ETV Bharat / bharat

ಏಕರೂಪ ನಾಗರಿಕ ಸಂಹಿತೆ ರಾಷ್ಟ್ರೀಯ ವಿಚಾರ, ಜಾರಿಗೆ ಬದ್ಧ: ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ

author img

By

Published : Nov 27, 2022, 8:34 PM IST

ಗುಜರಾತ್‌ನಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಬಿಜೆಪಿ ಬೆಂಬಲದಿಂದ ಭಾರತದ ರಾಷ್ಟ್ರಪತಿಯಾದರು. ನಂತರ ಕೇಂದ್ರದ (ನರೇಂದ್ರ) ಮೋದಿ ಸರ್ಕಾರವು ಮುಸ್ಲಿಂ ರಾಜ್ಯಪಾಲರನ್ನು ನೇಮಿಸಿತು. ಹಾಗಾಗಿ ನಾವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ತತ್ವವನ್ನು ಅನುಸರಿಸುತ್ತೇವೆ. ಚುನಾವಣೆಗಳಿಗೆ ಟಿಕೆಟ್​ಗಳನ್ನು ಸಂಪೂರ್ಣವಾಗಿ ಗೆಲ್ಲುವ ಆಧಾರದ ಮೇಲೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಏಕರೂಪ ನಾಗರಿಕ ಸಂಹಿತೆ ರಾಷ್ಟ್ರೀಯ ವಿಚಾರ, ಜಾರಿಗೆ ಬದ್ಧ: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ
Uniform Civil Code national issue committed to implementation BJP President JP Nadda

ಅಹಮದಾಬಾದ್: ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ಮತ್ತು ಈಗ ಗುಜರಾತ್ ಚುನಾವಣೆ ಸೇರಿದಂತೆ ಹಲವು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರವಸೆ ನೀಡಿದ್ದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪಕ್ಷಕ್ಕೆ ರಾಷ್ಟ್ರೀಯ ವಿಚಾರ ಹಾಗೂ ಇದರ ಜಾರಿಗೆ ಬಿಜೆಪಿ ಬದ್ಧವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಭಾನುವಾರ ಹೇಳಿದ್ದಾರೆ.

ದೇಶದ ಸಂಪನ್ಮೂಲಗಳು ಮತ್ತು ಅದರ ಜವಾಬ್ದಾರಿಗಳು ಎಲ್ಲರಿಗೂ ಸಮಾನವಾಗಿವೆ. ಆದ್ದರಿಂದ, ಯುಸಿಸಿ ಸ್ವಾಗತಾರ್ಹ ಹೆಜ್ಜೆಯಾಗಿದೆ. ಯುಸಿಸಿಯನ್ನು ಸಾಧ್ಯವಾದಷ್ಟು ರಾಜ್ಯಗಳಲ್ಲಿ ಜಾರಿಗೆ ತರಲು ನಾವು ಬಯಸುತ್ತೇವೆ ಎಂದು ನಡ್ಡಾ ಹೇಳಿದರು.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶ ಮತ್ತು ಸಮಾಜದ ವಿರುದ್ಧ ಕೆಲಸ ಮಾಡುವ ಶಕ್ತಿಗಳ ಮೇಲೆ ನಿಗಾ ಇಡುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಮನುಷ್ಯನ ದೇಹದಲ್ಲಿನ ಪ್ರತಿಕಾಯಗಳಂತೆ, ಕೆಟ್ಟ ಕೋಶಗಳ ಮೇಲೆ ನಿಗಾ ಇರಿಸಿ. ದೇಶದಲ್ಲಿ ರಾಷ್ಟ್ರವಿರೋಧಿ ಜೀವಕೋಶಗಳ ಮೇಲೆ ನಿಗಾ ಇಡುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದರು.

ಇನ್ನು, ಕೆಲವು ಕೋಶಗಳು ಗುಪ್ತವಾಗಿ ಕೆಲಸ ಮಾಡುತ್ತವೆ ಆದ್ದರಿಂದ ಅಂತಹ ಕೋಶಗಳ ಮೇಲೆ ನಿಗಾ ಇಡಲು ಈ ಧಾರ್ಮಿಕ ಮೂಲಭೂತವಾದಿ ವಿರೋಧಿ (ಆ್ಯಂಟಿ ರಾಡಿಕಲೈಸೇಶನ್) ಸೆಲ್ ಅಗತ್ಯವಿದೆ ಎಂದು ಬಿಜೆಪಿ ಮುಖ್ಯಸ್ಥರು ಹೇಳಿದರು.

