ETV Bharat / city

ಜಗ್ಗೇಶ್ ಹಾಗೂ ಯಶವಂತಪುರಕ್ಕೆ ಯಾವುದೇ ಸಂಬಂಧವಿಲ್ಲ: ಸಂಸದೆ ಕರಂದ್ಲಾಜೆ - Yashawanthpura constituency BJP candidate

ಬದಲಾದ ರಾಜಕಾರಣದಲ್ಲಿ ಅನರ್ಹರೇನೋ ಬಿಜೆಪಿ ಸೇರಿದ್ದಾರೆ. ಆದರೆ ಬಿಜೆಪಿಯೊಳಗೆಯೇ ಈ ವಿಚಾರಕ್ಕೆ ಅಸಮಾಧಾನವಿರುವುದು ಸುಳ್ಳಲ್ಲ. ಬಿಜೆಪಿ ಮುಖಂಡರಾದ ನಟ ಜಗ್ಗೇಶ್​ ಯಶವಂತಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಬಿಜೆಪಿ ಸಂಸದೆ ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.

ಕರಂದ್ಲಾಜೆ
author img

By

Published : Nov 16, 2019, 11:39 AM IST

ಬೆಂಗಳೂರು: ನಟ ಜಗ್ಗೇಶ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಜಗ್ಗೇಶ್ ಕಳೆದ ಬಾರಿ ಕೊನೆ ಅವಧಿಯಲ್ಲಿ ಅಲ್ಲಿ ಟಿಕೆಟ್ ಪಡೆದವರು. ಅವ್ರು ಹೆಚ್ಚು ಓಡಾಡಲು ಆಗಿರಲಿಲ್ಲ. ಅಲ್ಲದೇ ಅದು ಅವರ ಸ್ವ ಕ್ಷೇತ್ರವೂ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.

ನಟ ಜಗ್ಗೇಶ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ

ಆ ಸಂದರ್ಭದಲ್ಲಿ ನಮಗೆ ಸೂಕ್ತ ಅಭ್ಯರ್ಥಿ ಸಿಕ್ಕಿರಲಿಲ್ಲ, ಹಾಗಾಗಿ ಜಗ್ಗೇಶ್​ ಅವರಿಗೆ ಟಿಕೆಟ್ ಕೊಡಲಾಗಿತ್ತು ಎಂದಿರುವ ಶೋಭಾ, ಜಗ್ಗೇಶ್ ಚುನಾವಣಾ ಪ್ರಚಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಲಾಭ ಆಗುತ್ತೆ, ಖುಷಿಯಾಗುತ್ತೆ. ಅವರು ಚಲನಚಿತ್ರ ‌ನಟರು, ಯಶವಂತಪುರ ಕ್ಷೇತ್ರವಲ್ಲದೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರಿಂದ ಲಾಭ ಆಗುತ್ತೆ. ಅವರು ಬರುವ ವಿಶ್ವಾಸವಿದೆ ಎಂದು ತಿಳಿಸಿದರು.

ಸಂಜೆ 6ಕ್ಕೆ ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರ ಸಭೆ:

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಕಂಡ ಕೂಡಲೇ ಬಿಜೆಪಿಯ ನಾಯಕರು ಸಂಜೆ 6ಕ್ಕೆ ನಾಗದೇವನಹಳ್ಳಿಯಲ್ಲಿ ತಳಮಟ್ಟದ ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಎಸ್.ಟಿ. ಸೋಮಶೇಖರ್ ಜೊತೆ ಬಂದ ಕಾರ್ಯಕರ್ತರು ಹಾಗೂ ಮೂಲ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಇಬ್ಬರ ನಡುವೆ ಸ್ನೇಹ ಹಾಗೂ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಬೇಕೆಂದು ಸೂಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಬೆಂಗಳೂರು: ನಟ ಜಗ್ಗೇಶ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಜಗ್ಗೇಶ್ ಕಳೆದ ಬಾರಿ ಕೊನೆ ಅವಧಿಯಲ್ಲಿ ಅಲ್ಲಿ ಟಿಕೆಟ್ ಪಡೆದವರು. ಅವ್ರು ಹೆಚ್ಚು ಓಡಾಡಲು ಆಗಿರಲಿಲ್ಲ. ಅಲ್ಲದೇ ಅದು ಅವರ ಸ್ವ ಕ್ಷೇತ್ರವೂ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.

