ನವದೆಹಲಿ: ಅರ್ಬನ್ ಸಹಕಾರಿ ಬ್ಯಾಂಕ್ಗಳ ನಿಯಂತ್ರಣಕ್ಕೆ ನಿಯಮಾವಳಿಗಳನ್ನು ರೂಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ತನ್ನ ಮಾಜಿ ಡೆಪ್ಯುಟಿ ಗವರ್ನರ್ ಎನ್.ಎಸ್. ವಿಶ್ವನಾಥನ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿದೆ.
ಎಂಟು ಸದಸ್ಯರ ಸಮಿತಿಯು ನಗರ ಸಹಕಾರ ಬ್ಯಾಂಕ್ಗಳಿಗೆ (ಯುಸಿಬಿ) ಸಂಬಂಧಿಸಿದ ರಿಸರ್ವ್ ಬ್ಯಾಂಕ್ ಮತ್ತು ಇತರ ಅಧಿಕಾರಿಗಳು ತೆಗೆದುಕೊಂಡ ನಿಯಂತ್ರಕ ಕ್ರಮಗಳ ಮೇಲ್ವಿಚಾರಣೆ, ಕಳೆದ ಐದು ವರ್ಷಗಳಲ್ಲಿ ಎದುರಾದ ಪ್ರಮುಖ ಅಡಚಣೆಗಳು ಹಾಗೂ ಅವುಗಳ ಪ್ರಭಾವವನ್ನು ನಿರ್ಣಯಿಸುತ್ತದೆ. ಸಾಮಾಜಿಕ-ಆರ್ಥಿಕ ಉದ್ದೇಶ ನೆರವೇರಿಕೆಯಲ್ಲಿ ಕೈಜೋಡಿಸಲಿದೆ.
ಇದನ್ನೂ ಓದಿ: 500 ಅಂಶ ಜಿಗಿದ ಸೆನ್ಸೆಕ್ಸ್.. ಮುಂದುವರಿದ ಗೂಳಿ ಓಟ!
ಈ ಸಮಿತಿಯು ಪ್ರಸ್ತುತ ನಿಯಂತ್ರಣ / ಮೇಲ್ವಿಚಾರಣಾ ವಿಧಾನವನ್ನು ಪರಿಶೀಲಿಸುತ್ತದೆ. ನಗರ ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಸೂಕ್ತ ಕ್ರಮಗಳು / ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಇತ್ತೀಚಿನ ತಿದ್ದುಪಡಿಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಸಮಿತಿಯ ಇತರ ಸದಸ್ಯರಲ್ಲಿ ನಬಾರ್ಡ್ನ ಮಾಜಿ ಅಧ್ಯಕ್ಷ ಹರ್ಷ್ ಕುಮಾರ್ ಭನ್ವಾಲಾ, ಚಾರ್ಟರ್ಡ್ ಅಕೌಂಟೆಂಟ್ ಮುಕುಂದ್ ಎಂ. ಚಿತಳೆ, ಎಂ.ಎಸ್. ಐಐಎಂ ಬೆಂಗಳೂರಿನ ಶ್ರೀರಾಮ್ ಇತರರು ಇದ್ದಾರೆ.