ETV Bharat / city

'ಸರ್ಕಾರದಲ್ಲಿ ಇದ್ದು ಸರ್ಕಾರದ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಉದ್ಭವವಾಗಿಲ್ಲ'

author img

By

Published : Apr 11, 2022, 7:51 AM IST

ನಾನು ಸರ್ಕಾರದಲ್ಲಿ ಇದ್ದುಕೊಂಡು, ಸರ್ಕಾರದ ಭಾಗವಾಗಿ, ನಮ್ಮ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಯಾವತ್ತೂ ಉದ್ಭವವಾಗಿಲ್ಲ. ಆ ರೀತಿ ನಾನು ಮಾತನಾಡಿಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಸಚಿವ ಜೆ.ಸಿ. ಮಾಧುಸ್ವಾಮಿ
ಸಚಿವ ಜೆ.ಸಿ. ಮಾಧುಸ್ವಾಮಿ

ಬೆಳಗಾವಿ: ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ನನಗೆ ಉದ್ಭವವಾಗಿಲ್ಲ. ನಾನು ಕೂಡ ಸರ್ಕಾರದ ಭಾಗವಾಗಿದ್ದೇನೆ. ಸರ್ಕಾರದ ವಿರುದ್ಧ ಯಾವುದೇ ರೀತಿಯ ಮಾತುಗಳನ್ನು ಆಡಿಲ್ಲ ಎಂದು ಕುಂದಾನಗರಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವಿಚಾರದ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಬೆಂಗಳೂರಿನ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಸ್ಮಿಕವಾಗಿ ಗೃಹ ಸಚಿವರು ತಮಗೆ ಬಂದ ಮಾಹಿತಿ ಆಧಾರದ ಮೇಲೆ ಹೇಳಿದ್ದಾರೆ ಎಂದಿದ್ದೆ. ನಂತರ ಅವರೇ ತಿದ್ದುಕೊಂಡಿದ್ದಾರೆ. ಅವರು ಮಾತನಾಡಿದ ಮೇಲೆ ಏನು ಮಾತಾಡೋದಿದೆ ಅಂತಾ ಸ್ಪಷ್ಟವಾಗಿ ಹೇಳಿದ್ದೇನೆ. ವಿವಾದ ಸೃಷ್ಟಿ ಮಾಡೋದು ಸರಿಯಾ? ಅಂತಾ ಕೇಳಿದ್ರು. ಸರ್ಕಾರ ಇದಕ್ಕೆಲ್ಲ ಜವಾಬ್ದಾರಿ ಅಲ್ಲಾ, ಯಾವ ಸರ್ಕಾರವೂ ವಿವಾದ ಸೃಷ್ಟಿ ಮಾಡಲು ಇರೋದಿಲ್ಲ, ವಿವಾದ ಬಗೆಹರಿಸಲು ನಾವು ಸರ್ಕಾರ ನಡೆಸೋದು. ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ಅಂತಾ ಹೇಳಿದ್ದೀನಿ. ಅದನ್ನ ಹಾಳು ಮಾಡಲು ಯಾರಾದರೂ ಪ್ರಯತ್ನಿಸಿದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲರೂ ಕಾನೂನು ಗೌರವಿಸಲೇಬೇಕು ಅಂತಾ ಹೇಳಿದ್ದೀನಿ ಎಂದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ

