲ ಇದೆ. ನಾಡಿನ ವಿಚಾರ ಬಂದಾಗ ನಾವು ರಾಜ್ಯದ ಪರವಾಗಿ ನಿಲ್ಲುತ್ತೇವೆ. ರಾಜ್ಯದೊಳಗೆ ಬೇರೆ ರಾಜ್ಯಗಳ ಪ್ರಕ್ರಿಯೆ ನಡೆಯಬಾರದು. ಎಂಇಎಸ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಒತ್ತಾಯಿಸಿದರು.

ನಗರದ ಪ್ರೆಸ್ ಕ್ಲಬ್​ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾದ ಸಿದ್ಧತೆ ಮಾಡಿಕೊಂಡು ಬಂದ್​ಗೆ ಕರೆ ಕೊಡಬೇಕಿತ್ತು. ಸಿನಿಮಾ ಲಾಸ್ ಆಗುತ್ತೆ ಎನ್ನುವುದು, ವ್ಯಾಪಾರಸ್ಥರು ನಷ್ಟ ಆಗುತ್ತೆ ಅಂತ ಸಬೂಬು ನೀಡುವುದು ಸರಿಯಾದ ಉತ್ತರ ಅಲ್ಲ. ಕರ್ನಾಟಕ ಬಂದ್​ಗೆ ರೈತ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದೆ. ಕರ್ನಾಟಕ ಯುನಿವರ್ಸಿಟಿ, ಧಾರವಾಡ ವಿದ್ಯಾರ್ಥಿಗಳ ಜತೆ ಸಂಘರ್ಷಕ್ಕಿಳಿದಿದೆ. ಕಾನೂನು ಸಚಿವ ಮಾಧುಸ್ವಾಮಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮೇಕೆದಾಟು ಯೋಜನೆ ಶುರು ಮಾಡಿ

ಮೇಕೆದಾಟು ಯೋಜನೆಗೆ ಸಿಎಂ ಕೂಡಲೇ ಅಡಿಗಲ್ಲು ಹಾಕಬೇಕು. ಕೇಂದ್ರದ ಸಹಾಯ ಪಡೆದು ಯೋಜನೆ ಶುರು ಮಾಡಬೇಕು. ನೀವು ಮಾಡದೆ ಇದ್ದರೆ ರೈತರೇ ಅಡಿಗಲ್ಲು ಹಾಕಬೇಕಾಗುತ್ತದೆ. ನಾವೇ ಅಡಿಗಲ್ಲು ಹಾಕಿ ಕೆಲಸ ಶುರು ಮಾಡಿ ನಿಮಗೆ ಯೋಗ್ಯತೆ ಇಲ್ಲ ಎಂದು ತೋರಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ಕಿಡಿಕಾರಿದರು.

ಇದನ್ನೂ ಓದಿ: PM Kisan Yojana: ಜನವರಿ 1ರಂದು ರೈತರ ಖಾತೆಗೆ ಪಿಎಂ ಕಿಸಾನ್​​​ 10ನೇ ಕಂತಿನ ಹಣ

ಬೆಂಗಳೂರು: ರಾಜ್ಯ ಬಂದ್​ಗೆ ಸಂಪೂರ್ಣ ಬೆಂಬಲ ಇದೆ. ನಾಡಿನ ವಿಚಾರ ಬಂದಾಗ ನಾವು ರಾಜ್ಯದ ಪರವಾಗಿ ನಿಲ್ಲುತ್ತೇವೆ. ರಾಜ್ಯದೊಳಗೆ ಬೇರೆ ರಾಜ್ಯಗಳ ಪ್ರಕ್ರಿಯೆ ನಡೆಯಬಾರದು. ಎಂಇಎಸ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಒತ್ತಾಯಿಸಿದರು.

ನಗರದ ಪ್ರೆಸ್ ಕ್ಲಬ್​ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾದ ಸಿದ್ಧತೆ ಮಾಡಿಕೊಂಡು ಬಂದ್​ಗೆ ಕರೆ ಕೊಡಬೇಕಿತ್ತು. ಸಿನಿಮಾ ಲಾಸ್ ಆಗುತ್ತೆ ಎನ್ನುವುದು, ವ್ಯಾಪಾರಸ್ಥರು ನಷ್ಟ ಆಗುತ್ತೆ ಅಂತ ಸಬೂಬು ನೀಡುವುದು ಸರಿಯಾದ ಉತ್ತರ ಅಲ್ಲ. ಕರ್ನಾಟಕ ಬಂದ್​ಗೆ ರೈತ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದೆ. ಕರ್ನಾಟಕ ಯುನಿವರ್ಸಿಟಿ, ಧಾರವಾಡ ವಿದ್ಯಾರ್ಥಿಗಳ ಜತೆ ಸಂಘರ್ಷಕ್ಕಿಳಿದಿದೆ. ಕಾನೂನು ಸಚಿವ ಮಾಧುಸ್ವಾಮಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮೇಕೆದಾಟು ಯೋಜನೆ ಶುರು ಮಾಡಿ

ಮೇಕೆದಾಟು ಯೋಜನೆಗೆ ಸಿಎಂ ಕೂಡಲೇ ಅಡಿಗಲ್ಲು ಹಾಕಬೇಕು. ಕೇಂದ್ರದ ಸಹಾಯ ಪಡೆದು ಯೋಜನೆ ಶುರು ಮಾಡಬೇಕು. ನೀವು ಮಾಡದೆ ಇದ್ದರೆ ರೈತರೇ ಅಡಿಗಲ್ಲು ಹಾಕಬೇಕಾಗುತ್ತದೆ. ನಾವೇ ಅಡಿಗಲ್ಲು ಹಾಕಿ ಕೆಲಸ ಶುರು ಮಾಡಿ ನಿಮಗೆ ಯೋಗ್ಯತೆ ಇಲ್ಲ ಎಂದು ತೋರಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ಕಿಡಿಕಾರಿದರು.

ಇದನ್ನೂ ಓದಿ: PM Kisan Yojana: ಜನವರಿ 1ರಂದು ರೈತರ ಖಾತೆಗೆ ಪಿಎಂ ಕಿಸಾನ್​​​ 10ನೇ ಕಂತಿನ ಹಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.