ನವದೆಹಲಿ: ನಿಧಾನಗತಿಯ ಆರ್ಥಿಕತೆಯ ನಡುವೆ ತಮ್ಮ ಎರಡನೇ ಆಯವ್ಯಯ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕ ಆದಾಯ ತೆರಿಗೆದಾರರಿಗೆ ಕೆಲ ಐಚ್ಛಿಕ ಆಯ್ಕೆಗಳನ್ನು ನೀಡಿದ್ದಾರೆ.
ಹೊಸ ತೆರಿಗೆ ವಿಧಾನವು ಐಚ್ಛಿಕವಾಗಿರುತ್ತದೆ. ತೆರಿಗೆದಾರರಿಗೆ ವಿನಾಯಿತಿ ಮತ್ತು ಕಡಿತಗಳೊಂದಿಗೆ ಹಳೆಯ ವಿಧಾನದಲ್ಲಿ ಉಳಿಯಲು ಅಥವಾ ಆ ವಿನಾಯಿತಿಗಳಿಲ್ಲದೆ ಹೊಸದಾಗಿ ಕಡಿಮೆಯಾದ ತೆರಿಗೆ ದರವನ್ನು ಆರಿಸಿಕೊಳ್ಳಲು ಆಯ್ಕೆ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
![Income Tax Slabs](https://etvbharatimages.akamaized.net/etvbharat/prod-images/5922035_taxcall.jpg)
ನೂತನ ತೆರಿಗೆ ವಿಧಾನದಲ್ಲಿ ತೆರಿಗೆದಾರನು ಕೋರಿಕೆಯ ವಿನಾಯಿತಿ ಮತ್ತು ಕಡಿತಗಳನ್ನು ಅವಲಂಬಿಸಿ ಗಣನೀಯ ತೆರಿಗೆ ಪ್ರಯೋಜನವನ್ನು ಪಡೆಯುತ್ತಾನೆ. ಉದಾಹರಣೆಗೆ: ಒಬ್ಬ ವ್ಯಕ್ತಿಯು ವರ್ಷದಲ್ಲಿ 15 ಲಕ್ಷ ರೂ. ಗಳಿಸುತ್ತಾನೆ. ಯಾವುದೇ ಕಡಿತಗಳನ್ನು ಪಡೆಯುವುದಿಲ್ಲ. ಹಳೆಯ ಮಾದರಿಯ 2,73,000 ರೂ.ಗೆ ಹೋಲಿಸಿದರೆ 1,95,000 ರೂ. ಮಾತ್ರ ಪಾವತಿಸಬೇಕಾಗುತ್ತದೆ. ಹೀಗಾಗಿ, ಹೊಸ ಮಾದರಿಯು ಅವರ ತೆರಿಗೆ ಹೊರೆಯನ್ನು 78,000 ಕೋಟಿ ರೂ.ಯಷ್ಟು ಕಡಿಮೆಗೊಳಿಸಿದಂತಾಗುತ್ತದೆ.