ETV Bharat / business

'ಲೈಸನ್ಸ್​ ರಾಜ್​'ನಿಂದ 'ಇನ್​ಸ್ಪೆಕ್ಟರ್​ ರಾಜ್​'ನತ್ತ ಭಾರತ: ಕಿರಣ್‌ ಮಜುಂದಾರ್ ಷಾ ಆಕ್ರೋಶ

author img

By

Published : Jul 30, 2019, 8:35 PM IST

Updated : Jul 30, 2019, 9:07 PM IST

ಸಿದ್ಧಾರ್ಥ್ ದಿಢೀರ್ ನಾಪತ್ತೆ ಪ್ರಕರಣದ ಬಗ್ಗೆ​ ಅವರ ಆಪ್ತ ಸ್ನೇಹಿತೆ ಮತ್ತು ಬೆಂಗಳೂರಿನ ಉದ್ಯಮಿಯಾದ ಬಯೊಕಾನ್ ಮುಖ್ಯಸ್ಥೆ ಕಿರಣ್​ ಮಜುಂದಾರ್ ಷಾ ತೀವ್ರ ಆಘಾತ ವ್ಯಕ್ತಪಡಿಸಿದರು.

ಸಾಂದರ್ಭಿಕ ಚಿತ್ರ

ನವದೆಹಲಿ: ನಾಪತ್ತೆಯಾದ ಉದ್ಯಮಿ ಸಿದ್ಧಾರ್ಥ್​ ಅವರ ಶೋಧ ಕಾರ್ಯವು ಕಳೆದ 24 ಗಂಟೆಗಳಿಂದ ನಿರಂತರವಾಗಿ ಸಾಗಿದ್ದು, ಈ ನಡುವೆ ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಐಟಿ ನಡೆಯನ್ನು ಖಂಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹಣಕಾಸು ಸಂಬಂಧಿತ ತನಿಖೆಗಳ ಬಗ್ಗೆ ಮಾತನಾಡಿದ ಷಾ, 'ಭಾರತ ಲೈಸನ್ಸ್​ ರಾಜ್​ನಿಂದ ಇನ್​ಸ್ಪೆಕ್ಟರ್​ ರಾಜ್​ದತ್ತ ಸಾಗುತ್ತಿದೆ. ಇದು ಭಾರತೀಯ ಉದ್ಯಮ ವಲಯವನ್ನು ಗಂಭೀರವಾಗಿ ಬಾಧಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

'ತೆರಿಗೆ ಇಲಾಖೆಯ ಹಿಂದಿನ ಡಿಜಿಯಿಂದ ನನಗೆ ಕಿರುಕುಳ ಉಂಟಾಗಿದೆ' ಎಂದು ಪತ್ರದಲ್ಲಿ ಉಲ್ಲೇಖಿಸಿ ನಾಪತ್ತೆಯಾದ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಆರೋಪಿಸಿದ್ದರು.

ಸಿದ್ಧಾರ್ಥ್​ ಅವರ ಆಪ್ತ ಸ್ನೇಹಿತೆ ಮತ್ತು ಬೆಂಗಳೂರಿನ ಉದ್ಯಮಿ ಮಜುಂದಾರ್ ಅವರು ದಿಢೀರ್​ ನಾಪತ್ತೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದರು. 'ಅವರ ಪತ್ರದಲ್ಲಿನ ಬರಹ ಮತ್ತು ತೆಗೆದುಕೊಂಡ ಕ್ರಮವು ಅಸಹಾಯಕತೆ ಹಾಗೂ ಅವರ ಆರ್ಥಿಕತೆಯ ಹತಾಶತೆಯ ಪ್ರತಿಬಿಂಬವಾಗಿದೆ. ಹೀಗಾಗಿ, ಅವರು ಇಂತಹ ಪರಿಸ್ಥಿತೆಗೆ ಬಂದಿರಬಹುದು' ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ವಿಷಯದಲ್ಲಿ ಅವನು ಒಬ್ಬಂಟಿಯಾಗಿಲ್ಲ ಎಂದು ನನಗೆ ಖಾತ್ರಿಯಿದೆ. ಅನೇಕ ಕಂಪನಿಗಳು ಒಂದೇ ರೀತಿಯ ಐಟಿ ಮತ್ತು ಇಡಿ ತನಿಖೆಯನ್ನು ಎದುರಿಸುತ್ತಿವೆ. ಖಾಸಗಿ ಈಕ್ವಿಟಿ ಪಾಲುದಾರರಿಂದ ಇದೇ ರೀತಿಯ ಹಗೆತನವನ್ನು ಎದುರಿಸುತ್ತಿವೆ ಎಂದರು.

