ETV Bharat / city

ಕೈಮಗ್ಗ ಸೀರೆಗಳಿಗೆ ಮನಸೋತ ಶೋಭಾ.. 22,570 ರೂ. ಮೌಲ್ಯದ ಸೀರೆ ಖರೀದಿಸಿದ ಕೇಂದ್ರ ಸಚಿವೆ

author img

By

Published : Oct 7, 2021, 12:53 PM IST

Updated : Oct 7, 2021, 1:25 PM IST

ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬುಧವಾರದಂದು ಉದ್ಘಾಟನೆಗೊಳಿಸಿದರು. ಜೊತೆಗೆ 22,570 ರೂ. ಮೌಲ್ಯದ ಸೀರೆಗಳನ್ನು ಖರೀದಿಸಿದರು.

shobha karandlaje purchased Handloom sarees
ಕೈಮಗ್ಗದ ಸೀರೆಗಳನ್ನು ಖರೀದಿಸಿದ ಸಚಿವೆ ಕರಂದ್ಲಾಜೆ

ಬೆಂಗಳೂರು: ಪವಿತ್ರ ವಸ್ತ್ರ ಅಭಿಯಾನದಡಿ, ಚರಕ, ದೇಶಿ, ಖಾದಿ ಸೇರಿದಂತೆ ವಿವಿಧ ಸಂಘಟನೆಗಳು ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ಉದ್ಘಾಟನೆಗೊಳಿಸಿದರು. ಜೊತೆಗೆ 22,570 ರೂ. ಮೌಲ್ಯದ ಸೀರೆ ಜೊತೆಗೆ ದುಪ್ಪಟ್ಟ, ಪುಸ್ತಕಗಳನ್ನು ಖರೀದಿಸಿದರು.

ಚರಕ ಮಳಿಗೆಯಿಂದ 2, ನಾಸಿಕ್-1, ಮಗ್ಗದ ಖಾದಿ-1, ಟಿಂಬಕ್ಟು ಬ್ರಾಂಡ್​ನ 1 ಸೀರೆ ಖರೀದಿಸಿದರು. ಜೊತೆಗೆ 8 ಪುಸ್ತಕಗಳು ಹಾಗೂ 4 ದುಪ್ಪಟ್ಟಗಳನ್ನು ಖರೀದಿಸಿದರು.

ಕೈಮಗ್ಗ-ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ: ಪ್ರತಿಕ್ರಿಯೆ

ಸ್ವದೇಶಿ ವಸ್ತುಗಳ ಬಳಕೆ:

ಬಳಿಕ ಮಾತನಾಡಿದ ಅವರು, ಚಿತ್ರಕಲಾ ಪರಿಷತ್ತಿನಲ್ಲಿ ವಸ್ತ್ರದ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಖಾದಿಗಾಗಿ ಕೆಲಸ ಮಾಡುತ್ತಿರುವುದು ಪ್ರತಿಷ್ಠಿತ ಸಂಸ್ಥೆ ಚರಕ ಸಂಸ್ಥೆ. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ವೇಳೆ ಸ್ವದೇಶಿ ವಸ್ತುಗಳನ್ನು ಬಳಸಿ ಎಂದಿದ್ದರು. ಇದು ಇಂದಿಗೂ ಪ್ರಸ್ತುತ. ಇಂದೂ ಕೂಡಾ ಚೀನಾದ ವಸ್ತುಗಳನ್ನು ದೂರ ತಳ್ಳಬೇಕು ಎಂದು ಮಾತಾಡುತ್ತಿದ್ದೇವೆ. ಅದೇ ದಾರಿಯಲ್ಲಿ ಪ್ರಸನ್ನ ಅವರ ಪವಿತ್ರ ವಸ್ತ್ರ ಅಭಿಯಾನ ನಡೆಯುತ್ತಿದೆ. ಕೈಮಗ್ಗದ ಬಟ್ಟೆಗಳನ್ನು ಧರಿಸಿದರೆ ಆನಂದವಾಗುತ್ತದೆ. ಬೆಂಗಳೂರಿಗರು ಇಲ್ಲಿಗೆ ಭೇಟಿ ನೀಡಿ ಖರೀದಿಸಿ ಎಂದು ಕರೆ ನೀಡಿದರು.