ಇದೊಂದು ದೊಡ್ಡ ಸಮಾಜ, ಯಾರು ಏನು ಮಾಡ್ತಾರೆ, ಏನ್ ಉದ್ದೇಶ ಇರುತ್ತದೆ ಅಂತ ಏಕಾಏಕಿ ಅರ್ಥ ಮಾಡಿಕೊಳ್ಳಲು ಹಾಗೂ ಊಹೆ ಮಾಡಲು ಆಗುವುದಿಲ್ಲ. ಘಟನೆ ನಡೆದ ನಂತರ ತನಿಖೆಗಳು ಆದ್ರೆ ಬೆಳಕಿಗೆ ಬರುತ್ತವೆ. ಎಲ್ಲರ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಬಿಜೆಪಿ ಬಂದಿರೋದೇ ಸಂವಿಧಾನ ಬದಲಿಸಲು ಎಂದು ಪ್ರತಿಪಕ್ಷಗಳ ಆರೋಪದ ಕುರಿತು ಮಾತನಾಡಿದ ಅವರು, ಯಾವ ಸಂವಿಧಾನ ಬದಲಾಯಿಸುತ್ತೇವೆ ಅಂತಾ ಹೇಳಿದ್ದೇವೆ?, ಎಲ್ಲಿ ಬದಲಾಯಿಸಿದ್ದೀವಿ?. ನಾವು ನಮ್ಮ ಪ್ರಣಾಳಿಕೆಯಲ್ಲಿ ಏನ್ ಹೇಳಿದ್ದೇವೋ ಅಷ್ಟು ಮಾಡಿದ್ದೀವಿ. ಸಂವಿಧಾನ ಬದಲಾಯಿಸುವ ಸ್ಥಿತಿ ದೇಶದಲ್ಲಿ ಬಂದಿದೆ ಅಂತಾ ನಮಗೆ ಗೊತ್ತಿಲ್ಲ. ನಾವ್ಯಾವತ್ತೂ ಆ ಅಜೆಂಡಾ ಇಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ತಂದಿಲ್ಲ ಎಂದು ಹೇಳಿದರು.

ಕಲ್ಲಂಗಡಿ ವ್ಯಾಪಾರಿ ತೆರವು ಕುರಿತು ಹೇಳಿದ್ದು ಹೀಗೆ: ಧಾರವಾಡದಲ್ಲಿ ಕಲ್ಲಂಗಡಿ ವ್ಯಾಪಾರಿ ಮೇಲೆ ದಾಳಿ ಪ್ರಕರಣವನ್ನ ಸರ್ಕಾರದವರು ತಡೆಯೋಕಾಗಲ್ವಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೇಗೆ ನಿರೀಕ್ಷೆ ಮಾಡ್ತೀರಿ?. ಒಂದು ದಿವಸ ಮಾವಿನ ಹಣ್ಣಿಂದು, ಇನ್ನೊಂದು ದಿವಸ ಚಂದ್ರುಂದು. ರಾಜ್ಯದಲ್ಲಿ ಎಲ್ಲೆಲ್ಲೋ ಒಂದು ಘಟನೆ ನಡೆಯೋದಕ್ಕೆಲ್ಲಾ ಈ ರೀತಿ ಬಣ್ಣ ಕಟ್ಟೋದನ್ನು ಸರ್ಕಾರ ನಡೆಸುವವರು ನಿರೀಕ್ಷೆ ಮಾಡೋಕಾಗಿರುತ್ತಾ?. ಗಲಾಟೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಸಿಎಂ ಬಸವರಾಜ ಬೊಮ್ಮಾಯಿ ತನಿಖೆ ಮಾಡ್ತೀವಿ ಅಂತಾ ಹೇಳಿದ್ದಾರೆ. ನಾನು ಕೂಡ ಹೇಳಿದ್ದೀನಿ. ವಾತಾವರಣವನ್ನ ಹಾಳು ಮಾಡುವವರ ವಿರುದ್ಧ ನಾವು ಕ್ರಮ ಜರುಗಿಸುತ್ತೇವೆ. ಯಾವ ಸರ್ಕಾರವೂ ಇದನ್ನೆಲ್ಲಾ ಸಹಿಸಲು ಆಗಲ್ಲ ಎಂದು ಹೇಳಿದರು.

ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ : ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ವಿಚಾರದ ಕುರಿತು ಮಾತನಾಡಿದ ಅವರು, ಯಾರು ಹಾಕಿದ್ದಾರೆ? ಯಾರೋ ಒಬ್ಬ ಮಾತನಾಡೋದು ಆರ್ಥಿಕ ಬಹಿಷ್ಕಾರ ಆಗುತ್ತಾ?, ಆರ್ಥಿಕ ಬಹಿಷ್ಕಾರ ಹಾಕೋಕೆ ಸಾಧ್ಯನಾ?. ಆ ಸಂಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಏನು ಆಗಿದೆ ಅಂತಾ ವಾಸ್ತವದ ಮಾಹಿತಿ ತಗೆದುಕೊಂಡ ಮೇಲೆ ನಿಜವಾದ ಕ್ರಮ ಜರುಗಿಸುತ್ತೇವೆ. ಕ್ರಮ ಕೈಗೊಳ್ಳಬೇಕಾಗುತ್ತದೆ. ಇಲ್ಲವಾದ್ರೆ, ಸರ್ಕಾರ ನಡೆಸೊದು ಹೇಗೆ? ಎಂದರು.

ಪ್ರಮೋದ್ ಮುತಾಲಿಕ್ ಅಭಿಯಾನ ಮಾಡ್ತೀನಿ ಅನ್ನೋ ವಿಚಾರಕ್ಕೆ, ನಾನು ಅದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಆಗೋದಿಲ್ಲ. ಪ್ರಮೋದ್ ಮುತಾಲಿಕ್ ವೈಯಕ್ತಿಕವಾಗಿ ಏನು ಮಾತನಾಡ್ತಾರೋ ಅವರಿಗೆ ಬಿಟ್ಟಿದ್ದು. ಅದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಕಾನೂನು ಯಾರೇ ಕೈಗೆ ತಗೆದುಕೊಂಡರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಂಘ ಪರಿವಾರದವರು ರಣಹೇಡಿಗಳು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ, ಆರ್‌ಎಸ್ಎಸ್ ರಾಷ್ಟ್ರೀಯ ಪ್ರೇಮಿ ಸಂಘಟನೆಯಾಗಿದೆ. ದೇಶ ಕಟ್ಟಲಿಕ್ಕೆ ರಾಷ್ಟ್ರ ಗೌರವಿಸಲು ಅವರು ಪಡುತ್ತಿರುವ ಶ್ರಮಕ್ಕೆ ಬೆಲೆ ಕಟ್ಟೋಕೆ ಆಗೋದಿಲ್ಲ. ಯಾವುದರಲ್ಲೂ ಆರ್‌ಎಸ್ಎಸ್ ವಿವಾದ ಸೃಷ್ಟಿ ಮಾಡಿದೆ ಅಂತ ಭಾವಿಸಕ್ಕಾಗಲ್ಲ. ಆರ್‌ಎಸ್ಎಸ್‌ಗೂ ಯಾವುದಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು.

ಬಿ.ಕೆ. ಹರಿಪ್ರಸಾದ್ ವಿರುದ್ಧ ವಾಗ್ದಾಳಿ: ಬಿ.ಕೆ. ಹರಿಪ್ರಸಾದ್ ಆರ್‌ಎಸ್ಎಸ್ ಟೀಕೆ ಮಾಡೋದನ್ನ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದಾರೆ. ಏನೂ ಕಾಣದೇ, ಕೇಳದೇ ಎಲ್ಲದಕ್ಕೂ ಆರ್‌ಎಸ್ಎಸ್ ಕಾರಣ ಅಂತಾ ಮಾತನಾಡೋದು ಗೌರವ ತರುವುದಿಲ್ಲ. ಮಾತಿನಲ್ಲೇ ಅವರು ಧೀರರಾದ್ರೆ, ಒಂದು ದಿನ ಅವರೇ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಾತನಾಡೋದೆ ಧೀರರ ಲಕ್ಷಣ ಅಲ್ಲ, ಒಳ್ಳೆಯದು ಮಾಡೋದು ಧೀರರ ಲಕ್ಷಣ. ವಿನಾಕಾರಣ ಸಂಘಟನೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡೋದು ಸರಿಯಲ್ಲ. ಆರ್‌ಎಸ್ಎಸ್ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲ ರೀತಿ ಕಾರ್ಯಕ್ರಮ ಮಾಡಿ ದೇಶದ ಘನತೆ ಗೌರವ ಹೆಚ್ಚಿಸುತ್ತಿದ್ದಾರೆ. ನಾವು ಅವರನ್ನು ಶ್ಲಾಘಿಸಬೇಕೇ ಹೊರತು, ಈ ರೀತಿ ಟೀಕೆ ಮಾಡೋದು ಗೌರವ ತರೋದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಇದನ್ನೂ ಓದಿ: ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಾನಪದ ಉತ್ಸವ : ಸಿಎಂ ಬಸವರಾಜ ಬೊಮ್ಮಾಯಿ

