ETV Bharat / city

ಗದ್ದುಗೆ ಗುದ್ದಾಟದಲ್ಲಿ ಗೆಲ್ಲೋಕೆ ಗದ್ದಲ: ಶಿವಾಜಿನಗರ ಅಭ್ಯರ್ಥಿಗಳು ರಣತಂತ್ರದಲ್ಲಿ ಬ್ಯುಸಿ

author img

By

Published : Nov 20, 2019, 8:44 AM IST

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಷನ್​ ಬೇಗ್​ ಬೈ ಎಲೆಕ್ಷನ್​ನಿಂದ ದೂರ ಉಳಿದಿದ್ದು, ಚುನಾವಣೆ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ಬಿಜೆಪಿ ಅಭ್ಯರ್ಥಿ ಶರವಣ, ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ಕ್ಷೇತ್ರ ಗೆಲ್ಲಲು ಶತಾಯಗತಾಯ ಪೈಪೋಟಿಗಿಳಿದಿದ್ದಾರೆ.

ಚುನಾವಣೆಯಲ್ಲಿ ಗೆಲ್ಲೋಕೆ ರಣತಂತ್ರ

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಅಖಾಡ ರಂಗೇರಿದೆ. ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಗೆಲುವಿನ ಹೂಮಾಲೆಗಾಗಿ ಅಭ್ಯರ್ಥಿಗಳು ರಣತಂತ್ರ ಹೆಣೆಯೋದರಲ್ಲಿ ಬ್ಯುಸಿಯಾಗಿದ್ದಾರೆ. ಉಪಚುನಾವಣೆಯಲ್ಲಿ ಅಂತಿಮವಾಗಿ 26 ಅಭ್ಯರ್ಥಿಗಳು ಅಖಾಡಕ್ಕೆ ಈ ಕ್ಷೇತ್ರದಿಂದ ಇಳಿದಿದ್ದು, ಐದು ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.

ನಿನ್ನೆ ನಾಮಪತ್ರ ಪರಿಶೀಲನಾ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ಬಿಜೆಪಿ ಅಭ್ಯರ್ಥಿ ಶರವಣ, ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್, ಕನ್ನಡ ಚಳುವಳಿ ಪಕ್ಷದಿಂದ ವಾಟಾಳ್​ ನಾಗರಾಜ್​ ಹಾಗೂ ಕೆಲವು ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ನಾಮಪತ್ರ ಪರಿಶೀಲನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು.

ಶಿವಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಕನ್ನಡ ಚಳುವಳಿ ಪಕ್ಷದ ಅಭ್ಯರ್ಥಿಗಳ ಆಸ್ತಿ ವಿವರವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಬಹಿರಂಗ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಶರವಣ ಅವರೇ ಕೋಟಿ ಕುಳ ಎನಿಸಿದ್ದಾರೆ. ವಿಶೇಷ ಅಂದ್ರೆ, ಶರವಣ ಅವರ ಆಸ್ತಿಗಿಂತ ಅವರ ಪತ್ನಿಯ ಆಸ್ತಿ ಹೆಚ್ಚಾಗಿದ್ದು, ಶರವಣ ತನ್ನ ಬಳಿ ನಗದು ಇಲ್ಲ ಎಂದು ಆಫಿಡವಿಟ್​ನಲ್ಲಿ ನಮೂದಿಸಿದ್ದಾರೆ.

ನಿನ್ನೆ ಯಾವುದೇ ಪಕ್ಷದ ಅಭ್ಯರ್ಥಿಗಳು ಶಿವಾಜಿನಗರ ಕ್ಷೇತ್ರದಲ್ಲಿ ಪ್ರಚಾರವನ್ನು ಕೈಗೊಳ್ಳಲಿಲ್ಲ. ಬದಲಾಗಿ ಅವರ ಕಚೇರಿಯಲ್ಲಿ ಕುಳಿತು ಚುನಾವಣೆಯನ್ನು ಗೆಲ್ಲುವುದಕ್ಕೆ ಯಾವ ಸ್ಟ್ರಾಟಜಿ ಬಳಸಬಹುದು? ಹೇಗೆ ಮತದಾರರನ್ನು ಸೆಳೆಯಬಹುದು? ಎಂಬ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ರು.

