ETV Bharat / business

ಶ್ಯೂರಿಟಿ ಇಲ್ಲದೆ MSMEಗಳಿಗೆ ನಿರಂತರವಾಗಿ ಸಾಲ ಕೊಡಿ: ಬ್ಯಾಂಕ್​ಗಳಿಗೆ ಸೀತಾರಾಮನ್ ತಾಕೀತು

author img

By

Published : Jun 9, 2020, 6:02 PM IST

ಬ್ರಾಂಚ್​ ಮಟ್ಟದಲ್ಲಿ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಲು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್‌) ಫಾರ್ಮ್‌ ಮತ್ತು ಔಪಚಾರಿಕತೆ ಕನಿಷ್ಠ ಮಟ್ಟದಲ್ಲಿ ಇರಿಸಿಕೊಳ್ಳಬೇಕೆಂದು ಸೀತಾರಾಮನ್ ಅವರು ಬ್ಯಾಂಕ್​ಗಳಿಗೆ ಸಲಹೆ ನೀಡಿದ್ದಾರೆ.

Finance Minister Nirmala Sitharman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಾರ್ವಜನಿಕ ವಲಯದ ಬ್ಯಾಂಕ್​ಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ (ಪಿಎಸ್‌ಬಿ) ಪರಿಶೀಲನಾ ಸಭೆ ನಡೆಸಿದಸರು.

ಮೇಲಾಧಾರ ರಹಿತ ತುರ್ತು ಸಾಲ ಯೋಜನೆಯಡಿ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಗಳಿಗೆ (ಎಂಎಸ್‌ಎಂಇ) ಸಾಲವನ್ನು ನಿರಂತರವಾಗಿ ನೀಡುತ್ತಲೇ ಇರಿ. ಅವುಗಳ ವ್ಯವಹಾರವನ್ನು ಬೆಂಬಲಿಸಿ ಎಂದು ಪಿಎಸ್​ಬಿಗಳಿಗೆ ನಿರ್ಮಲಾ ಸೀತಾರಾಮನ್ ಅವರು ಸೂಚಿಸಿದರು.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿ, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕ್​ಗಳ ಮುಖ್ಯಸ್ಥರಿಗೆ ತಾಕೀತು ಮಾಡಿದರು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಕಚೇರಿಯು ತನ್ನ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಪಿಎಸ್‌ಬಿಗಳು ಅನುಮೋದನೆ ಮತ್ತು ಅರ್ಹ ಎಂಎಸ್‌ಎಂಇಗಳನ್ನು ತಲುಪುವತ್ತ ಗಮನಹರಿಸುವುದನ್ನು ಮುಂದುವರಿಸಲಿ. ಇತರ ವ್ಯವಹಾರಗಳ ಸಾಲದ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಸಹ ಹೊಂದಿವೆ ಎಂದು ಬರೆದುಕೊಂಡಿದೆ.

  • FM’s review of PSBs: Hon’ble FM @nsitharaman Ji complimented PSBs on rapid traction for achieving sanctions of Rs. 20000 Cr under ECLGS. Also advised to maintain proactive outreach at branch level and keep Forms for ECLGS simple & formalities at minimum. @PMOIndia @FinMinIndia

    — DFS (@DFS_India) June 9, 2020 " class="align-text-top noRightClick twitterSection" data=" ">

ಆತ್ಮನಿರ್ಭರ ಭಾರತ ಪ್ಯಾಕೇಜ್​ ಭಾಗವಾಗಿ ಘೋಷಿಸಲಾದ ತುರ್ತು ಸಾಲ ಸೌಲಭ್ಯವು ಎಂಎಸ್ಎಂಇಗಳಿಗೆ ಮಾತ್ರವಲ್ಲದೆ ಎಲ್ಲಾ ಕಂಪನಿಗಳಿಗೂ ಈ ಯೋಜನೆ ಒಳಗೊಳ್ಳುತ್ತದೆ ಎಂದು ಹಣಕಾಸು ಸಚಿವರು ಫಿಕ್ಕಿ ಸದಸ್ಯರಿಗೆ ಸ್ಪಷ್ಟಪಡಿಸಿದ ಒಂದು ದಿನದ ಬಳಿಕ ಈ ನಿರ್ದೇಶನ ಬಂದಿದೆ.

