ETV Bharat / bharat

ಸಹೋದರನ ರಕ್ಷಣೆಗೆ ಬಂದ ಸಹೋದರಿಗೆ ಲೈಂಗಿಕ ಕಿರುಕುಳ, ಮೂವರು ದರೋಡೆಕೋರರು ಬಂಧನ!

author img

By

Published : Mar 22, 2021, 12:45 PM IST

ಸಹೋದರನನ್ನು ಉಳಿಸಲು ಹೋದ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ ಮೂವರು ದರೋಡೆಕೋರರನ್ನು ನವದೆಹಲಿ ಪೊಲೀಸರು ಬಂಧಿಸಿದ್ದಾರೆ.

gangrape in a car in delhi  gang rape of sister in front of brother in delhi  accused of gang raping sister in front of brother in delhi arrested  girl raped in front of brother  Three held for sexually assaulting girl in Delhi  ಸಹೋದರನನ್ನು ಉಳಿಸಲು ಹೋದ ಸಹೋದರಿಗೆ ಲೈಂಗಿಕ ಕಿರುಕುಳ  ನವದೆಹಲಿಯಲ್ಲಿ ಸಹೋದರನನ್ನು ಉಳಿಸಲು ಹೋದ ಸಹೋದರಿಗೆ ಲೈಂಗಿಕ ಕಿರುಕುಳ  ನವದೆಹಲಿ ಅಪರಾಧ ಸುದ್ದಿ  ನವದೆಹಲಿಯಲ್ಲಿ ಮೂವರು ಬಂಧನ
ಸಹೋದರನನ್ನು ಉಳಿಸಲು ಹೋದ ಸಹೋದರಿಗೆ ಲೈಂಗಿಕ ಕಿರುಕುಳ

ನವದೆಹಲಿ: ದಕ್ಷಿಣ ದೆಹಲಿಯ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಯೋಗೇಶ್ (26), ನವೀನ್ ಲೋಹ್ಮದ್ (25) ಮತ್ತು ಬಲ್ಜೀತ್ (30) ಎಂದು ಗುರುತಿಸಲಾಗಿದೆ.

ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಾರಿನಲ್ಲಿ ಬಂದ ಮೂವರು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಸಹೋದರ ಕೂಗಾಟ ಕೇಳಿದ ಸಹೋದರಿ ಮನೆಯಿಂದ ಹೊರ ಬಂದು ತನ್ನ ಸಹೋದರನನ್ನು ಕಾಪಾಡಲು ಮುಂದಾಗಿದ್ದಾಳೆ. ಈ ವೇಳೆ ಆರೋಪಿಗಳು ಆಕೆಯ ಬಟ್ಟೆ ಹರಿದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಬಳಿಕ ಆಕೆಯನ್ನು ಮತ್ತು ಸಹೋದರನನ್ನು ಬಿಟ್ಟು ಪರಾರಿಯಾಗಿದ್ದಾರೆ.

ಇದಕ್ಕೂ ಮುನ್ನ ಇಟ್ಟಿಗೆ ಲಾರಿ ಚಾಲಕ ಮತ್ತು ಕೂಲಿ ಕಾರ್ಮಿಕರ ಮೇಲೆ ಇದೇ ಮೂವರು ಹಲ್ಲೆ ಮಾಡಿ ಆತನ ಬಳಿಯಿಂದ 30 ಸಾವಿರ ರೂಪಾಯಿ ಜೊತೆ ಕೆಲವೊಂದು ದಾಖಲೆಗಳನ್ನು ದೋಚಿಕೊಂಡು ಬಂದಿದ್ದರು. ಈ ಘಟನೆ ಕುರಿತು ಫತೇಪುರ್​ ಬೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಬಂಧಿತರಿಂದ 5,200 ರೂ. ನಗದನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.

ನವದೆಹಲಿ: ದಕ್ಷಿಣ ದೆಹಲಿಯ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಯೋಗೇಶ್ (26), ನವೀನ್ ಲೋಹ್ಮದ್ (25) ಮತ್ತು ಬಲ್ಜೀತ್ (30) ಎಂದು ಗುರುತಿಸಲಾಗಿದೆ.

ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಾರಿನಲ್ಲಿ ಬಂದ ಮೂವರು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಸಹೋದರ ಕೂಗಾಟ ಕೇಳಿದ ಸಹೋದರಿ ಮನೆಯಿಂದ ಹೊರ ಬಂದು ತನ್ನ ಸಹೋದರನನ್ನು ಕಾಪಾಡಲು ಮುಂದಾಗಿದ್ದಾಳೆ. ಈ ವೇಳೆ ಆರೋಪಿಗಳು ಆಕೆಯ ಬಟ್ಟೆ ಹರಿದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಬಳಿಕ ಆಕೆಯನ್ನು ಮತ್ತು ಸಹೋದರನನ್ನು ಬಿಟ್ಟು ಪರಾರಿಯಾಗಿದ್ದಾರೆ.

ಇದಕ್ಕೂ ಮುನ್ನ ಇಟ್ಟಿಗೆ ಲಾರಿ ಚಾಲಕ ಮತ್ತು ಕೂಲಿ ಕಾರ್ಮಿಕರ ಮೇಲೆ ಇದೇ ಮೂವರು ಹಲ್ಲೆ ಮಾಡಿ ಆತನ ಬಳಿಯಿಂದ 30 ಸಾವಿರ ರೂಪಾಯಿ ಜೊತೆ ಕೆಲವೊಂದು ದಾಖಲೆಗಳನ್ನು ದೋಚಿಕೊಂಡು ಬಂದಿದ್ದರು. ಈ ಘಟನೆ ಕುರಿತು ಫತೇಪುರ್​ ಬೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಬಂಧಿತರಿಂದ 5,200 ರೂ. ನಗದನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.