ETV Bharat / briefs

12 ಆವೃತ್ತಿಗಳಲ್ಲಿ ಐಪಿಎಲ್​ಗೆ ಕಪ್ಪು ಚುಕ್ಕಿಯಿಟ್ಟ ಹಲವು ವಿವಾದ... ಕಾರಣಕರ್ತರ ಬಗ್ಗೆ ನಿಮಗೆಷ್ಟು ಗೊತ್ತಿದೆ?

author img

By

Published : Apr 4, 2019, 8:03 PM IST

2008ರಲ್ಲಿ ಶುರುವಾದ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಚುಟುಕು ಕ್ರಿಕೆಟ್​ನಲ್ಲಿ​ ಹೊಸ ಪ್ರತಿಭೆಗಳ ಅನಾವರಣಕ್ಕೆ ನಾಂದಿ ಹಾಡಿದೆ. ಆದರೆ ಐಪಿಎಲ್​ ವಿವಾದಗಳಿಗೇನು ಕಡಿಮೆಯಿಲ್ಲ. ಪ್ರತಿಯೊಂದು ವರ್ಷವೂ ಈ ಐಶಾರಾಮಿ ಕ್ರಿಕೆಟ್​ ಲೀಗ್​ನಲ್ಲಿ ಒಂದಿಲ್ಲೊಂದು ವಿವಾದ  ಸದ್ದು ಮಾಡುತ್ತಿರುತ್ತವೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.

ಐಪಿಎಲ್

ಮುಂಬೈ: ಶ್ರೀಮಂತ ಕ್ರಿಕೆಟ್​ ಲೀಗ್​ ಎಂದೇ ಕರೆಯಿಸಿಕೊಳ್ಳುವ ಐಪಿಎಲ್​ ಶುರುವಾದರೆ ಸಾಕು, ಇಡೀ ವಿಶ್ವ ಕ್ರಿಕೆಟ್​ 2 ತಿಂಗಳ ಕಾಲ ಸ್ತಬ್ಧವಾಗಿ ಬಿಡುತ್ತದೆ. ಈ ಎರಡು ತಿಂಗಳು ಕ್ರಿಕೆಟ್​ ಪ್ರಿಯರಿಗೆ ಹಬ್ಬದಂತೆ ಬಾಸವಾಗುತ್ತದೆ ಎಂದರೆ ತಪ್ಪಾಗಲಾರದು.

2008ರಲ್ಲಿ ಶುರುವಾದ ಐಪಿಎಲ್​ ಚುಟುಕು ಕ್ರಿಕೆಟ್​ನಲ್ಲಿ​ ಹೊಸ ಪ್ರತಿಭೆಗಳ ಅನಾವರಣಕ್ಕೆ ನಾಂದಿ ಹಾಡಿತ್ತು. ಸ್ಟಿವ್​ ಸ್ಮಿತ್​, ಡೇವಿಡ್​ ವಾರ್ನರ್​, ಶಾನ್​ ಮಾರ್ಷ್​​ರಂತಹ ಆಸೀಸ್​ ಆಟಗಾರರು, ಭಾರತದ ರವೀಂದ್ರ ಜಡೇಜಾ, ಹಾರ್ದಿಕ್​ ಪಾಂಡ್ಯ, ಮನಿಷ್​ ಪಾಂಡೆ, ಕೃನಾಲ್​ ಪಾಂಡೆ ಅವರಂತಹ ಪ್ರತಿಭೆಗಳ ಅನಾವರಣ ಮಾಡಿದ ಐಪಿಎಲ್​ ವಿವಾದಗಳಿಗೇನು ಕಡಿಮೆಯಿಲ್ಲ. ಪ್ರತಿಯೊಂದು ವರ್ಷವೂ ಈ ಐಶಾರಾಮಿ ಕ್ರಿಕೆಟ್​ ಲೀಗ್​ನಲ್ಲಿ ಒಂದಿಲ್ಲೊಂದು ವಿವಾದ ಸದ್ದು ಮಾಡುತ್ತಿರುತ್ತವೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.

ipl
ಐಪಿಎಲ್​ಗೆ ಕಪ್ಪು ಚುಕ್ಕಿಯಿಟ್ಟ ಹಲವು ವಿವಾದಗಳು


ಶ್ರೀಶಾಂತ್​ಗೆ ಕಪಾಳ ಮೋಕ್ಷ ಮಾಡಿದ್ದ ಭಜ್ಜಿ (2008 )

2008 ರಲ್ಲಿ ನಡೆದ ಚೊಚ್ಚಲ ಐಪಿಎಲ್​ನಲ್ಲಿ ಪಂಜಾಬ್​ ತಂಡದ ಬೌಲರ್​ ಆಗಿದ್ದ ಶ್ರೀಶಾಂತ್​ ಮುಂಬೈ ವಿರುದ್ಧ ಪಂದ್ಯ ಗೆದ್ದ ಖುಷಿಯಲ್ಲಿ ಮುಂಬೈನ ನಾಯಕ ಹರಭಜನ್​ ಸಿಂಗ್​ರನ್ನು ನೋಡಿ ಅನುಚಿತವಾಗಿ ಸಂಭ್ರಮಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಭಜ್ಜಿ , ಕೋಪದಿಂದ ಶ್ರೀಶಾಂತ್ ಕಪಾಳಕ್ಕೆ ಬಾರಿಸಿದ್ದರು. ಈ ಘಟನೆ ಖಂಡಿಸಿದ ಬಿಸಿಸಿಐ ಭಜ್ಜಿಗೆ 11 ಐಪಿಎಲ್​ ಹಾಗೂ 5 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹಾಗೂ ಶ್ರೀಶಾಂತ್​ಗೆ 2 ಪಂದ್ಯ ನಿಷೇಧ ಹೇರಿತ್ತು.

