ETV Bharat / city

ಸೇನಾ ಶಾಲೆ ಸೇರಲು ಪರೀಕ್ಷೆ ಬರೆಯಲು ಹೋದ ಬಾಲಕ ಕೆರೆಯಲ್ಲಿ ಮುಳುಗಿ ಸಾವು

author img

By

Published : Jan 9, 2020, 8:58 AM IST

ಸೈನಿಕರ ಮಕ್ಕಳ ಶಾಲೆಗೆ ಸೇರುವ ಸಂಬಂಧ ಪರೀಕ್ಷೆ ಬರೆಯಲು ಮಂಗಳೂರಿಗೆ ತೆರಳಿದ್ದ ಅಥಣಿ ನ್ಯೂ ಎಕ್ಸಿಲೆಂಟ್ ಕೋಚಿಂಗ್ ಕ್ಲಾಸ್ ವಿದ್ಯಾರ್ಥಿ ಮಂಗಳೂರಿನ ಕದ್ರಿ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

KN_ATH_02_08_MAGU_DEANTH_AVB_KAC10006
ಸೇನೆ ಸೇರಬೇಕಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಅಥಣಿ: ಸೈನಿಕರ ಮಕ್ಕಳ ಶಾಲೆಗೆ ಸೇರುವ ಸಂಬಂಧ ಪರೀಕ್ಷೆ ಬರೆಯಲು ಮಂಗಳೂರಿಗೆ ತೆರಳಿದ್ದ ಅಥಣಿ ನ್ಯೂ ಎಕ್ಸಿಲೆಂಟ್ ಕೋಚಿಂಗ್ ಕ್ಲಾಸ್ ವಿದ್ಯಾರ್ಥಿ ಮಂಗಳೂರಿನ ಕದ್ರಿ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸೇನೆ ಸೇರಬೇಕಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಅಥಣಿ ಪಟ್ಟಣದ ನ್ಯೂ ಎಕ್ಸಿಲೆಂಟ್ ತರಬೇತಿ ಶಾಲೆಯ 60 ಮಕ್ಕಳು ಮಂಗಳೂರಿನ ಕೆನರಾ ಹೈಸ್ಕೂಲ್​​ನಲ್ಲಿ ಸೈನಿಕ ಮಕ್ಕಳ ಶಾಲೆಗೆ ಸೇರ್ಪಡೆಯಾಗಲು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಮುಗಿಸಿ ಮರಳಿ ಊರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ನಗರದ ಕದ್ರಿ ದೇವಸ್ಥಾನಕ್ಕೆ ದರ್ಶನಕ್ಕೆ ತೆರಳಿದಾಗ ಮಕ್ಕಳು ಅಲ್ಲಿನ ಕೆರೆ ನೋಡಿ ಸ್ನಾನ ಮಾಡಲು ನೀರಿಗೆ ಇಳಿದಿದ್ದಾರೆ. ಈ ಸಂದರ್ಭ ಸಂದೇಶ ಶಿಂದೆ (10) ಎಂಬ ಬಾಲಕ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದಾನೆ. ಬಾಲಕನನ್ನ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತ ಬಾಲಕ ತಂದೆ ಶ್ರೀಪತಿ ಅರುಣಾಚಲ ಪ್ರದೇಶದಲ್ಲಿ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಳೆ ತಮ್ಮ ಮಗ ದೇಶ ಸೇವೆ ಮಾಡುತ್ತಾನೆ. ತಮ್ಮ ಮನೆತನ ಹಾಗೂ ತಾಲೂಕಿನ ಹೆಸರನ್ನು ಎತ್ತರಕ್ಕೆ ಬೆಳೆಸುತ್ತಾನೆ ಎಂಬ ಕನಸು ನುಚ್ಚುನೂರಾಗಿದೆ ಎಂದು ಪೋಷಕರು ಮರುಗುತ್ತಿದ್ದಾರೆ. ಮೃತ ಬಾಲಕನ ಶವವನ್ನು