ETV Bharat / business

ದೇಶದ ಹಿತಕ್ಕಾಗಿ ಲಾಕ್​ಡೌನ್ ಮುಂದುವರಿಸಿ: ವ್ಯಾಪಾರಿಗಳ ಒಕ್ಕೂಟ ಮನವಿ

author img

By

Published : Apr 8, 2020, 5:27 PM IST

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು ದೇಶದ ಎಲ್ಲಾ ರಾಜ್ಯಗಳ ಪ್ರಮುಖ ವ್ಯಾಪಾರ ಮುಖಂಡರೊಂದಿಗೆ ಮಾತುಕತೆ ನಡೆಸಿತ್ತು. ತೊಂದರೆಗೀಡಾದ ಸಮಯದಲ್ಲಿ, ಪ್ರಸ್ತುತ ಲಾಕ್‌ಡೌನ್ ಅವಧಿಯನ್ನು 2020ರ ಏಪ್ರಿಲ್ 30ರವರೆಗೆ ವಿಸ್ತರಿಸಿದರೆ ಕೋವಿಡ್​-19 ಸೋಂಕು ಹರಡುವುದನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.

Extend lockdown
ಲಾಕ್​ಡೌನ್

ನವದೆಹಲಿ: ಕೋವಿಡ್ -19 ಸೋಂಕು ಹರಡುವುದನ್ನು ತಡೆಯಲು ಈಗಿರುವ ಲಾಕ್‌ಡೌನ್ ಅವಧಿ ವಿಸ್ತರಿಸುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಎಲ್ಲಾ ರಾಜ್ಯಗಳ ಹಿರಿಯ ವ್ಯಾಪಾರ ಮುಖಂಡರೊಂದಿಗೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ಶಿಫಾರಸು ಮಾಡುತ್ತಿದ್ದೇವೆ ಎಂದು ಸಿಎಐಟಿ ಹೇಳಿದೆ.

ಪ್ರಸ್ತುತ ವರ್ತಕರು ಹಲವು ವ್ಯಾಪಾರ, ಆರ್ಥಿಕ ಮತ್ತು ವಿತ್ತೀಯ ಸವಾಲುಗಳನ್ನು ಎದುರಿಸಬೇಕಾಗಿದ್ದರೂ ದೇಶದ ಹಿತದೃಷ್ಟಿಯಿಂದ ಲಾಕ್​ಡಾನ್ ಮುಂದುವರಿಸಬೇಕು. ವ್ಯಾಪಾರಿಗಳು ರಾಷ್ಟ್ರಕ್ಕೆ ಉತ್ತಮ ಸೇವೆಗಳನ್ನು ನೀಡಲು ಸದಾ ಸಿದ್ಧರಾಗಿದ್ದಾರೆ ಎಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರು ದೇಶಾದ್ಯಂತ ಇರುವ ವರ್ತಕರ ಸಮುದಾಯವು ಅಕ್ಷರಶ: ಮತ್ತು ಅತ್ಯುತ್ಸಾಹದಿಂದ ಪಾಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಒಕ್ಕೂಟವು ದೇಶದ ಎಲ್ಲಾ ರಾಜ್ಯಗಳ ಪ್ರಮುಖ ವ್ಯಾಪಾರ ಮುಖಂಡರೊಂದಿಗೆ ಮಾತುಕತೆ ನಡೆಸಿತ್ತು. ತೊಂದರೆಗೀಡಾದ ಸಮಯದಲ್ಲಿ, ಪ್ರಸ್ತುತ ಲಾಕ್‌ಡೌನ್ ಅವಧಿಯನ್ನು 2020ರ ಏಪ್ರಿಲ್ 30ರವರೆಗೆ ವಿಸ್ತರಿಸಿದರೆ ಕೋವಿಡ್​-19 ಸೋಂಕು ಹರಡುವುದನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.

