ETV Bharat / city

ಲವ್ ಜಿಹಾದ್​, ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಅವಶ್ಯಕತೆ ಬಿದ್ರೆ ಕೋರ್ಟ್ ಮೊರೆ: ಸತೀಶ್​ ಜಾರಕಿಹೊಳಿ‌

ಲವ್ ಜಿಹಾದ್​ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಅವಶ್ಯಕತೆ ಬಿದ್ರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷದಿಂದ ಕೋರ್ ಕಮಿಟಿ ರಚನೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದರು.

author img

By

Published : Dec 5, 2020, 5:03 PM IST

kpcc-will-go-to-court-regarding-love-jihad-and-cow-slaughter-act
ಸತೀಶ ಜಾರಕಿಹೊಳಿ‌

ಬೆಳಗಾವಿ: ಲವ್ ಜಿಹಾದ್ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಸತ್ಯ ತಿಳಿಯಲು ಅವಶ್ಯಕತೆ ಬಿದ್ರೆ ಕೋರ್ಟ್​ ಮೊರೆ ಹೋಗುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದರು.

ಲವ್ ಜಿಹಾದ್​, ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಸತೀಶ್​ ಜಾರಕಿಹೊಳಿ‌ ಹೇಳಿಕೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್​​ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಸತ್ಯ ತಿಳಿಯಲು ಸತ್ಯ ಶೋಧನಾ ಕಮಿಟಿ ಮಾಡಬೇಕಾಗುತ್ತದೆ. ಇದರಿಂದ ಯಾರಿಗೆ ಯಾರಿಂದ ಅನ್ಯಾಯಾಗಿದೆ ಎಂದು ತಿಳಿಯಲು ಸಹಕಾರಿಯಾಗುತ್ತದೆ ಎಂದರು.

ಇದನ್ನು ಓದಿ-ಗೋಹತ್ಯೆ ನಿಷೇಧ ಕಾನೂನು ಕೂಡಲೇ ಜಾರಿಯಾಗಲಿ: ಪೇಜಾವರ ಶ್ರೀ

ಅಲ್ಲದೆ ಲವ್ ಜಿಹಾದ್​ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಅವಶ್ಯಕತೆ ಬಿದ್ರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷದಿಂದ ಕೋರ್ ಕಮಿಟಿ ರಚನೆ ಮಾಡಲಾಗುತ್ತಿದೆ ಎಂದರು.

ಇಲ್ಲಿ ನೋಡಿ-ಗೋಹತ್ಯೆ ನಿಷೇಧದ ವಿಚಾರದಲ್ಲಿ ಪಕ್ಷದ ಕೋರ್ ಕಮಿಟಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರು ಹಾಳು ಮಾಡಿದರು ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪನವರಂತಹ ಅನುಭವಿಗಳ ಕುರಿತು ಮಾತನಾಡಲು ಆಗುವುದಿಲ್ಲ. ಇಲ್ಲಿ ಯಾರು ಯಾರ ಹೆಸರು ಹಾಳು ಮಾಡಿದ್ದಾರೋ ಅವರೇ ಹೇಳಬೇಕು. ಈ ಕುರಿತು ನನಗೆ ಎನೂ ಹೇಳಲು ಆಗುವುದಿಲ್ಲ, ಇದರಲ್ಲಿ ನನಗೆ ಆಸಕ್ತಿಯೂ ಇಲ್ಲ ಎಂದರು.

ಬೆಳಗಾವಿ: ಲವ್ ಜಿಹಾದ್ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಸತ್ಯ ತಿಳಿಯಲು ಅವಶ್ಯಕತೆ ಬಿದ್ರೆ ಕೋರ್ಟ್​ ಮೊರೆ ಹೋಗುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದರು.

ಲವ್ ಜಿಹಾದ್​, ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಸತೀಶ್​ ಜಾರಕಿಹೊಳಿ‌ ಹೇಳಿಕೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್​​ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಸತ್ಯ ತಿಳಿಯಲು ಸತ್ಯ ಶೋಧನಾ ಕಮಿಟಿ ಮಾಡಬೇಕಾಗುತ್ತದೆ. ಇದರಿಂದ ಯಾರಿಗೆ ಯಾರಿಂದ ಅನ್ಯಾಯಾಗಿದೆ ಎಂದು ತಿಳಿಯಲು ಸಹಕಾರಿಯಾಗುತ್ತದೆ ಎಂದರು.

ಇದನ್ನು ಓದಿ-ಗೋಹತ್ಯೆ ನಿಷೇಧ ಕಾನೂನು ಕೂಡಲೇ ಜಾರಿಯಾಗಲಿ: ಪೇಜಾವರ ಶ್ರೀ

ಅಲ್ಲದೆ ಲವ್ ಜಿಹಾದ್​ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಅವಶ್ಯಕತೆ ಬಿದ್ರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷದಿಂದ ಕೋರ್ ಕಮಿಟಿ ರಚನೆ ಮಾಡಲಾಗುತ್ತಿದೆ ಎಂದರು.

ಇಲ್ಲಿ ನೋಡಿ-ಗೋಹತ್ಯೆ ನಿಷೇಧದ ವಿಚಾರದಲ್ಲಿ ಪಕ್ಷದ ಕೋರ್ ಕಮಿಟಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ಪ್ರೀಪ್ಲ್ಯಾನ್ ಮಾಡಿ ನನ್ನ ಹೆಸರು ಹಾಳು ಮಾಡಿದರು ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪನವರಂತಹ ಅನುಭವಿಗಳ ಕುರಿತು ಮಾತನಾಡಲು ಆಗುವುದಿಲ್ಲ. ಇಲ್ಲಿ ಯಾರು ಯಾರ ಹೆಸರು ಹಾಳು ಮಾಡಿದ್ದಾರೋ ಅವರೇ ಹೇಳಬೇಕು. ಈ ಕುರಿತು ನನಗೆ ಎನೂ ಹೇಳಲು ಆಗುವುದಿಲ್ಲ, ಇದರಲ್ಲಿ ನನಗೆ ಆಸಕ್ತಿಯೂ ಇಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.