ಅಥಣಿ ತಾಲೂಕಿನ ಬಡಚಿ ಗ್ರಾಮಕ್ಕೆ ತಂದು ಸಂಸ್ಕಾರ ಮಾಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಥಣಿ: ಸೈನಿಕರ ಮಕ್ಕಳ ಶಾಲೆಗೆ ಸೇರುವ ಸಂಬಂಧ ಪರೀಕ್ಷೆ ಬರೆಯಲು ಮಂಗಳೂರಿಗೆ ತೆರಳಿದ್ದ ಅಥಣಿ ನ್ಯೂ ಎಕ್ಸಿಲೆಂಟ್ ಕೋಚಿಂಗ್ ಕ್ಲಾಸ್ ವಿದ್ಯಾರ್ಥಿ ಮಂಗಳೂರಿನ ಕದ್ರಿ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸೇನೆ ಸೇರಬೇಕಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಅಥಣಿ ಪಟ್ಟಣದ ನ್ಯೂ ಎಕ್ಸಿಲೆಂಟ್ ತರಬೇತಿ ಶಾಲೆಯ 60 ಮಕ್ಕಳು ಮಂಗಳೂರಿನ ಕೆನರಾ ಹೈಸ್ಕೂಲ್​​ನಲ್ಲಿ ಸೈನಿಕ ಮಕ್ಕಳ ಶಾಲೆಗೆ ಸೇರ್ಪಡೆಯಾಗಲು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಮುಗಿಸಿ ಮರಳಿ ಊರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ನಗರದ ಕದ್ರಿ ದೇವಸ್ಥಾನಕ್ಕೆ ದರ್ಶನಕ್ಕೆ ತೆರಳಿದಾಗ ಮಕ್ಕಳು ಅಲ್ಲಿನ ಕೆರೆ ನೋಡಿ ಸ್ನಾನ ಮಾಡಲು ನೀರಿಗೆ ಇಳಿದಿದ್ದಾರೆ. ಈ ಸಂದರ್ಭ ಸಂದೇಶ ಶಿಂದೆ (10) ಎಂಬ ಬಾಲಕ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದಾನೆ. ಬಾಲಕನನ್ನ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೃತ ಬಾಲಕ ತಂದೆ ಶ್ರೀಪತಿ ಅರುಣಾಚಲ ಪ್ರದೇಶದಲ್ಲಿ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಳೆ ತಮ್ಮ ಮಗ ದೇಶ ಸೇವೆ ಮಾಡುತ್ತಾನೆ. ತಮ್ಮ ಮನೆತನ ಹಾಗೂ ತಾಲೂಕಿನ ಹೆಸರನ್ನು ಎತ್ತರಕ್ಕೆ ಬೆಳೆಸುತ್ತಾನೆ ಎಂಬ ಕನಸು ನುಚ್ಚುನೂರಾಗಿದೆ ಎಂದು ಪೋಷಕರು ಮರುಗುತ್ತಿದ್ದಾರೆ. ಮೃತ ಬಾಲಕನ ಶವವನ್ನು ಅಥಣಿ ತಾಲೂಕಿನ ಬಡಚಿ ಗ್ರಾಮಕ್ಕೆ ತಂದು ಸಂಸ್ಕಾರ ಮಾಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಅಥಣಿ ನ್ಯೂ ಎಕ್ಷ್ಯಿಲೆಂಟ್ ಕೋಚಿಂಗ್ ಕ್ಲಾಸ್ ವಿದ್ಯಾರ್ಥಿ ಮಂಗಳೂರಿನ ಕದ್ರಿ ದೇವಸ್ಥಾನದ ಕೇರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ
Body:ಅಥಣಿ ವರದಿ
ಫಾರ್ಮೇಟ್_ AVB
ಸ್ಥಳ_ಅಥಣಿ_ಬಡಚಿ
ಸ್ಲಗ್_ ಅಥಣಿ ತಾಲೂಕಿನ ವಿದ್ಯಾರ್ಥಿ ಮಂಗಳೂರಿನಲ್ಲಿ ಸಾವು.