ಕೈಮಗ್ಗದ ಸೀರೆಗಳು ನನಗೂ ಇಷ್ಟ:

ವೈಯಕ್ತಿಕವಾಗಿ‌ ನನಗೂ ಕೈಮಗ್ಗದ ಸೀರೆಗಳು ಇಷ್ಟ. ಹೆಚ್ಚು ಖಾದಿ ಬಳಸಲು ಪ್ರಯತ್ನಿಸುತ್ತೇನೆ. ಇದೀಗ ನಾಲ್ಕೈದು ಸೀರೆಗಳನ್ನು ಖರೀದಿಸಿರುವುದಾಗಿ ಹೇಳಿದ್ರು.

ಚರಕ, ದೇಶಿ ಸಂಸ್ಥೆಯು ಕೋವಿಡ್ ಸಮಯದಲ್ಲಿ ಹೊರತಂದ ನೈಸರ್ಗಿಕ ಬಣ್ಣದ ಹೊಸ ಶೈಲಿಯ ವಸ್ತ್ರಗಳೊಂದಿಗೆ, ದೇಶದ ಇತರೆ ಭಾಗಗಳಿಂದ ಬಂದಂತಹ ಸುಪ್ರಸಿದ್ಧ ಖಾದಿ ಸಂಸ್ಥೆಗಳಾದ ತಮಿಳುನಾಡಿನ ತುಲಾ ಖಾದಿ, ಮಹಾರಾಷ್ಟ್ರದ ಮಘನ್ ಖಾದಿ, ಸುಮಧ ಖಾದಿ, ಆಂಧ್ರಪ್ರದೇಶದ ಟಿಂಬಕ್ಟು ಖಾದಿ, ಕಲಾ ಸೀಮ ಪದಾರ್ಥಗಳು, ಕೈಮಗ್ಗ ನೇಕಾರರ ಒಕ್ಕೂಟದ ಸಾಂಪ್ರದಾಯಿಕ ಸೀರೆ, ಬಟ್ಟೆ, ಇತರೆ ಉಡುಪುಗಳು, ಫಾರ್ಮ್ ವೇದ, ಇಕ್ರಾ ಸಂಸ್ಥೆಯ ಕೃಷಿ ಉತ್ಪನ್ನಗಳು, ಸಹನಾ, ಚೇತನಾ, ಅಗಸ್ತ್ಯ ಸಂಸ್ಥೆಯ ಕರಕುಶಲ ವಸ್ತುಗಳು ಹೀಗೆ ವಿವಿಧ ಕೈ ಉತ್ಪನ್ನಗಳ ಉತ್ಪಾದಕರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಚಿಕ್ಕಬಳ್ಳಾಪುರದ ರಂಗಕರ್ಮಿ ಹೇಳಿದ್ದು ಹೀಗೆ...

