ತುರ್ತು ಆಸ್ಪತ್ರೆಯ ನಿರ್ಮಾಣದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕೂಗು ಬಲವಾಗಿ ಕೇಳಿಬರುತ್ತಿದೆ. ಉತ್ತರ ಕನ್ನಡದಲ್ಲಿ ಎಮರ್ಜೆನ್ಸಿ ಆಸ್ಪತ್ರೆ ಬೇಕು ಎನ್ನುವ ಒತ್ತಾಯದ ನಡುವೆಯೇ ಕೊಡಗಿಗೂ ಇದು ಅಗತ್ಯವಿದೆ ಎಂದು ಟ್ವಿಟರ್ನಲ್ಲಿ ಟ್ರೆಂಡ್ ಆಗಿತ್ತು.
ಮುಖ್ಯಮಂತ್ರಿ ಹಾಗೂ ಆಯಾ ಜಿಲ್ಲೆಯ ಸಂಸದರನ್ನು ಟ್ವಿಟರ್ನಲ್ಲಿ ಉಲ್ಲೇಖ ಮಾಡಿ ಅಗತ್ಯತೆಯನ್ನು ಮನವರಿಕೆ ಮಾಡುವ ಪ್ರಯತ್ನವನ್ನು ನೆಟ್ಟಿಗರು ಮಾಡಿದ್ದಾರೆ. ಈ ಅಭಿಯಾನಕ್ಕೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಹ ದನಿಗೂಡಿಸಿದ್ದರು. ಸದ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ತಮ್ಮ ಬೆಂಬಲ ಸೂಚಿಸಿದ್ದಾರೆ.
ಕೊಡವರ ಮನಸ್ಸು ಗೆದ್ದ ಮುದ್ದು ಹುಡುಗಿ... ಸಿಎಂಗೆ ಮಾಡಿದ್ರು ಈ ಮನವಿ
ಪ್ರಸ್ತುತ ಎಮರ್ಜೆನ್ಸಿ ಹಾಸ್ಪಿಟಲ್ ಕುರಿತಾದ ಟ್ವಿಟರ್ ಅಭಿಯಾನದ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ, "ಉತ್ತರ ಕನ್ನಡ ಹಾಗೂ ಕೊಡಗು ಮಾತ್ರವಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ಇಂತಹ ಆಸ್ಪತ್ರೆಗಳ ಅಗತ್ಯ ಬಹಳಷ್ಟಿದೆ. ಸದ್ಯದ ಎರಡು ಜಿಲ್ಲೆಗಳು ಉದಾಹರಣೆ ಮಾತ್ರ. ಘನತೆವೆತ್ತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ವಿಷಯದ ಕುರಿತಂತೆ ಕಾರ್ಯೋನ್ಮುಖರಾಗುತ್ತಾರೆ ಎನ್ನುವ ವಿಶ್ವಾಸವಿದೆ. ಆದರೂ ರಾಜ್ಯದ ಜನತೆಯ ಪರವಾಗಿ ಈ ವಿಚಾರವಾಗಿ ಆದಷ್ಟು ಶೀಘ್ರವೇ ಗಮನಹರಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.
-
Lot more places in our state require EmergencyHospitals. Kodagu&UttaraKarnataka are jus two examples. Im sure our Honbl CM @hd_kumaraswamy is concerned n would've probed into this matter. However, I humbly request u sir,on behalf of all to look into it sooner.
— Kichcha Sudeepa (@KicchaSudeep) 15 June 2019 " class="align-text-top noRightClick twitterSection" data="
Sincerely,
Sudeep
">Lot more places in our state require EmergencyHospitals. Kodagu&UttaraKarnataka are jus two examples. Im sure our Honbl CM @hd_kumaraswamy is concerned n would've probed into this matter. However, I humbly request u sir,on behalf of all to look into it sooner.
— Kichcha Sudeepa (@KicchaSudeep) 15 June 2019
Sincerely,
SudeepLot more places in our state require EmergencyHospitals. Kodagu&UttaraKarnataka are jus two examples. Im sure our Honbl CM @hd_kumaraswamy is concerned n would've probed into this matter. However, I humbly request u sir,on behalf of all to look into it sooner.
— Kichcha Sudeepa (@KicchaSudeep) 15 June 2019
Sincerely,
Sudeep