ETV Bharat / city

ಲಾಕ್​ಡೌನ್​ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಅಗತ್ಯ: ಸರ್ಕಾರಕ್ಕೆ ಕೈ ನಾಯಕರ ಸಲಹೆ - ಸರ್ಕಾರಕ್ಕೆ ಸಲಹೆ ನೀಡಿ ಕಾಂಗ್ರೆಸ್​ ನಾಯಕರು ಟ್ವೀಟ್

ಲಾಕ್​ಡೌನ್​ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಸಲಹೆ ನೀಡಿದ್ದಾರೆ.

Congress leaders tweet
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
author img

By

Published : Apr 11, 2020, 5:40 PM IST

ಬೆಂಗಳೂರು: ಲಾಕ್​ಡೌನ್​ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

  • ಲಾಕ್ ಡೌನ್‌ನಿಂದಾಗಿ ಕಚ್ಛಾ ವಸ್ತುಗಳ ಪೂರೈಕೆ ಸ್ಥಗಿತಗೊಂಡು ರಾಜ್ಯದಾದ್ಯಂತ ನೇಕಾರರು ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ.

    ರಾಜ್ಯ ಸರ್ಕಾರ ನಿತ್ಯಬದುಕಿಗಾಗಿ ರೂ.೫,೦೦೦ ಮತ್ತು ದುಡಿಮೆ ಬಂಡವಾಳವಾಗಿ ರೂ.೫೦,೦೦೦ ನೀಡಬೇಕೆಂಬ ಅವರ ಬೇಡಿಕೆ ನ್ಯಾಯಬದ್ಧವಾಗಿದೆ. @CMofKarnataka ತಕ್ಷಣ ಗಮನಹರಿಸಿ ನೆರವಾಗಬೇಕು. pic.twitter.com/tp04Tqbv0u

    — Siddaramaiah (@siddaramaiah) April 11, 2020 " class="align-text-top noRightClick twitterSection" data=" ">


ಮಾಜಿ ಸಿಎಂ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್​​​ ಮಾಡಿ, ಲಾಕ್​​ಡೌನ್‌ನಿಂದಾಗಿ ಕಚ್ಛಾ ವಸ್ತುಗಳ ಪೂರೈಕೆ ಸ್ಥಗಿತಗೊಂಡು ರಾಜ್ಯದಾದ್ಯಂತ ನೇಕಾರರು ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಜನರ ನಿತ್ಯ ಬದುಕಿಗಾಗಿ 5,000 ಮತ್ತು ದುಡಿಮೆ ಬಂಡವಾಳವಾಗಿ 50000 ರೂ. ನೀಡಬೇಕೆಂಬ ಬೇಡಿಕೆ ನ್ಯಾಯಬದ್ಧವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಕ್ಷಣ ಗಮನ ಹರಿಸಿ ನೆರವಾಗಬೇಕು ಎಂದಿದ್ದಾರೆ.

Congress leaders tweet
ಮಾಜಿ ಸಚಿವ ಎಂ.ಬಿ.ಪಾಟೀಲ್


ಮಾಜಿ ಸಚಿವ ಎಂ.ಬಿ.ಪಾಟೀಲ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರು ಅತ್ಯಂತ ಪ್ರಮುಖವಾಗಿ ಗಮನಿಸಬೇಕಾದ ವಿಚಾರ ಇಲ್ಲಿದೆ. ಆಫ್ರಿಕಾ ಖಂಡದ ಕೆಲ ರಾಷ್ಟ್ರಗಳು ಮತ್ತು ನಮ್ಮ ದೇಶದ ನೆರೆಯ ಕೆಲ ರಾಷ್ಟ್ರಗಳಿಗೆ ಸೋಂಕು ತಗುಲುತ್ತಿರುವ ಕಾರಣ ಮಿಡತೆ ಹಿಂಡುಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕಾಗಿದೆ. ಅಲ್ಲದೆ ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಯಾವುದೇ ರೀತಿ ಆಕಸ್ಮಿಕವಾಗಿ ಅದು ನಮ್ಮ ರಾಷ್ಟ್ರದ ಮೇಲೆ ಪರಿಣಾಮ ಬೀರಿದರೆ ಅದು ಬರಗಾಲವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.