ಟಿಂಬಕ್ಟು ಬ್ರ್ಯಾಂಡ್‌ನಲ್ಲಿ 3,900 ರೂಪಾಯಿಯಿಂದ 10 ಸಾವಿರ ರೂ. ಮೌಲ್ಯದವರೆಗೆ ಸೀರೆಗಳಿವೆ.‌ ಚಿಗುರು ಸಂಸ್ಥೆಯ ಮಣ್ಣಿನ ಜ್ಯುವೆಲ್ಲರಿಗಳು ಎಲ್ಲರ ಗಮನ ಸೆಳೆಯುತ್ತವೆ. ಇವುಗಳನ್ನು ರಾಯಚೂರಿನ 9 ಜನ ಮಹಿಳೆಯರು ಸಿದ್ಧಪಡಿಸಿದ್ದಾರೆ. ಚನ್ನಪಟ್ಟಣದ ಗೊಂಬೆಗಳಿವೆ. ಬೆಳಗಾವಿಯಲ್ಲಿ ಕುರಿ ಉಣ್ಣೆಯಿಂದ ಮಾಡಿರುವ ಮ್ಯಾಟ್​ಗಳು, ವಿಜಯಪುರದ ಜೈಲು ಕೈದಿಗಳು ಚರಕದಿಂದ ನೇಯ್ದಿರುವ ಜಮಖಾನಗಳಿವೆ ಎಂದು ಮಳಿಗೆ ನಿರ್ವಹಣೆ ಮಾಡುತ್ತಿದ್ದ ಚಿಕ್ಕಬಳ್ಳಾಪುರದ ರಂಗಕರ್ಮಿ ದಿಲೀಪ್ ಕುಮಾರ್ ವಿವರಿಸಿದರು.

ವ್ಯಾಪಾಸ್ಥರು ಹೇಳೋದೇನು?

ಕರಕುಶಲ, ಕೈ ಉತ್ಪನ್ನಗಳ ಮಾರಾಟಕ್ಕೆ ಗದಗದಿಂದ ಬಂದಿರುವ ದವಣೇಶ್ ಮಾತನಾಡಿ, 25 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಹುಲ್ಲು, ತೆಂಗಿನಕಡ್ಡಿ ಬಳಸಿ ದಿನಬಳಕೆ ವಸ್ತುಗಳನ್ನು ತಯಾರಿಸುತ್ತಿದ್ದೇವೆ. 15-20 ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ಹೈದರಾಬಾದ್, ಮುಂಬೈನಲ್ಲೂ ಮಾರಾಟ ಮಾಡುತ್ತೇವೆ. ಹ್ಯಾಟ್, ಬ್ಯಾಗ್, ಲ್ಯಾಂಪ್, ಡಸ್ಟ್ ಬಿನ್, ಪೊರಕೆಗಳನ್ನು ಕೂಡ ಮಾರಾಟ ಮಾಡುತ್ತಿದ್ದೇವೆ ಎಂದರು.

ಗ್ರಾಹಕರ ಪ್ರತಿಕ್ರಿಯೆ:

ಗ್ರಾಹಕರಾದ ಪ್ರಭಾ ಹಾಗೂ ರಾಮರಾವ್ ಮಾತನಾಡಿ, ಖಾದಿ, ದೇಶಿ ಬಟ್ಟೆಗಳನ್ನು ಧರಿಸುವುದರಿಂದ ಎಲ್ಲ ಕಾಲದಲ್ಲೂ ಉತ್ತಮ ಫೀಲ್ ಇರುತ್ತದೆ. ಖಾದಿ ಬಟ್ಟೆಗಳು ಕೈಯಲ್ಲೇ ಹೊಲಿದು ಮಾಡಿರುವುದರಿಂದ ಚರ್ಮಕ್ಕೆ ಬೇಕಾದಷ್ಟು ಗಾಳಿಯ ಸಂಚಾರ ಇರುತ್ತದೆ. ಬಹಳಾನೇ ಕಂಫರ್ಟ್ ಇರುತ್ತದೆ. 5-6 ವರ್ಷಗಳಿಂದ ಬಳಸುತ್ತಿದ್ದೇವೆ. ಐರನ್ ಇಲ್ಲದೇ ಸುಲಭವಾಗಿ ನಿರ್ವಹಣೆ ಮಾಡಬುದು ಎಂದು ತಿಳಿಸಿದರು.