Anchor
ನಾಳೆ ನನ್ನ ಮಗ ದೇಶದ ಸೇವೆ ಮಾಡುತ್ತಾನೆ
ನಮ್ಮ ಮನೆತನ ತಾಲೂಕಿನ ಹೆಸರು ಎತ್ತರಕ್ಕೆ ಬೆಳೆಸುತ್ತಾನೆ ಎಂಬ ಹಲವಾರು ಕನಸುಗಳು ನುಚ್ಚುನೂರಾಗಿದೆ, ಮೊಳಕೆಯಲ್ಲಿ ಕಮರಿದ ಬಾಲಕ.

voice over_
ಈ ಫೋಟೋದಲ್ಲಿ ಕಾಣುತ್ತಿರುವ ಸುಂದರ ಬಾಲಕ ಸಂದೇಶ ವಯಸ್ಸು ಕೆವಲ ೧೦ವರ್ಷ ಆದರೆ ವಿಧಿಯಾಟ ಯಾರು ಬಲ್ಲರು ಹೌದು ನೋಡಿ* ಅಥಣಿ ನ್ಯೂ ಎಕ್ಷ್ಯಿಲೆಂಟ್ ಕೋಚಿಂಗ್ ಕ್ಲಾಸ್ ವಿದ್ಯಾರ್ಥಿ ಮಂಗಳೂರಿನ ಕದ್ರಿ ದೇವಸ್ಥಾನದ ಕೇರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನ್ಯೂ ಎಕ್ಸಿಲೆಂಟ್ ತರಬೇತಿ ಶಾಲೆಯ 60 ಮಕ್ಕಳು
ಮಂಗಳೂರರಿನ ಕೆನರಾ ಹೈಸ್ಕೂಲ್ ನಲ್ಲಿ ಸೈನಿಕರ ಮಕ್ಕಳ ಶಾಲೆಗೆ ಸೇರ್ಪಡೆ ಸಂಬಂಧಿಸಿದಂತೆ ಪರೀಕ್ಷೆಗೆ ಹಾಜರಾಗಿದ್ದರು

ಪರೀಕ್ಷೆ ಮುಗಿಸಿ ಮರಳಿ ಊರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ನಗರದ ಕದ್ರಿ ದೇವಸ್ಥಾನಕ್ಕೆ ದರ್ಶನಕ್ಕೆ ತೆರಳಿದಾಗ ಮಕ್ಕಳು ಅಲ್ಲಿನ ಕೇರೆ ನೋಡಿ ಸ್ನಾನ ಮಾಡಲು ನೀರಿಗೆ ಇಳಿದುಕೊಂಡು ಸ್ನಾನ ಮಾಡುತ್ತಿದ್ದಂತೆ, ಸಂದೇಶ ಎಂಬ ಮಗು ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದಾನೆ ಅಸ್ವಸ್ಥಗೊಂಡಿದ್ದ ಬಾಲಕನನ್ನ ಕೂಡಲೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಂದೇಶ ಶಿಂದೆ (೧೦) ಸೋಮವಾರ ಬೆಳಿಗ್ಗೆ 3-30 ಕ್ಕೆ ಸಾವನ್ನಪ್ಪಿದ್ದಾನೆ

ಮೃತ ಬಾಲಕ ಸಂದೇಶನ ತಂದೆ ಶ್ರೀಪತಿ ಅರುಣಾಚಲ ಪ್ರದೇಶದ್ದಲ್ಲಿ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ತನ್ನ ಮಗನನ್ನು ಸೈನ್ಯಕ್ಕೆ ಸೇರಿಸಬೇಕೆಂದು ತರಬೇತಿ ಶಾಲೆಗೆ ಸೇರಿಸಿದರು ಎಂದು ತಿಳಿದುಬಂದಿದೆ

ಮೃತ ಬಾಲಕನ ಶವ ಅಥಣಿ ತಾಲೂಕಿನ ಬಡಚಿ ಗ್ರಾಮಕ್ಕೆ ತಂದು ಶವ ಸಂಸ್ಕಾರ ಮಾಡಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಂಗಳೂರು ಜಿಲ್ಲೆಯ ಕದ್ರಿ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆಯಾಗಿ ದೇಶದ ಸೇವೆ ಮಾಡಬೇಕಿಂದ ಮಗು ಮಣ್ಣಲಿ ಮಣ್ಣಾಗಿದ್ದು ದುರ್ವಿಧಿ ಅಟ್ಟಹಾಸ ಮೆರೆದಿದ್ದಾನೆ.

ಬೈಟ್_ಮೃತ ಬಾಲಕ ಸಂಬಂಧಿ (ಹೆಸರು ಗೊತ್ತಿಲ್ಲ)

Conclusion:ಅಥಣಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.