ETV Bharat / bharat

ವ್ಯಕ್ತಿಗೆ ತಗುಲಿತು 11 ಸಾವಿರ ವೋಲ್ಟ್​ ವಿದ್ಯುತ್​ ತಂತಿ.. ದೇಶಿ ವಿಧಾನದಿಂದ ಆತನ ಪ್ರಾಣ ಉಳಿಸಿದ್ರು ಜನ

author img

By

Published : Jul 5, 2022, 6:07 PM IST

Updated : Jul 5, 2022, 6:49 PM IST

ವಿದ್ಯುತ್​ ಶಾಕ್​ನಿಂದ ನಿಶ್ಶಕ್ತಿಗೊಂಡಿದ್ದ ವ್ಯಕ್ತಿ ಇಡೀ ದೇಹವನ್ನು ಗ್ರಾಮಸ್ಥರು ಕೈಯಿಂದ ತಿಕ್ಕಿ, ಕುತ್ತಿಗೆಯವರೆಗೆ ಮಣ್ಣಿನಲ್ಲಿ ಒಂದು ಗಂಟೆ ಕಾಲ ಹೂತಿದ್ದಾರೆ. ಇದರಿಂದ ಆತ ಚೇತರಿಸಿಕೊಂಡಿದ್ದಾರೆ.

youth-was-electrocuted-when-he-came-in-contact-with-an-11000-volt-wire-in-punjab
11 ಸಾವಿರ ವೋಲ್ಟ್​ ವಿದ್ಯುತ್​ ತಂತಿ ತಗುಲಿದ ವ್ಯಕ್ತಿಯ ಜೀವ ಉಳಿಸಿದ ಗ್ರಾಮಸ್ಥರು

ತರ್ನ್​ ತರನ್​ (ಪಂಜಾಬ್​): 11 ಸಾವಿರ ವೋಲ್ಟ್​ ವಿದ್ಯುತ್​ ತಂತಿ ತಗುಲಿ ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ತಮ್ಮ ಸಮಯಪ್ರಜ್ಞೆಯಿಂದ ಉಳಿಸಿಕೊಂಡಿರುವ ಅಪರೂಪದ ಘಟನೆ ಪಂಜಾಬ್​ನ ತರ್ನ್​​ ತರನ್​ ಜಿಲ್ಲೆಯಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ವ್ಯಕ್ತಿಯನ್ನು ಮಣ್ಣಿನಲ್ಲಿ ಇಡೀ ದೇಹವನ್ನು ಹೂಳುವ ಮೂಲಕ ಆತನನ್ನು ಸಾವಿನಿಂದ ಪಾರು ಮಾಡಿದ್ದಾರೆ.

ಇಲ್ಲಿನ ಬಹಾ ಬಿಂಧಿ ಚಂದ್​ ಕಾಲೋನಿಯಲ್ಲಿ ಮನೆಯ ಮೇಲೆ ಹಾದು ಹೋಗಿರುವ 11 ಸಾವಿರ (11 ಕೆವಿ) ವೋಲ್ಟ್​ ವಿದ್ಯುತ್​ ತಂತಿ ತಗುಲಿ ನಿಶಾನ್​ ಸಿಂಗ್​ ಎಂಬಾತ ಗಂಭೀರ ಸ್ಥಿತಿಗೆ ತಲುಪಿದ್ದರು. ತಕ್ಷಣವೇ ಸ್ಥಳೀಯರು ತಮಗೆ ತಿಳಿದ ದೇಶಿಯ ವಿಧಾನದ ಮೂಲಕ ಆತನ ಪ್ರಾಣ ಉಳಿಸಿದ್ದಾರೆ. ವಿದ್ಯುತ್​ ಶಾಕ್​ನಿಂದ ನಿಶ್ಶಕ್ತಿಗೊಂಡಿದ್ದ ವ್ಯಕ್ತಿ ಇಡೀ ದೇಹವನ್ನು ಕೈಯಿಂದ ತಿಕ್ಕಿ, ಕುತ್ತಿಗೆಯವರೆಗೆ ಮಣ್ಣಿನಲ್ಲಿ ಒಂದು ಗಂಟೆ ಕಾಲ ಹೂತಿದ್ದಾರೆ. ಇದರಿಂದ ಆತ ಚೇತರಿಸಿಕೊಂಡಿದ್ದಾರೆ.

ಇಬ್ಬರು ಮಕ್ಕಳ ತಂದೆಯಾಗಿರುವ ನಿಶಾನ್ ಸಿಂಗ್ ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್​ ತಂತಿ ತೆರವು ಮಾಡುವಂತೆ ಇಂಧನ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರು. ಅಲ್ಲದೇ, 20 ದಿನಗಳ ಹಿಂದೆಯಷ್ಟೇ ಮನೆಗಳ ಮೇಲಿನ ವಿದ್ಯುತ್​ ತಂತಿಗಳನ್ನು ತೆರವುಗೊಳಿಸುವಂತೆ ಶಾಸಕರು ಕೂಡ ಸೂಚಿಸಿದ್ದರು. ಆದರೆ, ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗ್ತಿದೆ.