ಇದನ್ನೂ ಓದಿ: 2023ಕ್ಕೆ ಬಸವರಾಜ ಬೊಮ್ಮಾಯಿ ಮತ್ತೆ CM ಆಗಲಿದ್ದಾರೆ: MP ಪ್ರತಾಪ್ ಸಿಂಹ ಭವಿಷ್ಯ

ನಿವೃತ್ತ ಐ.ಪಿ.ಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್, ಮಾಜಿ ಶಾಸಕರಾದ ಬಿ.ಆರ್. ಪಾಟೀಲ್, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ರಾಷ್ಟ್ರೀಯ ಕಾರ್ಯದರ್ಶಿ ಬಸವರಾಜ್ ಪಾಟೀಲ್ ಇಲ್ಲಿಗೆ ಭೇಟಿ ನೀಡಿದರು.

ಬೆಂಗಳೂರು: ಪವಿತ್ರ ವಸ್ತ್ರ ಅಭಿಯಾನದಡಿ, ಚರಕ, ದೇಶಿ, ಖಾದಿ ಸೇರಿದಂತೆ ವಿವಿಧ ಸಂಘಟನೆಗಳು ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ಉದ್ಘಾಟನೆಗೊಳಿಸಿದರು. ಜೊತೆಗೆ 22,570 ರೂ. ಮೌಲ್ಯದ ಸೀರೆ ಜೊತೆಗೆ ದುಪ್ಪಟ್ಟ, ಪುಸ್ತಕಗಳನ್ನು ಖರೀದಿಸಿದರು.

ಚರಕ ಮಳಿಗೆಯಿಂದ 2, ನಾಸಿಕ್-1, ಮಗ್ಗದ ಖಾದಿ-1, ಟಿಂಬಕ್ಟು ಬ್ರಾಂಡ್​ನ 1 ಸೀರೆ ಖರೀದಿಸಿದರು. ಜೊತೆಗೆ 8 ಪುಸ್ತಕಗಳು ಹಾಗೂ 4 ದುಪ್ಪಟ್ಟಗಳನ್ನು ಖರೀದಿಸಿದರು.

ಕೈಮಗ್ಗ-ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ: ಪ್ರತಿಕ್ರಿಯೆ

ಸ್ವದೇಶಿ ವಸ್ತುಗಳ ಬಳಕೆ:

ಬಳಿಕ ಮಾತನಾಡಿದ ಅವರು, ಚಿತ್ರಕಲಾ ಪರಿಷತ್ತಿನಲ್ಲಿ ವಸ್ತ್ರದ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಖಾದಿಗಾಗಿ ಕೆಲಸ ಮಾಡುತ್ತಿರುವುದು ಪ್ರತಿಷ್ಠಿತ ಸಂಸ್ಥೆ ಚರಕ ಸಂಸ್ಥೆ. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ವೇಳೆ ಸ್ವದೇಶಿ ವಸ್ತುಗಳನ್ನು ಬಳಸಿ ಎಂದಿದ್ದರು. ಇದು ಇಂದಿಗೂ ಪ್ರಸ್ತುತ. ಇಂದೂ ಕೂಡಾ ಚೀನಾದ ವಸ್ತುಗಳನ್ನು ದೂರ ತಳ್ಳಬೇಕು ಎಂದು ಮಾತಾಡುತ್ತಿದ್ದೇವೆ. ಅದೇ ದಾರಿಯಲ್ಲಿ ಪ್ರಸನ್ನ ಅವರ ಪವಿತ್ರ ವಸ್ತ್ರ ಅಭಿಯಾನ ನಡೆಯುತ್ತಿದೆ. ಕೈಮಗ್ಗದ ಬಟ್ಟೆಗಳನ್ನು ಧರಿಸಿದರೆ ಆನಂದವಾಗುತ್ತದೆ. ಬೆಂಗಳೂರಿಗರು ಇಲ್ಲಿಗೆ ಭೇಟಿ ನೀಡಿ ಖರೀದಿಸಿ ಎಂದು ಕರೆ ನೀಡಿದರು.