ipl-controversies
ಶ್ರೀಶಾಂತ್​-ಹರಭಜನ್​

ಪಾಕ್​ ಆಟಗಾರರ ನಿಷೇಧ (2009)

2008 ನವೆಂಬರ್​​ 26 ರಂದು ಪಾಕಿಸ್ತಾನದ ಲಷ್ಕರ್​ ಎ ತೋಯ್ಬಾ ಉಗ್ರ ಸಂಘಟನೆ ಮುಂಬೈನ ಹಲವು ಕಡೆ ದಾಳಿ ಮಾಡಿ 160ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದರು. ಹೀಗಾಗಿ 2009 ರ ಐಪಿಎಲ್​ನಲ್ಲಿ ಪಾಕಿಸ್ತಾನದ ಕ್ರಿಕೆಟಿಗರನ್ನು ಆಡಿಸದಿರಲು ಬಿಸಿಸಿಐ ನಿರ್ಧರಿಸಿತ್ತು.


ಲಲಿತ್​ ಮೋದಿ ಅವ್ಯವಹಾರ(2010)

ipl-controversies
ಲಲಿತ್​ ಮೋದಿ


ಐಪಿಎಲ್​ ಸೃಷ್ಟಿಕರ್ತ ಲಲಿತ್​ ಮೋದಿ ಲೀಗ್​ ಪ್ರಸಾರದ ಹಕ್ಕಿನಲ್ಲಿ ಅವ್ಯವಹಾರ, ಪ್ರಾಂಚೈಸಿಗಳಲ್ಲಿ ರಹಸ್ಯ ಷೇರುಗಳನ್ನು ಹೊಂದಿರುವ ಆರೋಪ, ಹಲವು ಪ್ರಾಂಚೈಸಿಗಳಲ್ಲಿ ಸಂಬಂಧಿಕರಿಂದ ಹಣ ಹೂಡಿಕೆ ಮಾಡಿರುವ ಆರೋಪ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾದ ಕಾರಣಕ್ಕಾಗಿ ಐಪಿಎಲ್​ನಿಂದ ನಿಷೇಧ ಹೇರಲಾಯಿತು.

ಚಿಯರ್​ ಲೀಡರ್​ ಡೈರಿ ಪ್ರಕರಣ (2011)
ಮುಂಬೈ ಇಂಡಿಯನ್ಸ್​ ತಂಡದ ಪರ ಚಿಯರ್​ ಮಾಡುತ್ತಿದ್ದ ಚಿಯರ್​ ಲೀಡರ್ ಗುಂಪಿನ ಮಿಸ್​ ಪಾಸ್​ಕ್ವಲೊಟ್ಟೊ ತನ್ನ ವೈಯಕ್ತಿಕ ಡೈರಿಯಲ್ಲಿ ಭಾರತೀಯ ಹಾಗೂ ಕೆಲವು ವಿದೇಶಿ ಆಟಗಾರರ ವರ್ತನೆ ಬಗ್ಗೆ ಕೀಳಾಗಿ ಬರೆದುಕೊಂಡಿದ್ದ ಲೇಖನವನ್ನು ತನ್ನ ಬ್ಲಾಗ್​ನಲ್ಲಿ ಶೇರ್​ ಮಾಡಿದ್ದರು. ಈ ಘಟನೆಯಿಂದ ಆಕೆಯನ್ನು ಐಪಿಎಲ್​ನಿಂದ ನಿಷೇಧಿಸಲಾಗಿತ್ತು.

ಶಾರುಕ್​ಗೆ ವಾಂಖೆಡೆಯಿಂದ ನಿಷೇಧ (2012)

ipl-controversies
ವಾಂಖೆಡೆಯಲ್ಲಿ ಶಾರುಖ್​


ಐಪಿಎಲ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿ ಜತೆ ಜಗಳ ಹಾಗೂ ಅಧಿಕಾರಿಗೆ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ಕೋಲ್ಕತ್ತಾ ನೈಟ್​ರೈಡರ್ಸ್​ನ ಮಾಲಿಕ ಶಾರುಖ್‌ಖಾನ್‌ಗೆ 5 ವರ್ಷಗಳ ನಿಷೇಧ ಹೇರಲಾಗಿತ್ತು. ಶಾರುಖ್ ಮೇಲಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಸ್ವತಃ ಬಿಸಿಸಿಐ ಮನವಿ ಮಾಡಿದರು ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ ನಿಷೇಧ ತೆರವುಗೊಳಿಸುವದಕ್ಕೆ ಒಪ್ಪಿಗೆ ನೀಡಿರಲಿಲ್ಲ.

