ಬೆಂಗಳೂರು: ಸಿಎಎ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಎತ್ತಿದ ಅಮೂಲ್ಯ ಲಿಯೋನ ಅವರಿಗೆ (ದೇಶದ್ರೋಹದ ಆರೋಪ) ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜಾಮೀನು ನಿರಾಕರಿಸಿದೆ.
ಜೊತೆಗೆ ಆಕೆಯನ್ನು ಫೆ.23ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಸೂಚಿಸಿದೆ. ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಹಿಂದೂ-ಮುಸ್ಲಿಂ-ಸಿಖ್-ಇಸಾಯಿ ಒಕ್ಕೂಟ ಹಾಗೂ ಟಿಪ್ಪು ಸುಲ್ತಾನ್ ಸಂಘಟನೆ ಫ್ರೀಡಂಪಾರ್ಕ್ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅಮೂಲ್ಯ , ಪಾಕ್ ಪರ ಘೋಷಣೆ ಕೂಗಿದ್ದರು.
ವಿಕ್ಟರಿ ಸಿಂಬಲ್ ತೋರಿಸಿದ ಅಮೂಲ್ಯ:
ದೇಶದ್ರೋಹದ ಆರೋಪ ಹೊತ್ತ ಅಮೂಲ್ಯ ಅವರನ್ನು ನಗರ ಪೊಲೀಸರು ವಿಚಾರಣೆಗೆಂದು ನ್ಯಾಯಮೂರ್ತಿಗಳ ಮುಂದೆ ಹಾಜರಿಪಡಿಸಲು ಜಡ್ಜ್ ಮನೆಗೆ ತಡರಾತ್ರಿ ಕರೆತಂದರು. ಜಡ್ಜ್ ಮನೆ ಒಳಗೆ ಹೋಗುವಾಗ ಮಾಧ್ಯಮಗಳತ್ತ ನೋಡಿದ ಅಮೂಲ್ಯ, ವಿಕ್ಟರಿ ಸಿಂಬಲ್ ತೋರಿಸಿದರು.