ನವದೆಹಲಿ: ಮುಂದಿನ ಕೆಲವು ವಾರಗಳಲ್ಲಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಕೇಂದ್ರದ ಹೂಡಿಕೆ ಹಿಂತೆಗೆತದ ಪಟ್ಟಿಯನ್ನು ನೀತಿ ಆಯೋಗ ಸಿದ್ಧಪಡಿಸಲಿದೆ ಎಂದು ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಬ್ಯಾಂಕ್ಗಳ ಕೆಟ್ಟ ಸಾಲದ ತೊಂದರೆ ಪರಿಹರಿಸುವ ಉದ್ದೇಶದಿಂದ ಆಸ್ತಿ ಪುನರ್ನಿರ್ಮಾಣ ಮತ್ತು ನಿರ್ವಹಣಾ ಕಂಪನಿಗಳು ಆಶಿಸುತ್ತಿವೆ. ಅವುಗಳು ಯುಟಿಐನಂತೆ ಉತ್ತಮ ಕೆಲಸ ಮಾಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ಪೀಡಿತ ಆರ್ಥಿಕತೆ ಸುಧಾರಿಸಲು ವಿವಿಧ ಕ್ರಮಗಳನ್ನು (ಹೂಡಿಕೆ ಹಿಂತೆಗೆತ ಸೇರಿ) 2021-22ರ ಹಣಕಾಸು ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇದಾದ ಕೆಲ ದಿನಗಳ ನಂತರ, 'ಮೋದಿ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧತೆವಾಗಿದ್ದು, ನಿರಂತರವಾಗಿ ತನ್ನ ಬದ್ಧತೆ ತೋರಿಸಲಿದೆ ಎಂದು ಹೇಳಿದರು.
ಈಗ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಮುಂದಿನ ಪಟ್ಟಿಯ ತಯಾರಿಕೆಯನ್ನು ನಾವು ಪೂರ್ಣಗೊಳಿಸುತ್ತೇವೆ. ಮುಂದುವರೆಯುವ ಆದೇಶವನ್ನು ನಾವು ಪಡೆದುಕೊಂಡಿದ್ದೇವೆ ಎಂದು ಕುಮಾರ್, ಮುಂದಿನ ಸುತ್ತಿನ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಪಾಲು ಮಾರಾಟದ ಬಗ್ಗೆ ಹೇಳಿದರು.
ಇದನ್ನೂ ಓದಿ: ಏಷ್ಯಾದ ಮಾರುಕಟ್ಟೆಗಳು ಕುಸಿದರೂ ಮುಂಬೈ ಗೂಳಿಗಿಲ್ಲ ಚಿಂತೆ: 359 ಅಂಕ ಜಿಗಿದ ಸೆನ್ಸೆಕ್ಸ್
ಹೂಡಿಕೆಯ ಪ್ರಕ್ರಿಯೆಯನ್ನು ತ್ವರಿತವಾಗಿ ಪತ್ತೆಹಚ್ಚಲು, ಸೀತಾರಾಮನ್ ಅವರು ಸೋಮವಾರದ ತಮ್ಮ ಬಜೆಟ್ ಭಾಷಣದಲ್ಲಿ, 'ನೀತಿ ಆಯೋಗ ಮುಂದಿನ ದಿನ ಸಾರ್ವಜನಿಕ ಕಂಪನಿಗಳ ಪಟ್ಟಿಯಲ್ಲಿ ಕಾರ್ಯತಂತ್ರದ ಹೂಡಿಕೆ ಪ್ರಕ್ರಿಯೆ ಕೈಗೊಳ್ಳಲಿದೆ' ಎಂದು ಹೇಳಿದ್ದರು.