ರೇವಾ, ಮಧ್ಯಪ್ರದೇಶ: ದೇಶದಲ್ಲಿ ಈ ಕಾಲದಲ್ಲೂ ಮೂಢನಂಬಿಕೆಗಳು ಹೆಚ್ಚಾಗುತ್ತಿವೆ. ಇತ್ತಿಚೇಗೆ ಮೂಢನಂಬಿಕೆ ಪ್ರಕರಣ ಬೆಳಕಿಗೆ ಬಂದಿದೆ. ರೇವಾ ಜಿಲ್ಲೆಯ ಸಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಕ್ಷೇರಾ ಗ್ರಾಮದಲ್ಲಿ ಮೂಢನಂಬಿಕೆಯ ವಿಶಿಷ್ಟ ದೃಶ್ಯವೊಂದು ಕಂಡು ಬಂದಿದೆ. ದೇವಿ ದೇವಸ್ಥಾನದಲ್ಲಿ 1 ತಿಂಗಳ ಹಿಂದೆ ಮೃತಪಟ್ಟ 4 ವರ್ಷದ ಮಗುವನ್ನು ಬದುಕಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ನೂರಾರು ಗ್ರಾಮಸ್ಥರು ಗ್ರಾಮದಲ್ಲಿರುವ ಕುಲ್ ದೇವಿಯ ದೇವಸ್ಥಾನದಲ್ಲಿ ಕುಳಿತು ಪೂಜೆ ಸಲ್ಲಿಸುತ್ತಿದ್ದಾರೆ.
![Superstitious Claim in Rewa efforts to revive one month ago dead child Efforts to revive Dead Child SUPERSTITIOUS in India ದೇಶದಲ್ಲಿ ಮೂಢನಂಬಿಕೆ ಚಾಲ್ತಿ ತಿಂಗಳ ಹಿಂದೆ ಸಾವನ್ನಪ್ಪಿದ ಮಗುವನ್ನು ಬದುಕಿಸಲು ಪ್ರಯತ್ನ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಮೂಢನಂಬಿಕೆ ಮಗ ಬದುಕುತ್ತಾನೆ ಎಂದ ಮಾತೆ ಕುಲ್ ದೇವಿ ದೇವಸ್ಥಾನದಲ್ಲಿ ಮೂಢನಂಬಿಕೆಯ ವಿಶಿಷ್ಟ ದೃಶ್ಯ ಬಕ್ಷೇರಾ ಗ್ರಾಮದಲ್ಲಿ ಮೂಢನಂಬಿಕೆ](https://etvbharatimages.akamaized.net/etvbharat/prod-images/mp-rew-01-andh-vishwas-pkg-mp10040mp4_19082022054734_1908f_1660868254_238.jpg)
ಒಂದು ತಿಂಗಳ ಹಿಂದೆ ಮೃತಪಟ್ಟ ಮಗು: ಒಂದು ತಿಂಗಳ ಹಿಂದೆ ರೇವಾ ಜಿಲ್ಲೆಯ ಗುಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಭಿತಿ ಗ್ರಾಮದಲ್ಲಿ ವಾಸಿಸುವ ಬುಡಕಟ್ಟು ಕುಟುಂಬದ ನಾಲ್ಕು ವರ್ಷದ ಮಗು ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
![Superstitious Claim in Rewa efforts to revive one month ago dead child Efforts to revive Dead Child SUPERSTITIOUS in India ದೇಶದಲ್ಲಿ ಮೂಢನಂಬಿಕೆ ಚಾಲ್ತಿ ತಿಂಗಳ ಹಿಂದೆ ಸಾವನ್ನಪ್ಪಿದ ಮಗುವನ್ನು ಬದುಕಿಸಲು ಪ್ರಯತ್ನ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಮೂಢನಂಬಿಕೆ ಮಗ ಬದುಕುತ್ತಾನೆ ಎಂದ ಮಾತೆ ಕುಲ್ ದೇವಿ ದೇವಸ್ಥಾನದಲ್ಲಿ ಮೂಢನಂಬಿಕೆಯ ವಿಶಿಷ್ಟ ದೃಶ್ಯ ಬಕ್ಷೇರಾ ಗ್ರಾಮದಲ್ಲಿ ಮೂಢನಂಬಿಕೆ](https://etvbharatimages.akamaized.net/etvbharat/prod-images/mp-rew-01-andh-vishwas-pkg-mp10040mp4_19082022054734_1908f_1660868254_811.jpg)
ಮಗುವನ್ನು ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ಮಾಡಲಾಗಿತ್ತು. ಕನಸಿನಲ್ಲಿ ಬಂದ ದೇವಿಯು ಮಗುವನ್ನು ಮತ್ತೆ ಬದುಕಿಸಲು ವರವನ್ನು ನೀಡಿದ್ದಾಳೆ ಎಂದು ಕುಟುಂಬ ಸದಸ್ಯರು ಹೇಳಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರು ತಾಯಿಯ ಸಲಹೆಯಂತೆ ಗ್ರಾಮದಿಂದ 20 ಕಿಮೀ ದೂರದಲ್ಲಿರುವ ಬಕ್ಷೇರಾ ಗ್ರಾಮದಲ್ಲಿ ನೆಲೆಸಿರುವ ಕುಲದೇವಿಯ ಪೂಜೆಯಲ್ಲಿ ತೊಡಗಿದ್ದರು. ಈ ಪ್ರಸಂಗ ನೋಡಲು ನೂರಾರು ಜನರು ದೇವಾಲಯದ ಮುಂದೆ ಜಮಾಯಿಸಿದ್ದಾರೆ.
