ETV Bharat / briefs

'ವಾಯು' ರಿವರ್ಸ್​ ಗೇರ್​... ಗುಜರಾತ್​ನತ್ತ ಮತ್ತೆ ಬರ್ತಿದೆ ಸೈಕ್ಲೋನ್​​..!

ಚಂಡಮಾರುತದ ಪರಿಣಾಮ ಸೌರಾಷ್ಟ್ರ ಹಾಗೂ ಕಛ್ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಗುಜರಾತ್​ನ ಕರಾವಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಗಾಳಿಯ ಜೊತೆಗೆ ವರ್ಷಧಾರೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

author img

By

Published : Jun 16, 2019, 12:32 PM IST

ಸೈಕ್ಲೋನ್

ಅಹಮದಾಬಾದ್: ಜೂನ್​ 13ರಂದು ಗುಜರಾತ್ ಕರಾವಳಿಗೆ ಅಪ್ಪಳಿಸಬೇಕಿದ್ದ ವಾಯು ಚಂಡಮಾರುತ ಕೊನೇ ಕ್ಷಣದಲ್ಲಿ ಪಥ ಬದಲಿಸಿತ್ತು. ಪರಿಣಾಮ ಗಾಂಧಿ ನಾಡು ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿತ್ತು.

ಆದರೆ ವಾಯು ಚಂಡಮಾರುತ ಮತ್ತೊಮ್ಮೆ ಗುಜರಾತ್​ ಮೇಲೆ ಕರಾಳ ದೃಷ್ಟಿ ಬೀರಿದೆ. ವಾಯು ಚಂಡಮಾರುತ ಗುಜರಾತ್​​ನತ್ತ ತಿರುಗಿದ್ದು ಸೋಮವಾರ ಮಧ್ಯರಾತ್ರಿ ಕರಾವಳಿಯಲ್ಲಿ ಹಾದುಹೋಗಲಿದೆ.

ಚಂಡಮಾರುತದ ಪರಿಣಾಮ ಸೌರಾಷ್ಟ್ರ ಹಾಗೂ ಕಛ್ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಗುಜರಾತ್​ನ ಕರಾವಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಗಾಳಿಯ ಜೊತೆಗೆ ವರ್ಷಧಾರೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರರು ಕೆಲ ದಿನಗಳವರೆಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಸಲಾಗಿದೆ. ಮಧ್ಯ ಪ್ರದೇಶ, ಛತ್ತೀಸ್​ಗಢ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್​​, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್​​, ಬಿಹಾರ್​​ ರಾಜ್ಯಗಳಲ್ಲಿ ಮಿಂಚು- ಗುಡುಗಿನ ಜೊತೆಗೆ ಗಾಳಿಯ ವೇಗವೂ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅಹಮದಾಬಾದ್: ಜೂನ್​ 13ರಂದು ಗುಜರಾತ್ ಕರಾವಳಿಗೆ ಅಪ್ಪಳಿಸಬೇಕಿದ್ದ ವಾಯು ಚಂಡಮಾರುತ ಕೊನೇ ಕ್ಷಣದಲ್ಲಿ ಪಥ ಬದಲಿಸಿತ್ತು. ಪರಿಣಾಮ ಗಾಂಧಿ ನಾಡು ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿತ್ತು.

ಆದರೆ ವಾಯು ಚಂಡಮಾರುತ ಮತ್ತೊಮ್ಮೆ ಗುಜರಾತ್​ ಮೇಲೆ ಕರಾಳ ದೃಷ್ಟಿ ಬೀರಿದೆ. ವಾಯು ಚಂಡಮಾರುತ ಗುಜರಾತ್​​ನತ್ತ ತಿರುಗಿದ್ದು ಸೋಮವಾರ ಮಧ್ಯರಾತ್ರಿ ಕರಾವಳಿಯಲ್ಲಿ ಹಾದುಹೋಗಲಿದೆ.

ಚಂಡಮಾರುತದ ಪರಿಣಾಮ ಸೌರಾಷ್ಟ್ರ ಹಾಗೂ ಕಛ್ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಗುಜರಾತ್​ನ ಕರಾವಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಗಾಳಿಯ ಜೊತೆಗೆ ವರ್ಷಧಾರೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರರು ಕೆಲ ದಿನಗಳವರೆಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಸಲಾಗಿದೆ. ಮಧ್ಯ ಪ್ರದೇಶ, ಛತ್ತೀಸ್​ಗಢ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್​​, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್​​, ಬಿಹಾರ್​​ ರಾಜ್ಯಗಳಲ್ಲಿ ಮಿಂಚು- ಗುಡುಗಿನ ಜೊತೆಗೆ ಗಾಳಿಯ ವೇಗವೂ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Intro:Body:



'ವಾಯು' ರಿವರ್ಸ್​ ಗೇರ್​... ಗುಜರಾತ್​ನತ್ತ ಬರ್ತಿದೆ ಸೈಕ್ಲೋನ್​​..!



ಅಹಮದಾಬಾದ್: ಜೂನ್​ 13ರಂದು ಗುಜರಾತ್ ಕರಾವಳಿಗೆ ಅಪ್ಪಳಿಸಬೇಕಿದ್ದ ವಾಯು ಚಂಡಮಾರುತ ಕೊನೇ ಕ್ಷಣದಲ್ಲಿ ಪಥ ಬದಲಿಸಿತ್ತು. ಪರಿಣಾಮ ಗಾಂಧಿ ನಾಡು ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿತ್ತು.



ಆದರೆ ವಾಯು ಚಂಡಮಾರುತ ಮತ್ತೊಮ್ಮೆ ಗುಜರಾತ್​ ಮೇಲೆ ಕರಾಳ ದೃಷ್ಟಿ ಬೀರಿದೆ. ವಾಯು ಚಂಡಮಾರುತ ಗುಜರಾತ್​​ನತ್ತ ತಿರುಗಿದ್ದು ಸೋಮವಾರ ಮಧ್ಯರಾತ್ರಿ ಕರಾವಳಿಯಲ್ಲಿ ಹಾದುಹೋಗಲಿದೆ.



ಚಂಡಮಾರುತದ ಪರಿಣಾಮ ಸೌರಾಷ್ಟ್ರ ಹಾಗೂ ಕಛ್ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಗುಜರಾತ್​ನ ಕರಾವಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಗಾಳಿಯ ಜೊತೆಗೆ ವರ್ಷಧಾರೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.



ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರರು ಕೆಲ ದಿನಗಳವರೆಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಸಲಾಗಿದೆ. ಮಧ್ಯ ಪ್ರದೇಶ, ಛತ್ತೀಸ್​ಗಢ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್​​, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್​​, ಬಿಹಾರ್​​ ರಾಜ್ಯಗಳಲ್ಲಿ ಮಿಂಚು- ಗುಡುಗಿನ ಜೊತೆಗೆ ಗಾಳಿಯ ವೇಗವೂ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.