ETV Bharat / briefs

ವ್ಯಕ್ತಿ ಸಾವು-ಬದುಕಿನ ನಡುವೆ ಹೋರಾಟ, ಬಂದು ನೋಡದ ಜೆಸ್ಕಾಂ ಅಧಿಕಾರಿಗಳು: ಪ್ರತಿಭಟನೆ

author img

By

Published : May 4, 2019, 5:48 PM IST

ಅವರೆಲ್ಲಾ ನ್ಯಾಯಕ್ಕಾಗಿ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತಿದ್ದಾರೆ. ಜೆಸ್ಕಾಂನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಅವರ ಕುಟುಂಬದ ವ್ಯಕ್ತಿಯೊಬ್ಬರು ವಿದ್ಯುತ್ ಪರಿವರ್ತಕ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆದರೂ ಈವರೆಗೂ ಜೆಸ್ಕಾಂ ಅಧಿಕಾರಿಗಳು ಮಾತ್ರ ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎನ್ನಲಾಗಿದೆ.

ಜೆಸ್ಕಾಂ ಕಚೇರಿ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಕೊಪ್ಪಳ: ಕರ್ತವ್ಯದಲ್ಲಿದ್ದ ಲೈನ್​ಮೆನ್ ಮೇಲೆ ವಿದ್ಯುತ್ ಪರಿವರ್ತಕ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಗಾಯಗೊಂಡ ಲೈನ್​ಮೆನ್ ಸಂಬಂಧಿಕರು ನಗರದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಳೆದ ಏಪ್ರಿಲ್ 27ರಂದು ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಪರಿವರ್ತಕವನ್ನು ಲಾರಿಯಿಂದ ಕೆಳಗೆ ಇಳಿಸಲಾಗುತ್ತಿತ್ತು. ಕರ್ತವ್ಯದಲ್ಲಿದ್ದ ಚೋಳಪ್ಪ ಬೀಸಲದಿನ್ನಿ ಸೇರಿದಂತೆ ಇನ್ನಿತರ ಲೈನ್​ಮೆನ್​ಗಳು 100 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕವನ್ನು ಲಾರಿಯಿಂದ‌‌‌ ಕೆಳಗೆ ಇಳಿಸುತ್ತಿದ್ದರು. ಈ ಸಂದರ್ಭದಲ್ಲಿ ಆ ವಿದ್ಯುತ್ ಪರಿವರ್ತಕ ಲೈನ್‌ಮನ್ ಚೋಳಪ್ಪ ಅವರ ಮೇಲೆ ಬಿದ್ದಿದೆ. ಪರಿಣಾಮವಾಗಿ ಚೋಳಪ್ಪ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಚೋಳಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೆಸ್ಕಾಂ ಕಚೇರಿ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಇನ್ನು ಈ ಘಟನೆ ನಡೆದು, ಸಿಬ್ಬಂದಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಪ್ರತಿಭಟನಾನಿರತ ಲೈನ್​ಮನ್ ಚೋಳಪ್ಪ ಅವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಟಿಸಿಯನ್ನು ಲಾರಿಯಿಂದ ಕೆಳಗೆ ಇಳಿಸಲು ಕ್ರೇನ್ ಬಳಕೆ ಮಾಡಬೇಕು. ಆದರೆ, ಇಲ್ಲಿ ಸಿಬ್ಬಂದಿಯನ್ನು ಬಳಸಿಕೊಂಡು ಇಂತಹ ಅಪಾಯಕಾರಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ದುರ್ಘಟನೆ ನಡೆದರೂ ಸಹ ಸಂಬಂಧಿಸಿದ ಸೆಕ್ಷನ್ ಅಧಿಕಾರಿಯ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗಾಯಗೊಂಡು ಆಸ್ಪತ್ರೆ ಪಾಲಾಗಿರುವ ಲೈನ್​​ಮನ್ ಚೋಳಪ್ಪ ಅವರ ಸಹೋದರಿ ಡಾ. ಚಂದ್ರಕಲಾ ಆಗ್ರಹಿಸಿದ್ದಾರೆ.

