ETV Bharat / bharat

ವಿವಿಧ ಉಗ್ರ ಸಂಘಟನೆಗಳಿಗೆ ಸಹಾಯ: ಭಯೋತ್ಪಾದಕರ ಸಹಚರರ ಬಂಧಿಸಿದ ಎನ್​ಐಎ - ಭಯೋತ್ಪಾದಕರ ಸಹಚರರ ಬಂಧಿಸಿದ ಎನ್​ಐಎ

ಜಮ್ಮು-ಕಾಶ್ಮೀರ ಸೇರಿದಂತೆ ಪ್ರಮುಖ 16 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಐವರು ಉಗ್ರರ ಸಹಚರರ ಬಂಧನ ಮಾಡಿದ್ದಾರೆ.

NIA
NIA
author img

By

Published : Oct 13, 2021, 10:04 PM IST

ನವದೆಹಲಿ: ಕಣಿವೆ ನಾಡು ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಉಗ್ರ ಚಟುವಟಿಕೆ ಹೆಚ್ಚಾಗಿದ್ದು, ಭಾರತೀಯ ಯೋಧರು, ಪೊಲೀಸ್ ಹಾಗೂ ಎನ್​ಐಎ ಅವರ ಹೆಡೆಮುರಿ ಕಟ್ಟುವ ಕೆಲಸ ಮಾಡ್ತಿದೆ. ಸದ್ಯ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿ ಐವರು ಉಗ್ರರ ಸಹಚರರ ಬಂಧನ ಮಾಡಿದೆ.

ಜಮ್ಮು- ಕಾಶ್ಮೀರದ ಶ್ರೀನಗರ, ಪುಲ್ವಾಮಾ ಮತ್ತು ಶೋಪಿಯಾನ್​ ಜಿಲ್ಲೆಗಳಲ್ಲಿ ಶೋಧಕಾರ್ಯ ನಡೆಸಿದ ವೇಳೆ ಹನೀಫ್​, ಹಫೀಜ್, ಓವೈಸ್ ದಾರ್, ಮತೀನ್ ಭಟ್ ಮತ್ತು ಆರಿಫ್ ಫಾರೂಕ್ ಭಟ್​ನನ್ನ ಬಂಧನ ಮಾಡಲಾಗಿದೆ. ಇವರೆಲ್ಲರೂ ಲಷ್ಕರಿ-ಇ-ತೊಯ್ಬಾ, ಜೈಶ್​-ಇ-ಮೊಹ್ಮದ್​,ಹಿಜ್ಬಾ ಉಲ್​​ ಮುಜಾಹಿದ್ದೀನ್​, ಅಲ್​ ಬದ್ರಾ ಸೇರಿದಂತೆ ಅನೇಕ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು.

ಇದನ್ನೂ ಓದಿರಿ: ಕೋಲ್ಕತ್ತಾ ಬೌಲಿಂಗ್​ ದಾಳಿಗೆ ಡೆಲ್ಲಿ ತತ್ತರ.. ಗೆಲುವಿಗೆ 136 ರನ್​ ಟಾರ್ಗೆಟ್ ನೀಡಿದ ಪಂತ್​ ಪಡೆ

ಭಯೋತ್ಪಾದಕ ಗುಂಪುಗಳು ದೇಶದ ಪ್ರಮುಖ ಸ್ಥಳಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದವು ಎಂಬ ಮಾಹಿತಿ ಲಭ್ಯವಾಗಿತ್ತು. ಇದಕ್ಕೆ ಸಂಬಂಂಧಿಸಿದಂತೆ ಎನ್​ಐಎ ಅಕ್ಟೋಬರ್​ 10ರಂದು ಪ್ರಕರಣ ದಾಖಲು ಮಾಡಿ ತನಿಖೆ ಆರಂಭ ಮಾಡಿತ್ತು. ಬಂಧಿತ ಆರೋಪಿಗಳು ಭಯೋತ್ಪಾದಕರ ಸಹಚರರಾಗಿದ್ದರು ಎಂದು ತಿಳಿದು ಬಂದಿದ್ದು, ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿದ್ದರು. ಇವರ ಬಳಿ ಕೆಲವೊಂದು ಸ್ಫೋಟಕ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಎನ್​ಐಎ ತಿಳಿಸಿದೆ.

ನವದೆಹಲಿ: ಕಣಿವೆ ನಾಡು ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಉಗ್ರ ಚಟುವಟಿಕೆ ಹೆಚ್ಚಾಗಿದ್ದು, ಭಾರತೀಯ ಯೋಧರು, ಪೊಲೀಸ್ ಹಾಗೂ ಎನ್​ಐಎ ಅವರ ಹೆಡೆಮುರಿ ಕಟ್ಟುವ ಕೆಲಸ ಮಾಡ್ತಿದೆ. ಸದ್ಯ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿ ಐವರು ಉಗ್ರರ ಸಹಚರರ ಬಂಧನ ಮಾಡಿದೆ.

ಜಮ್ಮು- ಕಾಶ್ಮೀರದ ಶ್ರೀನಗರ, ಪುಲ್ವಾಮಾ ಮತ್ತು ಶೋಪಿಯಾನ್​ ಜಿಲ್ಲೆಗಳಲ್ಲಿ ಶೋಧಕಾರ್ಯ ನಡೆಸಿದ ವೇಳೆ ಹನೀಫ್​, ಹಫೀಜ್, ಓವೈಸ್ ದಾರ್, ಮತೀನ್ ಭಟ್ ಮತ್ತು ಆರಿಫ್ ಫಾರೂಕ್ ಭಟ್​ನನ್ನ ಬಂಧನ ಮಾಡಲಾಗಿದೆ. ಇವರೆಲ್ಲರೂ ಲಷ್ಕರಿ-ಇ-ತೊಯ್ಬಾ, ಜೈಶ್​-ಇ-ಮೊಹ್ಮದ್​,ಹಿಜ್ಬಾ ಉಲ್​​ ಮುಜಾಹಿದ್ದೀನ್​, ಅಲ್​ ಬದ್ರಾ ಸೇರಿದಂತೆ ಅನೇಕ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು.

ಇದನ್ನೂ ಓದಿರಿ: ಕೋಲ್ಕತ್ತಾ ಬೌಲಿಂಗ್​ ದಾಳಿಗೆ ಡೆಲ್ಲಿ ತತ್ತರ.. ಗೆಲುವಿಗೆ 136 ರನ್​ ಟಾರ್ಗೆಟ್ ನೀಡಿದ ಪಂತ್​ ಪಡೆ

ಭಯೋತ್ಪಾದಕ ಗುಂಪುಗಳು ದೇಶದ ಪ್ರಮುಖ ಸ್ಥಳಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದವು ಎಂಬ ಮಾಹಿತಿ ಲಭ್ಯವಾಗಿತ್ತು. ಇದಕ್ಕೆ ಸಂಬಂಂಧಿಸಿದಂತೆ ಎನ್​ಐಎ ಅಕ್ಟೋಬರ್​ 10ರಂದು ಪ್ರಕರಣ ದಾಖಲು ಮಾಡಿ ತನಿಖೆ ಆರಂಭ ಮಾಡಿತ್ತು. ಬಂಧಿತ ಆರೋಪಿಗಳು ಭಯೋತ್ಪಾದಕರ ಸಹಚರರಾಗಿದ್ದರು ಎಂದು ತಿಳಿದು ಬಂದಿದ್ದು, ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿದ್ದರು. ಇವರ ಬಳಿ ಕೆಲವೊಂದು ಸ್ಫೋಟಕ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಎನ್​ಐಎ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.