ETV Bharat / city

ನಿರೋದ್ಯೋಗ ಸಮಸ್ಯೆಯಿಂದ ದೇಶದಲ್ಲಿ 14% ಆತ್ಮಹತ್ಯೆ ಏರಿಕೆ: ಎನ್​ಸಿಆರ್​ಬಿ ಅಂಕಿ ಅಂಶ - ಎನ್​ಸಿಆರ್​ಬಿ ಅಂಕಿ ಅಂಶದ ಪ್ರಕಾರ ನಿರೋದ್ಯೋಗ ಸಮಸ್ಯೆ

ಕೇಂದ್ರ ಸರ್ಕಾರದ ವತಿಯಿಂದ 2018 ರ ಎನ್​ಸಿಆರ್​ಬಿ ಅಂಕಿ ಅಂಶ ಬಿಡುಗಡೆ ಆಗಿದ್ದು, ಈ ಅಂಕಿ ಅಂಶಗಳ ಪ್ರಕಾರ ನಿರುದ್ಯೋಗ ಸಮಸ್ಯೆಯಿಂದ ದೇಶದಲ್ಲಿ 2017 ವರ್ಷಕ್ಕಿಂತ 2018 ರಲ್ಲಿ 14% ಆತ್ಮಹತ್ಯೆ ಹೆಚ್ಚಳವಾಗಿದೆ.

14% suicide rises in the country due to unemployment
ಈ ಟಿವಿ ಭಾರತದೊಂದಿಗೆ ಮಾತನಾಡಿದ ಸಿಪಿಐ ಮುಖಂಡ ಅನಂತ ಸುಬ್ಬರಾವ್
author img

By

Published : Jan 13, 2020, 7:52 PM IST

Updated : Jan 13, 2020, 11:37 PM IST

ಬೆಂಗಳೂರು: ಕೇಂದ್ರ ಸರ್ಕಾರದ ವತಿಯಿಂದ 2018 ರ ಎನ್​ಸಿಆರ್​ಬಿ ಅಂಕಿ ಅಂಶ ಬಿಡುಗಡೆ ಆಗಿದ್ದು, ಈ ಅಂಕಿ ಅಂಶಗಳ ಪ್ರಕಾರ ನಿರುದ್ಯೋಗ ಸಮಸ್ಯೆಯಿಂದ ದೇಶದಲ್ಲಿ 2017 ವರ್ಷಕ್ಕಿಂತ 2018 ರಲ್ಲಿ 14% ಆತ್ಮಹತ್ಯೆ ಹೆಚ್ಚಳವಾಗಿದೆ.

ಈ ಟಿವಿ ಭಾರತದೊಂದಿಗೆ ಮಾತನಾಡಿದ ಸಿಪಿಐ ಮುಖಂಡ ಅನಂತ ಸುಬ್ಬರಾವ್

2017 ರಲ್ಲಿ 2,404 ಆತ್ಮಹತ್ಯೆ ಪ್ರಕರಣಗಳು ಆಗಿದ್ದರೆ, 2018 ರಲ್ಲಿ 2,741 ಪ್ರಕರಣಗಳು ದಾಖಲಾಗಿದೆ. 2,431 ಪುರುಷರು ಹಾಗೂ 310 ಮಹಿಳೆಯರು ನಿರುದ್ಯೋಗ ಸಮಸ್ಯೆಯಿಂದ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈ ರಿಪೋರ್ಟ್ ವಿವರಿಸುತ್ತದೆ. ಅಷ್ಟೇ ಅಲ್ಲದೆ ಬಡತನ ಕಾರಣದಿಂದಲೂ ದೇಶದಲ್ಲಿ 2017 ರ ವರದಿ ಪ್ರಕಾರ 1,198 ಜನ ಆತ್ಮಹತ್ಯೆ ಮಾಡಿಕೊಂಡಿದ್ದು, 2018 ರಲ್ಲಿ 1,202 ಜನ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಎನ್ ಸಿ ಆರ್ ಬಿ ವರದಿಗೆ ಪ್ರತಿಕ್ರಿಯೆ ನೀಡಿದ ಸಿಪಿಐ ಮುಖಂಡ ಅನಂತ ಸುಬ್ಬರಾವ್, ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರದ ಬಡವರ ಮೇಲಿನ ಧೋರಣೆ ಸರಿ ಇಲ್ಲ, ಮಂದಿರ- ಮಸೀದಿ ಎಂದು ಮಾತನ್ನಾಡುವುದನ್ನ ಬಿಟ್ಟು ಉದ್ಯೋಗ ಸೃಷ್ಟಿಸಲಿ ಎಂದು ಕಿವಿಮಾತು ಹೇಳಿದರು.