ಕೈಮಗ್ಗದ ಸೀರೆಗಳು ನನಗೂ ಇಷ್ಟ:

ವೈಯಕ್ತಿಕವಾಗಿ‌ ನನಗೂ ಕೈಮಗ್ಗದ ಸೀರೆಗಳು ಇಷ್ಟ. ಹೆಚ್ಚು ಖಾದಿ ಬಳಸಲು ಪ್ರಯತ್ನಿಸುತ್ತೇನೆ. ಇದೀಗ ನಾಲ್ಕೈದು ಸೀರೆಗಳನ್ನು ಖರೀದಿಸಿರುವುದಾಗಿ ಹೇಳಿದ್ರು.

ಚರಕ, ದೇಶಿ ಸಂಸ್ಥೆಯು ಕೋವಿಡ್ ಸಮಯದಲ್ಲಿ ಹೊರತಂದ ನೈಸರ್ಗಿಕ ಬಣ್ಣದ ಹೊಸ ಶೈಲಿಯ ವಸ್ತ್ರಗಳೊಂದಿಗೆ, ದೇಶದ ಇತರೆ ಭಾಗಗಳಿಂದ ಬಂದಂತಹ ಸುಪ್ರಸಿದ್ಧ ಖಾದಿ ಸಂಸ್ಥೆಗಳಾದ ತಮಿಳುನಾಡಿನ ತುಲಾ ಖಾದಿ, ಮಹಾರಾಷ್ಟ್ರದ ಮಘನ್ ಖಾದಿ, ಸುಮಧ ಖಾದಿ, ಆಂಧ್ರಪ್ರದೇಶದ ಟಿಂಬಕ್ಟು ಖಾದಿ, ಕಲಾ ಸೀಮ ಪದಾರ್ಥಗಳು, ಕೈಮಗ್ಗ ನೇಕಾರರ ಒಕ್ಕೂಟದ ಸಾಂಪ್ರದಾಯಿಕ ಸೀರೆ, ಬಟ್ಟೆ, ಇತರೆ ಉಡುಪುಗಳು, ಫಾರ್ಮ್ ವೇದ, ಇಕ್ರಾ ಸಂಸ್ಥೆಯ ಕೃಷಿ ಉತ್ಪನ್ನಗಳು, ಸಹನಾ, ಚೇತನಾ, ಅಗಸ್ತ್ಯ ಸಂಸ್ಥೆಯ ಕರಕುಶಲ ವಸ್ತುಗಳು ಹೀಗೆ ವಿವಿಧ ಕೈ ಉತ್ಪನ್ನಗಳ ಉತ್ಪಾದಕರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಚಿಕ್ಕಬಳ್ಳಾಪುರದ ರಂಗಕರ್ಮಿ ಹೇಳಿದ್ದು ಹೀಗೆ...

ಟಿಂಬಕ್ಟು ಬ್ರ್ಯಾಂಡ್‌ನಲ್ಲಿ 3,900 ರೂಪಾಯಿಯಿಂದ 10 ಸಾವಿರ ರೂ. ಮೌಲ್ಯದವರೆಗೆ ಸೀರೆಗಳಿವೆ.‌ ಚಿಗುರು ಸಂಸ್ಥೆಯ ಮಣ್ಣಿನ ಜ್ಯುವೆಲ್ಲರಿಗಳು ಎಲ್ಲರ ಗಮನ ಸೆಳೆಯುತ್ತವೆ. ಇವುಗಳನ್ನು ರಾಯಚೂರಿನ 9 ಜನ ಮಹಿಳೆಯರು ಸಿದ್ಧಪಡಿಸಿದ್ದಾರೆ. ಚನ್ನಪಟ್ಟಣದ ಗೊಂಬೆಗಳಿವೆ. ಬೆಳಗಾವಿಯಲ್ಲಿ ಕುರಿ ಉಣ್ಣೆಯಿಂದ ಮಾಡಿರುವ ಮ್ಯಾಟ್​ಗಳು, ವಿಜಯಪುರದ ಜೈಲು ಕೈದಿಗಳು ಚರಕದಿಂದ ನೇಯ್ದಿರುವ ಜಮಖಾನಗಳಿವೆ ಎಂದು ಮಳಿಗೆ ನಿರ್ವಹಣೆ ಮಾಡುತ್ತಿದ್ದ ಚಿಕ್ಕಬಳ್ಳಾಪುರದ ರಂಗಕರ್ಮಿ ದಿಲೀಪ್ ಕುಮಾರ್ ವಿವರಿಸಿದರು.

