ETV Bharat / city

ಕಣ್ವ ಬ್ಯಾಂಕ್​ ವಿರುದ್ಧ ಗ್ರಾಹಕರ ಆರೋಪ: ಬ್ಯಾಂಕ್ ಅಧ್ಯಕ್ಷರಿಂದ ಸ್ಪಷ್ಟನೆ - Kanva co operative bank allegation

ಕಣ್ವ ಸಮೂಹ ಸಂಸ್ಥೆಯಿಂದ ಜನರಿಗೆ ವಂಚನೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಅಧ್ಯಕ್ಷ ಹರೀಶ್ ಸ್ಪಷ್ಟನೆ ನೀಡಿದ್ದಾರೆ.

ಕಣ್ವ ಬ್ಯಾಂಕ್​ ಆರೋಪಕ್ಕೆ ಸ್ಪಷ್ಟನೆ ನೀಡಿದ ಬ್ಯಾಂಕ್ ಅಧ್ಯಕ್ಷ ಹರೀಶ್
author img

By

Published : Nov 1, 2019, 8:42 PM IST

ಬೆಂಗಳೂರು: ಕಣ್ವ ಸಮೂಹ ಸಂಸ್ಥೆಯಿಂದ ಜನರಿಗೆ ಮೋಸವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಅಧ್ಯಕ್ಷ ಹರೀಶ್ ಸ್ಪಷ್ಟನೆ ನೀಡಿದ್ದಾರೆ.

ಕಣ್ವ ಬ್ಯಾಂಕ್​ ಆರೋಪಕ್ಕೆ ಸ್ಪಷ್ಟನೆ ನೀಡಿದ ಬ್ಯಾಂಕ್ ಅಧ್ಯಕ್ಷ ಹರೀಶ್

ಕಣ್ವ ಸಂಸ್ಥೆಯ ವಿರುದ್ಧ ನಿವೇಶನ ವಿಚಾರ ಹಾಗೂ ಗ್ರಾಹಕರ ಹಣವನ್ನು ವಾಪಸ್​ ಕೊಟ್ಟಿಲ್ಲವೆಂಬ ಆರೋಪ ಕೇಳಿ ಬಂದಿದೆ. ಆದರೆ ಕಳೆದ 31 ತಿಂಗಳ ಅವಧಿಯಲ್ಲಿ 297 ಕೋಟಿ ರೂ ಹಣವನ್ನು ವಾಪಾಸ್ ನೀಡಿದ್ದೇವೆ. ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್​ನಲ್ಲಿ ಗ್ರಾಹಕರು 600 ಕೋಟಿ ರೂ ಹಣ ಡೆಪಾಸಿಟ್ ಮಾಡಿದ್ರು. 700 ಕೋಟಿ ರೂ ಹಣವನ್ನು ಸಾಲವಾಗಿ ಕೊಟ್ಟಿದ್ದೇವೆ. ಕಳೆದ ಮೂರು ವರ್ಷಗಳಿಂದ ಆರ್ಥಿಕತೆ ಕುಂಟುತ್ತಾ ಸಾಗುತ್ತಿದೆ. ನಾವು ನಿಧಾನವಾಗಿ ಡೆಪಾಸಿಟ್ ಹಣವನ್ನು ಗ್ರಾಹಕರಿಗೆ ನೀಡುತ್ತಾ ಇದ್ದೀವಿ ಎಂದು ಬ್ಯಾಂಕ್ ಅಧ್ಯಕ್ಷ ಹರೀಶ್ ಹೇಳಿದ್ರು.

ಕಣ್ವ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ನಂಜುಡೇಗೌಡರನ್ನು ಪಶ್ಚಿಮ ವಿಭಾಗ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬೆಂಗಳೂರು: ಕಣ್ವ ಸಮೂಹ ಸಂಸ್ಥೆಯಿಂದ ಜನರಿಗೆ ಮೋಸವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಅಧ್ಯಕ್ಷ ಹರೀಶ್ ಸ್ಪಷ್ಟನೆ ನೀಡಿದ್ದಾರೆ.