ಶ್ರೀಶಾಂತ್​ ಮ್ಯಾಚ್​ ಫಿಕ್ಸಿಂಗ್​ ಆರೋಪ (2013)

ipl-controversies
ಶ್ರೀಶಾಂತ್​


2013ರಲ್ಲಿ ನಡೆದ ಐಪಿಎಲ್​ ಪಂದ್ಯಾವಳಿಯ ವೇಳೆ ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿದ್ದ ಶ್ರೀಶಾಂತ್​ ಸೇರಿ ಅಜಿತ್​ ಚಂಡಿಲಾ, ಅಂಕಿತ್​ ಚೌಹಾಣ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಮಾಡಿದ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದ ಮೇಲೆ ಶ್ರೀಶಾಂತ್​ಗೆ ಬಿಸಿಸಿಐ ಅಜೀವ ಕ್ರಿಕೆಟ್​ ನಿಷೇಧ ಹೇರಿತ್ತು. ಪ್ರಕರಣ ಕುಲಾಸೆಯಾದರು ಇನ್ನು ಶ್ರೀಶಾಂತ್​ಗೆ ಕ್ರಿಕೆಟ್​ ಆಡಲು ಬಿಸಿಸಿಐ ಸಮ್ಮತಿಸಿಲ್ಲ.

ಪ್ರೀತಿ ಜಿಂಟಾ-ನೆಸ್​ ವಾಡಿಯಾ ವಿವಾದ(2014)

ಮೇ 30, 2014 ರಂದು ವಾಂಖೆಡೆಯಲ್ಲಿ ನಡೆದಿದ್ದ ಸಿಎಸ್​ಕೆ- ಪಂಜಾಬ್​ ನಡುವಿನ ಪಂದ್ಯದ ವೇಳೆ ಪ್ರೀತಿ ಜಿಂಟಾ ತನ್ನ ಪ್ರಿಯತಮ ನೆಸ್​ ವಾಡಿಯಾ ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಆರೋಪ ಮಾಡಿದ್ದರು. ಈ ಕುರಿತು ನೆಸ್​ವಾಡಿಯ ಮೇಲೆ ಕೇಸ್​ ಕೂಡ ದಾಖಲಿಸಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು.

ipl-controversies
12 ಆವೃತ್ತಿಗಳಲ್ಲಿ ಐಪಿಎಲ್​ಗೆ ಕಪ್ಪು ಚುಕ್ಕಿಯಿಟ್ಟ ಹಲವು ವಿವಾದಗಳು

ಐಪಿಎಲ್​ ನಿಯಮ ಮುರಿದ ವಿರಾಟ್​ ಕೊಹ್ಲಿ (2015)

2015ರಲ್ಲಿ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಮಳೆಯಿಂದ ನಿಲ್ಲಲ್ಪಟ್ಟ ಪಂದ್ಯದ ನಡುವೆ ವೇಳೆ ತನ್ನ ಗೆಳತಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾರನ್ನ ಭೇಟಿ ಮಾಡಿ ಐಪಿಎಲ್​ ರೂಲ್ಸ್​ ಬ್ರೇಕ್​ ಮಾಡಿದ್ದರು.

ಮುಂಬೈ ಮತ್ತು ಪುಣೆಯಿಂದ ಐಪಿಎಲ್​ ಪಂದ್ಯಗಳ ವಾಪಸ್​(2016)

ನೀರಿನ ಅಭಾವದ ಕಾರಣದಿಂದ ಮುಂಬೈ ಹಾಗೂ ಪುಣೆಯಲ್ಲಿ ಐಪಿಎಲ್​ ಪಂದ್ಯಗಳನ್ನು ನಡೆಸಕೂಡದೆಂದು ಮುಂಬೈ ಹೈಕೋರ್ಟ್​ ಸೂಚಿಸಿತ್ತು. ಇದರಿಂದ ಮುಂಬೈನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿತ್ತು. ಪುಣೆ ಸೂಪರ್​ ಜೇಂಟ್ಸ್​ನ ತವರಾದ ಪುಣೆ ಹಾಗೂ ನಾಗ್ಪುರ, ಮುಂಬೈ ಇಂಡಿಯನ್ಸ್​ನ ತವರಾದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ವಿಶಾಖಪಟ್ಟಣಕ್ಕೆ ಹಾಗೂ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.

ಪೊಲಾರ್ಡ್​ ಹಾಗೂ ಮಂಜ್ರೇಕರ್​ ಸ್ಪಾಟ್​ (2017)

