ETV Bharat / city

ಕ್ಷೇತ್ರದಲ್ಲಿ ಉಲ್ಬಣಿಸಿದ ಕೊರೊನಾ.. 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ‌

author img

By

Published : May 8, 2021, 1:07 PM IST

ಕೊರೊನಾ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಇಂದು ದಿಢೀರ್ ಗೋಕಾಕ್​ ತಾಲೂಕಾಡಳಿತದೊಂದಿಗೆ ಸಭೆ ನಡೆಸಿದ ಮಾಜಿ ಸಚಿವ, ಕ್ಷೇತ್ರದ ಶಾಸಕ ರಮೇಶ್ ‌ಜಾರಕಿಹೊಳಿ ಅವರು ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

Belgaum
2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ‌

ಬೆಳಗಾವಿ: ಸಿಡಿ ಪ್ರಕರಣ ಹಾಗೂ ಅನಾರೋಗ್ಯದ ಕಾರಣ ವಿಶ್ರಾಂತಿಗೆ ಜಾರಿದ್ದ ಮಾಜಿ ಸಚಿವ ರಮೇಶ್ ‌ಜಾರಕಿಹೊಳಿ, ಇಂದು ದಿಢೀರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಸಿಡಿ ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, ಎಸ್ಐಟಿ ತನಿಖೆ ಹಾಗೂ ಕಾನೂನು ಹೋರಾಟದಲ್ಲಿ ತಲ್ಲೀನರಾಗಿದ್ದರು. ನಂತರ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಕೊರೊನಾ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಇಂದು ದಿಢೀರ್ ಗೋಕಾಕ್​ ತಾಲೂಕಾಡಳಿತದೊಂದಿಗೆ ಸಭೆ ನಡೆಸಿ, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಭೀಕರವಾಗಿದೆ. ಪ್ರತಿಪಕ್ಷ ನಾಯಕರ ಸಲಹೆ ಪಡೆದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನತಾ ಕರ್ಫ್ಯೂ ಬಿಗಿಗೊಳಿಸಿದ್ದಾರೆ. ಅಂತರ್ ಜಿಲ್ಲಾ ಸಂಪರ್ಕ ಕಡಿತಗೊಳಿಸಿ, ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಕೊರೊನಾ ಹರಡುವುದನ್ನು ನಿಯಂತ್ರಿಸಬಹುದಾಗಿದೆ. ರಾಜ್ಯ ಹಾಗೂ ತಾಲೂಕಿನಿಂದ ಕೊರೊನಾ ಓಡಿಸಲು ಸಂಕಲ್ಪ ಮಾಡಲಾಗಿದೆ. 15 ದಿನಗಳಲ್ಲಿ ಆಕ್ಸಿಜನ್ ಕೊರತೆ ಸಮಸ್ಯೆ ಬಗೆಹರಿಯುತ್ತದೆ. ಕೇಂದ್ರ ಗೃಹಸಚಿವರನ್ನು ಸಂಪರ್ಕಿಸಿ, ಆಕ್ಸಿಜನ್ ಪೂರೈಸುವಂತೆ ಸರ್ಕಾರದಿಂದ ಮನವಿ ಮಾಡಲಾಗಿದೆ ಎಂದರು.

2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ‌: ಕೊರೊನಾ ನಿಯಂತ್ರಣ ಸಭೆಗೆ ಹಾಜರ್​

ಕೊರೊನಾ ‌ದೊಡ್ಡ ರೋಗವೇನಲ್ಲ. ಆತ್ಮಸ್ಥೈರ್ಯದಿಂದ ಎದುರಿಸಿದ್ರೆ ಕೊರೊನಾ ಗೆಲ್ಲಬಹುದು. ಯೋಗ, ವ್ಯಾಯಾಮದಿಂದ ಕೊರೊನಾ ನಿಯಂತ್ರಣ ಸಾಧ್ಯವಿದೆ. ಗೋಕಾಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಹೆಚ್ಚಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಆರೋಗ್ಯವಾಗಿದ್ದರೂ ಎಸ್ಐಟಿ ತನಿಖೆಗೆ ರಮೇಶ್ ಜಾರಕಿಹೊಳಿ‌ ಹಾಜರಾಗದೇ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಓದಿ: ಒಂದೇ ಗ್ರಾಮದ 185 ಜನರಿಗೆ ಕೊರೊನಾ ದೃಢ.. ಕಾಶಿಯಿಂದ ಮರಳಿದವರು ಕೊಡಗಹಳ್ಳಿಗೆ ಕೋವಿಡ್ ತಂದ್ರಾ​!?

