ETV Bharat / city

ಕೃಷ್ಣಾ ನದಿಗೆ 1.12 ಲಕ್ಷಕ್ಕೂ ಅಧಿಕ ಕ್ಯೂಸೆಕ್​​​​​​​ ನೀರು ಒಳಹರಿವು

author img

By

Published : Aug 12, 2020, 6:29 PM IST

ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 92,250 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 20,064 ಕ್ಯೂಸೆಕ್ ನೀರು ಹೀಗೆ ಒಟ್ಟು 1,12,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ.

Krishna river
ಕೃಷ್ಣಾ ನದಿ

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ನಿನ್ನೆ, ಇಂದು‌ ಮತ್ತೆ ಮಳೆ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ 20 ಸಾವಿರಕ್ಕೂ ಅಧಿಕ ಕ್ಯೂಸಕ್‌ ನೀರು ಕಡಿಮೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಕೃಷ್ಣಾ ಮತ್ತು ಉಪನದಿನಗಳ ನೀರಿನ ಪ್ರಮಾಣದಲ್ಲಿ ನಾಲ್ಕು ಅಡಿಯಷ್ಟು ಕಡಿಮೆಯಾಗಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು 1,12,000 ಕ್ಯೂಸೆಕ್​​​ಗಿಂತ ಹೆಚ್ಚು‌ ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್​​​ ಶುಭಾಸ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 92,250 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 20,064 ಕ್ಯೂಸೆಕ್ ನೀರು ಹೀಗೆ ಒಟ್ಟು 1,12,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾದಲ್ಲಿ 59 ಮಿಮೀ, ನವಜಾ 75, ಮಹಾಬಲೇಶ್ವರ 66, ವಾರಣಾ 44, ಕಾಳಮ್ಮವಾಡಿ 63, ರಾಧಾನಗರಿ 98, ಪಾಟಗಾಂವ 107 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.

ಕೃಷ್ಣಾ ನದಿ

ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಭಾಗದಲ್ಲಿ ಮಳೆ ಹೆಚ್ಚಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ 0.6 ಮಿ.ಮೀ, ಅಂಕೋಲ 4.6 ಹಾಗೂ ಸದಲಗಾ 2.0 ಮಿ.ಮೀ ಮಳೆಯಾಗಿರುವ ವರದಿಯಾಗಿದೆ. ಕೊಯ್ನಾ ಜಲಾಶಯ ಶೇ.73, ವಾರಣಾ ಜಲಾಶಯ ಶೇ.87, ರಾಧಾನಗರಿ ಜಲಾಶಯ ಶೇ.100, ಕಣೇರ ಜಲಾಶಯ ಶೇ.75, ಧೂಮ ಜಲಾಶಯ ಶೇ.67, ಪಾಟಗಾಂವ ಶೇ.93.61 ಮತ್ತು ಧೂದಗಂಗಾ ಶೇ.88ರಷ್ಟು ತುಂಬಿದೆ ಎಂದು ತಹಶೀಲ್ದಾರ್​​ ಹೇಳಿದ್ದಾರೆ.

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ನಿನ್ನೆ, ಇಂದು‌ ಮತ್ತೆ ಮಳೆ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ 20 ಸಾವಿರಕ್ಕೂ ಅಧಿಕ ಕ್ಯೂಸಕ್‌ ನೀರು ಕಡಿಮೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಕೃಷ್ಣಾ ಮತ್ತು ಉಪನದಿನಗಳ ನೀರಿನ ಪ್ರಮಾಣದಲ್ಲಿ ನಾಲ್ಕು ಅಡಿಯಷ್ಟು ಕಡಿಮೆಯಾಗಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು 1,12,000 ಕ್ಯೂಸೆಕ್​​​ಗಿಂತ ಹೆಚ್ಚು‌ ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್​​​ ಶುಭಾಸ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 92,250 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 20,064 ಕ್ಯೂಸೆಕ್ ನೀರು ಹೀಗೆ ಒಟ್ಟು 1,12,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾದಲ್ಲಿ 59 ಮಿಮೀ, ನವಜಾ 75, ಮಹಾಬಲೇಶ್ವರ 66, ವಾರಣಾ 44, ಕಾಳಮ್ಮವಾಡಿ 63, ರಾಧಾನಗರಿ 98, ಪಾಟಗಾಂವ 107 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.

ಕೃಷ್ಣಾ ನದಿ

ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಭಾಗದಲ್ಲಿ ಮಳೆ ಹೆಚ್ಚಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ 0.6 ಮಿ.ಮೀ, ಅಂಕೋಲ 4.6 ಹಾಗೂ ಸದಲಗಾ 2.0 ಮಿ.ಮೀ ಮಳೆಯಾಗಿರುವ ವರದಿಯಾಗಿದೆ. ಕೊಯ್ನಾ ಜಲಾಶಯ ಶೇ.73, ವಾರಣಾ ಜಲಾಶಯ ಶೇ.87, ರಾಧಾನಗರಿ ಜಲಾಶಯ ಶೇ.100, ಕಣೇರ ಜಲಾಶಯ ಶೇ.75, ಧೂಮ ಜಲಾಶಯ ಶೇ.67, ಪಾಟಗಾಂವ ಶೇ.93.61 ಮತ್ತು ಧೂದಗಂಗಾ ಶೇ.88ರಷ್ಟು ತುಂಬಿದೆ ಎಂದು ತಹಶೀಲ್ದಾರ್​​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.