ETV Bharat / city

ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಬೆಂಗಳೂರು ಪೊಲೀಸರ ಕಟ್ಟೆಚ್ಚರ

author img

By

Published : Aug 14, 2022, 1:21 PM IST

ಈ ಬಾರಿ ಬೆಂಗಳೂರು ಪೊಲೀಸರ ಮಾಣಿಕ್ ಷಾ ಮೈದಾನವಷ್ಟೇ ಅಲ್ಲ, ನಗರದ ಬೇರೆ ಬೇರೆ ಕಾರ್ಯಕ್ರಮಗಳಿಗೂ ಭದ್ರತೆ ಕೈಗೊಳ್ಳಬೇಕಿದೆ.

Bengaluru Police is all set
ಸ್ವಾತಂತ್ರ್ಯ ಅಮೃತಮಹೋತ್ಸವಕ್ಕೆ ಬೆಂಗಳೂರು ಪೊಲೀಸ್​ ಸರ್ವ ಸನ್ನದ

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ದೇಶದ ಜನರು ತುದಿಗಾಲಲ್ಲಿ ನಿಂತಿದ್ದಾರೆ. ವಿಶೇಷ ದಿನಕ್ಕೆ ಬೆಂಗಳೂರು ಪೊಲೀಸರೂ ಸಜ್ಜಾಗಿದ್ದು ಈ ಸಲ ಸ್ವಾತಂತ್ರ್ಯ ದಿನದ ಸಂಭ್ರಮದ ಜೊತೆಗೆ ಒಂದಷ್ಟು ಒತ್ತಡ ಕೂಡಾ ಹೆಚ್ಚಲಿದೆ. ಮಾಣಿಕ್ ಷಾ ಮೈದಾನದೊಂದಿಗೆ ನಗರದ ಬೇರೆ ಬೇರೆ ಕಾರ್ಯಕ್ರಮಗಳಿಗೂ ಪೊಲೀಸರು ಭದ್ರತೆ ಒದಗಿಸಬೇಕಿದೆ.

ಮಾಣಿಕ್ ಷಾ ಗ್ರೌಂಡ್, ಈದ್ಗಾ ಮೈದಾನಕ್ಕೂ ಭದ್ರತೆ: ಮಾಣಿಕ್ ಷಾ ಗ್ರೌಂಡ್​ಗೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ನಿಯೋಜನೆಯಾಗಿದ್ದಾರೆ. ಹೆಚ್ಚುವರಿ ಆಯುಕ್ತರು 1, ಡಿಸಿಪಿಗಳು 10, ಎಸಿಪಿಗಳು 19, ಇನ್​ಸ್ಪೆಕ್ಟರ್ 50, ಪಿಎಸ್​ಐ 100, ಮಹಿಳಾ ಪಿಎಸ್​ಐ 15, ಎಎಸ್ಐ 80, ಕಾನ್​ಸ್ಟೆಬಲ್ 650, ಗಸ್ತಿನಲ್ಲಿರುವ ಪೊಲೀಸರು 150, ಕೆಎಸ್​ಆರ್​ಪಿ 10 ತುಕಡಿ, ಕ್ಯುಆರ್​ಟಿ 1, ಡಿ ಸ್ವ್ಯಾಟ್ 1, ಆರ್​ಎಎಫ್ 1. ಇದರ ಜೊತೆಗೆ ಈದ್ಗಾ ಮೈದಾನದ ಭದ್ರತೆ ಕೂಡ ಹೆಚ್ಚುವರಿಯಾಗಿದೆ.

ಇಷ್ಟೇ ಅಲ್ಲದೆ ಕಾಂಗ್ರೆಸ್ ಅಜಾದಿ ಯಾತ್ರೆ ಹಮ್ಮಿಕೊಂಡಿದ್ದು, ಆರು ಕಿ.ಮೀ ಯಾತ್ರೆಗೂ ಪೊಲೀಸರು ಭದ್ರತೆ ಮಾಡಿಕೊಂಡಿದ್ದಾರೆ. 4 ಡಿಸಿಪಿಗಳು, 15 ಎಸಿಪಿಗಳು, 20 ಇನ್​ಸ್ಪೆಕ್ಟರ್, 24 ಪಿಎಸ್​ಐ, 3 ಮಹಿಳಾ ಪಿಎಸ್​ಐ, 15 ಎಎಸ್​ಐ, 500 ಕಾನ್​ಸ್ಟೆಬಲ್, 5 ಕೆಎಸ್​ಆರ್​ಪಿ ತುಕಡಿ, 6 ಸಿಎಆರ್ ತುಕಡಿ ಭದ್ರತೆಗೆ ನಿಯೋಜನೆಯಾಗಿದೆ‌.