ಜೆಸ್ಕಾಂನ ಯಾವ ಸಿಬ್ಬಂದಿಯೂ ಇನ್ಮೇಲೆ ಇಂತಹ ಸಂಕಷ್ಟಕ್ಕೆ ಸಿಲುಕಬಾರದು. ಸುರಕ್ಷತೆಯ ಉಪಕರಣಗಳನ್ನು ಜೆಸ್ಕಾಂ ಒದಗಿಸಬೇಕು ಹಾಗೂ ಈ ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೊಪ್ಪಳ: ಕರ್ತವ್ಯದಲ್ಲಿದ್ದ ಲೈನ್​ಮೆನ್ ಮೇಲೆ ವಿದ್ಯುತ್ ಪರಿವರ್ತಕ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಗಾಯಗೊಂಡ ಲೈನ್​ಮೆನ್ ಸಂಬಂಧಿಕರು ನಗರದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಳೆದ ಏಪ್ರಿಲ್ 27ರಂದು ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಪರಿವರ್ತಕವನ್ನು ಲಾರಿಯಿಂದ ಕೆಳಗೆ ಇಳಿಸಲಾಗುತ್ತಿತ್ತು. ಕರ್ತವ್ಯದಲ್ಲಿದ್ದ ಚೋಳಪ್ಪ ಬೀಸಲದಿನ್ನಿ ಸೇರಿದಂತೆ ಇನ್ನಿತರ ಲೈನ್​ಮೆನ್​ಗಳು 100 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕವನ್ನು ಲಾರಿಯಿಂದ‌‌‌ ಕೆಳಗೆ ಇಳಿಸುತ್ತಿದ್ದರು. ಈ ಸಂದರ್ಭದಲ್ಲಿ ಆ ವಿದ್ಯುತ್ ಪರಿವರ್ತಕ ಲೈನ್‌ಮನ್ ಚೋಳಪ್ಪ ಅವರ ಮೇಲೆ ಬಿದ್ದಿದೆ. ಪರಿಣಾಮವಾಗಿ ಚೋಳಪ್ಪ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಚೋಳಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೆಸ್ಕಾಂ ಕಚೇರಿ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಇನ್ನು ಈ ಘಟನೆ ನಡೆದು, ಸಿಬ್ಬಂದಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಪ್ರತಿಭಟನಾನಿರತ ಲೈನ್​ಮನ್ ಚೋಳಪ್ಪ ಅವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಟಿಸಿಯನ್ನು ಲಾರಿಯಿಂದ ಕೆಳಗೆ ಇಳಿಸಲು ಕ್ರೇನ್ ಬಳಕೆ ಮಾಡಬೇಕು. ಆದರೆ, ಇಲ್ಲಿ ಸಿಬ್ಬಂದಿಯನ್ನು ಬಳಸಿಕೊಂಡು ಇಂತಹ ಅಪಾಯಕಾರಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ದುರ್ಘಟನೆ ನಡೆದರೂ ಸಹ ಸಂಬಂಧಿಸಿದ ಸೆಕ್ಷನ್ ಅಧಿಕಾರಿಯ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗಾಯಗೊಂಡು ಆಸ್ಪತ್ರೆ ಪಾಲಾಗಿರುವ ಲೈನ್​​ಮನ್ ಚೋಳಪ್ಪ ಅವರ ಸಹೋದರಿ ಡಾ. ಚಂದ್ರಕಲಾ ಆಗ್ರಹಿಸಿದ್ದಾರೆ.