ವ್ಯಾಪಾಸ್ಥರು ಹೇಳೋದೇನು?

ಕರಕುಶಲ, ಕೈ ಉತ್ಪನ್ನಗಳ ಮಾರಾಟಕ್ಕೆ ಗದಗದಿಂದ ಬಂದಿರುವ ದವಣೇಶ್ ಮಾತನಾಡಿ, 25 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಹುಲ್ಲು, ತೆಂಗಿನಕಡ್ಡಿ ಬಳಸಿ ದಿನಬಳಕೆ ವಸ್ತುಗಳನ್ನು ತಯಾರಿಸುತ್ತಿದ್ದೇವೆ. 15-20 ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ಹೈದರಾಬಾದ್, ಮುಂಬೈನಲ್ಲೂ ಮಾರಾಟ ಮಾಡುತ್ತೇವೆ. ಹ್ಯಾಟ್, ಬ್ಯಾಗ್, ಲ್ಯಾಂಪ್, ಡಸ್ಟ್ ಬಿನ್, ಪೊರಕೆಗಳನ್ನು ಕೂಡ ಮಾರಾಟ ಮಾಡುತ್ತಿದ್ದೇವೆ ಎಂದರು.

ಗ್ರಾಹಕರ ಪ್ರತಿಕ್ರಿಯೆ:

ಗ್ರಾಹಕರಾದ ಪ್ರಭಾ ಹಾಗೂ ರಾಮರಾವ್ ಮಾತನಾಡಿ, ಖಾದಿ, ದೇಶಿ ಬಟ್ಟೆಗಳನ್ನು ಧರಿಸುವುದರಿಂದ ಎಲ್ಲ ಕಾಲದಲ್ಲೂ ಉತ್ತಮ ಫೀಲ್ ಇರುತ್ತದೆ. ಖಾದಿ ಬಟ್ಟೆಗಳು ಕೈಯಲ್ಲೇ ಹೊಲಿದು ಮಾಡಿರುವುದರಿಂದ ಚರ್ಮಕ್ಕೆ ಬೇಕಾದಷ್ಟು ಗಾಳಿಯ ಸಂಚಾರ ಇರುತ್ತದೆ. ಬಹಳಾನೇ ಕಂಫರ್ಟ್ ಇರುತ್ತದೆ. 5-6 ವರ್ಷಗಳಿಂದ ಬಳಸುತ್ತಿದ್ದೇವೆ. ಐರನ್ ಇಲ್ಲದೇ ಸುಲಭವಾಗಿ ನಿರ್ವಹಣೆ ಮಾಡಬುದು ಎಂದು ತಿಳಿಸಿದರು.

ಇದನ್ನೂ ಓದಿ: 2023ಕ್ಕೆ ಬಸವರಾಜ ಬೊಮ್ಮಾಯಿ ಮತ್ತೆ CM ಆಗಲಿದ್ದಾರೆ: MP ಪ್ರತಾಪ್ ಸಿಂಹ ಭವಿಷ್ಯ

ನಿವೃತ್ತ ಐ.ಪಿ.ಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್, ಮಾಜಿ ಶಾಸಕರಾದ ಬಿ.ಆರ್. ಪಾಟೀಲ್, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ರಾಷ್ಟ್ರೀಯ ಕಾರ್ಯದರ್ಶಿ ಬಸವರಾಜ್ ಪಾಟೀಲ್ ಇಲ್ಲಿಗೆ ಭೇಟಿ ನೀಡಿದರು.

Last Updated : Oct 7, 2021, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.