ಕೋಲ್ಕತ್ತಾ ನಡುವಿನ ಪಂದ್ಯವೊಂದರಲ್ಲಿ ರನ್​ಗಳಿಸಲು ವಿಫಲರಾದ ಕೀರನ್​ ಪೊಲಾರ್ಡ್​ರನ್ನು ಕುರಿತು ವೀಕ್ಷಕ ವಿವರಣೆ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​ ಪೊಲಾರ್ಡ್​ ಕೊನೆಯ ಆರೇಳು ಓವರ್​ನಲ್ಲಿ ಮಾತ್ರ ಬ್ಯಾಟಿಂಗ್​ ನಡೆಸಲು ಸಮರ್ಥರು ಎಂದು ಹೇಳಿಕೆ ನೀಡಿದ್ದರು. ಇದರಿಂದ ಕುಪಿತಗೊಂಡ ಪೊಲಾರ್ಡ್​ ನಿಮ್ಮ ಬಾಯಿಯಿಂದ ಧನಾತ್ಮಕವಾದ ಯಾವುದಾದರೂ ಒಂದು ಮಾತು ಬರುತ್ತಿದೆಯೇ? ಮಾತನಾಡುತ್ತಿರುವುದಕ್ಕೆ ನಿನಗೆ ದುಡ್ಡು ಸಿಗುತ್ತಿರಬಹುದು, ಅದನ್ನು ಸರಿಯಾಗಿ ನಿರ್ವಹಿಸಿ ಎಂದು ಕಟುವಾಗಿ ಟ್ವೀಟ್​ ಮಾಡಿ ಆಕ್ರೋಶ ಹೊರ ಹಾಕಿದ್ದರು.

ಕಾವೇರಿ ಗಲಾಟೆಗೆ ಸಿಎಸ್​ಕೆ ಪಂದ್ಯಗಳು ಸ್ಥಳಾಂತರ(2018)

ಕಾವೇರಿ ನೀರಿಗಾಗಿ ಚೆನ್ನೈನಲ್ಲಿ ರೈತರ ಹೋರಾಟ ಹೆಚ್ಚಾಗಿದ್ದರಿಂದ ಐಪಿಎಲ್​ ಪಂದ್ಯಗಳಿಗೆ ಸೂಕ್ತ ಬೆಂಬಲ ನೀಡಲಾಗುವುದಿಲ್ಲ ಎಂದು ತಮಿಳು ಸರ್ಕಾರ ಘೋಷಿಸಿದ ಮೇಲೆ ಚೆನ್ನೈನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿತ್ತು.

ಆರ್​ ಅಶ್ವಿನ್​ರ ಮಂಕಡ್​ ಔಟ್​(2019)

ipl-controversies
ಅಶ್ವಿನ್​ ಮಂಕಡ್​

ಐಪಿಎಲ್​ ಆರಂಭಕ್ಕೂ ಮುನ್ನವೇ ಐಪಿಎಲ್​ನಲ್ಲಿ ಮಂಕಡ್​ಗೆ ಮಾನ್ಯತೆಯಿಲ್ಲ ಎಂದು ಘೋಷಿಸಿದ್ದರು ಪಂಜಾಬ್​ ತಂಡದ ನಾಯಕ ಅಶ್ವಿನ್​ ರಾಜಸ್ಥಾನದ ಆರಂಭಿಕ ಆಟಗಾರ ಬಟ್ಲರ್​ರನ್ನು ಮಂಕಡ್​ ಮೂಲಕ ಔಟ್​ ಮಾಡಿ ವಿವಾದಕ್ಕೆ ಕಾರಣರಾದರು.

ಹೀಗೆ ಮನರಂಜನೆಯ ರಸದೌತಣ ನೀಡುವ ಐಪಿಎಲ್​ ಪ್ರತಿವರ್ಷವೂ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗಿದೆ. ಕೆಲವು ಬಾರಿ ಆಟಗಾರರಿಂದ ವಿವಾದವಾದರೆ ಕೆಲವೊಂದು ಬಾರಿ ಪ್ರಾಂಚೈಸಿಗಳ ಕಾರಣದಿಂದ ವಿವಾದ ಸೃಷ್ಟಿಯಾಗಿ ಕ್ರಿಕೆಟ್​ ಸಂಭ್ರಮದ ಜೊತೆಗೆ ಈ ವಿವಾದಗಳು ಐಪಿಎಲ್​ಗೆ ಕಪ್ಪು ಚುಕ್ಕಿಯಾಗುಳಿದುಕೊಳ್ಳುತ್ತಿವೆ.


ಮುಂಬೈ: ಶ್ರೀಮಂತ ಕ್ರಿಕೆಟ್​ ಲೀಗ್​ ಎಂದೇ ಕರೆಯಿಸಿಕೊಳ್ಳುವ ಐಪಿಎಲ್​ ಶುರುವಾದರೆ ಸಾಕು, ಇಡೀ ವಿಶ್ವ ಕ್ರಿಕೆಟ್​ 2 ತಿಂಗಳ ಕಾಲ ಸ್ತಬ್ಧವಾಗಿ ಬಿಡುತ್ತದೆ. ಈ ಎರಡು ತಿಂಗಳು ಕ್ರಿಕೆಟ್​ ಪ್ರಿಯರಿಗೆ ಹಬ್ಬದಂತೆ ಬಾಸವಾಗುತ್ತದೆ ಎಂದರೆ ತಪ್ಪಾಗಲಾರದು.