ಬ್ರಾಂಚ್​ ಮಟ್ಟದಲ್ಲಿ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಲು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್‌) ಫಾರ್ಮ್‌ ಮತ್ತು ಔಪಚಾರಿಕತೆ ಕನಿಷ್ಠ ಮಟ್ಟದಲ್ಲಿ ಇರಿಸಿಕೊಳ್ಳಬೇಕೆಂದು ಸೀತಾರಾಮನ್ ಅವರು ಬ್ಯಾಂಕ್​ಗಳಿಗೆ ಸಲಹೆ ನೀಡಿದ್ದಾರೆ ಎಂದು ಮತ್ತೊಂದು ಟ್ವೀಟ್ ಮಾಡಿದೆ.

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಾರ್ವಜನಿಕ ವಲಯದ ಬ್ಯಾಂಕ್​ಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ (ಪಿಎಸ್‌ಬಿ) ಪರಿಶೀಲನಾ ಸಭೆ ನಡೆಸಿದಸರು.

ಮೇಲಾಧಾರ ರಹಿತ ತುರ್ತು ಸಾಲ ಯೋಜನೆಯಡಿ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಗಳಿಗೆ (ಎಂಎಸ್‌ಎಂಇ) ಸಾಲವನ್ನು ನಿರಂತರವಾಗಿ ನೀಡುತ್ತಲೇ ಇರಿ. ಅವುಗಳ ವ್ಯವಹಾರವನ್ನು ಬೆಂಬಲಿಸಿ ಎಂದು ಪಿಎಸ್​ಬಿಗಳಿಗೆ ನಿರ್ಮಲಾ ಸೀತಾರಾಮನ್ ಅವರು ಸೂಚಿಸಿದರು.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿ, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕ್​ಗಳ ಮುಖ್ಯಸ್ಥರಿಗೆ ತಾಕೀತು ಮಾಡಿದರು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಕಚೇರಿಯು ತನ್ನ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಪಿಎಸ್‌ಬಿಗಳು ಅನುಮೋದನೆ ಮತ್ತು ಅರ್ಹ ಎಂಎಸ್‌ಎಂಇಗಳನ್ನು ತಲುಪುವತ್ತ ಗಮನಹರಿಸುವುದನ್ನು ಮುಂದುವರಿಸಲಿ. ಇತರ ವ್ಯವಹಾರಗಳ ಸಾಲದ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಸಹ ಹೊಂದಿವೆ ಎಂದು ಬರೆದುಕೊಂಡಿದೆ.

  • FM’s review of PSBs: Hon’ble FM @nsitharaman Ji complimented PSBs on rapid traction for achieving sanctions of Rs. 20000 Cr under ECLGS. Also advised to maintain proactive outreach at branch level and keep Forms for ECLGS simple & formalities at minimum. @PMOIndia @FinMinIndia

    — DFS (@DFS_India) June 9, 2020 " class="align-text-top noRightClick twitterSection" data=" ">

ಆತ್ಮನಿರ್ಭರ ಭಾರತ ಪ್ಯಾಕೇಜ್​ ಭಾಗವಾಗಿ ಘೋಷಿಸಲಾದ ತುರ್ತು ಸಾಲ ಸೌಲಭ್ಯವು ಎಂಎಸ್ಎಂಇಗಳಿಗೆ ಮಾತ್ರವಲ್ಲದೆ ಎಲ್ಲಾ ಕಂಪನಿಗಳಿಗೂ ಈ ಯೋಜನೆ ಒಳಗೊಳ್ಳುತ್ತದೆ ಎಂದು ಹಣಕಾಸು ಸಚಿವರು ಫಿಕ್ಕಿ ಸದಸ್ಯರಿಗೆ ಸ್ಪಷ್ಟಪಡಿಸಿದ ಒಂದು ದಿನದ ಬಳಿಕ ಈ ನಿರ್ದೇಶನ ಬಂದಿದೆ.

ಬ್ರಾಂಚ್​ ಮಟ್ಟದಲ್ಲಿ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಲು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್‌) ಫಾರ್ಮ್‌ ಮತ್ತು ಔಪಚಾರಿಕತೆ ಕನಿಷ್ಠ ಮಟ್ಟದಲ್ಲಿ ಇರಿಸಿಕೊಳ್ಳಬೇಕೆಂದು ಸೀತಾರಾಮನ್ ಅವರು ಬ್ಯಾಂಕ್​ಗಳಿಗೆ ಸಲಹೆ ನೀಡಿದ್ದಾರೆ ಎಂದು ಮತ್ತೊಂದು ಟ್ವೀಟ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.