ದೇಶದಲ್ಲಿ ನಿರುದ್ಯೋಗ ಹಾಗೂ ಬಡತನ ಹೆಚ್ಚಾಗುತ್ತಿದೆ. ವರದಿ ತಯಾರು ಮಾಡುವವರು ಯೋಜನಾ ಭವನದಲ್ಲಿ ಕೂತು ವರದಿ ತಯಾರು ಮಾಡುತ್ತಾರೆ. ನಾವು ಗ್ರೌಂಡ್ ವರ್ಕ್ ಮಾಡುವವರು, ಪೀಣ್ಯ ಕೈಗಾರಿಕೆಗಳು ಮುಚ್ಚಿದೆ, ಇಲ್ಲೇ ಸಾಕಷ್ಟು ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಅನಂತ ಸುಬ್ಬರಾವ್ ಅಸಮಾಧಾನ ವ್ಯಕ್ತಪಡಿಸಿದರು. ಮುಂಬರುವ ಬಜೆಟ್​ನಲ್ಲಿ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿ, ಕೃಷಿ ವಲಯದಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡಲಿ, ಜನರಿಗೆ ಖರೀದಿ ಸಾಮರ್ಥ್ಯ ಹೆಚ್ಚಿಸಬೇಕು. ಈ ನಿಟ್ಟಿನಲ್ಲೇ ಸರ್ಕಾರ ಕೆಲಸ ಮಾಡಬೇಕು ಎಂದು ಇವರು ತಿಳಿಸಿದರು.

ಬೆಂಗಳೂರು: ಕೇಂದ್ರ ಸರ್ಕಾರದ ವತಿಯಿಂದ 2018 ರ ಎನ್​ಸಿಆರ್​ಬಿ ಅಂಕಿ ಅಂಶ ಬಿಡುಗಡೆ ಆಗಿದ್ದು, ಈ ಅಂಕಿ ಅಂಶಗಳ ಪ್ರಕಾರ ನಿರುದ್ಯೋಗ ಸಮಸ್ಯೆಯಿಂದ ದೇಶದಲ್ಲಿ 2017 ವರ್ಷಕ್ಕಿಂತ 2018 ರಲ್ಲಿ 14% ಆತ್ಮಹತ್ಯೆ ಹೆಚ್ಚಳವಾಗಿದೆ.

