ETV Bharat / business

ಕೊರೊನಾದಿಂದ ಭಾರತದ ಪೂರೈಕೆ ಸರಪಳಿಗೆ ಅಡ್ಡಿ: ನೀತಿ ಆಯೋಗ - ಭಾರತದ ಪೂರೈಕೆ ಸರಪಳಿ

'ಕೋವಿಡ್​-19 ಮತ್ತು​ ಭವಿಷ್ಯದ ಕೆಲಸ' ಕುರಿತು ಮಾತನಾಡಿದ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಸಾಂಕ್ರಾಮಿಕ ರೋಗವು ಒಂದು ವಿಶಿಷ್ಟ ಸವಾಲನ್ನು ಸೃಷ್ಟಿಸಿದೆ. ಇದು ಬಹು ಸಂಕೀರ್ಣ ಮತ್ತು ಅನಿರೀಕ್ಷಿತವಾಗಿದೆ ಎಂದಿದ್ದಾರೆ.

Niti Aayog CEO Amitabh Kant
ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್
author img

By

Published : Apr 18, 2020, 9:49 PM IST

ನವದೆಹಲಿ: ಕೊರೊನಾ ವೈರಸ್​ನ ಲಾಕ್‌ಡೌನ್ ಭಾರತದ ಪೂರೈಕೆ ಸರಪಳಿಗೆ ಭಾರಿ ಮಟ್ಟದಲ್ಲಿ ಅಡ್ಡಿಪಡಿಸಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.

'ಕೋವಿಡ್​-19 ಮತ್ತು​ ಭವಿಷ್ಯದ ಕೆಲಸ' ಕುರಿತು ಮಾತನಾಡಿದ ಅವರು, ಸಾಂಕ್ರಾಮಿಕ ರೋಗವು ಒಂದು ವಿಶಿಷ್ಟ ಸವಾಲನ್ನು ಸೃಷ್ಟಿಸಿದೆ. ಇದು ಬಹು ಸಂಕೀರ್ಣ ಮತ್ತು ಅನಿರೀಕ್ಷಿತವಾಗಿದೆ. ನಾವು ಬಹಳ ಪ್ರಕ್ಷುಬ್ಧವಾದ ಸಮಯದ ನಡುವೆ ಹಾದು ಹೋಗುತ್ತಿದ್ದೇವೆ. ನಮ್ಮ ಪೂರೈಕೆ ಸರಪಳಿಯು ಭಾರಿ ಅಸ್ತವ್ಯಸ್ತವಾಗುತ್ತಿದೆ ಎಂದು ಹೇಳಿದರು.

ವಿಶ್ವಬ್ಯಾಂಕ್ ಕಂಟ್ರಿ ಡೈರೆಕ್ಟರ್ (ಭಾರತ) ಜುನೈದ್ ಕಮಲ್ ಅಹ್ಮದ್ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ತಾವು ಪ್ರಸ್ತುತ ಕಾರ್ಯನಿರ್ವಹಿಸುವ ವಿಧಾನಗಳನ್ನು ಬದಲಾಯಿಸುವುದು ಮುಖ್ಯವಾಗಿದೆ ಎಂದರು.

ಆಯುಷ್ಮಾನ್ ಭಾರತ ಯೋಜನೆ ಒಂದು ಬಹುದೊಡ್ಡ ಹೆಜ್ಜೆಯಾಗಿದೆ. ಮುಂಬರುವ ವರ್ಷಗಳಲ್ಲಿ ಭಾರತವು ಅದನ್ನು ಮೀರಿ ಮುಂದೆ ಹೋಗುತ್ತದೆ ಎಂಬುದನ್ನು ಖಚಿತಪಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ನವದೆಹಲಿ: ಕೊರೊನಾ ವೈರಸ್​ನ ಲಾಕ್‌ಡೌನ್ ಭಾರತದ ಪೂರೈಕೆ ಸರಪಳಿಗೆ ಭಾರಿ ಮಟ್ಟದಲ್ಲಿ ಅಡ್ಡಿಪಡಿಸಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.

'ಕೋವಿಡ್​-19 ಮತ್ತು​ ಭವಿಷ್ಯದ ಕೆಲಸ' ಕುರಿತು ಮಾತನಾಡಿದ ಅವರು, ಸಾಂಕ್ರಾಮಿಕ ರೋಗವು ಒಂದು ವಿಶಿಷ್ಟ ಸವಾಲನ್ನು ಸೃಷ್ಟಿಸಿದೆ. ಇದು ಬಹು ಸಂಕೀರ್ಣ ಮತ್ತು ಅನಿರೀಕ್ಷಿತವಾಗಿದೆ. ನಾವು ಬಹಳ ಪ್ರಕ್ಷುಬ್ಧವಾದ ಸಮಯದ ನಡುವೆ ಹಾದು ಹೋಗುತ್ತಿದ್ದೇವೆ. ನಮ್ಮ ಪೂರೈಕೆ ಸರಪಳಿಯು ಭಾರಿ ಅಸ್ತವ್ಯಸ್ತವಾಗುತ್ತಿದೆ ಎಂದು ಹೇಳಿದರು.

ವಿಶ್ವಬ್ಯಾಂಕ್ ಕಂಟ್ರಿ ಡೈರೆಕ್ಟರ್ (ಭಾರತ) ಜುನೈದ್ ಕಮಲ್ ಅಹ್ಮದ್ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ತಾವು ಪ್ರಸ್ತುತ ಕಾರ್ಯನಿರ್ವಹಿಸುವ ವಿಧಾನಗಳನ್ನು ಬದಲಾಯಿಸುವುದು ಮುಖ್ಯವಾಗಿದೆ ಎಂದರು.

ಆಯುಷ್ಮಾನ್ ಭಾರತ ಯೋಜನೆ ಒಂದು ಬಹುದೊಡ್ಡ ಹೆಜ್ಜೆಯಾಗಿದೆ. ಮುಂಬರುವ ವರ್ಷಗಳಲ್ಲಿ ಭಾರತವು ಅದನ್ನು ಮೀರಿ ಮುಂದೆ ಹೋಗುತ್ತದೆ ಎಂಬುದನ್ನು ಖಚಿತಪಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.