ಬೆಳಗಾವಿ: ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ನನಗೆ ಉದ್ಭವವಾಗಿಲ್ಲ. ನಾನು ಕೂಡ ಸರ್ಕಾರದ ಭಾಗವಾಗಿದ್ದೇನೆ. ಸರ್ಕಾರದ ವಿರುದ್ಧ ಯಾವುದೇ ರೀತಿಯ ಮಾತುಗಳನ್ನು ಆಡಿಲ್ಲ ಎಂದು ಕುಂದಾನಗರಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವಿಚಾರದ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಬೆಂಗಳೂರಿನ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಸ್ಮಿಕವಾಗಿ ಗೃಹ ಸಚಿವರು ತಮಗೆ ಬಂದ ಮಾಹಿತಿ ಆಧಾರದ ಮೇಲೆ ಹೇಳಿದ್ದಾರೆ ಎಂದಿದ್ದೆ. ನಂತರ ಅವರೇ ತಿದ್ದುಕೊಂಡಿದ್ದಾರೆ. ಅವರು ಮಾತನಾಡಿದ ಮೇಲೆ ಏನು ಮಾತಾಡೋದಿದೆ ಅಂತಾ ಸ್ಪಷ್ಟವಾಗಿ ಹೇಳಿದ್ದೇನೆ. ವಿವಾದ ಸೃಷ್ಟಿ ಮಾಡೋದು ಸರಿಯಾ? ಅಂತಾ ಕೇಳಿದ್ರು. ಸರ್ಕಾರ ಇದಕ್ಕೆಲ್ಲ ಜವಾಬ್ದಾರಿ ಅಲ್ಲಾ, ಯಾವ ಸರ್ಕಾರವೂ ವಿವಾದ ಸೃಷ್ಟಿ ಮಾಡಲು ಇರೋದಿಲ್ಲ, ವಿವಾದ ಬಗೆಹರಿಸಲು ನಾವು ಸರ್ಕಾರ ನಡೆಸೋದು. ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ಅಂತಾ ಹೇಳಿದ್ದೀನಿ. ಅದನ್ನ ಹಾಳು ಮಾಡಲು ಯಾರಾದರೂ ಪ್ರಯತ್ನಿಸಿದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲರೂ ಕಾನೂನು ಗೌರವಿಸಲೇಬೇಕು ಅಂತಾ ಹೇಳಿದ್ದೀನಿ ಎಂದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ

ಇದೊಂದು ದೊಡ್ಡ ಸಮಾಜ, ಯಾರು ಏನು ಮಾಡ್ತಾರೆ, ಏನ್ ಉದ್ದೇಶ ಇರುತ್ತದೆ ಅಂತ ಏಕಾಏಕಿ ಅರ್ಥ ಮಾಡಿಕೊಳ್ಳಲು ಹಾಗೂ ಊಹೆ ಮಾಡಲು ಆಗುವುದಿಲ್ಲ. ಘಟನೆ ನಡೆದ ನಂತರ ತನಿಖೆಗಳು ಆದ್ರೆ ಬೆಳಕಿಗೆ ಬರುತ್ತವೆ. ಎಲ್ಲರ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಬಿಜೆಪಿ ಬಂದಿರೋದೇ ಸಂವಿಧಾನ ಬದಲಿಸಲು ಎಂದು ಪ್ರತಿಪಕ್ಷಗಳ ಆರೋಪದ ಕುರಿತು ಮಾತನಾಡಿದ ಅವರು, ಯಾವ ಸಂವಿಧಾನ ಬದಲಾಯಿಸುತ್ತೇವೆ ಅಂತಾ ಹೇಳಿದ್ದೇವೆ?, ಎಲ್ಲಿ ಬದಲಾಯಿಸಿದ್ದೀವಿ?. ನಾವು ನಮ್ಮ ಪ್ರಣಾಳಿಕೆಯಲ್ಲಿ ಏನ್ ಹೇಳಿದ್ದೇವೋ ಅಷ್ಟು ಮಾಡಿದ್ದೀವಿ. ಸಂವಿಧಾನ ಬದಲಾಯಿಸುವ ಸ್ಥಿತಿ ದೇಶದಲ್ಲಿ ಬಂದಿದೆ ಅಂತಾ ನಮಗೆ ಗೊತ್ತಿಲ್ಲ. ನಾವ್ಯಾವತ್ತೂ ಆ ಅಜೆಂಡಾ ಇಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ತಂದಿಲ್ಲ ಎಂದು ಹೇಳಿದರು.