ಈ ಟಿವಿ ಭಾರತದೊಂದಿಗೆ ಮಾತನಾಡಿದ ಸಿಪಿಐ ಮುಖಂಡ ಅನಂತ ಸುಬ್ಬರಾವ್

2017 ರಲ್ಲಿ 2,404 ಆತ್ಮಹತ್ಯೆ ಪ್ರಕರಣಗಳು ಆಗಿದ್ದರೆ, 2018 ರಲ್ಲಿ 2,741 ಪ್ರಕರಣಗಳು ದಾಖಲಾಗಿದೆ. 2,431 ಪುರುಷರು ಹಾಗೂ 310 ಮಹಿಳೆಯರು ನಿರುದ್ಯೋಗ ಸಮಸ್ಯೆಯಿಂದ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈ ರಿಪೋರ್ಟ್ ವಿವರಿಸುತ್ತದೆ. ಅಷ್ಟೇ ಅಲ್ಲದೆ ಬಡತನ ಕಾರಣದಿಂದಲೂ ದೇಶದಲ್ಲಿ 2017 ರ ವರದಿ ಪ್ರಕಾರ 1,198 ಜನ ಆತ್ಮಹತ್ಯೆ ಮಾಡಿಕೊಂಡಿದ್ದು, 2018 ರಲ್ಲಿ 1,202 ಜನ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಎನ್ ಸಿ ಆರ್ ಬಿ ವರದಿಗೆ ಪ್ರತಿಕ್ರಿಯೆ ನೀಡಿದ ಸಿಪಿಐ ಮುಖಂಡ ಅನಂತ ಸುಬ್ಬರಾವ್, ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರದ ಬಡವರ ಮೇಲಿನ ಧೋರಣೆ ಸರಿ ಇಲ್ಲ, ಮಂದಿರ- ಮಸೀದಿ ಎಂದು ಮಾತನ್ನಾಡುವುದನ್ನ ಬಿಟ್ಟು ಉದ್ಯೋಗ ಸೃಷ್ಟಿಸಲಿ ಎಂದು ಕಿವಿಮಾತು ಹೇಳಿದರು.

ದೇಶದಲ್ಲಿ ನಿರುದ್ಯೋಗ ಹಾಗೂ ಬಡತನ ಹೆಚ್ಚಾಗುತ್ತಿದೆ. ವರದಿ ತಯಾರು ಮಾಡುವವರು ಯೋಜನಾ ಭವನದಲ್ಲಿ ಕೂತು ವರದಿ ತಯಾರು ಮಾಡುತ್ತಾರೆ. ನಾವು ಗ್ರೌಂಡ್ ವರ್ಕ್ ಮಾಡುವವರು, ಪೀಣ್ಯ ಕೈಗಾರಿಕೆಗಳು ಮುಚ್ಚಿದೆ, ಇಲ್ಲೇ ಸಾಕಷ್ಟು ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಅನಂತ ಸುಬ್ಬರಾವ್ ಅಸಮಾಧಾನ ವ್ಯಕ್ತಪಡಿಸಿದರು. ಮುಂಬರುವ ಬಜೆಟ್​ನಲ್ಲಿ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿ, ಕೃಷಿ ವಲಯದಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡಲಿ, ಜನರಿಗೆ ಖರೀದಿ ಸಾಮರ್ಥ್ಯ ಹೆಚ್ಚಿಸಬೇಕು. ಈ ನಿಟ್ಟಿನಲ್ಲೇ ಸರ್ಕಾರ ಕೆಲಸ ಮಾಡಬೇಕು ಎಂದು ಇವರು ತಿಳಿಸಿದರು.

Intro:Body:ನಿರೋದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ದೇಶದಲ್ಲಿ 14% ಏರಿಕೆ: ಎನ್ ಸಿ ಆರ್ ಬಿ ಅಂಕಿ ಅಂಶ


ಬೆಂಗಳೂರು: ಕೇಂದ್ರ ಸರ್ಕಾರವತಿಯಿಂದ 2018ರ ಎನ್ ಸಿ ಆರ್ ಬಿ ಅಂಕಿ ಅಂಶ ಬಿಡುಗಡೆ ಆಗಿದ್ದು, ಈ ಅಂಕಿ ಅಂಶಗಳ ಪ್ರಕಾರ ನಿರುದ್ಯೋಗ ಸಮಸ್ಯೆಯಿಂದ ದೇಶದಲ್ಲಿ 2017 ವರ್ಷಕ್ಕಿಂತ 2018ರಲ್ಲಿ 14% ಆತ್ಮಹತ್ಯೆ ಹೆಚ್ಚಳವಾಗಿದೆ.


