ETV Bharat / business

ಅದಾನಿ-ಹಿಂಡೆನ್​ಬರ್ಗ್​: ಆ.14 ರಂದು ತನಿಖಾ ವರದಿ ಸಲ್ಲಿಸಲು ಸೆಬಿಗೆ ಸೂಚನೆ

ಅದಾನಿ-ಹಿಂಡೆನ್​ಬರ್ಗ್ ವಿವಾದದ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ. ಸದ್ಯ ಆಗಸ್ಟ್​ 14 ರಂದು ಹೊಸ ತನಿಖಾ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೆಬಿಗೆ ಸೂಚಿಸಿದೆ.

author img

By

Published : May 18, 2023, 12:37 PM IST

Can't give indefinite extension,
Can't give indefinite extension,

ನವದೆಹಲಿ : ಅದಾನಿ-ಹಿಂಡೆನ್‌ಬರ್ಗ್ ವಿವಾದದ ಕುರಿತು ನಡೆಸಲಾದ ತನಿಖೆಯ ಬಗ್ಗೆ ಆಗಸ್ಟ್ 14 ರಂದು ಹೊಸ ತನಿಖಾ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಕೇಳಿದೆ. ಈ ವಿಷಯದಲ್ಲಿ ಹೆಚ್ಚಿನ ಚರ್ಚೆಗಳಿಗೆ ಸಾಧ್ಯವಾಗುವಂತೆ ನ್ಯಾಯಮೂರ್ತಿ ಎ.ಎಂ. ಸಪ್ರೆ ಸಮಿತಿಯ ವರದಿಯ ಪ್ರತಿಗಳನ್ನು ಕಕ್ಷಿದಾರರಿಗೆ ನೀಡಲು ಸಹ ಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿತು. ಸೆಪ್ಟೆಂಬರ್​ವರೆಗೂ ನ್ಯಾಯಾಲಯ ನಿಮಗೆ ಸಮಯ ನೀಡಬಹುದು, ಆದರೆ ನಿಮ್ಮ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಆಗಸ್ಟ್ 14 ರಂದು ನಮಗೆ ನವೀಕರಿಸಲಾದ ವರದಿ ನೀಡಿ ಎಂದು ​ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಸೆಬಿಯನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.

ಸೆಬಿ ತನ್ನ ವರದಿಯನ್ನು ಪೂರ್ಣಗೊಳಿಸಲು ಈ ಹಿಂದೆ ನೀಡಲಾಗಿದ್ದ 6 ತಿಂಗಳ ಅವಧಿಯ ವಿಸ್ತರಣೆಯನ್ನು ಈಗಾಗಲೇ ಕಡಿಮೆಗೊಳಿಸಲಾಗಿದೆ ಎಂದು ಮೆಹ್ತಾ ವಾದಿಸಿದರು. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಕೂಡ ಇದ್ದ ಪೀಠವು, ನ್ಯಾಯಾಲಯವು ಆರಂಭದಲ್ಲಿ ತನಿಖಾ ಅವಧಿಯನ್ನು ಎರಡು ತಿಂಗಳು ವಿಸ್ತರಣೆ ಮಾಡಿದಾಗ ನೀವು ಏನು ಮಾಡಿದಿರಿ ಎಂಬುದನ್ನು ಮೊದಲು ತಿಳಿಸಿ. ಈಗ ಆಗಸ್ಟ್​ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಅಲ್ಲಿಗೆ ಒಟ್ಟು ಅವಧಿ ಐದು ತಿಂಗಳಾಗುತ್ತದೆ ಎಂದು ಮೆಹ್ತಾ ಅವರಿಗೆ ಹೇಳಿತು. ತನಿಖೆಯನ್ನು ಪೂರ್ಣಗೊಳಿಸಲು ಅನಿರ್ದಿಷ್ಟಾವಧಿ ನೀಡಲಾಗದು ಎಂಬುದನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿತು.

ಹಲವಾರು ದೂರುಗಳು ಬಂದರೂ ಇತ್ತೀಚಿನ ವರ್ಷಗಳಲ್ಲಿ ಸೆಬಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯದ ಗಮನ ಸೆಳೆದರು. 2016 ರಿಂದ ಅದಾನಿ ಗ್ರೂಪ್ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ ಎಂಬ ಆರೋಪಗಳು ಆಧಾರರಹಿತ ಎಂದು ಸೆಬಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ದಾಖಲೆಯಲ್ಲಿ ಸಂಪೂರ್ಣ ಸತ್ಯಾಂಶಗಳಿಲ್ಲದೆ ಪ್ರಕರಣದ ಯಾವುದೇ ತಪ್ಪಾದ ಅಥವಾ ಅಕಾಲಿಕ ತೀರ್ಮಾನವು ನ್ಯಾಯದ ತಾರ್ಕಿಕ ಅಂತ್ಯವನ್ನು ಪೂರೈಸುವುದಿಲ್ಲ ಎಂದು ಸೆಬಿ ಹೇಳಿದೆ.