ಕಣ್ವ ಬ್ಯಾಂಕ್​ ಆರೋಪಕ್ಕೆ ಸ್ಪಷ್ಟನೆ ನೀಡಿದ ಬ್ಯಾಂಕ್ ಅಧ್ಯಕ್ಷ ಹರೀಶ್

ಕಣ್ವ ಸಂಸ್ಥೆಯ ವಿರುದ್ಧ ನಿವೇಶನ ವಿಚಾರ ಹಾಗೂ ಗ್ರಾಹಕರ ಹಣವನ್ನು ವಾಪಸ್​ ಕೊಟ್ಟಿಲ್ಲವೆಂಬ ಆರೋಪ ಕೇಳಿ ಬಂದಿದೆ. ಆದರೆ ಕಳೆದ 31 ತಿಂಗಳ ಅವಧಿಯಲ್ಲಿ 297 ಕೋಟಿ ರೂ ಹಣವನ್ನು ವಾಪಾಸ್ ನೀಡಿದ್ದೇವೆ. ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್​ನಲ್ಲಿ ಗ್ರಾಹಕರು 600 ಕೋಟಿ ರೂ ಹಣ ಡೆಪಾಸಿಟ್ ಮಾಡಿದ್ರು. 700 ಕೋಟಿ ರೂ ಹಣವನ್ನು ಸಾಲವಾಗಿ ಕೊಟ್ಟಿದ್ದೇವೆ. ಕಳೆದ ಮೂರು ವರ್ಷಗಳಿಂದ ಆರ್ಥಿಕತೆ ಕುಂಟುತ್ತಾ ಸಾಗುತ್ತಿದೆ. ನಾವು ನಿಧಾನವಾಗಿ ಡೆಪಾಸಿಟ್ ಹಣವನ್ನು ಗ್ರಾಹಕರಿಗೆ ನೀಡುತ್ತಾ ಇದ್ದೀವಿ ಎಂದು ಬ್ಯಾಂಕ್ ಅಧ್ಯಕ್ಷ ಹರೀಶ್ ಹೇಳಿದ್ರು.

ಕಣ್ವ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ನಂಜುಡೇಗೌಡರನ್ನು ಪಶ್ಚಿಮ ವಿಭಾಗ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Intro:ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಕಡೆಯಿಂದ ಸ್ಫಷ್ಟನೆ
ಗ್ರಾಹಕರು ಭಯಪಡಯವ ಅಗತ್ಯವಿಲ್ಲ.‌ ಎಲ್ಲಾರಿಗೂ ಹಣವನ್ನು ಕೊಡುತ್ತೇವೆ.

ಕಣ್ವ ಪ್ರತಿಷ್ಠಿತ ಸಮೂಹ ಸಂಸ್ಥೆಯಿಂದ ಮೋಸವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹರೀಶ್, ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಅಧ್ಯಕ್ಷ ಸ್ಫಷ್ಟನೆ ನೀಡಿದ್ದಾರೆ. ಈಗಾಗ್ಲೇ ಕಣ್ವ ಸಂಸ್ಥೆ ಮೇಲೆ ಸೈಟ್ ವಿಚಾರ ಹಾಗೂ ಗ್ರಾಹಕರ ಹಣವನ್ನ ವಾಪಸ್ಸು ಕೊಟ್ಟಿಲೆಂಬ ಆರೋಪಗಳು ಕೇಳಿ ಬಂದಿವೆ.

ಆದರೆಕಳೆದ 31 ತಿಂಗಳ ಅವಧಿಯಲ್ಲಿ 297 ಕೋಟಿ ಹಣವನ್ನು ವಾಪಾಸ್ ನೀಡಿದ್ದೇವೆ. ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ನಲ್ಲಿ ಗ್ರಾಹಕರು 600 ಕೋಟಿ ಹಣ ಡೆಪಾಸಿಟ್ ಮಾಡಿದ್ರು.
700 ಕೋಟಿ ಹಣವನ್ನು ಸಾಲವಾಗಿ ಕೊಟ್ಟಿದ್ದೇವೆ. ಕಳೆದ ಮೂರು ವರ್ಷಗಳಿಂದ ಆರ್ಥಿಕತೆ ಕುಂಟುತ್ತಾ ಸಾಗುತ್ತಿದೆ .ನಾವು ನಿಧಾನವಾಗಿ ಡೆಪಾಜಿಟ್ ಹಣವನ್ನು ಕೊಡ್ತಾ ಇದೀವಿ.
ಕೆಲವರು ತಾಳ್ಮೆ ಕೆಟ್ಟು ದೂರನ್ನು ನೀಡಿದ್ದಾರೆ. ಅವರನ್ನ ನಿನ್ನೆ ಸಂಜೆಯೆ ಕರೆದು ಹಣವನ್ನು ಕೊಡುವುದಾಗಿ ಹೇಳಿದ್ವಿ ಎಂದು ತಿಳಿಸಿದರು.

ಸದ್ಯ ಪ್ರತಿಷ್ಠಿತ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂಡಿ ನಂಜುಡೇಗೌಡರನ್ನ ಪಶ್ಚಿಮ ವಿಭಾಗ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕ್ತಿದ್ದಾರೆ.

Body:KN_BNG_06_KANVA_7204498Conclusion:KN_BNG_06_KANVA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.