ETV Bharat / technology

ಚಂದ್ರಶಿಲೆ ತರಲು 2027ರಲ್ಲಿ ಚಂದ್ರಯಾನ -4 ಮಿಷನ್, 26ರಲ್ಲಿ ಸಮುದ್ರದಾಳಕ್ಕೆ ಪಯಣ : ಸಚಿವ ಜಿತೇಂದ್ರ ಸಿಂಗ್ - CHANDRAYAAN 4

2027ರಲ್ಲಿ ಚಂದ್ರಯಾನ 4 ಮಿಷನ್ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ (ians)
author img

By PTI

Published : Feb 6, 2025, 1:43 PM IST

ನವದೆಹಲಿ: ಚಂದ್ರನ ಶಿಲೆಗಳ ಮಾದರಿಗಳನ್ನು ಭೂಮಿಗೆ ತರಲು ಭಾರತವು 2027 ರಲ್ಲಿ ಚಂದ್ರಯಾನ -4 ಮಿಷನ್ ಪ್ರಾರಂಭಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಮಿಷನ್​​ ಬಗ್ಗೆ ಸಚಿವರು ಹೇಳಿದ್ದು ಹೀಗೆ: ಚಂದ್ರಯಾನ -4 ಮಿಷನ್ ಹೆವಿಲಿಫ್ಟ್ ಎಲ್​ವಿಎಂ -3 ರಾಕೆಟ್​ನ ಕನಿಷ್ಠ ಎರಡು ಪ್ರತ್ಯೇಕ ಉಡಾವಣೆಗಳನ್ನು ಒಳಗೊಂಡಿರುತ್ತದೆ. ಇದು ಮಿಷನ್​ನ ಐದು ವಿಭಿನ್ನ ಘಟಕಗಳನ್ನು ಹೊತ್ತೊಯ್ಯಲಿದ್ದು, ಇದನ್ನು ಕಕ್ಷೆಯಲ್ಲಿ ಜೋಡಿಸಲಾಗುವುದು. "ಚಂದ್ರಯಾನ -4 ಮಿಷನ್ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ಭೂಮಿಗೆ ಮರಳಿ ತರುವ ಗುರಿಯನ್ನು ಹೊಂದಿದೆ" ಎಂದು ಸಿಂಗ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ .

ಗಗನಯಾನ ಮಿಷನ್ ಬಗ್ಗೆ ಮಾತನಾಡಿದ ಸಚಿವರು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಗಗನಯಾತ್ರಿಗಳನ್ನು ಭೂಮಿಯ ಕೆಳ ಕಕ್ಷೆಗೆ ಕಳುಹಿಸುವುದು ಮತ್ತು ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವುದನ್ನು ಒಳಗೊಂಡಿರುವ ಗಗನಯಾನ ಮಿಷನ್ ಅನ್ನು ಮುಂದಿನ ವರ್ಷ ಪ್ರಾರಂಭಿಸಲಾಗುವುದು ಎಂದು ಹೇಳಿದರು.

2026ರಲ್ಲಿ ಸಮುದ್ರದಾಳದಲ್ಲಿ ಸಂಶೋಧನೆ : 2026 ರಲ್ಲಿ ಭಾರತವು ಸಮುದ್ರಯಾನವನ್ನು ಸಹ ಪ್ರಾರಂಭಿಸಲಿದೆ. ಈ ಮಿಷನ್ ಅಡಿಯಲ್ಲಿ ಸಮುದ್ರದ ತಳವನ್ನು ಅನ್ವೇಷಿಸಲು ಜಲಾಂತರ್ಗಾಮಿ ನೌಕೆಯಲ್ಲಿ ಮೂವರು ವಿಜ್ಞಾನಿಗಳು ಆಳವಾದ ಸಮುದ್ರದಲ್ಲಿ 6,000 ಮೀಟರ್ ಆಳದವರೆಗೆ ಪ್ರಯಾಣಿಸಲಿದ್ದಾರೆ.

ದೇಶದ ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆಗೆ ನಿರ್ಣಾಯಕವಾದ ಪ್ರಮುಖ ಖನಿಜಗಳು, ಅಪರೂಪದ ಲೋಹಗಳು ಮತ್ತು ಪತ್ತೆಯಾಗದ ಸಮುದ್ರ ಜೀವವೈವಿಧ್ಯತೆ ಸೇರಿದಂತೆ ವ್ಯಾಪಕ ಸಂಪನ್ಮೂಲಗಳನ್ನು ಕಂಡು ಹಿಡಿಯಬಲ್ಲ ಸಮುದ್ರಯಾನದ ಸಾಮರ್ಥ್ಯವನ್ನು ಸಚಿವರು ಇದೇ ವೇಳೆ ಒತ್ತಿ ಹೇಳಿದರು.