ಗುಜರಾತ್‌ನಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಬಿಜೆಪಿ ಬೆಂಬಲದಿಂದ ಭಾರತದ ರಾಷ್ಟ್ರಪತಿಯಾದರು. ನಂತರ ಕೇಂದ್ರದ (ನರೇಂದ್ರ) ಮೋದಿ ಸರ್ಕಾರವು ಮುಸ್ಲಿಂ ರಾಜ್ಯಪಾಲರನ್ನು ನೇಮಿಸಿತು. ಹಾಗಾಗಿ ನಾವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ತತ್ವವನ್ನು ಅನುಸರಿಸುತ್ತೇವೆ. ಚುನಾವಣೆಗಳಿಗೆ ಟಿಕೆಟ್​ಗಳನ್ನು ಸಂಪೂರ್ಣವಾಗಿ ಗೆಲ್ಲುವ ಆಧಾರದ ಮೇಲೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ತನ್ನ ಪ್ರತಿಸ್ಪರ್ಧಿಗಳಂತೆ ಗುಜರಾತ್ ಚುನಾವಣೆಗೆ ತನ್ನ ಪ್ರಣಾಳಿಕೆಯಲ್ಲಿ ಹಲವಾರು ಉಚಿತ ಕೊಡುಗೆ ಘೋಷಣೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಬಲೀಕರಣ ಮತ್ತು ಆಮಿಷದ ನಡುವಿನ ವ್ಯತ್ಯಾಸ ನೋಡಬೇಕು. ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಎರಡಕ್ಕೂ ಗುಜರಾತ್‌ನಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದಿದೆ. ಆದ್ದರಿಂದ, ಅವರು ಬಜೆಟ್ ಲೆಕ್ಕ ನೋಡದೆ ತಮಗೆ ಬೇಕಾದಂತೆ ಹಣ ಮತ್ತು ಉಚಿತ ಕೊಡುಗೆಗಳನ್ನು ಘೋಷಿಸಬಹುದು ಎಂದರು.

ನಮ್ಮ ಕಾರ್ಯಕ್ರಮಗಳು ಬಡವರು ಮತ್ತು ನಿರ್ಗತಿಕರನ್ನು ಸಬಲೀಕರಣಗೊಳಿಸುವ ಕಲ್ಯಾಣ ಕ್ರಮಗಳಾಗಿವೆ. ಇದು ಎಲ್ಲರಿಗೂ ಉಚಿತ ಕೊಡುಗೆ ನೀಡಿದ ರೀತಿ ಅಲ್ಲ. ಅವು ನಿರ್ದಿಷ್ಟವಾಗಿ ಜನಸಂಖ್ಯೆಯ ಒಂದು ಭಾಗಕ್ಕೆ ಮೀಸಲಾಗಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿಯ ಕರ್ತವ್ಯ: ಭಾರತೀಯ ಬಾರ್ ಅಸೋಸಿಯೇಷನ್​ ಅಧ್ಯಕ್ಷ ಅದಿಶ್ ಅಗರ್​ವಾಲ

ಅಹಮದಾಬಾದ್: ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ಮತ್ತು ಈಗ ಗುಜರಾತ್ ಚುನಾವಣೆ ಸೇರಿದಂತೆ ಹಲವು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರವಸೆ ನೀಡಿದ್ದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪಕ್ಷಕ್ಕೆ ರಾಷ್ಟ್ರೀಯ ವಿಚಾರ ಹಾಗೂ ಇದರ ಜಾರಿಗೆ ಬಿಜೆಪಿ ಬದ್ಧವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಭಾನುವಾರ ಹೇಳಿದ್ದಾರೆ.

ದೇಶದ ಸಂಪನ್ಮೂಲಗಳು ಮತ್ತು ಅದರ ಜವಾಬ್ದಾರಿಗಳು ಎಲ್ಲರಿಗೂ ಸಮಾನವಾಗಿವೆ. ಆದ್ದರಿಂದ, ಯುಸಿಸಿ ಸ್ವಾಗತಾರ್ಹ ಹೆಜ್ಜೆಯಾಗಿದೆ. ಯುಸಿಸಿಯನ್ನು ಸಾಧ್ಯವಾದಷ್ಟು ರಾಜ್ಯಗಳಲ್ಲಿ ಜಾರಿಗೆ ತರಲು ನಾವು ಬಯಸುತ್ತೇವೆ ಎಂದು ನಡ್ಡಾ ಹೇಳಿದರು.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶ ಮತ್ತು ಸಮಾಜದ ವಿರುದ್ಧ ಕೆಲಸ ಮಾಡುವ ಶಕ್ತಿಗಳ ಮೇಲೆ ನಿಗಾ ಇಡುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಮನುಷ್ಯನ ದೇಹದಲ್ಲಿನ ಪ್ರತಿಕಾಯಗಳಂತೆ, ಕೆಟ್ಟ ಕೋಶಗಳ ಮೇಲೆ ನಿಗಾ ಇರಿಸಿ. ದೇಶದಲ್ಲಿ ರಾಷ್ಟ್ರವಿರೋಧಿ ಜೀವಕೋಶಗಳ ಮೇಲೆ ನಿಗಾ ಇಡುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದರು.