ಕಲ್ಲಂಗಡಿ ವ್ಯಾಪಾರಿ ತೆರವು ಕುರಿತು ಹೇಳಿದ್ದು ಹೀಗೆ: ಧಾರವಾಡದಲ್ಲಿ ಕಲ್ಲಂಗಡಿ ವ್ಯಾಪಾರಿ ಮೇಲೆ ದಾಳಿ ಪ್ರಕರಣವನ್ನ ಸರ್ಕಾರದವರು ತಡೆಯೋಕಾಗಲ್ವಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೇಗೆ ನಿರೀಕ್ಷೆ ಮಾಡ್ತೀರಿ?. ಒಂದು ದಿವಸ ಮಾವಿನ ಹಣ್ಣಿಂದು, ಇನ್ನೊಂದು ದಿವಸ ಚಂದ್ರುಂದು. ರಾಜ್ಯದಲ್ಲಿ ಎಲ್ಲೆಲ್ಲೋ ಒಂದು ಘಟನೆ ನಡೆಯೋದಕ್ಕೆಲ್ಲಾ ಈ ರೀತಿ ಬಣ್ಣ ಕಟ್ಟೋದನ್ನು ಸರ್ಕಾರ ನಡೆಸುವವರು ನಿರೀಕ್ಷೆ ಮಾಡೋಕಾಗಿರುತ್ತಾ?. ಗಲಾಟೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಸಿಎಂ ಬಸವರಾಜ ಬೊಮ್ಮಾಯಿ ತನಿಖೆ ಮಾಡ್ತೀವಿ ಅಂತಾ ಹೇಳಿದ್ದಾರೆ. ನಾನು ಕೂಡ ಹೇಳಿದ್ದೀನಿ. ವಾತಾವರಣವನ್ನ ಹಾಳು ಮಾಡುವವರ ವಿರುದ್ಧ ನಾವು ಕ್ರಮ ಜರುಗಿಸುತ್ತೇವೆ. ಯಾವ ಸರ್ಕಾರವೂ ಇದನ್ನೆಲ್ಲಾ ಸಹಿಸಲು ಆಗಲ್ಲ ಎಂದು ಹೇಳಿದರು.

ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ : ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ವಿಚಾರದ ಕುರಿತು ಮಾತನಾಡಿದ ಅವರು, ಯಾರು ಹಾಕಿದ್ದಾರೆ? ಯಾರೋ ಒಬ್ಬ ಮಾತನಾಡೋದು ಆರ್ಥಿಕ ಬಹಿಷ್ಕಾರ ಆಗುತ್ತಾ?, ಆರ್ಥಿಕ ಬಹಿಷ್ಕಾರ ಹಾಕೋಕೆ ಸಾಧ್ಯನಾ?. ಆ ಸಂಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಏನು ಆಗಿದೆ ಅಂತಾ ವಾಸ್ತವದ ಮಾಹಿತಿ ತಗೆದುಕೊಂಡ ಮೇಲೆ ನಿಜವಾದ ಕ್ರಮ ಜರುಗಿಸುತ್ತೇವೆ. ಕ್ರಮ ಕೈಗೊಳ್ಳಬೇಕಾಗುತ್ತದೆ. ಇಲ್ಲವಾದ್ರೆ, ಸರ್ಕಾರ ನಡೆಸೊದು ಹೇಗೆ? ಎಂದರು.