2008ರಲ್ಲಿ ಶುರುವಾದ ಐಪಿಎಲ್​ ಚುಟುಕು ಕ್ರಿಕೆಟ್​ನಲ್ಲಿ​ ಹೊಸ ಪ್ರತಿಭೆಗಳ ಅನಾವರಣಕ್ಕೆ ನಾಂದಿ ಹಾಡಿತ್ತು. ಸ್ಟಿವ್​ ಸ್ಮಿತ್​, ಡೇವಿಡ್​ ವಾರ್ನರ್​, ಶಾನ್​ ಮಾರ್ಷ್​​ರಂತಹ ಆಸೀಸ್​ ಆಟಗಾರರು, ಭಾರತದ ರವೀಂದ್ರ ಜಡೇಜಾ, ಹಾರ್ದಿಕ್​ ಪಾಂಡ್ಯ, ಮನಿಷ್​ ಪಾಂಡೆ, ಕೃನಾಲ್​ ಪಾಂಡೆ ಅವರಂತಹ ಪ್ರತಿಭೆಗಳ ಅನಾವರಣ ಮಾಡಿದ ಐಪಿಎಲ್​ ವಿವಾದಗಳಿಗೇನು ಕಡಿಮೆಯಿಲ್ಲ. ಪ್ರತಿಯೊಂದು ವರ್ಷವೂ ಈ ಐಶಾರಾಮಿ ಕ್ರಿಕೆಟ್​ ಲೀಗ್​ನಲ್ಲಿ ಒಂದಿಲ್ಲೊಂದು ವಿವಾದ ಸದ್ದು ಮಾಡುತ್ತಿರುತ್ತವೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.

ipl
ಐಪಿಎಲ್​ಗೆ ಕಪ್ಪು ಚುಕ್ಕಿಯಿಟ್ಟ ಹಲವು ವಿವಾದಗಳು


ಶ್ರೀಶಾಂತ್​ಗೆ ಕಪಾಳ ಮೋಕ್ಷ ಮಾಡಿದ್ದ ಭಜ್ಜಿ (2008 )

2008 ರಲ್ಲಿ ನಡೆದ ಚೊಚ್ಚಲ ಐಪಿಎಲ್​ನಲ್ಲಿ ಪಂಜಾಬ್​ ತಂಡದ ಬೌಲರ್​ ಆಗಿದ್ದ ಶ್ರೀಶಾಂತ್​ ಮುಂಬೈ ವಿರುದ್ಧ ಪಂದ್ಯ ಗೆದ್ದ ಖುಷಿಯಲ್ಲಿ ಮುಂಬೈನ ನಾಯಕ ಹರಭಜನ್​ ಸಿಂಗ್​ರನ್ನು ನೋಡಿ ಅನುಚಿತವಾಗಿ ಸಂಭ್ರಮಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಭಜ್ಜಿ , ಕೋಪದಿಂದ ಶ್ರೀಶಾಂತ್ ಕಪಾಳಕ್ಕೆ ಬಾರಿಸಿದ್ದರು. ಈ ಘಟನೆ ಖಂಡಿಸಿದ ಬಿಸಿಸಿಐ ಭಜ್ಜಿಗೆ 11 ಐಪಿಎಲ್​ ಹಾಗೂ 5 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹಾಗೂ ಶ್ರೀಶಾಂತ್​ಗೆ 2 ಪಂದ್ಯ ನಿಷೇಧ ಹೇರಿತ್ತು.

ipl-controversies
ಶ್ರೀಶಾಂತ್​-ಹರಭಜನ್​

ಪಾಕ್​ ಆಟಗಾರರ ನಿಷೇಧ (2009)

2008 ನವೆಂಬರ್​​ 26 ರಂದು ಪಾಕಿಸ್ತಾನದ ಲಷ್ಕರ್​ ಎ ತೋಯ್ಬಾ ಉಗ್ರ ಸಂಘಟನೆ ಮುಂಬೈನ ಹಲವು ಕಡೆ ದಾಳಿ ಮಾಡಿ 160ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದರು. ಹೀಗಾಗಿ 2009 ರ ಐಪಿಎಲ್​ನಲ್ಲಿ ಪಾಕಿಸ್ತಾನದ ಕ್ರಿಕೆಟಿಗರನ್ನು ಆಡಿಸದಿರಲು ಬಿಸಿಸಿಐ ನಿರ್ಧರಿಸಿತ್ತು.


ಲಲಿತ್​ ಮೋದಿ ಅವ್ಯವಹಾರ(2010)

ipl-controversies
ಲಲಿತ್​ ಮೋದಿ


ಐಪಿಎಲ್​ ಸೃಷ್ಟಿಕರ್ತ ಲಲಿತ್​ ಮೋದಿ ಲೀಗ್​ ಪ್ರಸಾರದ ಹಕ್ಕಿನಲ್ಲಿ ಅವ್ಯವಹಾರ, ಪ್ರಾಂಚೈಸಿಗಳಲ್ಲಿ ರಹಸ್ಯ ಷೇರುಗಳನ್ನು ಹೊಂದಿರುವ ಆರೋಪ, ಹಲವು ಪ್ರಾಂಚೈಸಿಗಳಲ್ಲಿ ಸಂಬಂಧಿಕರಿಂದ ಹಣ ಹೂಡಿಕೆ ಮಾಡಿರುವ ಆರೋಪ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾದ ಕಾರಣಕ್ಕಾಗಿ ಐಪಿಎಲ್​ನಿಂದ ನಿಷೇಧ ಹೇರಲಾಯಿತು.

