ETV Bharat / city

ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ ಸಪ್ಕಾಲ್: ವಿಶೇಷವಾಗಿ ಶ್ರದ್ಧಾಂಜಲಿ ಅರ್ಪಿಸಿದ ಬೆಳಗಾವಿ ಕಲಾವಿದ - ಬೆಳಗಾವಿ ರಂಗೋಲಿ ಕಲಾವಿದ ಅಜಿತ್ ಔರ್ವಾಡಕರ್

ಅನಾಥ ಮಕ್ಕಳ ಪಾಲಿನ ಮಹಾತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸುವ ಮೂಲಕ ಬೆಳಗಾವಿಯ ಕಲಾವಿದರೊಬ್ಬರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ ಸಪ್ಕಾಲ್
ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ ಸಪ್ಕಾಲ್
author img

By

Published : Jan 6, 2022, 12:58 PM IST

ಬೆಳಗಾವಿ: ಮಹಾರಾಷ್ಟ್ರದ ಸಾವಿರಾರು ಅನಾಥ ಮಕ್ಕಳ ಪಾಲಿನ ಮಹಾತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸುವ ಮೂಲಕ ಬೆಳಗಾವಿಯ ಕಲಾವಿದರೊಬ್ಬರು ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.

ನಗರದ ವಡಗಾಂವ್​ ನಿವಾಸಿ ಹಾಗೂ ರಂಗೋಲಿ ಕಲಾವಿದ ಅಜಿತ್ ಔರ್ವಾಡಕರ್ ಎಂಬುವರು ಸಮಾಜ ಸೇವಕಿ, ಅನಾಥ ಮಕ್ಕಳ ತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಅವರ ಚಿತ್ರಬಿಡಿಸಿದ್ದಾರೆ. ಈ ಭಾವಚಿತ್ರ ಬಿಡಿಸಲು ಅಜಿತ್, ಸುಮಾರು 7 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ.

ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ ಸಪ್ಕಾಲ್

ಓದಿ: ಶಬರಿಮಲೆ ದೇಗುಲ ಪ್ರವೇಶಿಸಿದ ಕಾರ್ಯಕರ್ತೆ ಮೇಲೆ ಮತ್ತೆ ದಾಳಿ, ಹಲ್ಲೆ

ಮಹಾರಾಷ್ಟ್ರ ಮೂಲದ ಸಿಂಧುತಾಯಿ ಸಪ್ಕಾಲ್ ಅವರು ವಯೋಸಹಜ ಕಾಯಿಲೆಯಿಂದ ಪುಣೆಯ ಗ್ಯಾಲಾಕ್ಸಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದರು‌. ತಂದೆ-ತಾಯಿ ಇಲ್ಲದ ಮಕ್ಕಳಿಗೆ ನೆರಳಾಗಿ, ಇಡೀ ಜಗತ್ತೇ ಮೆಚ್ಚುವಂತ ಅದ್ಭುತ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್, ಪದ್ಮಶ್ರೀ ಸೇರಿದಂತೆ ಒಟ್ಟು 700ಕ್ಕೂ ಅಧಿಕ ಪ್ರಶಸ್ತಿಗಳನ್ನು ನೀಡಲಾಗಿದೆ.

ಸಿಂಧುತಾಯಿ ಸಪ್ಕಾಲ್
ಸಿಂಧುತಾಯಿ ಸಪ್ಕಾಲ್

ಬೆಳಗಾವಿ: ಮಹಾರಾಷ್ಟ್ರದ ಸಾವಿರಾರು ಅನಾಥ ಮಕ್ಕಳ ಪಾಲಿನ ಮಹಾತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸುವ ಮೂಲಕ ಬೆಳಗಾವಿಯ ಕಲಾವಿದರೊಬ್ಬರು ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.

ನಗರದ ವಡಗಾಂವ್​ ನಿವಾಸಿ ಹಾಗೂ ರಂಗೋಲಿ ಕಲಾವಿದ ಅಜಿತ್ ಔರ್ವಾಡಕರ್ ಎಂಬುವರು ಸಮಾಜ ಸೇವಕಿ, ಅನಾಥ ಮಕ್ಕಳ ತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಅವರ ಚಿತ್ರಬಿಡಿಸಿದ್ದಾರೆ. ಈ ಭಾವಚಿತ್ರ ಬಿಡಿಸಲು ಅಜಿತ್, ಸುಮಾರು 7 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ.

ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ ಸಪ್ಕಾಲ್

ಓದಿ: ಶಬರಿಮಲೆ ದೇಗುಲ ಪ್ರವೇಶಿಸಿದ ಕಾರ್ಯಕರ್ತೆ ಮೇಲೆ ಮತ್ತೆ ದಾಳಿ, ಹಲ್ಲೆ

ಮಹಾರಾಷ್ಟ್ರ ಮೂಲದ ಸಿಂಧುತಾಯಿ ಸಪ್ಕಾಲ್ ಅವರು ವಯೋಸಹಜ ಕಾಯಿಲೆಯಿಂದ ಪುಣೆಯ ಗ್ಯಾಲಾಕ್ಸಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದರು‌. ತಂದೆ-ತಾಯಿ ಇಲ್ಲದ ಮಕ್ಕಳಿಗೆ ನೆರಳಾಗಿ, ಇಡೀ ಜಗತ್ತೇ ಮೆಚ್ಚುವಂತ ಅದ್ಭುತ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್, ಪದ್ಮಶ್ರೀ ಸೇರಿದಂತೆ ಒಟ್ಟು 700ಕ್ಕೂ ಅಧಿಕ ಪ್ರಶಸ್ತಿಗಳನ್ನು ನೀಡಲಾಗಿದೆ.

ಸಿಂಧುತಾಯಿ ಸಪ್ಕಾಲ್
ಸಿಂಧುತಾಯಿ ಸಪ್ಕಾಲ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.