ಬಿಜೆಪಿ ಕಾರ್ಯಕ್ರಮಕ್ಕೆ 300 ಪೊಲೀಸರಿಂದ ಭದ್ರತೆ ಮಾಡಿಕೊಂಡಿದೆ. ಆಗಸ್ಟ್ 15ರಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಕೊನೇ ದಿನವಾಗಿದ್ದು ಸಾಕಷ್ಟು ಜನರ ಆಗಮನದ ನಿರೀಕ್ಷೆಯಿದೆ. ಹೀಗಾಗಿ ಅಲ್ಲಿಯೂ ಪೊಲೀಸರು ಭದ್ರತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಆದ್ಧೂರಿ ಸ್ವಾತಂತ್ರ್ಯ ದಿನಾಚರಣೆಗೆ ರಾಜಧಾನಿ ಸಿದ್ಧ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ದೇಶದ ಜನರು ತುದಿಗಾಲಲ್ಲಿ ನಿಂತಿದ್ದಾರೆ. ವಿಶೇಷ ದಿನಕ್ಕೆ ಬೆಂಗಳೂರು ಪೊಲೀಸರೂ ಸಜ್ಜಾಗಿದ್ದು ಈ ಸಲ ಸ್ವಾತಂತ್ರ್ಯ ದಿನದ ಸಂಭ್ರಮದ ಜೊತೆಗೆ ಒಂದಷ್ಟು ಒತ್ತಡ ಕೂಡಾ ಹೆಚ್ಚಲಿದೆ. ಮಾಣಿಕ್ ಷಾ ಮೈದಾನದೊಂದಿಗೆ ನಗರದ ಬೇರೆ ಬೇರೆ ಕಾರ್ಯಕ್ರಮಗಳಿಗೂ ಪೊಲೀಸರು ಭದ್ರತೆ ಒದಗಿಸಬೇಕಿದೆ.

ಮಾಣಿಕ್ ಷಾ ಗ್ರೌಂಡ್, ಈದ್ಗಾ ಮೈದಾನಕ್ಕೂ ಭದ್ರತೆ: ಮಾಣಿಕ್ ಷಾ ಗ್ರೌಂಡ್​ಗೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ನಿಯೋಜನೆಯಾಗಿದ್ದಾರೆ. ಹೆಚ್ಚುವರಿ ಆಯುಕ್ತರು 1, ಡಿಸಿಪಿಗಳು 10, ಎಸಿಪಿಗಳು 19, ಇನ್​ಸ್ಪೆಕ್ಟರ್ 50, ಪಿಎಸ್​ಐ 100, ಮಹಿಳಾ ಪಿಎಸ್​ಐ 15, ಎಎಸ್ಐ 80, ಕಾನ್​ಸ್ಟೆಬಲ್ 650, ಗಸ್ತಿನಲ್ಲಿರುವ ಪೊಲೀಸರು 150, ಕೆಎಸ್​ಆರ್​ಪಿ 10 ತುಕಡಿ, ಕ್ಯುಆರ್​ಟಿ 1, ಡಿ ಸ್ವ್ಯಾಟ್ 1, ಆರ್​ಎಎಫ್ 1. ಇದರ ಜೊತೆಗೆ ಈದ್ಗಾ ಮೈದಾನದ ಭದ್ರತೆ ಕೂಡ ಹೆಚ್ಚುವರಿಯಾಗಿದೆ.

ಇಷ್ಟೇ ಅಲ್ಲದೆ ಕಾಂಗ್ರೆಸ್ ಅಜಾದಿ ಯಾತ್ರೆ ಹಮ್ಮಿಕೊಂಡಿದ್ದು, ಆರು ಕಿ.ಮೀ ಯಾತ್ರೆಗೂ ಪೊಲೀಸರು ಭದ್ರತೆ ಮಾಡಿಕೊಂಡಿದ್ದಾರೆ. 4 ಡಿಸಿಪಿಗಳು, 15 ಎಸಿಪಿಗಳು, 20 ಇನ್​ಸ್ಪೆಕ್ಟರ್, 24 ಪಿಎಸ್​ಐ, 3 ಮಹಿಳಾ ಪಿಎಸ್​ಐ, 15 ಎಎಸ್​ಐ, 500 ಕಾನ್​ಸ್ಟೆಬಲ್, 5 ಕೆಎಸ್​ಆರ್​ಪಿ ತುಕಡಿ, 6 ಸಿಎಆರ್ ತುಕಡಿ ಭದ್ರತೆಗೆ ನಿಯೋಜನೆಯಾಗಿದೆ‌.

ಬಿಜೆಪಿ ಕಾರ್ಯಕ್ರಮಕ್ಕೆ 300 ಪೊಲೀಸರಿಂದ ಭದ್ರತೆ ಮಾಡಿಕೊಂಡಿದೆ. ಆಗಸ್ಟ್ 15ರಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಕೊನೇ ದಿನವಾಗಿದ್ದು ಸಾಕಷ್ಟು ಜನರ ಆಗಮನದ ನಿರೀಕ್ಷೆಯಿದೆ. ಹೀಗಾಗಿ ಅಲ್ಲಿಯೂ ಪೊಲೀಸರು ಭದ್ರತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಆದ್ಧೂರಿ ಸ್ವಾತಂತ್ರ್ಯ ದಿನಾಚರಣೆಗೆ ರಾಜಧಾನಿ ಸಿದ್ಧ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.