ಶಿವಾಜಿನಗರ ಬೈ ಎಲೆಕ್ಷನ್​ಗೆ ಮಾಜಿ ಸಚಿವ ರೋಷನ್ ಬೇಗ್ ಗುಡ್ ಬೈ ಹೇಳಿರುವುದರಿಂದ, ಹೇಗಾದರೂ ಮಾಡಿ ಗೆಲುವಿನ ಕುದುರೆ ಏರಲೇಬೇಕೆಂಬ ಹಠದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ತಮ್ಮ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಚುನಾವಣೆ ಪ್ರಚಾರ ಕಾರ್ಯದ ಬಗ್ಗೆ ಚರ್ಚಿಸಿದ್ದಾರೆ. ನಾಮಪತ್ರ ಪರಿಶೀಲನೆ ವೇಳೆ ಬಿಬಿಎಂಪಿ ಕಚೇರಿಗೆ ಬೆಳಿಗ್ಗೆ ಆಗಮಿಸಿದ್ದ ಶರವಣ ನಂತರ ತಮ್ಮ ಪಕ್ಷದ ನಾಯಕರ ಭೇಟಿಯಲ್ಲಿ ನಿರತರಾಗಿದ್ದ ಕಾರಣ ಚುನಾವಣಾ ಪ್ರಚಾರ ಕೈಗೊಳ್ಳಲಿಲ್ಲ.

ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮದ್ ವುಲ್ಲಾ ಕೂಡ ಕ್ಯಾಂಪೇನ್ ನಡೆಸಲಿಲ್ಲ. ಬೇಗ್ ಚುನಾವಣೆಯಿಂದ ಹಿಂದೆ ಸರಿದಿರುವುದರಿಂದ ಇದರ ಸಂಪೂರ್ಣ ಲಾಭವನ್ನು ಹೇಗಾದರೂ ಮಾಡಿ ಪಡೆಯಲೇಬೇಕು ಎಂಬ ಲೆಕ್ಕಾಚಾರದಲ್ಲಿ, ಜೆಡಿಎಸ್ ಅಭ್ಯರ್ಥಿ ಶಿವಾಜಿನಗರದಲ್ಲಿ ದೊಡ್ಡಗೌಡ್ರು ಹಾಗೂ ಹೆಚ್​ಡಿಕೆಯನ್ನು ಕರೆತಂದು ಪ್ರಚಾರ ಮಾಡಿಸುವುದಾಗಿ ಹೇಳಿದ್ದಾರೆ.

ಇದೆಲ್ಲದರ ನಡುವೆ ಮಾಜಿ ಸಚಿವ ರೋಷನ್ ಬೇಗ್ ನಿನ್ನೆ ದಿಡೀರನೆ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಬಿಜೆಪಿಗೆ ಬಾಹ್ಯ ಬೆಂಬಲ ಸೂಚಿಸುತ್ತಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ನ.21 ರಿಂದ ಚುನಾವಣಾ ಪ್ರಚಾರ ಕೈಗೊಳ್ಳಲು ಮೂರೂ ಪಕ್ಷದ ಅಭ್ಯರ್ಥಿಗಳು ಸಿದ್ದರಾಗಿದ್ದು, ಹಿರಿಯ ನಾಯಕರನ್ನು ಕರೆತಂದು ಪ್ರಚಾರ ಮಾಡಿಸಿ ಗೆಲುವು ಗಿಟ್ಟಿಸಿಕೊಳ್ಳುವ ತಯಾರಿಯಲ್ಲಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಅಖಾಡ ರಂಗೇರಿದೆ. ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಗೆಲುವಿನ ಹೂಮಾಲೆಗಾಗಿ ಅಭ್ಯರ್ಥಿಗಳು ರಣತಂತ್ರ ಹೆಣೆಯೋದರಲ್ಲಿ ಬ್ಯುಸಿಯಾಗಿದ್ದಾರೆ. ಉಪಚುನಾವಣೆಯಲ್ಲಿ ಅಂತಿಮವಾಗಿ 26 ಅಭ್ಯರ್ಥಿಗಳು ಅಖಾಡಕ್ಕೆ ಈ ಕ್ಷೇತ್ರದಿಂದ ಇಳಿದಿದ್ದು, ಐದು ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.

ನಿನ್ನೆ ನಾಮಪತ್ರ ಪರಿಶೀಲನಾ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ಬಿಜೆಪಿ ಅಭ್ಯರ್ಥಿ ಶರವಣ, ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್, ಕನ್ನಡ ಚಳುವಳಿ ಪಕ್ಷದಿಂದ ವಾಟಾಳ್​ ನಾಗರಾಜ್​ ಹಾಗೂ ಕೆಲವು ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ನಾಮಪತ್ರ ಪರಿಶೀಲನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು.

ಶಿವಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಕನ್ನಡ ಚಳುವಳಿ ಪಕ್ಷದ ಅಭ್ಯರ್ಥಿಗಳ ಆಸ್ತಿ ವಿವರವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಬಹಿರಂಗ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಶರವಣ ಅವರೇ ಕೋಟಿ ಕುಳ ಎನಿಸಿದ್ದಾರೆ. ವಿಶೇಷ ಅಂದ್ರೆ, ಶರವಣ ಅವರ ಆಸ್ತಿಗಿಂತ ಅವರ ಪತ್ನಿಯ ಆಸ್ತಿ ಹೆಚ್ಚಾಗಿದ್ದು, ಶರವಣ ತನ್ನ ಬಳಿ ನಗದು ಇಲ್ಲ ಎಂದು ಆಫಿಡವಿಟ್​ನಲ್ಲಿ ನಮೂದಿಸಿದ್ದಾರೆ.

ನಿನ್ನೆ ಯಾವುದೇ ಪಕ್ಷದ ಅಭ್ಯರ್ಥಿಗಳು ಶಿವಾಜಿನಗರ ಕ್ಷೇತ್ರದಲ್ಲಿ ಪ್ರಚಾರವನ್ನು ಕೈಗೊಳ್ಳಲಿಲ್ಲ. ಬದಲಾಗಿ ಅವರ ಕಚೇರಿಯಲ್ಲಿ ಕುಳಿತು ಚುನಾವಣೆಯನ್ನು ಗೆಲ್ಲುವುದಕ್ಕೆ ಯಾವ ಸ್ಟ್ರಾಟಜಿ ಬಳಸಬಹುದು? ಹೇಗೆ ಮತದಾರರನ್ನು ಸೆಳೆಯಬಹುದು? ಎಂಬ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ರು.

ಶಿವಾಜಿನಗರ ಬೈ ಎಲೆಕ್ಷನ್​ಗೆ ಮಾಜಿ ಸಚಿವ ರೋಷನ್ ಬೇಗ್ ಗುಡ್ ಬೈ ಹೇಳಿರುವುದರಿಂದ, ಹೇಗಾದರೂ ಮಾಡಿ ಗೆಲುವಿನ ಕುದುರೆ ಏರಲೇಬೇಕೆಂಬ ಹಠದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ತಮ್ಮ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಚುನಾವಣೆ ಪ್ರಚಾರ ಕಾರ್ಯದ ಬಗ್ಗೆ ಚರ್ಚಿಸಿದ್ದಾರೆ. ನಾಮಪತ್ರ ಪರಿಶೀಲನೆ ವೇಳೆ ಬಿಬಿಎಂಪಿ ಕಚೇರಿಗೆ ಬೆಳಿಗ್ಗೆ ಆಗಮಿಸಿದ್ದ ಶರವಣ ನಂತರ ತಮ್ಮ ಪಕ್ಷದ ನಾಯಕರ ಭೇಟಿಯಲ್ಲಿ ನಿರತರಾಗಿದ್ದ ಕಾರಣ ಚುನಾವಣಾ ಪ್ರಚಾರ ಕೈಗೊಳ್ಳಲಿಲ್ಲ.

ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮದ್ ವುಲ್ಲಾ ಕೂಡ ಕ್ಯಾಂಪೇನ್ ನಡೆಸಲಿಲ್ಲ. ಬೇಗ್ ಚುನಾವಣೆಯಿಂದ ಹಿಂದೆ ಸರಿದಿರುವುದರಿಂದ ಇದರ ಸಂಪೂರ್ಣ ಲಾಭವನ್ನು ಹೇಗಾದರೂ ಮಾಡಿ ಪಡೆಯಲೇಬೇಕು ಎಂಬ ಲೆಕ್ಕಾಚಾರದಲ್ಲಿ, ಜೆಡಿಎಸ್ ಅಭ್ಯರ್ಥಿ ಶಿವಾಜಿನಗರದಲ್ಲಿ ದೊಡ್ಡಗೌಡ್ರು ಹಾಗೂ ಹೆಚ್​ಡಿಕೆಯನ್ನು ಕರೆತಂದು ಪ್ರಚಾರ ಮಾಡಿಸುವುದಾಗಿ ಹೇಳಿದ್ದಾರೆ.