ನವದೆಹಲಿ: ನಾಪತ್ತೆಯಾದ ಉದ್ಯಮಿ ಸಿದ್ಧಾರ್ಥ್​ ಅವರ ಶೋಧ ಕಾರ್ಯವು ಕಳೆದ 24 ಗಂಟೆಗಳಿಂದ ನಿರಂತರವಾಗಿ ಸಾಗಿದ್ದು, ಈ ನಡುವೆ ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಐಟಿ ನಡೆಯನ್ನು ಖಂಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹಣಕಾಸು ಸಂಬಂಧಿತ ತನಿಖೆಗಳ ಬಗ್ಗೆ ಮಾತನಾಡಿದ ಷಾ, 'ಭಾರತ ಲೈಸನ್ಸ್​ ರಾಜ್​ನಿಂದ ಇನ್​ಸ್ಪೆಕ್ಟರ್​ ರಾಜ್​ದತ್ತ ಸಾಗುತ್ತಿದೆ. ಇದು ಭಾರತೀಯ ಉದ್ಯಮ ವಲಯವನ್ನು ಗಂಭೀರವಾಗಿ ಬಾಧಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

'ತೆರಿಗೆ ಇಲಾಖೆಯ ಹಿಂದಿನ ಡಿಜಿಯಿಂದ ನನಗೆ ಕಿರುಕುಳ ಉಂಟಾಗಿದೆ' ಎಂದು ಪತ್ರದಲ್ಲಿ ಉಲ್ಲೇಖಿಸಿ ನಾಪತ್ತೆಯಾದ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಆರೋಪಿಸಿದ್ದರು.

ಸಿದ್ಧಾರ್ಥ್​ ಅವರ ಆಪ್ತ ಸ್ನೇಹಿತೆ ಮತ್ತು ಬೆಂಗಳೂರಿನ ಉದ್ಯಮಿ ಮಜುಂದಾರ್ ಅವರು ದಿಢೀರ್​ ನಾಪತ್ತೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದರು. 'ಅವರ ಪತ್ರದಲ್ಲಿನ ಬರಹ ಮತ್ತು ತೆಗೆದುಕೊಂಡ ಕ್ರಮವು ಅಸಹಾಯಕತೆ ಹಾಗೂ ಅವರ ಆರ್ಥಿಕತೆಯ ಹತಾಶತೆಯ ಪ್ರತಿಬಿಂಬವಾಗಿದೆ. ಹೀಗಾಗಿ, ಅವರು ಇಂತಹ ಪರಿಸ್ಥಿತೆಗೆ ಬಂದಿರಬಹುದು' ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ವಿಷಯದಲ್ಲಿ ಅವನು ಒಬ್ಬಂಟಿಯಾಗಿಲ್ಲ ಎಂದು ನನಗೆ ಖಾತ್ರಿಯಿದೆ. ಅನೇಕ ಕಂಪನಿಗಳು ಒಂದೇ ರೀತಿಯ ಐಟಿ ಮತ್ತು ಇಡಿ ತನಿಖೆಯನ್ನು ಎದುರಿಸುತ್ತಿವೆ. ಖಾಸಗಿ ಈಕ್ವಿಟಿ ಪಾಲುದಾರರಿಂದ ಇದೇ ರೀತಿಯ ಹಗೆತನವನ್ನು ಎದುರಿಸುತ್ತಿವೆ ಎಂದರು.

Intro:Body:Conclusion:
Last Updated : Jul 30, 2019, 9:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.