ಚಿಯರ್​ ಲೀಡರ್​ ಡೈರಿ ಪ್ರಕರಣ (2011)
ಮುಂಬೈ ಇಂಡಿಯನ್ಸ್​ ತಂಡದ ಪರ ಚಿಯರ್​ ಮಾಡುತ್ತಿದ್ದ ಚಿಯರ್​ ಲೀಡರ್ ಗುಂಪಿನ ಮಿಸ್​ ಪಾಸ್​ಕ್ವಲೊಟ್ಟೊ ತನ್ನ ವೈಯಕ್ತಿಕ ಡೈರಿಯಲ್ಲಿ ಭಾರತೀಯ ಹಾಗೂ ಕೆಲವು ವಿದೇಶಿ ಆಟಗಾರರ ವರ್ತನೆ ಬಗ್ಗೆ ಕೀಳಾಗಿ ಬರೆದುಕೊಂಡಿದ್ದ ಲೇಖನವನ್ನು ತನ್ನ ಬ್ಲಾಗ್​ನಲ್ಲಿ ಶೇರ್​ ಮಾಡಿದ್ದರು. ಈ ಘಟನೆಯಿಂದ ಆಕೆಯನ್ನು ಐಪಿಎಲ್​ನಿಂದ ನಿಷೇಧಿಸಲಾಗಿತ್ತು.

ಶಾರುಕ್​ಗೆ ವಾಂಖೆಡೆಯಿಂದ ನಿಷೇಧ (2012)

ipl-controversies
ವಾಂಖೆಡೆಯಲ್ಲಿ ಶಾರುಖ್​


ಐಪಿಎಲ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿ ಜತೆ ಜಗಳ ಹಾಗೂ ಅಧಿಕಾರಿಗೆ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ಕೋಲ್ಕತ್ತಾ ನೈಟ್​ರೈಡರ್ಸ್​ನ ಮಾಲಿಕ ಶಾರುಖ್‌ಖಾನ್‌ಗೆ 5 ವರ್ಷಗಳ ನಿಷೇಧ ಹೇರಲಾಗಿತ್ತು. ಶಾರುಖ್ ಮೇಲಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಸ್ವತಃ ಬಿಸಿಸಿಐ ಮನವಿ ಮಾಡಿದರು ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ ನಿಷೇಧ ತೆರವುಗೊಳಿಸುವದಕ್ಕೆ ಒಪ್ಪಿಗೆ ನೀಡಿರಲಿಲ್ಲ.

ಶ್ರೀಶಾಂತ್​ ಮ್ಯಾಚ್​ ಫಿಕ್ಸಿಂಗ್​ ಆರೋಪ (2013)

ipl-controversies
ಶ್ರೀಶಾಂತ್​


2013ರಲ್ಲಿ ನಡೆದ ಐಪಿಎಲ್​ ಪಂದ್ಯಾವಳಿಯ ವೇಳೆ ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿದ್ದ ಶ್ರೀಶಾಂತ್​ ಸೇರಿ ಅಜಿತ್​ ಚಂಡಿಲಾ, ಅಂಕಿತ್​ ಚೌಹಾಣ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಮಾಡಿದ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದ ಮೇಲೆ ಶ್ರೀಶಾಂತ್​ಗೆ ಬಿಸಿಸಿಐ ಅಜೀವ ಕ್ರಿಕೆಟ್​ ನಿಷೇಧ ಹೇರಿತ್ತು. ಪ್ರಕರಣ ಕುಲಾಸೆಯಾದರು ಇನ್ನು ಶ್ರೀಶಾಂತ್​ಗೆ ಕ್ರಿಕೆಟ್​ ಆಡಲು ಬಿಸಿಸಿಐ ಸಮ್ಮತಿಸಿಲ್ಲ.

ಪ್ರೀತಿ ಜಿಂಟಾ-ನೆಸ್​ ವಾಡಿಯಾ ವಿವಾದ(2014)

ಮೇ 30, 2014 ರಂದು ವಾಂಖೆಡೆಯಲ್ಲಿ ನಡೆದಿದ್ದ ಸಿಎಸ್​ಕೆ- ಪಂಜಾಬ್​ ನಡುವಿನ ಪಂದ್ಯದ ವೇಳೆ ಪ್ರೀತಿ ಜಿಂಟಾ ತನ್ನ ಪ್ರಿಯತಮ ನೆಸ್​ ವಾಡಿಯಾ ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಆರೋಪ ಮಾಡಿದ್ದರು. ಈ ಕುರಿತು ನೆಸ್​ವಾಡಿಯ ಮೇಲೆ ಕೇಸ್​ ಕೂಡ ದಾಖಲಿಸಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು.

ipl-controversies
12 ಆವೃತ್ತಿಗಳಲ್ಲಿ ಐಪಿಎಲ್​ಗೆ ಕಪ್ಪು ಚುಕ್ಕಿಯಿಟ್ಟ ಹಲವು ವಿವಾದಗಳು

ಐಪಿಎಲ್​ ನಿಯಮ ಮುರಿದ ವಿರಾಟ್​ ಕೊಹ್ಲಿ (2015)

2015ರಲ್ಲಿ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಮಳೆಯಿಂದ ನಿಲ್ಲಲ್ಪಟ್ಟ ಪಂದ್ಯದ ನಡುವೆ ವೇಳೆ ತನ್ನ ಗೆಳತಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾರನ್ನ ಭೇಟಿ ಮಾಡಿ ಐಪಿಎಲ್​ ರೂಲ್ಸ್​ ಬ್ರೇಕ್​ ಮಾಡಿದ್ದರು.

