ETV Bharat / bharat

ತಿರುಪತಿ ಉಪಚುನಾವಣೆ : ಕರುನಾಡಲ್ಲಿ ಸೇವೆ ಸಲ್ಲಿಸಿದ್ದ ರತ್ನಪ್ರಭಾಗೆ ಬಿಜೆಪಿ ಟಿಕೆಟ್​ - ನವದೆಹಲಿ

ತಿರುಪತಿಯ ಬಲ್ಲಿ ದುರ್ಜೆ ಪ್ರಸಾದ್​ ರಾವ್ ಕಳೆದ ವರ್ಷ ಕೊರೊನಾದಿಂದ ಸಾವಿಗೀಡಾಗಿದ್ದರು. ತೆರವಾಗಿದ್ದ ಸ್ಥಾನಕ್ಕೆ ಇದೀಗ ಚುನಾವಣೆ ನಡೆಯುತ್ತಿದ್ದು, ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

by election: BJP announce Tirupati  ticket for ratnaprabha
ಕರುನಾಡಲ್ಲಿ ಸೇವೆ ಸಲ್ಲಿಸಿದ್ದ ರತ್ನಪ್ರಭಾಗೆ ತಿರುಪತಿ ಬಿಜೆಪಿ ಟಿಕೆಟ್​
author img

By

Published : Mar 25, 2021, 11:25 PM IST

ನವದೆಹಲಿ : ಕರ್ನಾಟಕ ಸೇರಿ ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಬೆಳಗಾವಿ ಕ್ಷೇತ್ರಕ್ಕೆ ಮಂಗಳಾ ಅಂಗಡಿ ಹಾಗೂ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ​ ಅವರಿಗೆ ಬಿಜೆಪಿ ಹೈಕಮಾಂಡ್​ ಮಣೆ ಹಾಕಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಸಲ ಸಂಸದರಾಗಿದ್ದ ಸುರೇಶ್ ಅಂಗಡಿ ಕಳೆದ ವರ್ಷ ಕೋವಿಡ್​ನಿಂದ ನಿಧನರಾಗಿದ್ದರು. ಈ ಕಾರಣದಿಂದಾಗಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ

ತಿರುಪತಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರನ್ನು ಪಕ್ಷ ಘೋಷಣೆ ಮಾಡಿದೆ. ತಿರುಪತಿ ಬಲ್ಲಿ ದುರ್ಜೆ ಪ್ರಸಾದ್​ ರಾವ್ ಅವರು ಕೂಡ ಕಳೆದ ವರ್ಷ ಕೊರೊನಾದಿಂದ ಸಾವಿಗೀಡಾಗಿದ್ದರು.

ಆರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 17 ರಂದು ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ರಾಜ್ಯ ಕ್ಷೇತ್ರ ಹೆಸರು
1ಆಂಧ್ರಪ್ರದೇಶತಿರುಪತಿ (ಲೋಕಸಭೆ)ರತ್ನಪ್ರಭಾ
2ಕರ್ನಾಟಕ ಬೆಳಗಾವಿ(ಲೋಕಸಭೆ)ಮಂಗಳಾ ಸುರೇಶ್​ ಅಂಗಡಿ
3ಜಾರ್ಖಂಡ್​ಮಾದಾಪುರ್​ ಗಂಗಾ ನಾರಾಯಣ್​ ಸಿಂಗ್​
4ಕರ್ನಾಟಕ ಬಸವ ಕಲ್ಯಾಣ ಶರಣು ಸಲಗಾರ್​
5ಕರ್ನಾಟಕಮಸ್ಕಿ ಪ್ರತಾಪ್​ ಗೌಡ ಪಾಟೀಲ್​
6ಮಧ್ಯಪ್ರದೇಶದಮೋಹ್ ರಾಹುಲ್ ಸಿಂಗ್​
7ಮಿಜೋರಾಂಸೆರ್​ಚಿಪ್ಲಾಲ್​ಹರಿಯಾಟ್ರೆಂಗಾ ಚಂಗ್ತೆ
8ಒಡಿಶಾಪಿಪಿಲಿಅಶ್ರಿತ್​ ಪಟ್ನಾಯಕ್​
9ರಾಜಸ್ಥಾನಸಹರಾ ರತನ್​ ಲಾಲ್​ ಜಟ್​
10ರಾಜಸ್ಥಾನಸುಜಂಗಢಖೆಮರಾಮ್​ ಮೆಘವಾಲ್​
11ರಾಜಸ್ಥಾನರಾಜಸಮಂದ್​​ದೀಪ್ತಿ ಮಹೇಶ್ವರಿ

