ETV Bharat / city

ಬಜೆಟ್​ನಲ್ಲಿ ಕಲ್ಯಾಣ ನಿಧಿಗೆ 100 ಕೋಟಿ ರೂ ಮೀಸಲಿಡುವಂತೆ ವಕೀಲರ ಪರಿಷತ್ತು ಒತ್ತಾಯ - Advocates' Council

ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವಕೀಲರಿದ್ದು, ಅವರ ಏಳಿಗೆಗಾಗಿ 100 ಕೋಟಿ ರುಪಾಯಿ ಹಣ ಮೀಸಲಿಡುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಒತ್ತಾಯಿಸಿದೆ.

Advocates' Council urges to allocate Rs 100 crore in budget
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ
author img

By

Published : Feb 15, 2020, 8:13 PM IST

ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವಕೀಲರಿದ್ದು, ಅವರ ಏಳಿಗೆಗಾಗಿ 100 ಕೋಟಿ ರುಪಾಯಿ ಹಣ ಮೀಸಲಿಡುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಒತ್ತಾಯಿಸಿದೆ.

ಸರ್ಕಾರ ಮಾರ್ಚ್​ 5ರಂದು ಬಜೆಟ್ ಮಂಡಿಸಲಿದೆ. ಈ ಹಿನ್ನೆಲೆಯಲ್ಲಿ ಪರಿಷತ್​ನ ಅಧ್ಯಕ್ಷ ಜೆ.ಎಮ್.ಅನಿಲ್ ಕುಮಾರ್, ಉಪಾಧ್ಯಕ್ಷ ಶಿವಕುಮಾರ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ನೇತೃತ್ವದ ವಕೀಲರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಪರಿಗಣಿಸುವಂತೆ ಮನವಿ ಮಾಡಿದೆ.

ವಕೀಲ ಸಮುದಾಯದ ಬೇಡಿಕೆಗಳು:

  • ಮುಖ್ಯಮಂತ್ರಿಗೆ ಸಲ್ಲಿಸಿರುವ ಪತ್ರದಲ್ಲಿ ವಕೀಲರಿಗೆ ಕಲ್ಯಾಣ ನಿಧಿಯಾಗಿ 100 ಕೋಟಿ ರೂ ಮೀಸಲಿಡಬೇಕು.
  • ವಕೀಲರ ಮೇಲಿನ ಹಲ್ಲೆ, ದೌರ್ಜನ್ಯಗಳನ್ನು ತಡೆಯಲು ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು.
  • ರಾಜ್ಯ ವಕೀಲರ ಪರಿಷತ್ತು ಕಾರ್ಯ ನಿರ್ವಹಿಸಲು ಸ್ವಂತ ಕಟ್ಟಡ ಒದಗಿಸಬೇಕು.
  • ವಕೀಲರ ಸಮ್ಮೇಳನ ನಡೆಸಲು 75 ಲಕ್ಷ ರೂ ಅನುದಾನ ನೀಡಬೇಕು.
  • ಯುವ ವಕೀಲರಿಗೆ ಮೌಲ್ಯಾಧಾರಿತ ವೃತ್ತಿ ತರಬೇತಿ ನೀಡಲು ಅಗತ್ಯವಿರುವ ಅಕಾಡೆಮಿಗಳನ್ನು ಸ್ಥಾಪಿಸಬೇಕು.
  • ಹಿಂದುಳಿದ ವರ್ಗಗಳ ಯುವ ವಕೀಲರಿಗೆ ನೀಡುತ್ತಿರುವ ಸ್ಟೇಫಂಡ್ ಮೊತ್ತ ಹೆಚ್ಚಿಸಬೇಕು.
  • ಜಿಲ್ಲಾ ಮತ್ತು ತಾಲೂಕು ಕೇಂದ್ರ ವಕೀಲರ ಸಂಘಗಳ ಕಚೇರಿಗಳಲ್ಲಿ ಇ-ಲೈಬ್ರರಿ ಸ್ಥಾಪಿಸಬೇಕು.
    ಜೆ.ಎಮ್.ಅನಿಲ್​ಕುಮಾರ್​

ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವಕೀಲರಿದ್ದು, ಅವರ ಏಳಿಗೆಗಾಗಿ 100 ಕೋಟಿ ರುಪಾಯಿ ಹಣ ಮೀಸಲಿಡುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಒತ್ತಾಯಿಸಿದೆ.

ಸರ್ಕಾರ ಮಾರ್ಚ್​ 5ರಂದು ಬಜೆಟ್ ಮಂಡಿಸಲಿದೆ. ಈ ಹಿನ್ನೆಲೆಯಲ್ಲಿ ಪರಿಷತ್​ನ ಅಧ್ಯಕ್ಷ ಜೆ.ಎಮ್.ಅನಿಲ್ ಕುಮಾರ್, ಉಪಾಧ್ಯಕ್ಷ ಶಿವಕುಮಾರ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ನೇತೃತ್ವದ ವಕೀಲರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಪರಿಗಣಿಸುವಂತೆ ಮನವಿ ಮಾಡಿದೆ.

ವಕೀಲ ಸಮುದಾಯದ ಬೇಡಿಕೆಗಳು:

  • ಮುಖ್ಯಮಂತ್ರಿಗೆ ಸಲ್ಲಿಸಿರುವ ಪತ್ರದಲ್ಲಿ ವಕೀಲರಿಗೆ ಕಲ್ಯಾಣ ನಿಧಿಯಾಗಿ 100 ಕೋಟಿ ರೂ ಮೀಸಲಿಡಬೇಕು.
  • ವಕೀಲರ ಮೇಲಿನ ಹಲ್ಲೆ, ದೌರ್ಜನ್ಯಗಳನ್ನು ತಡೆಯಲು ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು.
  • ರಾಜ್ಯ ವಕೀಲರ ಪರಿಷತ್ತು ಕಾರ್ಯ ನಿರ್ವಹಿಸಲು ಸ್ವಂತ ಕಟ್ಟಡ ಒದಗಿಸಬೇಕು.
  • ವಕೀಲರ ಸಮ್ಮೇಳನ ನಡೆಸಲು 75 ಲಕ್ಷ ರೂ ಅನುದಾನ ನೀಡಬೇಕು.
  • ಯುವ ವಕೀಲರಿಗೆ ಮೌಲ್ಯಾಧಾರಿತ ವೃತ್ತಿ ತರಬೇತಿ ನೀಡಲು ಅಗತ್ಯವಿರುವ ಅಕಾಡೆಮಿಗಳನ್ನು ಸ್ಥಾಪಿಸಬೇಕು.
  • ಹಿಂದುಳಿದ ವರ್ಗಗಳ ಯುವ ವಕೀಲರಿಗೆ ನೀಡುತ್ತಿರುವ ಸ್ಟೇಫಂಡ್ ಮೊತ್ತ ಹೆಚ್ಚಿಸಬೇಕು.
  • ಜಿಲ್ಲಾ ಮತ್ತು ತಾಲೂಕು ಕೇಂದ್ರ ವಕೀಲರ ಸಂಘಗಳ ಕಚೇರಿಗಳಲ್ಲಿ ಇ-ಲೈಬ್ರರಿ ಸ್ಥಾಪಿಸಬೇಕು.
    ಜೆ.ಎಮ್.ಅನಿಲ್​ಕುಮಾರ್​
ETV Bharat Logo

Copyright © 2025 Ushodaya Enterprises Pvt. Ltd., All Rights Reserved.