ಮುಂಬೈ ಮತ್ತು ಪುಣೆಯಿಂದ ಐಪಿಎಲ್​ ಪಂದ್ಯಗಳ ವಾಪಸ್​(2016)

ನೀರಿನ ಅಭಾವದ ಕಾರಣದಿಂದ ಮುಂಬೈ ಹಾಗೂ ಪುಣೆಯಲ್ಲಿ ಐಪಿಎಲ್​ ಪಂದ್ಯಗಳನ್ನು ನಡೆಸಕೂಡದೆಂದು ಮುಂಬೈ ಹೈಕೋರ್ಟ್​ ಸೂಚಿಸಿತ್ತು. ಇದರಿಂದ ಮುಂಬೈನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿತ್ತು. ಪುಣೆ ಸೂಪರ್​ ಜೇಂಟ್ಸ್​ನ ತವರಾದ ಪುಣೆ ಹಾಗೂ ನಾಗ್ಪುರ, ಮುಂಬೈ ಇಂಡಿಯನ್ಸ್​ನ ತವರಾದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ವಿಶಾಖಪಟ್ಟಣಕ್ಕೆ ಹಾಗೂ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.

ಪೊಲಾರ್ಡ್​ ಹಾಗೂ ಮಂಜ್ರೇಕರ್​ ಸ್ಪಾಟ್​ (2017)

ಕೋಲ್ಕತ್ತಾ ನಡುವಿನ ಪಂದ್ಯವೊಂದರಲ್ಲಿ ರನ್​ಗಳಿಸಲು ವಿಫಲರಾದ ಕೀರನ್​ ಪೊಲಾರ್ಡ್​ರನ್ನು ಕುರಿತು ವೀಕ್ಷಕ ವಿವರಣೆ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​ ಪೊಲಾರ್ಡ್​ ಕೊನೆಯ ಆರೇಳು ಓವರ್​ನಲ್ಲಿ ಮಾತ್ರ ಬ್ಯಾಟಿಂಗ್​ ನಡೆಸಲು ಸಮರ್ಥರು ಎಂದು ಹೇಳಿಕೆ ನೀಡಿದ್ದರು. ಇದರಿಂದ ಕುಪಿತಗೊಂಡ ಪೊಲಾರ್ಡ್​ ನಿಮ್ಮ ಬಾಯಿಯಿಂದ ಧನಾತ್ಮಕವಾದ ಯಾವುದಾದರೂ ಒಂದು ಮಾತು ಬರುತ್ತಿದೆಯೇ? ಮಾತನಾಡುತ್ತಿರುವುದಕ್ಕೆ ನಿನಗೆ ದುಡ್ಡು ಸಿಗುತ್ತಿರಬಹುದು, ಅದನ್ನು ಸರಿಯಾಗಿ ನಿರ್ವಹಿಸಿ ಎಂದು ಕಟುವಾಗಿ ಟ್ವೀಟ್​ ಮಾಡಿ ಆಕ್ರೋಶ ಹೊರ ಹಾಕಿದ್ದರು.

ಕಾವೇರಿ ಗಲಾಟೆಗೆ ಸಿಎಸ್​ಕೆ ಪಂದ್ಯಗಳು ಸ್ಥಳಾಂತರ(2018)

ಕಾವೇರಿ ನೀರಿಗಾಗಿ ಚೆನ್ನೈನಲ್ಲಿ ರೈತರ ಹೋರಾಟ ಹೆಚ್ಚಾಗಿದ್ದರಿಂದ ಐಪಿಎಲ್​ ಪಂದ್ಯಗಳಿಗೆ ಸೂಕ್ತ ಬೆಂಬಲ ನೀಡಲಾಗುವುದಿಲ್ಲ ಎಂದು ತಮಿಳು ಸರ್ಕಾರ ಘೋಷಿಸಿದ ಮೇಲೆ ಚೆನ್ನೈನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿತ್ತು.

ಆರ್​ ಅಶ್ವಿನ್​ರ ಮಂಕಡ್​ ಔಟ್​(2019)

ipl-controversies
ಅಶ್ವಿನ್​ ಮಂಕಡ್​

ಐಪಿಎಲ್​ ಆರಂಭಕ್ಕೂ ಮುನ್ನವೇ ಐಪಿಎಲ್​ನಲ್ಲಿ ಮಂಕಡ್​ಗೆ ಮಾನ್ಯತೆಯಿಲ್ಲ ಎಂದು ಘೋಷಿಸಿದ್ದರು ಪಂಜಾಬ್​ ತಂಡದ ನಾಯಕ ಅಶ್ವಿನ್​ ರಾಜಸ್ಥಾನದ ಆರಂಭಿಕ ಆಟಗಾರ ಬಟ್ಲರ್​ರನ್ನು ಮಂಕಡ್​ ಮೂಲಕ ಔಟ್​ ಮಾಡಿ ವಿವಾದಕ್ಕೆ ಕಾರಣರಾದರು.