ಬೆಳಗಾವಿ: ಸಿಡಿ ಪ್ರಕರಣ ಹಾಗೂ ಅನಾರೋಗ್ಯದ ಕಾರಣ ವಿಶ್ರಾಂತಿಗೆ ಜಾರಿದ್ದ ಮಾಜಿ ಸಚಿವ ರಮೇಶ್ ‌ಜಾರಕಿಹೊಳಿ, ಇಂದು ದಿಢೀರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಸಿಡಿ ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, ಎಸ್ಐಟಿ ತನಿಖೆ ಹಾಗೂ ಕಾನೂನು ಹೋರಾಟದಲ್ಲಿ ತಲ್ಲೀನರಾಗಿದ್ದರು. ನಂತರ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಕೊರೊನಾ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಇಂದು ದಿಢೀರ್ ಗೋಕಾಕ್​ ತಾಲೂಕಾಡಳಿತದೊಂದಿಗೆ ಸಭೆ ನಡೆಸಿ, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಭೀಕರವಾಗಿದೆ. ಪ್ರತಿಪಕ್ಷ ನಾಯಕರ ಸಲಹೆ ಪಡೆದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನತಾ ಕರ್ಫ್ಯೂ ಬಿಗಿಗೊಳಿಸಿದ್ದಾರೆ. ಅಂತರ್ ಜಿಲ್ಲಾ ಸಂಪರ್ಕ ಕಡಿತಗೊಳಿಸಿ, ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಕೊರೊನಾ ಹರಡುವುದನ್ನು ನಿಯಂತ್ರಿಸಬಹುದಾಗಿದೆ. ರಾಜ್ಯ ಹಾಗೂ ತಾಲೂಕಿನಿಂದ ಕೊರೊನಾ ಓಡಿಸಲು ಸಂಕಲ್ಪ ಮಾಡಲಾಗಿದೆ. 15 ದಿನಗಳಲ್ಲಿ ಆಕ್ಸಿಜನ್ ಕೊರತೆ ಸಮಸ್ಯೆ ಬಗೆಹರಿಯುತ್ತದೆ. ಕೇಂದ್ರ ಗೃಹಸಚಿವರನ್ನು ಸಂಪರ್ಕಿಸಿ, ಆಕ್ಸಿಜನ್ ಪೂರೈಸುವಂತೆ ಸರ್ಕಾರದಿಂದ ಮನವಿ ಮಾಡಲಾಗಿದೆ ಎಂದರು.

2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ‌: ಕೊರೊನಾ ನಿಯಂತ್ರಣ ಸಭೆಗೆ ಹಾಜರ್​

ಕೊರೊನಾ ‌ದೊಡ್ಡ ರೋಗವೇನಲ್ಲ. ಆತ್ಮಸ್ಥೈರ್ಯದಿಂದ ಎದುರಿಸಿದ್ರೆ ಕೊರೊನಾ ಗೆಲ್ಲಬಹುದು. ಯೋಗ, ವ್ಯಾಯಾಮದಿಂದ ಕೊರೊನಾ ನಿಯಂತ್ರಣ ಸಾಧ್ಯವಿದೆ. ಗೋಕಾಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಹೆಚ್ಚಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಆರೋಗ್ಯವಾಗಿದ್ದರೂ ಎಸ್ಐಟಿ ತನಿಖೆಗೆ ರಮೇಶ್ ಜಾರಕಿಹೊಳಿ‌ ಹಾಜರಾಗದೇ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಓದಿ: ಒಂದೇ ಗ್ರಾಮದ 185 ಜನರಿಗೆ ಕೊರೊನಾ ದೃಢ.. ಕಾಶಿಯಿಂದ ಮರಳಿದವರು ಕೊಡಗಹಳ್ಳಿಗೆ ಕೋವಿಡ್ ತಂದ್ರಾ​!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.