ಬೆಂಗಳೂರು: ಲಾಕ್​ಡೌನ್​ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

  • ಲಾಕ್ ಡೌನ್‌ನಿಂದಾಗಿ ಕಚ್ಛಾ ವಸ್ತುಗಳ ಪೂರೈಕೆ ಸ್ಥಗಿತಗೊಂಡು ರಾಜ್ಯದಾದ್ಯಂತ ನೇಕಾರರು ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ.

    ರಾಜ್ಯ ಸರ್ಕಾರ ನಿತ್ಯಬದುಕಿಗಾಗಿ ರೂ.೫,೦೦೦ ಮತ್ತು ದುಡಿಮೆ ಬಂಡವಾಳವಾಗಿ ರೂ.೫೦,೦೦೦ ನೀಡಬೇಕೆಂಬ ಅವರ ಬೇಡಿಕೆ ನ್ಯಾಯಬದ್ಧವಾಗಿದೆ. @CMofKarnataka ತಕ್ಷಣ ಗಮನಹರಿಸಿ ನೆರವಾಗಬೇಕು. pic.twitter.com/tp04Tqbv0u

    — Siddaramaiah (@siddaramaiah) April 11, 2020 " class="align-text-top noRightClick twitterSection" data=" ">


ಮಾಜಿ ಸಿಎಂ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್​​​ ಮಾಡಿ, ಲಾಕ್​​ಡೌನ್‌ನಿಂದಾಗಿ ಕಚ್ಛಾ ವಸ್ತುಗಳ ಪೂರೈಕೆ ಸ್ಥಗಿತಗೊಂಡು ರಾಜ್ಯದಾದ್ಯಂತ ನೇಕಾರರು ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಜನರ ನಿತ್ಯ ಬದುಕಿಗಾಗಿ 5,000 ಮತ್ತು ದುಡಿಮೆ ಬಂಡವಾಳವಾಗಿ 50000 ರೂ. ನೀಡಬೇಕೆಂಬ ಬೇಡಿಕೆ ನ್ಯಾಯಬದ್ಧವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಕ್ಷಣ ಗಮನ ಹರಿಸಿ ನೆರವಾಗಬೇಕು ಎಂದಿದ್ದಾರೆ.

Congress leaders tweet
ಮಾಜಿ ಸಚಿವ ಎಂ.ಬಿ.ಪಾಟೀಲ್


ಮಾಜಿ ಸಚಿವ ಎಂ.ಬಿ.ಪಾಟೀಲ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರು ಅತ್ಯಂತ ಪ್ರಮುಖವಾಗಿ ಗಮನಿಸಬೇಕಾದ ವಿಚಾರ ಇಲ್ಲಿದೆ. ಆಫ್ರಿಕಾ ಖಂಡದ ಕೆಲ ರಾಷ್ಟ್ರಗಳು ಮತ್ತು ನಮ್ಮ ದೇಶದ ನೆರೆಯ ಕೆಲ ರಾಷ್ಟ್ರಗಳಿಗೆ ಸೋಂಕು ತಗುಲುತ್ತಿರುವ ಕಾರಣ ಮಿಡತೆ ಹಿಂಡುಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕಾಗಿದೆ. ಅಲ್ಲದೆ ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಯಾವುದೇ ರೀತಿ ಆಕಸ್ಮಿಕವಾಗಿ ಅದು ನಮ್ಮ ರಾಷ್ಟ್ರದ ಮೇಲೆ ಪರಿಣಾಮ ಬೀರಿದರೆ ಅದು ಬರಗಾಲವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.