ಹೀಗೆ ಮನರಂಜನೆಯ ರಸದೌತಣ ನೀಡುವ ಐಪಿಎಲ್​ ಪ್ರತಿವರ್ಷವೂ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗಿದೆ. ಕೆಲವು ಬಾರಿ ಆಟಗಾರರಿಂದ ವಿವಾದವಾದರೆ ಕೆಲವೊಂದು ಬಾರಿ ಪ್ರಾಂಚೈಸಿಗಳ ಕಾರಣದಿಂದ ವಿವಾದ ಸೃಷ್ಟಿಯಾಗಿ ಕ್ರಿಕೆಟ್​ ಸಂಭ್ರಮದ ಜೊತೆಗೆ ಈ ವಿವಾದಗಳು ಐಪಿಎಲ್​ಗೆ ಕಪ್ಪು ಚುಕ್ಕಿಯಾಗುಳಿದುಕೊಳ್ಳುತ್ತಿವೆ.


Intro:Body:



ಕೋಟಿ ಬೆಲೆಗೆ ಹರಾಜಾದ ವಿಶ್ವಕಪ್​ ಪೈನಲ್​ನಲ್ಲಾಡಿದ ಧೋನಿ ಬ್ಯಾಟ್ 



ಮುಂಬೈ: ಶ್ರೀಲಂಕಾ ವಿರುದ್ಧ ವಿಶ್ವಕಪ್​ ಫೈನಲ್​ನಲ್ಲಿ ಧೋನಿ ಬ್ಯಾಟಿಂಗ್​ ನಡೆಸಿದ ರೀಬಕ್​ ಬ್ಯಾಟ್​ 1.1 ಕೋಟಿಗೆ ಹರಾಜಾಗುವ ಮೂಲಕ ಗಿನ್ನೆಸ್ ರೆಕಾರ್ಡ್​ಗೆ ಸೇರಿಕೊಂಡಿದೆ.



ಈಸ್ಟ್ ಮೀಟ್ಸ್ ವೆಸ್ಟ್ ಚಾರಿಟಿ ಡಿನ್ನರ್ ಕಂಪನಿ 2011 ರ ವಿಶ್ವಕಪ್​ ಫೈನಲ್​ನಲ್ಲಿ 85 ಎಸೆತಗಳಲ್ಲಿ 91 ರನ್​ಗಳಿಸಿ ಭಾರತಕ್ಕೆ 28 ವರ್ಷಗಳ ನಂತರ ವಿಶ್ವಕಪ್​ ತಂದುಕೊಟ್ಟಿದ್ದರು. ನುವಾನ್ ಕುಲಶೇಖರ ಓವರ್​ನಲ್ಲಿ ಧೋನಿ ಸಿಕ್ಸರ್​ಗಟ್ಟಿ ಗೆಲುವಿನ ರನ್​ ಬಾರಿಸಿದ್ದರು.



ಇದೀಗ ಧೋನಿಯ ರಿಬಾಕ್ ಬ್ಯಾಟ್ 1,61,295 ಯುಎಸ್ ಡಾಲರ್ (ಸುಮಾರು 1.1 ಕೋಟಿ ರೂ.) ಗಳಿಗೆ ಹರಾಜಾಗಿದೆ. 2011ರಲ್ಲಿ ಲಂಡನ್ ನಲ್ಲಿ ನಡೆದ ಹರಾಜು ಪ್ರತಿಕ್ರಿಯೆಯಲ್ಲಿ ಆರ್ ಕೆ ಗ್ಲೋಬಾಲ್ ಶೇರ್ಸ್ ಅಂಡ್ ಸೆಕ್ಯೂರಿಟಿ ಲಿಮಿಟೆಡ್ ಕಂಪನಿ ಈ ಬ್ಯಾಟನ್ನು ಖರೀದಿಸಿತ್ತು. ಈ ಹಣವನ್ನು ಭಾರತದಲ್ಲಿರುವ ಅನಾಥ ಮಕ್ಕಳ ಅಭಿವೃದ್ಧಿಗೆ ಬಳಕೆ ಮಾಡಲು ವಿನಿಯೋಗಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.



 ಏಪ್ರಿಲ್ 2, 2011 ರಂದು ನಡೆದ ಫೈನಲ್ ಪಂದ್ಯದಲ್ಲಿ ಧೋನಿ ಶ್ರೀಲಂಕಾ ವಿರುದ್ಧ  ಸಿಕ್ಸರ್ ಸಿಡಿಸಿ ಭಾರತಕ್ಕೆ ವಿಶ್ವಕಪ್​ ಗೆದ್ದುಕೊಟ್ಟಿದ್ದರು. ಈ ಮೂಲಕ ಭಾರತ 28 ವರ್ಷಗಳ ಬಳಿಕ ವಿಶ್ವಕಪ್‍ಗೆ ಮುತ್ತಿಟ್ಟಿತ್ತು. ಈ ಸಾಧನೆಗೆ ಸದ್ಯ 8 ವರ್ಷ ಪೂರ್ಣಗೊಂಡಿದ್ದು, ಈ ವೇಳೆಯೇ ಒಂದು ವಿಶೇಷ ಸಾಧನೆಯನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್​ ರೆಕಾರ್ಡ್ಮತ್ತೊಮ್ಮೆ ರಿವೀಲ್​ ಮಾಡಿದೆ.

 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.