ಇದೆಲ್ಲದರ ನಡುವೆ ಮಾಜಿ ಸಚಿವ ರೋಷನ್ ಬೇಗ್ ನಿನ್ನೆ ದಿಡೀರನೆ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಬಿಜೆಪಿಗೆ ಬಾಹ್ಯ ಬೆಂಬಲ ಸೂಚಿಸುತ್ತಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ನ.21 ರಿಂದ ಚುನಾವಣಾ ಪ್ರಚಾರ ಕೈಗೊಳ್ಳಲು ಮೂರೂ ಪಕ್ಷದ ಅಭ್ಯರ್ಥಿಗಳು ಸಿದ್ದರಾಗಿದ್ದು, ಹಿರಿಯ ನಾಯಕರನ್ನು ಕರೆತಂದು ಪ್ರಚಾರ ಮಾಡಿಸಿ ಗೆಲುವು ಗಿಟ್ಟಿಸಿಕೊಳ್ಳುವ ತಯಾರಿಯಲ್ಲಿದ್ದಾರೆ.

Intro:ಚುನಾವಣೆಯಲ್ಲಿ ಗೆಲ್ಲೋಕೆ ರಣತಂತ್ರ ಹೆಣೆಯೋದರಲ್ಲಿ ಬ್ಯುಸಿಯಾದ ಅಭ್ಯರ್ಥಿಗಳು, ಶಿವಾಜಿನಗರ ಒವರ್ ಆಲ್ ಪ್ಯಾಕೇಜ್,

ರಾಜ್ಯದಲ್ಲಿ ಬೈ ಎಲೆಕ್ಷನ್ ಭರಾಟೆ ಭರ್ಜರಿಯಾಗಿದ್ದು, ಬೆಂಗಳೂರು ನಗರದ ನಾಲ್ಕು ಕ್ಷೇತ್ರಗಳಲ್ಲಿ ತುಂಬಾ ಸೂಕ್ಷ್ಮ ಕ್ಷೇತ್ರವಾದ ಶಿವಾಜಿನಗರದಲ್ಲಿ ಚುನಾವಣಾ
ಕಣದಲ್ಲಿ ಗೆಲುವಿನ ಹೂಮಾಲೆಗಾಗಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ರಣತಂತ್ರ ಹೆಣೆಯೊದರಲ್ಲಿ ಇಂದು ಬ್ಯುಸಿಯಾಗಿದ್ರು. ಶಿವಾಜಿನಗರ ಉಪಚುನಾವಣೆಯಲ್ಲಿ ಅಂತಿಮವಾಗಿ 26 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಐದು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ,
ಇಂದು ನಮ್ಮ ಪತ್ರ ಪರಿಶೀಲನೆ ನಡೆಸಿದ ಕರಣ ಬೆಳಗ್ಗೆ ಕಾಂಗ್ರೆಸ್ ನ ಅಭ್ಯರ್ಥಿ ರಿಜ್ವಾನ್ ಹರ್ಷದ್ ಬಿಜೆಪಿ ಅಭ್ಯರ್ಥಿ ಶರವಣ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ಹಾಗೂ ಕೆಲವು ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಪರಿಶೀಲನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು

ಇನ್ನೂ ಶಿವಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಕಾಂಗ್ರೆಸ್ ಬಿಜೆಪಿ , ಕನ್ನಡ ಚಳುವಳಿ ಪಕ್ಷದ ಅಭ್ಯರ್ಥಿಗಳು ಆಸ್ತಿ ವಿವರವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಬಹಿರಂಗ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಶರವಣ ಅವರೇ ಕೋಟಿ ಕುಳ ಎನಿಸಿದ್ದಾರೆ. ವಿಶೇಷ ಅಂದ್ರೆ ಶರವಣ ಅವರ ಆಸ್ತಿಗಿಂತ ಅವರ ಪತ್ನಿ ಆಸ್ತಿಯ ಹೆಚ್ಚಾಗಿದ್ದು, ಶರಣ ಅವರು ನಗದು ನನ್ನ ಬಳಿ ಇಲ್ಲ ಎಂದು ಆಫಿಡವಿಟ್ ನಲ್ಲಿ ನಮೂದಿಸಿದ್ದಾರೆ.Body:ಇನ್ನೂ ಶಿವಾಜಿನಗರ ಕ್ಷೇತ್ರದಲ್ಲಿ ಇಂದು ಯಾವುದೇ ಪಕ್ಷದ ಅಭ್ಯರ್ಥಿಗಳು ತಮ್ಮ ಚುನಾವಣೆ ಪ್ರಚಾರವನ್ನು ಕೈಗೊಳ್ಳಲಿಲ್ಲ, ಬದಲಾಗಿ ಅವರ ಕಚೇರಿಯಲ್ಲಿ ಕುಳಿತು ಚುನಾವಣೆಯನ್ನು ಗೆಲ್ಲುವುದಕ್ಕೆಯಾವ ಸ್ಟಾಟರ್ಜಿಯಲ್ಲಿ
ಮತದಾರ ಪ್ರಭುಗಳನ್ನು ತನ್ನತ್ತ ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ರು