ಇನ್ನು, ಕೆಲವು ಕೋಶಗಳು ಗುಪ್ತವಾಗಿ ಕೆಲಸ ಮಾಡುತ್ತವೆ ಆದ್ದರಿಂದ ಅಂತಹ ಕೋಶಗಳ ಮೇಲೆ ನಿಗಾ ಇಡಲು ಈ ಧಾರ್ಮಿಕ ಮೂಲಭೂತವಾದಿ ವಿರೋಧಿ (ಆ್ಯಂಟಿ ರಾಡಿಕಲೈಸೇಶನ್) ಸೆಲ್ ಅಗತ್ಯವಿದೆ ಎಂದು ಬಿಜೆಪಿ ಮುಖ್ಯಸ್ಥರು ಹೇಳಿದರು.

ಗುಜರಾತ್‌ನಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಬಿಜೆಪಿ ಬೆಂಬಲದಿಂದ ಭಾರತದ ರಾಷ್ಟ್ರಪತಿಯಾದರು. ನಂತರ ಕೇಂದ್ರದ (ನರೇಂದ್ರ) ಮೋದಿ ಸರ್ಕಾರವು ಮುಸ್ಲಿಂ ರಾಜ್ಯಪಾಲರನ್ನು ನೇಮಿಸಿತು. ಹಾಗಾಗಿ ನಾವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ತತ್ವವನ್ನು ಅನುಸರಿಸುತ್ತೇವೆ. ಚುನಾವಣೆಗಳಿಗೆ ಟಿಕೆಟ್​ಗಳನ್ನು ಸಂಪೂರ್ಣವಾಗಿ ಗೆಲ್ಲುವ ಆಧಾರದ ಮೇಲೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ತನ್ನ ಪ್ರತಿಸ್ಪರ್ಧಿಗಳಂತೆ ಗುಜರಾತ್ ಚುನಾವಣೆಗೆ ತನ್ನ ಪ್ರಣಾಳಿಕೆಯಲ್ಲಿ ಹಲವಾರು ಉಚಿತ ಕೊಡುಗೆ ಘೋಷಣೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಬಲೀಕರಣ ಮತ್ತು ಆಮಿಷದ ನಡುವಿನ ವ್ಯತ್ಯಾಸ ನೋಡಬೇಕು. ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಎರಡಕ್ಕೂ ಗುಜರಾತ್‌ನಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದಿದೆ. ಆದ್ದರಿಂದ, ಅವರು ಬಜೆಟ್ ಲೆಕ್ಕ ನೋಡದೆ ತಮಗೆ ಬೇಕಾದಂತೆ ಹಣ ಮತ್ತು ಉಚಿತ ಕೊಡುಗೆಗಳನ್ನು ಘೋಷಿಸಬಹುದು ಎಂದರು.

ನಮ್ಮ ಕಾರ್ಯಕ್ರಮಗಳು ಬಡವರು ಮತ್ತು ನಿರ್ಗತಿಕರನ್ನು ಸಬಲೀಕರಣಗೊಳಿಸುವ ಕಲ್ಯಾಣ ಕ್ರಮಗಳಾಗಿವೆ. ಇದು ಎಲ್ಲರಿಗೂ ಉಚಿತ ಕೊಡುಗೆ ನೀಡಿದ ರೀತಿ ಅಲ್ಲ. ಅವು ನಿರ್ದಿಷ್ಟವಾಗಿ ಜನಸಂಖ್ಯೆಯ ಒಂದು ಭಾಗಕ್ಕೆ ಮೀಸಲಾಗಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿಯ ಕರ್ತವ್ಯ: ಭಾರತೀಯ ಬಾರ್ ಅಸೋಸಿಯೇಷನ್​ ಅಧ್ಯಕ್ಷ ಅದಿಶ್ ಅಗರ್​ವಾಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.