ಈ ವರ್ಷ 'ವ್ಯೋಮಿತ್ರ': ರೋಬೋಟ್ ಹೊತ್ತ ಗಗನಯಾನ ಯೋಜನೆಯ ಮೊದಲ ಸಿಬ್ಬಂದಿ ರಹಿತ ಮಿಷನ್ 'ವ್ಯೋಮಿತ್ರ' ಕೂಡ ಈ ವರ್ಷ ನಡೆಯಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1969 ರಲ್ಲಿ ಸ್ಥಾಪನೆಯಾಗಿದ್ದರೂ, 1993 ರಲ್ಲಿ ಮೊದಲ ಉಡಾವಣಾ ಪ್ಯಾಡ್ ಸ್ಥಾಪಿಸಲು ಎರಡು ದಶಕಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಎರಡನೇ ಉಡಾವಣಾ ಪ್ಯಾಡ್ 2004 ರಲ್ಲಿ ತಯಾರಾಯಿತು. ಕಳೆದ 10 ವರ್ಷಗಳಲ್ಲಿ, ಭಾರತದ ಬಾಹ್ಯಾಕಾಶ ಕ್ಷೇತ್ರವು ಮೂಲಸೌಕರ್ಯ ಮತ್ತು ಹೂಡಿಕೆಯ ದೃಷ್ಟಿಯಿಂದ ಅಭೂತಪೂರ್ವ ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದರು.

ಪ್ರಸ್ತುತ 8 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಬಾಹ್ಯಾಕಾಶ ಆರ್ಥಿಕತೆಯು ಮುಂದಿನ ದಶಕದಲ್ಲಿ 44 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ, ಇದು ಜಾಗತಿಕ ಬಾಹ್ಯಾಕಾಶ ಶಕ್ತಿಕೇಂದ್ರವಾಗಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ : ಗೃಹ ಬಳಕೆ ವೆಚ್ಚ ಸಮೀಕ್ಷೆ: ಕರ್ನಾಟಕದ ಗ್ರಾಮೀಣ ಭಾಗ, ಜಾರ್ಖಂಡ್‌ನ ನಗರಗಳ ಚಿತ್ರಣ ವಿಭಿನ್ನ - CONSUMPTION EXPENDITURE REPORT

ನವದೆಹಲಿ: ಚಂದ್ರನ ಶಿಲೆಗಳ ಮಾದರಿಗಳನ್ನು ಭೂಮಿಗೆ ತರಲು ಭಾರತವು 2027 ರಲ್ಲಿ ಚಂದ್ರಯಾನ -4 ಮಿಷನ್ ಪ್ರಾರಂಭಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಮಿಷನ್​​ ಬಗ್ಗೆ ಸಚಿವರು ಹೇಳಿದ್ದು ಹೀಗೆ: ಚಂದ್ರಯಾನ -4 ಮಿಷನ್ ಹೆವಿಲಿಫ್ಟ್ ಎಲ್​ವಿಎಂ -3 ರಾಕೆಟ್​ನ ಕನಿಷ್ಠ ಎರಡು ಪ್ರತ್ಯೇಕ ಉಡಾವಣೆಗಳನ್ನು ಒಳಗೊಂಡಿರುತ್ತದೆ. ಇದು ಮಿಷನ್​ನ ಐದು ವಿಭಿನ್ನ ಘಟಕಗಳನ್ನು ಹೊತ್ತೊಯ್ಯಲಿದ್ದು, ಇದನ್ನು ಕಕ್ಷೆಯಲ್ಲಿ ಜೋಡಿಸಲಾಗುವುದು. "ಚಂದ್ರಯಾನ -4 ಮಿಷನ್ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ಭೂಮಿಗೆ ಮರಳಿ ತರುವ ಗುರಿಯನ್ನು ಹೊಂದಿದೆ" ಎಂದು ಸಿಂಗ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ .

ಗಗನಯಾನ ಮಿಷನ್ ಬಗ್ಗೆ ಮಾತನಾಡಿದ ಸಚಿವರು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಗಗನಯಾತ್ರಿಗಳನ್ನು ಭೂಮಿಯ ಕೆಳ ಕಕ್ಷೆಗೆ ಕಳುಹಿಸುವುದು ಮತ್ತು ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವುದನ್ನು ಒಳಗೊಂಡಿರುವ ಗಗನಯಾನ ಮಿಷನ್ ಅನ್ನು ಮುಂದಿನ ವರ್ಷ ಪ್ರಾರಂಭಿಸಲಾಗುವುದು ಎಂದು ಹೇಳಿದರು.

2026ರಲ್ಲಿ ಸಮುದ್ರದಾಳದಲ್ಲಿ ಸಂಶೋಧನೆ : 2026 ರಲ್ಲಿ ಭಾರತವು ಸಮುದ್ರಯಾನವನ್ನು ಸಹ ಪ್ರಾರಂಭಿಸಲಿದೆ. ಈ ಮಿಷನ್ ಅಡಿಯಲ್ಲಿ ಸಮುದ್ರದ ತಳವನ್ನು ಅನ್ವೇಷಿಸಲು ಜಲಾಂತರ್ಗಾಮಿ ನೌಕೆಯಲ್ಲಿ ಮೂವರು ವಿಜ್ಞಾನಿಗಳು ಆಳವಾದ ಸಮುದ್ರದಲ್ಲಿ 6,000 ಮೀಟರ್ ಆಳದವರೆಗೆ ಪ್ರಯಾಣಿಸಲಿದ್ದಾರೆ.

ದೇಶದ ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆಗೆ ನಿರ್ಣಾಯಕವಾದ ಪ್ರಮುಖ ಖನಿಜಗಳು, ಅಪರೂಪದ ಲೋಹಗಳು ಮತ್ತು ಪತ್ತೆಯಾಗದ ಸಮುದ್ರ ಜೀವವೈವಿಧ್ಯತೆ ಸೇರಿದಂತೆ ವ್ಯಾಪಕ ಸಂಪನ್ಮೂಲಗಳನ್ನು ಕಂಡು ಹಿಡಿಯಬಲ್ಲ ಸಮುದ್ರಯಾನದ ಸಾಮರ್ಥ್ಯವನ್ನು ಸಚಿವರು ಇದೇ ವೇಳೆ ಒತ್ತಿ ಹೇಳಿದರು.

ಈ ವರ್ಷ 'ವ್ಯೋಮಿತ್ರ': ರೋಬೋಟ್ ಹೊತ್ತ ಗಗನಯಾನ ಯೋಜನೆಯ ಮೊದಲ ಸಿಬ್ಬಂದಿ ರಹಿತ ಮಿಷನ್ 'ವ್ಯೋಮಿತ್ರ' ಕೂಡ ಈ ವರ್ಷ ನಡೆಯಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1969 ರಲ್ಲಿ ಸ್ಥಾಪನೆಯಾಗಿದ್ದರೂ, 1993 ರಲ್ಲಿ ಮೊದಲ ಉಡಾವಣಾ ಪ್ಯಾಡ್ ಸ್ಥಾಪಿಸಲು ಎರಡು ದಶಕಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಎರಡನೇ ಉಡಾವಣಾ ಪ್ಯಾಡ್ 2004 ರಲ್ಲಿ ತಯಾರಾಯಿತು. ಕಳೆದ 10 ವರ್ಷಗಳಲ್ಲಿ, ಭಾರತದ ಬಾಹ್ಯಾಕಾಶ ಕ್ಷೇತ್ರವು ಮೂಲಸೌಕರ್ಯ ಮತ್ತು ಹೂಡಿಕೆಯ ದೃಷ್ಟಿಯಿಂದ ಅಭೂತಪೂರ್ವ ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದರು.

ಪ್ರಸ್ತುತ 8 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಬಾಹ್ಯಾಕಾಶ ಆರ್ಥಿಕತೆಯು ಮುಂದಿನ ದಶಕದಲ್ಲಿ 44 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ, ಇದು ಜಾಗತಿಕ ಬಾಹ್ಯಾಕಾಶ ಶಕ್ತಿಕೇಂದ್ರವಾಗಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ : ಗೃಹ ಬಳಕೆ ವೆಚ್ಚ ಸಮೀಕ್ಷೆ: ಕರ್ನಾಟಕದ ಗ್ರಾಮೀಣ ಭಾಗ, ಜಾರ್ಖಂಡ್‌ನ ನಗರಗಳ ಚಿತ್ರಣ ವಿಭಿನ್ನ - CONSUMPTION EXPENDITURE REPORT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.