![Superstitious Claim in Rewa efforts to revive one month ago dead child Efforts to revive Dead Child SUPERSTITIOUS in India ದೇಶದಲ್ಲಿ ಮೂಢನಂಬಿಕೆ ಚಾಲ್ತಿ ತಿಂಗಳ ಹಿಂದೆ ಸಾವನ್ನಪ್ಪಿದ ಮಗುವನ್ನು ಬದುಕಿಸಲು ಪ್ರಯತ್ನ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಮೂಢನಂಬಿಕೆ ಮಗ ಬದುಕುತ್ತಾನೆ ಎಂದ ಮಾತೆ ಕುಲ್ ದೇವಿ ದೇವಸ್ಥಾನದಲ್ಲಿ ಮೂಢನಂಬಿಕೆಯ ವಿಶಿಷ್ಟ ದೃಶ್ಯ ಬಕ್ಷೇರಾ ಗ್ರಾಮದಲ್ಲಿ ಮೂಢನಂಬಿಕೆ](https://etvbharatimages.akamaized.net/etvbharat/prod-images/mp-rew-01-andh-vishwas-pkg-mp10040mp4_19082022054734_1908f_1660868254_716.jpg)
ನಿಮ್ಮ ಮಗ ಬದುಕುತ್ತಾನೆ ಎಂದ ಮಾತೆ: ಮಗುವನ್ನು ಸಮಾಧಿ ಮಾಡಿದ ಸ್ಥಳದಿಂದ ಮಣ್ಣನ್ನು ತಂದು ಕುಲದೇವಿ ದೇವಸ್ಥಾನದಲ್ಲಿ ಮಾತೆ ತಾಯಿಯ ಪಾದಮೇಲೆ ಇಡಿ ಎಂದು ತಾಯಿ ಕನಸಿನಲ್ಲಿ ಹೇಳಿದ್ದಾಳೆ. ಹೀಗಾಗಿ ಕುಟುಂಬ ಸದಸ್ಯರು ಸಮಾಧಿಯಿಂದ ಕೆಂಪು ಬಟ್ಟೆಯಲ್ಲಿ ಮಣ್ಣನ್ನು ತಂದು ಮಾತೃದೇವತೆಯ ಪಾದಗಳ ಮುಂದೆ ಇಟ್ಟಿದ್ದೇವೆ. ಮಣ್ಣು ಮೊದಲು ಹೂವಾಯಿತು. ಹೂವು ಎಲುಬು ಆಗಿದೆ. ಈಗ ಅದಕ್ಕೆ ಜೀವ ಬರಲು ಕಾಯುತ್ತಿದ್ದೇವೆ ಎಂದು ಮೃತ ಮಗುವಿನ ಸಂಬಂಧಿಕರ ಮಾತಾಗಿದೆ.
![Superstitious Claim in Rewa efforts to revive one month ago dead child Efforts to revive Dead Child SUPERSTITIOUS in India ದೇಶದಲ್ಲಿ ಮೂಢನಂಬಿಕೆ ಚಾಲ್ತಿ ತಿಂಗಳ ಹಿಂದೆ ಸಾವನ್ನಪ್ಪಿದ ಮಗುವನ್ನು ಬದುಕಿಸಲು ಪ್ರಯತ್ನ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಮೂಢನಂಬಿಕೆ ಮಗ ಬದುಕುತ್ತಾನೆ ಎಂದ ಮಾತೆ ಕುಲ್ ದೇವಿ ದೇವಸ್ಥಾನದಲ್ಲಿ ಮೂಢನಂಬಿಕೆಯ ವಿಶಿಷ್ಟ ದೃಶ್ಯ ಬಕ್ಷೇರಾ ಗ್ರಾಮದಲ್ಲಿ ಮೂಢನಂಬಿಕೆ](https://etvbharatimages.akamaized.net/etvbharat/prod-images/mp-rew-01-andh-vishwas-pkg-mp10040mp4_19082022054734_1908f_1660868254_717.jpg)
ಕುಲ್ ದೇವಿ ದೇವಸ್ಥಾನದಲ್ಲಿ ಮೂಢನಂಬಿಕೆಯ ವಿಶಿಷ್ಟ ದೃಶ್ಯ: ಮಣ್ಣು ಎಲುಬಾಗಿ ಬದಲಾದ ಬಳಿಕ 10 ದಿನಗಳ ಕಾಲ ಮನೆಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಗುರುವಾರ ಸಂಜೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರೆಲ್ಲ ಸೇರಿ ಕುಲದೇವಿಯ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಈಗ ಅಲ್ಲಿ ಸತ್ತ ಮಗುವನ್ನು ಬದುಕಿಸುವ ಪ್ರಯತ್ನಗಳು ನಡೆಯುತ್ತಿವೆ.