ಪ್ರಮೋದ್ ಮುತಾಲಿಕ್ ಅಭಿಯಾನ ಮಾಡ್ತೀನಿ ಅನ್ನೋ ವಿಚಾರಕ್ಕೆ, ನಾನು ಅದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಆಗೋದಿಲ್ಲ. ಪ್ರಮೋದ್ ಮುತಾಲಿಕ್ ವೈಯಕ್ತಿಕವಾಗಿ ಏನು ಮಾತನಾಡ್ತಾರೋ ಅವರಿಗೆ ಬಿಟ್ಟಿದ್ದು. ಅದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಕಾನೂನು ಯಾರೇ ಕೈಗೆ ತಗೆದುಕೊಂಡರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಂಘ ಪರಿವಾರದವರು ರಣಹೇಡಿಗಳು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ, ಆರ್‌ಎಸ್ಎಸ್ ರಾಷ್ಟ್ರೀಯ ಪ್ರೇಮಿ ಸಂಘಟನೆಯಾಗಿದೆ. ದೇಶ ಕಟ್ಟಲಿಕ್ಕೆ ರಾಷ್ಟ್ರ ಗೌರವಿಸಲು ಅವರು ಪಡುತ್ತಿರುವ ಶ್ರಮಕ್ಕೆ ಬೆಲೆ ಕಟ್ಟೋಕೆ ಆಗೋದಿಲ್ಲ. ಯಾವುದರಲ್ಲೂ ಆರ್‌ಎಸ್ಎಸ್ ವಿವಾದ ಸೃಷ್ಟಿ ಮಾಡಿದೆ ಅಂತ ಭಾವಿಸಕ್ಕಾಗಲ್ಲ. ಆರ್‌ಎಸ್ಎಸ್‌ಗೂ ಯಾವುದಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು.

ಬಿ.ಕೆ. ಹರಿಪ್ರಸಾದ್ ವಿರುದ್ಧ ವಾಗ್ದಾಳಿ: ಬಿ.ಕೆ. ಹರಿಪ್ರಸಾದ್ ಆರ್‌ಎಸ್ಎಸ್ ಟೀಕೆ ಮಾಡೋದನ್ನ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದಾರೆ. ಏನೂ ಕಾಣದೇ, ಕೇಳದೇ ಎಲ್ಲದಕ್ಕೂ ಆರ್‌ಎಸ್ಎಸ್ ಕಾರಣ ಅಂತಾ ಮಾತನಾಡೋದು ಗೌರವ ತರುವುದಿಲ್ಲ. ಮಾತಿನಲ್ಲೇ ಅವರು ಧೀರರಾದ್ರೆ, ಒಂದು ದಿನ ಅವರೇ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಾತನಾಡೋದೆ ಧೀರರ ಲಕ್ಷಣ ಅಲ್ಲ, ಒಳ್ಳೆಯದು ಮಾಡೋದು ಧೀರರ ಲಕ್ಷಣ. ವಿನಾಕಾರಣ ಸಂಘಟನೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡೋದು ಸರಿಯಲ್ಲ. ಆರ್‌ಎಸ್ಎಸ್ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲ ರೀತಿ ಕಾರ್ಯಕ್ರಮ ಮಾಡಿ ದೇಶದ ಘನತೆ ಗೌರವ ಹೆಚ್ಚಿಸುತ್ತಿದ್ದಾರೆ. ನಾವು ಅವರನ್ನು ಶ್ಲಾಘಿಸಬೇಕೇ ಹೊರತು, ಈ ರೀತಿ ಟೀಕೆ ಮಾಡೋದು ಗೌರವ ತರೋದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಇದನ್ನೂ ಓದಿ: ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಾನಪದ ಉತ್ಸವ : ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.