ನವದೆಹಲಿ : ಕರ್ನಾಟಕ ಸೇರಿ ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಬೆಳಗಾವಿ ಕ್ಷೇತ್ರಕ್ಕೆ ಮಂಗಳಾ ಅಂಗಡಿ ಹಾಗೂ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ​ ಅವರಿಗೆ ಬಿಜೆಪಿ ಹೈಕಮಾಂಡ್​ ಮಣೆ ಹಾಕಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಸಲ ಸಂಸದರಾಗಿದ್ದ ಸುರೇಶ್ ಅಂಗಡಿ ಕಳೆದ ವರ್ಷ ಕೋವಿಡ್​ನಿಂದ ನಿಧನರಾಗಿದ್ದರು. ಈ ಕಾರಣದಿಂದಾಗಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ

ತಿರುಪತಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರನ್ನು ಪಕ್ಷ ಘೋಷಣೆ ಮಾಡಿದೆ. ತಿರುಪತಿ ಬಲ್ಲಿ ದುರ್ಜೆ ಪ್ರಸಾದ್​ ರಾವ್ ಅವರು ಕೂಡ ಕಳೆದ ವರ್ಷ ಕೊರೊನಾದಿಂದ ಸಾವಿಗೀಡಾಗಿದ್ದರು.

ಆರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 17 ರಂದು ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ರಾಜ್ಯ ಕ್ಷೇತ್ರ ಹೆಸರು
1ಆಂಧ್ರಪ್ರದೇಶತಿರುಪತಿ (ಲೋಕಸಭೆ)ರತ್ನಪ್ರಭಾ
2ಕರ್ನಾಟಕ ಬೆಳಗಾವಿ(ಲೋಕಸಭೆ)ಮಂಗಳಾ ಸುರೇಶ್​ ಅಂಗಡಿ
3ಜಾರ್ಖಂಡ್​ಮಾದಾಪುರ್​ ಗಂಗಾ ನಾರಾಯಣ್​ ಸಿಂಗ್​
4ಕರ್ನಾಟಕ ಬಸವ ಕಲ್ಯಾಣ ಶರಣು ಸಲಗಾರ್​
5ಕರ್ನಾಟಕಮಸ್ಕಿ ಪ್ರತಾಪ್​ ಗೌಡ ಪಾಟೀಲ್​
6ಮಧ್ಯಪ್ರದೇಶದಮೋಹ್ ರಾಹುಲ್ ಸಿಂಗ್​
7ಮಿಜೋರಾಂಸೆರ್​ಚಿಪ್ಲಾಲ್​ಹರಿಯಾಟ್ರೆಂಗಾ ಚಂಗ್ತೆ
8ಒಡಿಶಾಪಿಪಿಲಿಅಶ್ರಿತ್​ ಪಟ್ನಾಯಕ್​
9ರಾಜಸ್ಥಾನಸಹರಾ ರತನ್​ ಲಾಲ್​ ಜಟ್​
10ರಾಜಸ್ಥಾನಸುಜಂಗಢಖೆಮರಾಮ್​ ಮೆಘವಾಲ್​
11ರಾಜಸ್ಥಾನರಾಜಸಮಂದ್​​ದೀಪ್ತಿ ಮಹೇಶ್ವರಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.