ನಟ ಜಗ್ಗೇಶ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ

ಆ ಸಂದರ್ಭದಲ್ಲಿ ನಮಗೆ ಸೂಕ್ತ ಅಭ್ಯರ್ಥಿ ಸಿಕ್ಕಿರಲಿಲ್ಲ, ಹಾಗಾಗಿ ಜಗ್ಗೇಶ್​ ಅವರಿಗೆ ಟಿಕೆಟ್ ಕೊಡಲಾಗಿತ್ತು ಎಂದಿರುವ ಶೋಭಾ, ಜಗ್ಗೇಶ್ ಚುನಾವಣಾ ಪ್ರಚಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಲಾಭ ಆಗುತ್ತೆ, ಖುಷಿಯಾಗುತ್ತೆ. ಅವರು ಚಲನಚಿತ್ರ ‌ನಟರು, ಯಶವಂತಪುರ ಕ್ಷೇತ್ರವಲ್ಲದೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರಿಂದ ಲಾಭ ಆಗುತ್ತೆ. ಅವರು ಬರುವ ವಿಶ್ವಾಸವಿದೆ ಎಂದು ತಿಳಿಸಿದರು.

ಸಂಜೆ 6ಕ್ಕೆ ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರ ಸಭೆ:

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಕಂಡ ಕೂಡಲೇ ಬಿಜೆಪಿಯ ನಾಯಕರು ಸಂಜೆ 6ಕ್ಕೆ ನಾಗದೇವನಹಳ್ಳಿಯಲ್ಲಿ ತಳಮಟ್ಟದ ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಎಸ್.ಟಿ. ಸೋಮಶೇಖರ್ ಜೊತೆ ಬಂದ ಕಾರ್ಯಕರ್ತರು ಹಾಗೂ ಮೂಲ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಇಬ್ಬರ ನಡುವೆ ಸ್ನೇಹ ಹಾಗೂ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಬೇಕೆಂದು ಸೂಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.

Intro:Body:ಜಗ್ಗೇಶ್ ಹಾಗೂ ಯಶವಂತಪುರಕ್ಕೆ ಯಾವುದೇ ಸಂಬಂಧವಿಲ್ಲ: ಸಂಸದೆ ಕರಂದ್ಲಾಜೆ


ಬೆಂಗಳೂರು: ಜಗ್ಗೇಶ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಜಗ್ಗೇಶ್ ಕಳೆದ ಬಾರಿ ಕೊನೆ ಅವಧಿಯಲ್ಲಿ ಅಲ್ಲಿ ಟಿಕೆಟ್ ಪಡೆದವರು.ಅವ್ರು ಹೆಚ್ಚು ಓಡಾಡ್ಲಿಕ್ಕೆ ಆಗ್ಲಿಲ್ಲ,ಅವರಿಗೆ ಅದು ಒರಿಜಿನಲ್ ಕ್ಷೇತ್ರವೂ ಅಲ್ಲ ಎಂದು ಹೇಳಿದರು.


ಆ ಸಂದರ್ಭದಲ್ಲಿ ನಮಗೆ ಅಭ್ಯರ್ಥಿ ಯಾರು ಸಿಗ್ಲಿಲ್ಲ,ಹೀಗಾಗಿ ಅವರಿಗೆ ಟಿಕೆಟ್ ಕೊಡಲಾಗಿತ್ತು. ಜಗ್ಗೇಶ್ ಚುನಾವಣಾ ಪ್ರಚಾರಕ್ಕೆ ಬಂದ್ರೇ ಇನ್ನೂ ಹೆಚ್ಚಿನ ಲಾಭ ಆಗುತ್ತೆ. ಬಂದ್ರೆ ಖುಷಿಯಾಗುತ್ತೆ ಆಗುತ್ತೆ, ಅವರು ಚಲನಚಿತ್ರ ‌ನಟರು, ಯಶವಂತಪುರ ಕ್ಷೇತ್ರವಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲಿ ಲಾಭ ಆಗುತ್ತೆ. ಅವರು ಬರುವ ವಿಶ್ವಾಸವಿದೆ ಎಂದು ತಿಳಿಸಿದರು.


ಸಂಜೆ 6ಕ್ಕೆ ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರ ಸಭೆ:


ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಕಂಡಕೂಡಲೇ ಬಿಜೆಪಿಯ ನಾಯಕರು ಸಂಜೆ 6ಕ್ಕೆ ನಾಗದೇವನಹಳ್ಳಿಯಲ್ಲಿ ತಳಮಟ್ಟದ ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಎಸ್ ಟಿ ಸೋಮಶೇಖರ್ ಜೊತೆ ಬಂದ ಕಾರ್ಯಕರ್ತರು ಹಾಗೂ ಮೂಲ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಇಬ್ಬರ ನಡುವೆ ಸ್ನೇಹ ಹಾಗೂ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಬೇಕೆಂದು ಸೂಚಿಸಲಾಗುತ್ತದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.