ಬೀದರ್: ಬಿಮ್ಸ್ ಆಸ್ಪತ್ರೆಯ ಕಟ್ಟಡದ ಮೇಲ್ಛಾವಣಿ ಕುಸಿತ ಹಾಗೂ ಆಸ್ಪತ್ರೆಯಲ್ಲಿನ ದುರಾವಸ್ಥೆ ಕಂಡ ಸಚಿವ ಬಂಡೆಪ್ಪ ಕಾಶೆಂಪೂರ್ ಬಿಮ್ಸ್ ನಿರ್ದೇಶಕರ ಮೇಲೆ ಕೆಂಡಾಮಂಡಲರಾದರು.
ಕಳೆದೆರಡು ವಾರಗಳ ಹಿಂದೆಯಷ್ಟೇ ಸಣ್ಣ ಮಳೆಯಾಗಿದಕ್ಕೆ ಆಸ್ಪತ್ರೆ ಗೇಟ್ ನಂಬರ್ ಒಂದರ ಕಟ್ಟಡ ಮೇಲ್ಛಾವಣಿ ಕುಸಿದಿದೆ. 125 ಕೋಟಿ ರುಪಾಯಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಕಟ್ಟಡದ ಮೇಲ್ಛಾವಣಿ ಕುಸಿದಿದೆ ಎಂದು ಕಾಶೆಂಪೂರ್ ಅವರು ನಿರ್ದೇಶಕ ಡಾ.ಕ್ಷೀರಸಾಗರ ಅವರನ್ನು ತರಾಟೆಗೆ ತೆಗೆದುಕೊಂಡರು.
ನನಗೆನು ಗೊತ್ತಿಲ್ಲ ಸರ್, ಎಲ್ಲಾ ಡಿ.ಎಚ್.ಓ ಅವರಿಗೇ ಗೊತ್ತು ಎಂದ ನಿರ್ದೇಶಕ ಡಾ.ಕ್ಷೀರಸಾಗರ ಅವರ ಹಾರಿಕೆ ಉತ್ತರದಿಂದ ಸಚಿವರು ಸಿಟ್ಟಿಗೆದ್ದರು. ಕಳಪೆ ಕಾಮಗಾರಿ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ನೀವೆಲ್ಲಾ ನೋಡಿಕೊಳ್ಳುತ್ತಾ ಕುಳಿತ್ತಿದ್ದಿರಾ ಎಂದರು.
ಈ ವೇಳೆಯಲ್ಲಿ ಯುವಜನ ಸಬಲಿಕರಣ ಕ್ರೀಡಾ ಅಭಿವೃದ್ಧಿ ಸಚಿವ ರಹೀಂಖಾನ್ ಕೂಡ್ ಬಂಡೆಪ್ಪ ಕಾಶೆಂಪೂರ್ ಅವರ ಜೊತೆಯಲ್ಲಿದ್ದು ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯ ದುರಾವಸ್ಥೆ ಕಂಡು ಸ್ಥಳದಲ್ಲೇ ಇದ್ದ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.