ಹಣಕಾಸು ಖಾತೆ ರಾಜ್ಯ ಸಚಿವರು ಜುಲೈ 19, 2021 ರಂದು ಸಂಸತ್ತಿಗೆ ನೀಡಿದ ಉತ್ತರದಲ್ಲಿ ಸೆಬಿ ಕೆಲವು ಅದಾನಿ ಗ್ರೂಪ್ ಕಂಪನಿಗಳನ್ನು ಸೆಬಿ ನಿಯಮಗಳ ಅನುಸರಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದರು ಎಂಬುದನ್ನು ಸೆಬಿ ಮೇ 17 ರಂದು ಸುಪ್ರೀಂ ಕೋರ್ಟ್​ಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿತ್ತು. ಕನಿಷ್ಠ ಸಾರ್ವಜನಿಕ ಷೇರು ಹೊಂದಿರುವ ನಿಯಮ ಪಾಲನೆಯಾಗದ ಸಾಧ್ಯತೆಯ ಬಗ್ಗೆ ಹಾಗೂ ಅದರಿಂದ ಉಂಟಾಗಬಹುದಾದ ನಿಯಮ ಉಲ್ಲಂಘನೆಯ ಬಗ್ಗೆ ಅಂದಿನ ತನಿಖೆ ಸಂಬಂಧ ಹೊಂದಿತ್ತು. ಈ ತನಿಖೆಯು ಅಕ್ಟೋಬರ್ 2020 ರಲ್ಲಿ ಆರಂಭವಾಗಿತ್ತು. ಸಚಿವರು ಉಲ್ಲೇಖಿಸಿದ ತನಿಖೆಯು 2016 ರಲ್ಲಿ ಆರಂಭವಾಗಿರಲಿಲ್ಲ ಎಂದು ಸೆಬಿ ಹೇಳಿದೆ.

ಇದನ್ನೂ ಓದಿ: ಪಿವಿಆರ್​-ಐನಾಕ್ಸ್​ಗೆ 333 ಕೋಟಿ ರೂ. ನಷ್ಟ: 50 ಸ್ಕ್ರೀನ್​ ಸ್ಥಗಿತಕ್ಕೆ ನಿರ್ಧಾರ

ನವದೆಹಲಿ : ಅದಾನಿ-ಹಿಂಡೆನ್‌ಬರ್ಗ್ ವಿವಾದದ ಕುರಿತು ನಡೆಸಲಾದ ತನಿಖೆಯ ಬಗ್ಗೆ ಆಗಸ್ಟ್ 14 ರಂದು ಹೊಸ ತನಿಖಾ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಕೇಳಿದೆ. ಈ ವಿಷಯದಲ್ಲಿ ಹೆಚ್ಚಿನ ಚರ್ಚೆಗಳಿಗೆ ಸಾಧ್ಯವಾಗುವಂತೆ ನ್ಯಾಯಮೂರ್ತಿ ಎ.ಎಂ. ಸಪ್ರೆ ಸಮಿತಿಯ ವರದಿಯ ಪ್ರತಿಗಳನ್ನು ಕಕ್ಷಿದಾರರಿಗೆ ನೀಡಲು ಸಹ ಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿತು. ಸೆಪ್ಟೆಂಬರ್​ವರೆಗೂ ನ್ಯಾಯಾಲಯ ನಿಮಗೆ ಸಮಯ ನೀಡಬಹುದು, ಆದರೆ ನಿಮ್ಮ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಆಗಸ್ಟ್ 14 ರಂದು ನಮಗೆ ನವೀಕರಿಸಲಾದ ವರದಿ ನೀಡಿ ಎಂದು ​ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಸೆಬಿಯನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.