11 ಸಾವಿರ ವೋಲ್ಟ್​ ವಿದ್ಯುತ್​ ತಂತಿ ತಗುಲಿದ ವ್ಯಕ್ತಿಯ ಜೀವ ಉಳಿಸಿದ ಗ್ರಾಮಸ್ಥರು

ಇನ್ನೊಂದೆಡೆ ನಿಶಾನ್ ಸಿಂಗ್​ಗೆ ವಿದ್ಯುತ್​ ಶಾಕ್​ ಹೊಡೆದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 11 ಕೆವಿ ವಿದ್ಯುತ್​ ವೈರ್‌ ವ್ಯಕ್ತಿಗೆ ಸ್ಪರ್ಶಿಸಿದರೆ, ಲೈನ್ ಟ್ರಿಪ್ ಆಗುತ್ತಿತ್ತು. ಆದರೆ, ಅಂತಹ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇದೆಂಥಾ ವಿಚಿತ್ರ.. ರೈತನ ಹೊಲದಲ್ಲಿ ಏಕಾಏಕಿ ಚಿಮ್ಮಿದ ನೀರು!

ತರ್ನ್​ ತರನ್​ (ಪಂಜಾಬ್​): 11 ಸಾವಿರ ವೋಲ್ಟ್​ ವಿದ್ಯುತ್​ ತಂತಿ ತಗುಲಿ ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ತಮ್ಮ ಸಮಯಪ್ರಜ್ಞೆಯಿಂದ ಉಳಿಸಿಕೊಂಡಿರುವ ಅಪರೂಪದ ಘಟನೆ ಪಂಜಾಬ್​ನ ತರ್ನ್​​ ತರನ್​ ಜಿಲ್ಲೆಯಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ವ್ಯಕ್ತಿಯನ್ನು ಮಣ್ಣಿನಲ್ಲಿ ಇಡೀ ದೇಹವನ್ನು ಹೂಳುವ ಮೂಲಕ ಆತನನ್ನು ಸಾವಿನಿಂದ ಪಾರು ಮಾಡಿದ್ದಾರೆ.

ಇಲ್ಲಿನ ಬಹಾ ಬಿಂಧಿ ಚಂದ್​ ಕಾಲೋನಿಯಲ್ಲಿ ಮನೆಯ ಮೇಲೆ ಹಾದು ಹೋಗಿರುವ 11 ಸಾವಿರ (11 ಕೆವಿ) ವೋಲ್ಟ್​ ವಿದ್ಯುತ್​ ತಂತಿ ತಗುಲಿ ನಿಶಾನ್​ ಸಿಂಗ್​ ಎಂಬಾತ ಗಂಭೀರ ಸ್ಥಿತಿಗೆ ತಲುಪಿದ್ದರು. ತಕ್ಷಣವೇ ಸ್ಥಳೀಯರು ತಮಗೆ ತಿಳಿದ ದೇಶಿಯ ವಿಧಾನದ ಮೂಲಕ ಆತನ ಪ್ರಾಣ ಉಳಿಸಿದ್ದಾರೆ. ವಿದ್ಯುತ್​ ಶಾಕ್​ನಿಂದ ನಿಶ್ಶಕ್ತಿಗೊಂಡಿದ್ದ ವ್ಯಕ್ತಿ ಇಡೀ ದೇಹವನ್ನು ಕೈಯಿಂದ ತಿಕ್ಕಿ, ಕುತ್ತಿಗೆಯವರೆಗೆ ಮಣ್ಣಿನಲ್ಲಿ ಒಂದು ಗಂಟೆ ಕಾಲ ಹೂತಿದ್ದಾರೆ. ಇದರಿಂದ ಆತ ಚೇತರಿಸಿಕೊಂಡಿದ್ದಾರೆ.

ಇಬ್ಬರು ಮಕ್ಕಳ ತಂದೆಯಾಗಿರುವ ನಿಶಾನ್ ಸಿಂಗ್ ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್​ ತಂತಿ ತೆರವು ಮಾಡುವಂತೆ ಇಂಧನ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರು. ಅಲ್ಲದೇ, 20 ದಿನಗಳ ಹಿಂದೆಯಷ್ಟೇ ಮನೆಗಳ ಮೇಲಿನ ವಿದ್ಯುತ್​ ತಂತಿಗಳನ್ನು ತೆರವುಗೊಳಿಸುವಂತೆ ಶಾಸಕರು ಕೂಡ ಸೂಚಿಸಿದ್ದರು. ಆದರೆ, ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗ್ತಿದೆ.

11 ಸಾವಿರ ವೋಲ್ಟ್​ ವಿದ್ಯುತ್​ ತಂತಿ ತಗುಲಿದ ವ್ಯಕ್ತಿಯ ಜೀವ ಉಳಿಸಿದ ಗ್ರಾಮಸ್ಥರು

ಇನ್ನೊಂದೆಡೆ ನಿಶಾನ್ ಸಿಂಗ್​ಗೆ ವಿದ್ಯುತ್​ ಶಾಕ್​ ಹೊಡೆದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 11 ಕೆವಿ ವಿದ್ಯುತ್​ ವೈರ್‌ ವ್ಯಕ್ತಿಗೆ ಸ್ಪರ್ಶಿಸಿದರೆ, ಲೈನ್ ಟ್ರಿಪ್ ಆಗುತ್ತಿತ್ತು. ಆದರೆ, ಅಂತಹ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇದೆಂಥಾ ವಿಚಿತ್ರ.. ರೈತನ ಹೊಲದಲ್ಲಿ ಏಕಾಏಕಿ ಚಿಮ್ಮಿದ ನೀರು!

Last Updated : Jul 5, 2022, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.