ಶಿವಾಜಿನಗರ ಬೈ ಎಲೆಕ್ಷನ್ ಗೆ ಮಾಜಿ ಸಚಿವ ರೋಷನ್ ಬೇಗ್ ಗುಡ್ ಬೈ ಹೇಳಿರುವುದರಿಂದ. ಹೇಗಾದರು ಮಾಡಿ ಗೆಲುವಿನ ಕುದುರೆ ಏರಲೇ ಬೇಕೆಂಬ ಹಠದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ತಮ್ಮ ಪಕ್ಷದ ಹಿರಿಯ ನಾಯಕ ಭೇಟಿ ಮಾಡಿ ಚುನಾವಣೆ ಪ್ರಚಾರ ಕಾರ್ಯದ ಬಗ್ಗೆ ಚರ್ಚಿಸಿ್ರದ್ದಾರೆ.

ಇನ್ನು ನಾಮಪತ್ರ ಪರಿಶೀಲನೆ ವೇಳೆ ಬಿಬಿಎಂಪಿ ಕಚೇರಿ ಬೆಳಿಗ್ಗೆ ಆಗಮಿಸಿದ್ದ ಶರವಣ ನಂತರ ತಮ್ಮ ಪಕ್ಷದ ನಾಯಕರ ಭೇಟಿಯಲ್ಲಿ ಬ್ಯುಸಿಯಾಗಿದ್ದ ಕಾರಣ ಇಂದು ಚುನಾವಣಾ ಪ್ರಚಾರ ಮಾಡಲಿಲ್ಲ,,Conclusion:ಅದೇ ರೀತಿ ಜೆಡಿ ಎಸ್ ಅಭ್ಯರ್ಥಿ ತನ್ವೀರ್ ಅಹಮದ್ ವುಲ್ಲಾ ಕೂಡ ಇಂದು ಚುನಾವಣಾ ಪ್ರಚಾರನಡೆಸಲಿಲ್ಲ
ರೋಶನ್ ಬೇಗ್ ಚುನಾವಣೆಯಿಂದ ಹಿಂದೆ ಸರಿದಿರುವುದರಿಂದ . ಇದರ ಸಂಪೂರ್ಣ ಲಾಭವನ್ನು ಹೇಗಾದರೂಮಾಡಿಪಡೆಯಲೇಬೇಕುಎಂಬಲೆಕ್ಕಾಚಾರದಲ್ಲಿ,ಜೆಡಿಎಸ್ ಅಭ್ಯರ್ಥಿ ಶಿವಾಜಿನಗರದಲ್ಲಿ ದೊಡ್ಡಗೌಡ್ರು ಹಾಗೂ ಮಾಜಿ ಮುಖ್ಯಮಂತ್ರಿಗಳ ಕರೆತಂದು ಪ್ರಚಾರ ಮಾಡಿಸುವುದಾಗಿ ಹೇಳಿದ್ದಾರೆ.

ಇದೆಲ್ಲದರ ನಡುವೆ ನಿನ್ನೆಯಿಂದ ಕಾಣೆಯಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಇಂದು ಧಿಡೀರನೆ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿಯಡಿಯೂರಪ್ಪ
ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಬಿಜೆಪಿಗೆ ಬಾಹ್ಯ ಬೆಂಬಲ ಸೂಚಿಸುತ್ತಾರೆ ಎಂಬ ಕುತೂಹಲ ರಾಜಕೀಯವಲಯದಲ್ಲಿ ಕೇಳಿ ಬಂದಿದೆ.

೨೧ ನೇ ತಾರೀಖಿನಿಂದ ಚುನಾವಣ ಪ್ರಚಾರ ಕೈಗೊಳ್ಳಲು
ಮೂರು ಪಕ್ಷದ ಅಭ್ಯರ್ಥಿಗಳು ಸಿದ್ದರಾಗಿದ್ದು, ಹಿರಿಯ ನಾಯಕರನ್ನು ಕರೆತಂದು ಪ್ರಚಾರ ಮಾಡಿಸಿ ಗೆಲುವು ಗಿಟ್ಟಿಸಿಕೊಳ್ಳೊ ತಯಾರಿಯಲ್ಲಿದ್ದಾರೆ.


ಸತೀಶ ಎಂಬಿ


ETV Bharat Logo

Copyright © 2024 Ushodaya Enterprises Pvt. Ltd., All Rights Reserved.