2017 ರಲ್ಲಿ 2404 ಆತ್ಮಹತ್ಯೆ ಪ್ರಕರಣಗಳು ಆಗಿದ್ದರೆ, 2018 ರಲ್ಲಿ 2741 ಪ್ರಕರಣಗಳು ದಾಖಲಾಗಿದೆ. 2431 ಪುರುಷರು ಹಾಗೂ 310 ಮಹಿಳೆಯರು , ನಿರುದ್ಯೋಗ ಸಮಸ್ಯೆಯಿಂದ ಆತ್ಮಹತೆಯನ್ನು 2018ರಲ್ಲಿ ಮಾಡಲಾಗಿದೆ ಎಂದು ಈ ರಿಪೋರ್ಟ್ ವಿವರಿಸುತ್ತದೆ. ಇಷ್ಟೇ ಅಲ್ಲದೆ ಬಡತನ ಕಾರಣದಿಂದಲೂ ದೇಶದಲ್ಲಿ 2017 ರ ವರದಿ ಪ್ರಕಾರ 1198 ಜನ ಆತ್ಮಹತ್ಯೆ ಮಾಡಿಕೊಂಡಿದ್ದು, 2018 ರಲ್ಲಿ 1202 ಜನ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.


ಎನ್ ಸಿ ಆರ್ ಬಿ ವರದಿಗೆ ಪ್ರತಿಕ್ರಿಯೆ ನೀಡಿದ ಸಿ ಪಿ ಎಂ ಮುಖಂಡ ಅನಂತ ಸುಬ್ಬರಾವ್, ಮೋದಿ ಸರ್ಕಾರಕ್ಕೆ ತರಾಟೆಗೆ ಎತ್ತುಕೊಂಡರು. ಕೇಂದ್ರ ಸರ್ಕಾರದ ಬಡವರ ಮೇಲಿನ ದೊರಣೆ ಸರಿ ಇಲ್ಲ, ಮಂದಿರ- ಮಸೀದಿ ಎಂದು ಮಾತನ್ನಾಡುವುದನ್ನ ಬಿಟ್ಟು ಉದ್ಯೋಗ ಸೃಷ್ಟಿಸಲಿ ಎಂದು ಕಿವಿಮಾತು ಹೇಳಿದರು.


ದೇಶದಲ್ಲಿ ನಿರುದ್ಯೋಗತನ ಹಾಗೂ ಬಡತನ ಹೆಚ್ಚಾಗುತ್ತಿದೆ, ವರದಿ ತಯಾರು ಮಾಡುವವರು ಯೋಜನಾ ಭವನದಲ್ಲಿ ಕೂತು ವರದಿ ತಯಾರು ಮಾಡುತ್ತಾರೆ. ನಾವು ಗ್ರೌಂಡ್ ವರ್ಕ್ ಮಾಡುವವರು, ಪೀಣ್ಯ ಕೈಗಾರಿಕೆಗಳು ಮುಚ್ಚಿದೆ, ಇಲ್ಲೇ ಸಾಕಷ್ಟು ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ.


2020ರ ಬಜೆಟ್ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಪಾಲ್ಗೊಂಡದಿರವುದು ಖಂಡನೀಯ, ಈ ರೀತಿ ಎಂದು ನಾನು ನೋಡಿಲ್ಲ ಎಂದು ಅನಂತ ಸುಬ್ಬರಾವ್ ಅಸಮಾಧಾನ ವ್ಯಕ್ತಪಡಿಸಿದರು.
ಮುಂಬರುವ ಬಜೆಟ್ನಲ್ಲಿ ಉದ್ಯೋಗ ಶೃಷ್ಟಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿ, ಕೃಷಿ ವಲಯದಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡಲಿ. ಜನರಿಗೆ ಖರೀದಿ ಸಾಮರ್ಥ್ಯ ಹೆಚ್ಚಿಸಬೇಕು ಈ ನಿಟ್ಟಿನಲ್ಲೇ ಸರ್ಕಾರ ಕೆಲಸ ಮಾಡಬೇಕು ಎಂದು ಇವರು ತಿಳಿಸಿದರು.
Conclusion:
Last Updated : Jan 13, 2020, 11:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.