ಸುಮಾರು 7 ಕೋಟಿ ಸಣ್ಣ ಉದ್ಯಮಗಳು ಮತ್ತೊಂದು ನಲವತ್ತು ಕೋಟಿ ಜನರನ್ನು ನೇಮಿಸಿಕೊಳ್ಳುತ್ತವೆ. ಆದ್ದರಿಂದ ಯಾವುದೇ ರೋಗವು ದೇಶದಲ್ಲಿ ಹರಡಲು ಆರಂಭಿಸಿದರೆ ಅದು ಇಡೀ ರಾಷ್ಟ್ರದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ ಎಂದು ಕಳಕಳಿ ವ್ಯಕ್ತಪಡಿಸಿದೆ.

ನವದೆಹಲಿ: ಕೋವಿಡ್ -19 ಸೋಂಕು ಹರಡುವುದನ್ನು ತಡೆಯಲು ಈಗಿರುವ ಲಾಕ್‌ಡೌನ್ ಅವಧಿ ವಿಸ್ತರಿಸುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಎಲ್ಲಾ ರಾಜ್ಯಗಳ ಹಿರಿಯ ವ್ಯಾಪಾರ ಮುಖಂಡರೊಂದಿಗೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ಶಿಫಾರಸು ಮಾಡುತ್ತಿದ್ದೇವೆ ಎಂದು ಸಿಎಐಟಿ ಹೇಳಿದೆ.

ಪ್ರಸ್ತುತ ವರ್ತಕರು ಹಲವು ವ್ಯಾಪಾರ, ಆರ್ಥಿಕ ಮತ್ತು ವಿತ್ತೀಯ ಸವಾಲುಗಳನ್ನು ಎದುರಿಸಬೇಕಾಗಿದ್ದರೂ ದೇಶದ ಹಿತದೃಷ್ಟಿಯಿಂದ ಲಾಕ್​ಡಾನ್ ಮುಂದುವರಿಸಬೇಕು. ವ್ಯಾಪಾರಿಗಳು ರಾಷ್ಟ್ರಕ್ಕೆ ಉತ್ತಮ ಸೇವೆಗಳನ್ನು ನೀಡಲು ಸದಾ ಸಿದ್ಧರಾಗಿದ್ದಾರೆ ಎಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರು ದೇಶಾದ್ಯಂತ ಇರುವ ವರ್ತಕರ ಸಮುದಾಯವು ಅಕ್ಷರಶ: ಮತ್ತು ಅತ್ಯುತ್ಸಾಹದಿಂದ ಪಾಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಒಕ್ಕೂಟವು ದೇಶದ ಎಲ್ಲಾ ರಾಜ್ಯಗಳ ಪ್ರಮುಖ ವ್ಯಾಪಾರ ಮುಖಂಡರೊಂದಿಗೆ ಮಾತುಕತೆ ನಡೆಸಿತ್ತು. ತೊಂದರೆಗೀಡಾದ ಸಮಯದಲ್ಲಿ, ಪ್ರಸ್ತುತ ಲಾಕ್‌ಡೌನ್ ಅವಧಿಯನ್ನು 2020ರ ಏಪ್ರಿಲ್ 30ರವರೆಗೆ ವಿಸ್ತರಿಸಿದರೆ ಕೋವಿಡ್​-19 ಸೋಂಕು ಹರಡುವುದನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.

ಸುಮಾರು 7 ಕೋಟಿ ಸಣ್ಣ ಉದ್ಯಮಗಳು ಮತ್ತೊಂದು ನಲವತ್ತು ಕೋಟಿ ಜನರನ್ನು ನೇಮಿಸಿಕೊಳ್ಳುತ್ತವೆ. ಆದ್ದರಿಂದ ಯಾವುದೇ ರೋಗವು ದೇಶದಲ್ಲಿ ಹರಡಲು ಆರಂಭಿಸಿದರೆ ಅದು ಇಡೀ ರಾಷ್ಟ್ರದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ ಎಂದು ಕಳಕಳಿ ವ್ಯಕ್ತಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.