ಜೆಸ್ಕಾಂನ ಯಾವ ಸಿಬ್ಬಂದಿಯೂ ಇನ್ಮೇಲೆ ಇಂತಹ ಸಂಕಷ್ಟಕ್ಕೆ ಸಿಲುಕಬಾರದು. ಸುರಕ್ಷತೆಯ ಉಪಕರಣಗಳನ್ನು ಜೆಸ್ಕಾಂ ಒದಗಿಸಬೇಕು ಹಾಗೂ ಈ ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Intro:


Body:ಕೊಪ್ಪಳ:- ಕರ್ತವ್ಯದಲ್ಲಿದ್ದಾಗ ಲೈನ್ಮನ್ ಮೇಲೆ ವಿದ್ಯುತ್ ಪರಿವರ್ತಕ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಗಾಯಗೊಂಡ ಲೈನ್ ಮನ್ ಸಂಬಂಧಿಕರು ನಗರದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕಳೆದ ಏಪ್ರಿಲ್ 27 ರಂದು ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಪರಿವರ್ತಕವನ್ನು ಲಾರಿಯಿಂದ ಕೆಳಗೆ ಇಳಿಸಲಾಗುತ್ತಿತ್ತು. ಕರ್ತವ್ಯದಲ್ಲಿದ್ದ ಚೋಳಪ್ಪ ಬೀಸಲದಿನ್ನಿ ಸೇರಿದಂತೆ ಇನ್ನಿತರ ಲೈನ್ ಮನ್ ಗಳು ೧೦೦ ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕವನ್ನು ಲಾರಿಯಿಂದ‌‌‌ ಕೆಳಗೆ ಇಳಿಸುತ್ತಿದ್ದರು. ಈ ಸಂದರ್ಭದಲ್ಲಿ ಆ ವಿದ್ಯುತ್ ಪರಿವರ್ತಕ ಲೈನ್‌ಮನ್ ಚೋಳಪ್ಪ ಅವರ ಮೇಲೆ ಬಿದ್ದಿದೆ. ಪರಿಣಾಮವಾಗಿ ಚೋಳಪ್ಪ ತೀವ್ರಗಾಯಗೊಂಡಿದ್ದಾನೆ. ಗಾಯಗೊಂಡ ಚೋಳಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಡೆದು ಸಿಬ್ಬಂದಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರೂ ಸಹ ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಪ್ರತಿಭಟನಾನಿರತ ಲೈನ್ ಮನ್ ಚೋಳಪ್ಪ ಅವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಟಿಸಿಯನ್ನು ಲಾರಿಯಿಂದ ಕೆಳಗೆ ಇಳಿಸಲು ಕ್ರೇನ್ ಬಳಕೆ ಮಾಡಬೇಕು. ಆದರೆ, ಇಲ್ಲಿ ಸಿಬ್ಬಂದಿಯನ್ನು ಬಳಸಿಕೊಂಡು ಇಂತಹ ಅಪಾಯಕಾರಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ದುರ್ಘಟನೆ ನಡೆದರೂ ಸಹ ಸಂಬಂಧಿಸಿದ ಸೆಕ್ಷನ್ ಅಧಿಕಾರಿಯ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗಾಯಗೊಂಡು ಆಸ್ಪತ್ರೆ ಪಾಲಾಗಿರುವ ಲೈನ್ ಮನ್ ಚೋಳಪ್ಪ ಅವರ ಸಹೋದರಿ ಡಾ. ಚಂದ್ರಕಲಾ‌ ಅವರು ಆಗ್ರಹಿಸಿದ್ದಾರೆ. ಜೆಸ್ಕಾಂನ ಯಾವ ಸಿಬ್ಬಂದಿಯೂ ಇನ್ಮೇಲೆ ಇಂತಹ ಸಂಕಷ್ಟಕ್ಕೆ ಸಿಲುಕಬಾರದು. ಸುರಕ್ಷತೆಯ ಉಪಕರಣಗಳನ್ನು ಜೆಸ್ಕಾಂ ಒದಗಿಸಬೇಕು ಹಾಗೂ ಈ ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೈಟ್1:- ಡಾ. ಚಂದ್ರಕಲಾ, ಗಾಯಗೊಂಡ ಲೈನ್ ಮನ್ ಚೋಳಪ್ಪ ಸಹೋದರಿ.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.