ETV Bharat / city

ದಕ್ಷಿಣ ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ: ಚಿಕ್ಕೋಡಿ ಜನರಲ್ಲಿ ಪ್ರವಾಹ ಭೀತಿ - ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ

ದೂಧಗಂಗಾ ನದಿಯ ಕಾರದಗಾ-ಬೋಜ್, ಕುನ್ನೂರ- ಬಾರವಾಡ, ಬೋಜ್- ಹುನ್ನರಗಿ, ಕಲ್ಲೋಳ- ಯಡೂರ, ಮಲಿಕವಾಡ-ದತ್ತವಾಡ ಹಾಗೂ ಬಾವನಸೌಂದತ್ತಿ- ಮಾಂಜರಿ ಸೇತುವೆಗಳು ಜಲಾವೃತಗೊಂಡಿವೆ.

Six weed bridges in the cikkodi area for rain
'ಮಹಾ' ಮಳೆಗೆ ಚಿಕ್ಕೋಡಿ ಭಾಗದ ಆರು ಕಳೆ ಹಂತದ ಸೇತುವೆಗಳು ಜಲಾವೃತ
author img

By

Published : Jun 18, 2020, 11:20 PM IST

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ದೂಧಗಂಗಾ, ವೇದಗಂಗಾ, ಕೃಷ್ಣಾ ನದಿಯ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಮಹಾ ಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತಗೊಂಡಿವೆ.

ಮಹಾ ಮಳೆಯಿಂದು ಕೃಷ್ಣೆಗೆ 60 ಸಾವಿರ ಕ್ಯೂಸೆಕ್‌ನಷ್ಟು ಒಳ ಹರಿವು ಹೆಚ್ಚಳವಾಗಿದೆ. ದೂಧಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ-ಬೋಜ್, ಕುನ್ನೂರ- ಬಾರವಾಡ, ಬೋಜ್- ಹುನ್ನರಗಿ, ಕಲ್ಲೋಳ- ಯಡೂರ, ಮಲಿಕವಾಡ-ದತ್ತವಾಡ ಹಾಗೂ ಬಾವನಸೌಂದತ್ತಿ- ಮಾಂಜರಿ ಸೇತುವೆಗಳು ಜಲಾವೃತಗೊಂಡಿವೆ.

ಕುನ್ನೂರು-ಬಾರವಾಡ, ಕರಾದಗಾ-ಬೋಜ್ ಸೇತುವೆಗಳಿಗೆ ಮಾತ್ರ ನಿಪ್ಪಾಣಿ ತಾಲೂಕಾಡಳಿತ ಬ್ಯಾರಿಕೆಡ್ ಹಾಕಿದೆ. ಉಳಿದ ಸೇತುವೆಗಳಿಗೆ ಬ್ಯಾರಿಕೆಡ್ ಹಾಕಬೇಕಿದೆ. ಈ ಸೇತುಗಳ ಬಳಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಇದು ನದಿ ತೀರದ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ಸದ್ಯ ಜಿಲ್ಲಾಡಳಿತ ಪ್ರವಾಹಕ್ಕೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕಿದೆ.

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ದೂಧಗಂಗಾ, ವೇದಗಂಗಾ, ಕೃಷ್ಣಾ ನದಿಯ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಮಹಾ ಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತಗೊಂಡಿವೆ.

ಮಹಾ ಮಳೆಯಿಂದು ಕೃಷ್ಣೆಗೆ 60 ಸಾವಿರ ಕ್ಯೂಸೆಕ್‌ನಷ್ಟು ಒಳ ಹರಿವು ಹೆಚ್ಚಳವಾಗಿದೆ. ದೂಧಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ-ಬೋಜ್, ಕುನ್ನೂರ- ಬಾರವಾಡ, ಬೋಜ್- ಹುನ್ನರಗಿ, ಕಲ್ಲೋಳ- ಯಡೂರ, ಮಲಿಕವಾಡ-ದತ್ತವಾಡ ಹಾಗೂ ಬಾವನಸೌಂದತ್ತಿ- ಮಾಂಜರಿ ಸೇತುವೆಗಳು ಜಲಾವೃತಗೊಂಡಿವೆ.

ಕುನ್ನೂರು-ಬಾರವಾಡ, ಕರಾದಗಾ-ಬೋಜ್ ಸೇತುವೆಗಳಿಗೆ ಮಾತ್ರ ನಿಪ್ಪಾಣಿ ತಾಲೂಕಾಡಳಿತ ಬ್ಯಾರಿಕೆಡ್ ಹಾಕಿದೆ. ಉಳಿದ ಸೇತುವೆಗಳಿಗೆ ಬ್ಯಾರಿಕೆಡ್ ಹಾಕಬೇಕಿದೆ. ಈ ಸೇತುಗಳ ಬಳಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಇದು ನದಿ ತೀರದ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ಸದ್ಯ ಜಿಲ್ಲಾಡಳಿತ ಪ್ರವಾಹಕ್ಕೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.