ಈ ಬಗ್ಗೆ ಮಾಹಿತಿ ಪಡೆದ ಮಾಧ್ಯಮ ತಂಡ ರಾತ್ರಿ 12 ಗಂಟೆ ಸುಮಾರಿಗೆ ಬಕ್ಷೇರಾ ಗ್ರಾಮಕ್ಕೆ ತಲುಪಿತು. ಸ್ಥಳಕ್ಕಾಗಮಿಸಿದ ಮಾಧ್ಯಮದವರು ಕಂಡ ದೃಶ್ಯ ಬೆಚ್ಚಿ ಬೀಳಿಸುವಂತಿತ್ತು. ಕುಲ್ ದೇವಿಯ ದೇವಸ್ಥಾನದಲ್ಲಿ ಗ್ರಾಮಸ್ಥರು ವಿಚಿತ್ರ ಪೂಜೆ ಸಲ್ಲಿಸುತ್ತಿದ್ದರು. ಬುಟ್ಟಿಯ ಬುಡದಲ್ಲಿ ಎಲುಬಿನ ತುಂಡಗಳನ್ನು ಇಟ್ಟುಕೊಂಡು ಜನರು ದೇವಿಯ ಆರಾಧನೆಯಲ್ಲಿ ಮಗ್ನರಾಗಿದ್ದರು.
![Superstitious Claim in Rewa efforts to revive one month ago dead child Efforts to revive Dead Child SUPERSTITIOUS in India ದೇಶದಲ್ಲಿ ಮೂಢನಂಬಿಕೆ ಚಾಲ್ತಿ ತಿಂಗಳ ಹಿಂದೆ ಸಾವನ್ನಪ್ಪಿದ ಮಗುವನ್ನು ಬದುಕಿಸಲು ಪ್ರಯತ್ನ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಮೂಢನಂಬಿಕೆ ಮಗ ಬದುಕುತ್ತಾನೆ ಎಂದ ಮಾತೆ ಕುಲ್ ದೇವಿ ದೇವಸ್ಥಾನದಲ್ಲಿ ಮೂಢನಂಬಿಕೆಯ ವಿಶಿಷ್ಟ ದೃಶ್ಯ ಬಕ್ಷೇರಾ ಗ್ರಾಮದಲ್ಲಿ ಮೂಢನಂಬಿಕೆ](https://etvbharatimages.akamaized.net/etvbharat/prod-images/mp-rew-01-andh-vishwas-pkg-mp10040mp4_19082022054734_1908f_1660868254_325.jpg)
ಮೃತ ಮಗುವಿನ ತಾಯಿಯ ತಂಗಿ ಮೈ ಮೇಲೆ ಬಂದ ಮಾತೆ: ಈ ವೇಳೆ, ಮಾಧ್ಯಮದವರು ಕುಟುಂಬಸ್ಥರೊಂದಿಗೆ ಮಾತನಾಡಲು ಯತ್ನಿಸಿದಾಗ ಮೃತ ಮಗುವಿನ ಚಿಕ್ಕಮ್ಮ ಅನಿತಾ ಕೋಲ್ ಕ್ಯಾಮೆರಾ ಮುಂದೆ ತಾನೊಬ್ಬನೇ ಎಂದು ಹೇಳಿಕೊಂಡು ಜೋರಾಗಿ ಕೂಗಾಡಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಗು ಮತ್ತೆ ಬದುಕಲಿದೆ. ಆದರೆ, ಸತ್ತ ಮಗು ಎಷ್ಟು ದಿನ ಬದುಕುತ್ತದೆ ಎಂದು ಕೇಳಿದಾಗ ಆಕೆಗೆ ಕೋಪ ಬಂತು. ಹೀಗೆ ಗ್ರಾಮೀಣ ಪ್ರದೇಶದಲ್ಲಿ ಮೂಢನಂಬಿಕೆ ಇನ್ನು ಚಾಲ್ತಿಯಲ್ಲಿರುವುದು ದುರದುಷ್ಟಕರವಾಗಿದೆ.
ಓದಿ: ಹಾವು ಕಚ್ಚಿ ಮೃತಪಟ್ಟ ಬಾಲಕ.. ಮಾಂತ್ರಿಕನ ಮಾತು ಕೇಳಿ ಹೂತಿದ್ದ ಶವ ತೆಗೆದ ಜನರು