ಸೆಬಿ ತನ್ನ ವರದಿಯನ್ನು ಪೂರ್ಣಗೊಳಿಸಲು ಈ ಹಿಂದೆ ನೀಡಲಾಗಿದ್ದ 6 ತಿಂಗಳ ಅವಧಿಯ ವಿಸ್ತರಣೆಯನ್ನು ಈಗಾಗಲೇ ಕಡಿಮೆಗೊಳಿಸಲಾಗಿದೆ ಎಂದು ಮೆಹ್ತಾ ವಾದಿಸಿದರು. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಕೂಡ ಇದ್ದ ಪೀಠವು, ನ್ಯಾಯಾಲಯವು ಆರಂಭದಲ್ಲಿ ತನಿಖಾ ಅವಧಿಯನ್ನು ಎರಡು ತಿಂಗಳು ವಿಸ್ತರಣೆ ಮಾಡಿದಾಗ ನೀವು ಏನು ಮಾಡಿದಿರಿ ಎಂಬುದನ್ನು ಮೊದಲು ತಿಳಿಸಿ. ಈಗ ಆಗಸ್ಟ್​ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಅಲ್ಲಿಗೆ ಒಟ್ಟು ಅವಧಿ ಐದು ತಿಂಗಳಾಗುತ್ತದೆ ಎಂದು ಮೆಹ್ತಾ ಅವರಿಗೆ ಹೇಳಿತು. ತನಿಖೆಯನ್ನು ಪೂರ್ಣಗೊಳಿಸಲು ಅನಿರ್ದಿಷ್ಟಾವಧಿ ನೀಡಲಾಗದು ಎಂಬುದನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿತು.

ಹಲವಾರು ದೂರುಗಳು ಬಂದರೂ ಇತ್ತೀಚಿನ ವರ್ಷಗಳಲ್ಲಿ ಸೆಬಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯದ ಗಮನ ಸೆಳೆದರು. 2016 ರಿಂದ ಅದಾನಿ ಗ್ರೂಪ್ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ ಎಂಬ ಆರೋಪಗಳು ಆಧಾರರಹಿತ ಎಂದು ಸೆಬಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ದಾಖಲೆಯಲ್ಲಿ ಸಂಪೂರ್ಣ ಸತ್ಯಾಂಶಗಳಿಲ್ಲದೆ ಪ್ರಕರಣದ ಯಾವುದೇ ತಪ್ಪಾದ ಅಥವಾ ಅಕಾಲಿಕ ತೀರ್ಮಾನವು ನ್ಯಾಯದ ತಾರ್ಕಿಕ ಅಂತ್ಯವನ್ನು ಪೂರೈಸುವುದಿಲ್ಲ ಎಂದು ಸೆಬಿ ಹೇಳಿದೆ.

ಹಣಕಾಸು ಖಾತೆ ರಾಜ್ಯ ಸಚಿವರು ಜುಲೈ 19, 2021 ರಂದು ಸಂಸತ್ತಿಗೆ ನೀಡಿದ ಉತ್ತರದಲ್ಲಿ ಸೆಬಿ ಕೆಲವು ಅದಾನಿ ಗ್ರೂಪ್ ಕಂಪನಿಗಳನ್ನು ಸೆಬಿ ನಿಯಮಗಳ ಅನುಸರಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದರು ಎಂಬುದನ್ನು ಸೆಬಿ ಮೇ 17 ರಂದು ಸುಪ್ರೀಂ ಕೋರ್ಟ್​ಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿತ್ತು. ಕನಿಷ್ಠ ಸಾರ್ವಜನಿಕ ಷೇರು ಹೊಂದಿರುವ ನಿಯಮ ಪಾಲನೆಯಾಗದ ಸಾಧ್ಯತೆಯ ಬಗ್ಗೆ ಹಾಗೂ ಅದರಿಂದ ಉಂಟಾಗಬಹುದಾದ ನಿಯಮ ಉಲ್ಲಂಘನೆಯ ಬಗ್ಗೆ ಅಂದಿನ ತನಿಖೆ ಸಂಬಂಧ ಹೊಂದಿತ್ತು. ಈ ತನಿಖೆಯು ಅಕ್ಟೋಬರ್ 2020 ರಲ್ಲಿ ಆರಂಭವಾಗಿತ್ತು. ಸಚಿವರು ಉಲ್ಲೇಖಿಸಿದ ತನಿಖೆಯು 2016 ರಲ್ಲಿ ಆರಂಭವಾಗಿರಲಿಲ್ಲ ಎಂದು ಸೆಬಿ ಹೇಳಿದೆ.

ಇದನ್ನೂ ಓದಿ: ಪಿವಿಆರ್​-ಐನಾಕ್ಸ್​ಗೆ 333 ಕೋಟಿ ರೂ. ನಷ್ಟ: 50 ಸ್ಕ್ರೀನ್​ ಸ್ಥಗಿತಕ್ಕೆ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.